nammatumakuru

    Subscribe to Updates

    Get the latest creative news from FooBar about art, design and business.

    What's Hot

    ಮಳೆ ನೀರು ಇಂಗುವ ಕಟ್ಟೆಯೊಳಗೆ ಬಿದ್ದ ಎರಡು ನಾಯಿಗಳ ರಕ್ಷಣೆ

    January 28, 2023

    ಕಿತ್ತೂರು ರಾಣಿ ವಸತಿ ಶಾಲೆಯಲ್ಲಿ 74ನೇ ಗಣರಾಜ್ಯೋತ್ಸವ  ಆಚರಣೆ

    January 28, 2023

    ಈ ಕೆಲಸ ಮಾಡಿದರೆ ಸಾಕು ದೇಹದ ಬೊಜ್ಜು ಕರಗಿ ಹೋಗುತ್ತದೆ!

    January 28, 2023
    Facebook Twitter Instagram
    ಟ್ರೆಂಡಿಂಗ್
    • ಮಳೆ ನೀರು ಇಂಗುವ ಕಟ್ಟೆಯೊಳಗೆ ಬಿದ್ದ ಎರಡು ನಾಯಿಗಳ ರಕ್ಷಣೆ
    • ಕಿತ್ತೂರು ರಾಣಿ ವಸತಿ ಶಾಲೆಯಲ್ಲಿ 74ನೇ ಗಣರಾಜ್ಯೋತ್ಸವ  ಆಚರಣೆ
    • ಈ ಕೆಲಸ ಮಾಡಿದರೆ ಸಾಕು ದೇಹದ ಬೊಜ್ಜು ಕರಗಿ ಹೋಗುತ್ತದೆ!
    • ಕಾಂಗ್ರೆಸ್ ಬಿಟ್ಟು ಬಿಎಸ್ ಪಿ ಪಕ್ಷ ಸೇರಿದ ತಿಪಟೂರು ಕಾಂಗ್ರೆಸ್ ಮುಖಂಡ ಅಶ್ವಥ್ ನಾರಾಯಣ್
    • ಏರ್ ಶೋ: ಜ. 30ರಿಂದ ಫೆ. 20ರವರೆಗೆ ಮಾಂಸ ಮಾರಾಟಕ್ಕೆ ನಿಷೇಧ
    • ಮುಂದಿನ ತಿಂಗಳು 12 ಆಫ್ರಿಕನ್ ಚಿರತೆಗಳು ಭಾರತಕ್ಕೆ
    • ಮಗುವನ್ನು ಅಪಹರಿಸಿ ಹಣದ ಡಿಮ್ಯಾಂಡ್:ಪೊಲೀಸರಿಂದ ಒಂದು ವರ್ಷದ ಮಗುವಿನ ರಕ್ಷಣೆ
    • ಪಾಕಿಸ್ತಾನ ರೂಪಾಯಿ ಕುಸಿತ; ದೇಶದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ‘ಜೈ ಭೀಮ್’ ಸಿನಿಮಾವನ್ನು ಅಮೆಜಾನ್ ಪ್ರೈಮ್ನಲ್ಲಿ ತಮಿಳು ಮತ್ತು ಕನ್ನಡ ಎರಡೂ ಆವೃತ್ತಿಗಳಲ್ಲಿ ಎರಡು ಸಲ ನೋಡಿದೆ
    ಸ್ಪೆಷಲ್ ನ್ಯೂಸ್ November 4, 2021

    ‘ಜೈ ಭೀಮ್’ ಸಿನಿಮಾವನ್ನು ಅಮೆಜಾನ್ ಪ್ರೈಮ್ನಲ್ಲಿ ತಮಿಳು ಮತ್ತು ಕನ್ನಡ ಎರಡೂ ಆವೃತ್ತಿಗಳಲ್ಲಿ ಎರಡು ಸಲ ನೋಡಿದೆ

    By adminNovember 4, 2021No Comments2 Mins Read
    jai bheem

    ಕೂಲಿನಾಲಿ‌ ಮಾಡಿಕೊಂಡು ಹೊಟ್ಟೆಪಾಡಿಗಾಗಿ ಹೊಲಗದ್ದೆಯ ಇಲಿ-ತೋಡ-ಉಡ-ಅಳಿಲುಗಳನ್ನು ಬೇಟೆಯಾಡಿ ಬದುಕುವ ಕೊರಚ(ಮ)- ಇರುಳಿಗ ಮುಂತಾದ ಬುಡಕಟ್ಟು ಸಮುದಾಯಗಳ ಜನರನ್ನು ಅಪರಾಧಿಗಳೆಂದು ಬಂಧಿಸುವ, ‘ಉತ್ತಮರು’ ಎಂದು ಕರೆಸಿಕೊಳ್ಳುತ್ತಿರುವ ಸಾಮಾಜಿಕ ಮುಖ್ಯವಾಹಿನಿಯ ಸಮುದಾಯಗಳ ಪೊಲೀಸ್ ಅಧಿಕಾರಿಗಳು ಮತ್ತು ರಾಜಕಾರಣಿಗಳು, ಬುಡಕಟ್ಟು ಅಲೆಮಾರಿ ಸಮುದಾಯಗಳ‌ನಿರುಪದ್ರವಿ ಮುಗ್ಧ ಜನರನ್ನು ಇಲಿ-ತೋಡಗಳಂತೆಯೇ ಬೇಟೆಯಾಡುವ ಕಿರಾತಕ ವ್ಯವಸ್ಥೆಯನ್ನು ‘ಜೈ ಭೀಮ್’ ಸಿನಿಮಾ ವಾಸ್ತವವಾದಿ ನೆಲೆಯಲ್ಲಿ ಚಿತ್ರಿಸುತ್ತದೆ.

    ‘ಒಬ್ಬನ ಮೇಲೆ ಒಂದೇ ಒಂದು ಕೇಸು ಹಾಕಬೇಕಂತಾ ಏನು ಕಾನೂನಿದೆಯಾ? ತಲೆಗೆ ಎರಡ್ಮೂರು ಕೇಸು ಹಾಕಿ ಒದ್ದು ಒಳಕ್ಕೆ ಹಾಕಿರಿ’ ಎಂದು ಶೋಷಿತ ಬುಡಕಟ್ಟು ಸಮುದಾಯಗಳ ಜನರ ಮೇಲೆ ಕಲ್ಪಿತ ಅಪರಾಧಗಳನ್ನು ಹೊರಿಸಿ ಜೈಲಿಗೆ ನೂಕುವ ಮೂಲಕ ಮಾನವ ಹಕ್ಕುಗಳನ್ನು ಉಲ್ಲಂಘಿಸುವ ಆಳುವ ವರ್ಗಗಳ ಪಾರಂಪರಿಕ ರೂಢಿಗತ ವ್ಯವಸ್ಥೆಯ ವಿರುದ್ಧ ಸಂವಿಧಾನದತ್ತವಾದ ಆಧುನಿಕ ಕಾನೂನಿನ ಅಸ್ತ್ರದ ಮೂಲಕ ಹೋರಾಡುವ ನ್ಯಾಯವಾದಿಯ ಪಾತ್ರದಲ್ಲಿ ಕಲಾವಿದ ಸೂರ್ಯ ನಮ್ಮ ಗಮನ ಸೆಳೆಯುತ್ತಾರೆ.
    ಬುಡಕಟ್ಟು ಸಮುದಾಯಗಳ ಮಾದರಿ ವ್ಯಕ್ತಿತ್ವಗಳಾಗಿ ಕೆಂಚರಾಜ- ಸಣ್ಣಮ್ಮ- ಈರಪ್ಪ – ಮಂಜಪ್ಪ – ಸಣ್ಣಮ್ಮನ ಮಗಳು ಮುಂತಾದ ಪಾತ್ರಗಳು ಹಾಗೂ ಪೊಲೀಸ್ ತನಿಖಾಧಿಕಾರಿ ಪರಮೇಶ್ವರಪ್ಪನ ಪಾತ್ರದಲ್ಲಿ ಪ್ರಕಾಶ್ ರಾಜ್ ಅವರು ಅಭಿನಯದ ಮೂಲಕ ಚಿತ್ರಕ್ಕೆ ಜೀವ ತುಂಬಿದ್ದಾರೆ.

    ದಕ್ಷಿಣ ರಾಜ್ಯಗಳ ಮೇಲೆ ಹಿಂದಿ ಭಾಷೆಯನ್ನು ಹೇರುತ್ತಿರುವ ಉತ್ತರ ಭಾರತದ ಮಾರ್ವಾಡಿಗಳ ರಾಜಕೀಯ ಹುನ್ನಾರವನ್ನು ಪ್ರತಿರೋಧಿಸುವ ನಿಟ್ಟಿನಲ್ಲಿ ನಿರ್ದೇಶಕ ಜ್ಞಾನವೇಲ್ ಅವರು ಪೊಲೀಸ್ ತನಿಖಾಧಿಕಾರಿ ಪರಮೇಶ್ವರಪ್ಪ (ಪ್ರಕಾಶ್ ರಾಜ್) ನ ಕೈನಿಂದ ಹಿಂದಿ ಮಾತನಾಡುವ ಮಾರ್ವಾಡಿಯ ಕೆನ್ನೆಗೆ ಪಟೀರೆಂದು ಬಾರಿಸುತ್ತಾ, ‘ತಮಿಳಿನಲ್ಲಿ (ಕನ್ನಡದಲ್ಲಿ ) ಮಾತಾಡು’ ಎಂದು ಜಬರಿಸುವ ಮೂಲಕ
    ದ್ರಾವಿಡ ಭಾಷಾ ಚಳವಳಿಯನ್ನು ಸಾಂಕೇತಿಕವಾಗಿ ವ್ಯಂಜಿಸಿದ್ದಾರೆ.

    ಚಲನಚಿತ್ರದ ಆರಂಭದಲ್ಲಿ ಪರಿಸರದ ಮಧ್ಯದಲ್ಲಿ ಗುಬ್ಬಚ್ಚಿಗಳೊಂದಿಗೆ ಗುಬ್ಬಿಮರಿಯಂತೆ ಸ್ವಚ್ಛಂದವಾಗಿ ಚಿಣ್ಣಾಟವಾಡಿಕೊಂಡಿದ್ದ ಸಣ್ಣಮ್ಮ ಮತ್ತು ಕೆಂಚರಾಜನ ಚಿಕ್ಕ ಮಗಳು ಅನಕ್ಷರಸ್ಥೆಯಾಗಿ ಬನದ ಮಗುವಾಗಿ ಕಾಣಿಸುತ್ತಾಳೆ. ಇಂತಹ ಬುಡಕಟ್ಟು ಮಕ್ಕಳಿಗೆ ಅಕ್ಷರ ಕಲಿಸುವ ಯುವ ಟೀಚರಮ್ಮ ಒಬ್ಬಳು ಶಾಲೆ ತೆರೆದು ಅಕ್ಷರದ ಜ್ಞಾನ ಮತ್ತು ಕಾನೂನುಗಳ ಅರಿವು ನೀಡಲು ಬರುತ್ತಾಳೆ. ಪೊಲೀಸರ ಕ್ರೌರ್ಯಕ್ಕೆ ಸಿಲುಕಿ ಲಾಕಪ್ ಡೆತ್ ನಿಂದ ಸಣ್ಣಮ್ಮನ ಮಗಳು ತನ್ನ ತಂದೆಯನ್ನು (ಚಿಕ್ಕರಾಜ) ಕಳೆದುಕೊಂಡ ಬಳಿಕ ಆ ಎಳೆಬಾಲಕಿ ತನ್ನ ತಾಯಿ (ಸಣ್ಣಮ್ಮ)ನ ಆಶ್ರಯಕ್ಕೆ ಬರುತ್ತಾಳೆ. ಲಾಕಪ್ ನಲ್ಲಿ ತನ್ನ ಗಂಡನನ್ನು ಹೊಡೆದು ಸಾಯಿಸಿದ ಪೊಲೀಸರು ಒಡ್ಡಿದ ಹಣದ ಆಮಿಷಕ್ಕೆ ಬಲಿಯಾಗದ ಸಣ್ಣಮ್ಮ ಕೂಲಿನಾಲಿ ಮಾಡಿಯೇ ಮಕ್ಕಳನ್ನು ಸಲಹುವೆನೇ ಹೊರತು ತನ್ನ ಗಂಡನನ್ನು ಕೊಂದ ಕೊಲೆಪಾತಕರ ಹಣದಿಂದ ಅನ್ನ ತಿನ್ನಲಾರೆವೆಂದು ಹೇಳುವ ಮೂಲಕ ದುಡಿದು ಬದುಕುವ ತಳಸಮುದಾಯಗಳ ಹೆಣ್ಣೊಬ್ಬಳ ಸ್ವಾಭಿಮಾನದ ಸಂಕೇತವಾಗಿ ಕಾಣಿಸುತ್ತಾಳೆ.

    ಇಂತಹ ಸಣ್ಣಮ್ಮನ ಮಗಳು ಸಿನಿಮಾದ ಕೊನೆಯಲ್ಲಿ ನ್ಯಾಯವಾದಿ ಚಂದ್ರು (ಸೂರ್ಯ) ಪತ್ರಿಕೆ ಓದುತ್ತಾ ಸೋಫಾದ ಮೇಲೆ ಕುಳಿತಿರುವಾಗ ಎದುರು ಸೋಫಾದಲ್ಲಿ ಕುಳಿತುಕೊಂಡು ಪೇಪರ್ ಓದಲು ಅಂಜಿಕೆಯಿಂದಲೇ ಮುಂದಾಗುತ್ತಾಳೆ. ನ್ಯಾಯವಾದಿ ಚಂದ್ರು ಆ ಎಳೆಬಾಲಕಿಗೆ ಯಾವುದೇ ಅಂಜಿಕೆ ಇರಿಸಿಕೊಳ್ಳದೆ ನಿರಾತಂಕವಾಗಿ ಪತ್ರಿಕೆ ಓದುವಂತೆ ಕಣ್ಣಿನಲ್ಲಿಯೇ ಸೂಚಿಸುತ್ತಾನೆ. ಶೋಷಿತ ಸಮುದಾಯದ ಆ ಹೆಣ್ಣುಮಗಳು ಕಾಲು ಮೇಲೆ ಕಾಲು ಹಾಕಿ ದಿಟ್ಟತನದಿಂದ ಪೇಪರ್ ಹಿಡಿದು ಓದತೊಡಗುತ್ತಾಳೆ. ಚಂದ್ರು ಕನಸುವುದು ಇಂತಹ ಎಚ್ಚೆತ್ತ ಅಕ್ಷರಸ್ಥ ಹೊಸ ಪೀಳಿಗೆಯೊಂದು ಶೋಷಿತ ಸಮುದಾಯಗಳಿಂದ ಮೂಡಿಬರಲಿ ಎಂಬುದು. ಇದು ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಕನಸು ಕೂಡಾ ಆಗಿರುವಂತೆ ನಮ್ಮೆಲ್ಲರ ಹಂಬಲವೂ ಆಗಿದೆ ಎಂಬುದನ್ನು ನಿರ್ದೇಶಕ ಜ್ಞಾನವೇಲ್ ಸಮರ್ಥವಾಗಿ ಮನಗಾಣಿಸಿದ್ದಾರೆ. ಈ ನಿಟ್ಟಿನಲ್ಲಿ ‘ಜೈ ಭೀಮ್’ ಎಂದುಗ ಚಲನಚಿತ್ರಕ್ಕೆ ಹೆಸರು ಕೊಟ್ಟಿರುವುದು ಅನ್ವರ್ಥಕವಾಗಿದೆ.

    ಡಾ.ವಡ್ಡಗೆರೆ ನಾಗರಾಜಯ್ಯ
    8722724174

    admin
    • Website

    Related Posts

    ಪ್ರಪಂಚದ ಅಂತ್ಯಕ್ಕೆ ಕೇವಲ 90 ಸೆಕೆಂಡುಗಳು ಉಳಿದಿರುವ ಮಾನವೀಯ ಗಡಿಯಾರ

    January 28, 2023

    ಛೆ…! ಇವರೆಂಥಾ ಜನ?: ತುಂಬಿದ ಮರಳೂರು ಕೆರೆಗೆ ತ್ಯಾಜ್ಯದ ಬಾಗಿನ!: ಎಲ್ಲಿದ್ದಾರೆ ಅಧಿಕಾರಿಗಳು, ಜನಪ್ರತಿನಿಧಿಗಳು?

    January 26, 2023

    ನಟ ಕಿಶೋರ್ — ಪೃಥ್ವಿ ಅಂಬರ್ ನಟನೆಯ ‘ಪೆಂಟಗನ್’ ಚಿತ್ರ ಟೀಸರ್ ವಿರುದ್ಧ ಕನ್ನಡ ಸಂಘಟನೆಗಳು ಗರಂ!

    January 21, 2023
    Our Picks

    ಮುಂದಿನ ತಿಂಗಳು 12 ಆಫ್ರಿಕನ್ ಚಿರತೆಗಳು ಭಾರತಕ್ಕೆ

    January 28, 2023

    ಪಾಕಿಸ್ತಾನ ರೂಪಾಯಿ ಕುಸಿತ; ದೇಶದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು

    January 28, 2023

    32 ವರ್ಷಗಳ ನಂತರ, ಕಾಶ್ಮೀರದಲ್ಲಿ ಥಿಯೇಟರ್ ಹೌಸ್‌ ಫುಲ್

    January 28, 2023

    ಜಪಾನ್‌ ನ ಆಕಾಶದಲ್ಲಿ ನೀಲಿ ಬೆಳಕಿನ ಸುರುಳಿ; ಹಾರುವ ತಟ್ಟೆಯಲ್ಲಿ ಏಲಿಯನ್‌ ಗಳು

    January 28, 2023
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಮಳೆ ನೀರು ಇಂಗುವ ಕಟ್ಟೆಯೊಳಗೆ ಬಿದ್ದ ಎರಡು ನಾಯಿಗಳ ರಕ್ಷಣೆ

    January 28, 2023

    ತುಮಕೂರು: ಮಳೆ ನೀರು ಇಂಗುವ ಕಟ್ಟೆಯೊಳಗೆ ಬಿದ್ದಿದ್ದ ನಾಯಿಯನ್ನು ಸಿದ್ದಗಂಗಾ ತಾಂತ್ರಿಕ ಮಹಾ ವಿದ್ಯಾಲಯದ ಸಿಬ್ಬಂದಿಯ ಮುತುವರ್ಜಿಯಿಂದ ಹಾಗೂ  ಅಗ್ನಿಶಾಮಕ…

    ಕಿತ್ತೂರು ರಾಣಿ ವಸತಿ ಶಾಲೆಯಲ್ಲಿ 74ನೇ ಗಣರಾಜ್ಯೋತ್ಸವ  ಆಚರಣೆ

    January 28, 2023

    ಈ ಕೆಲಸ ಮಾಡಿದರೆ ಸಾಕು ದೇಹದ ಬೊಜ್ಜು ಕರಗಿ ಹೋಗುತ್ತದೆ!

    January 28, 2023

    ಕಾಂಗ್ರೆಸ್ ಬಿಟ್ಟು ಬಿಎಸ್ ಪಿ ಪಕ್ಷ ಸೇರಿದ ತಿಪಟೂರು ಕಾಂಗ್ರೆಸ್ ಮುಖಂಡ ಅಶ್ವಥ್ ನಾರಾಯಣ್

    January 28, 2023

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2023 | All Right Reserved nammatumakuru.com.
    Powerd By Blueline Computers

    Type above and press Enter to search. Press Esc to cancel.