nammatumakuru

    Subscribe to Updates

    Get the latest creative news from FooBar about art, design and business.

    What's Hot

    ರಾಜ್ಯಪಾಲರ ವಿರುದ್ಧ ಅವಹೇಳನಕಾರಿ ಹೇಳಿಕೆಗಳಿಲ್ಲ’; ಬಂಗಾಳ ಬಿಜೆಪಿಗೆ ಕೇಂದ್ರ ನಾಯಕತ್ವದ ಅಲ್ಟಿಮೇಟ್

    February 4, 2023

    ದೇವರ ಮೂರ್ತಿ ಸೇರಿದಂತೆ 2.50 ಕೋಟಿ ಮೌಲ್ಯದ ವಸ್ತುಗಳು ಕಳ್ಳರ ಪಾಲು!

    February 4, 2023

    ಅಪ್ರಾಪ್ತೆಯನ್ನು ಮದುವೆಯಾದ ಮೂರು ಮಕ್ಕಳ ತಂದೆ

    February 4, 2023
    Facebook Twitter Instagram
    ಟ್ರೆಂಡಿಂಗ್
    • ರಾಜ್ಯಪಾಲರ ವಿರುದ್ಧ ಅವಹೇಳನಕಾರಿ ಹೇಳಿಕೆಗಳಿಲ್ಲ’; ಬಂಗಾಳ ಬಿಜೆಪಿಗೆ ಕೇಂದ್ರ ನಾಯಕತ್ವದ ಅಲ್ಟಿಮೇಟ್
    • ದೇವರ ಮೂರ್ತಿ ಸೇರಿದಂತೆ 2.50 ಕೋಟಿ ಮೌಲ್ಯದ ವಸ್ತುಗಳು ಕಳ್ಳರ ಪಾಲು!
    • ಅಪ್ರಾಪ್ತೆಯನ್ನು ಮದುವೆಯಾದ ಮೂರು ಮಕ್ಕಳ ತಂದೆ
    • ಖ್ಯಾತ ಗಾಯಕಿ ವಾಣಿ ಜೈರಾಮ್  ನಿಧನ
    • ಭಾರತೀಯ ಸೇನಾ ನೇಮಕಾತಿಯಲ್ಲಿ ಬದಲಾವಣೆ ಮೊದಲು ಆನ್ ಲೈನ್ ಪರೀಕ್ಷೆ
    • BSF ನಲ್ಲಿ ಉದ್ಯೋಗಾವಕಾಶ
    • ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೆ ಕ್ಷಣಗಣನೆ
    • ಜನ ಊಟ ಮಾಡುವ ಅಕ್ಕಿಯಲ್ಲಿ ರಸಗೊಬ್ಬರದ ಹರಳುಗಳು ಮಿಶ್ರಣ: ಇದೆಂತಹ ದುರಾವಸ್ಥೆ!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಹಂಸಲೇಖ ಅವರಿಂದ ಕ್ಷಮೆ ಕೇಳಿಸಿದ ಜಾತಿಗ್ರಸ್ತರೇ ನೀವು ಇದಕ್ಕೇನು ಹೇಳುವಿರಿ…
    ಲೇಖನ November 16, 2021

    ಹಂಸಲೇಖ ಅವರಿಂದ ಕ್ಷಮೆ ಕೇಳಿಸಿದ ಜಾತಿಗ್ರಸ್ತರೇ ನೀವು ಇದಕ್ಕೇನು ಹೇಳುವಿರಿ…

    By adminNovember 16, 2021No Comments2 Mins Read
    hamsalekha

    ಡಾ.ವಡ್ಡಗೆರೆ ನಾಗರಾಜಯ್ಯ
    8722724174

    ಸಾವಿರಾರು ವರ್ಷಗಳಿಂದ ಅಸ್ಪೃಶ್ಯತೆ ಆಚರಿಸುತ್ತಾ, ಮಹಿಳೆಯರ ವಿರುದ್ಧ ಕ್ರೌರ್ಯ ಎಸಗುತ್ತಾ, ‘ವಸುದೈವ ಕುಟುಂಬಂ’ ‘ಸರ್ವೇಜನ ಸುಖಿನೋ ಭವಂತು’, ‘ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೇ ದೇವತಾಃ’ ಎಂದು ಬರಿದೇ ಪುಂಖಾನುಪುಂಖವಾಗಿ ಮಾತನಾಡುವ ನೀವು, ಜಾತಿ ಕ್ರೌರ್ಯಕ್ಕೆ ಸಿಲುಕಿ ದಲಿತರ ಹೆಣಗಳು ಉರುಳಿದಾಗ ಅಂತಹ ಅಮಾನವೀಯ ರಾಕ್ಷಸೀ ಕೃತ್ಯ ನಡೆಸಿದವರ ವಿರುದ್ಧ ಒಂದಕ್ಷರವನ್ನೂ ಮಾತಾಡುವುದಿಲ್ಲ.

    ಕೆಳಜಾತಿಗಳಿಗೆ ಕೊಡಲಾಗುತ್ತಿದ್ದ ಮೀಸಲಾತಿ ಸೌಲಭ್ಯದ ವಿರುದ್ಧ ಬೊಬ್ಬಿಡುತ್ತಿದ್ದ ನೀವು, ಆರ್ಥಿಕ ಹಿಂದುಳಿದಿರುವಿಕೆಯ ಕಾರಣವನ್ನು ಮುಂದೊಡ್ಡಿ ಸಂವಿಧಾನದ ಆಶಯದ ವಿರುದ್ಧ ಕೇವಲ 4% ಜನ 10% ಮೀಸಲಾತಿ ಕಬಳಿಸಿರುವ ಸಾಮಾಜಿಕ ಅನ್ಯಾಯದ ವಿರುದ್ಧ ತುಟಿ ಪಿಟಿಕ್ ಎನ್ನುವುದಿಲ್ಲ.

    ಶೂದ್ರ ಗೊಲ್ಲನಾದ ಕೃಷ್ಣನಿಗೆ ಗುಡಿ ಕಟ್ಟಿ ಗರ್ಭಗುಡಿಯಲ್ಲಿ ನೀವು ನಿಂತು ಶೂದ್ರರನ್ನು ಆಚೆಗಿರಿಸಿರುವ ಬಗ್ಗೆಯಾಗಲೀ ಪಂಕ್ತಿಭೇದದ ವಿರುದ್ಧವಾಗಲೀ ಮಾತಾಡಲು ನಿಮಗೆ ಬಾಯಿಲ್ಲ.

    ಮಾಂಸಾಹಾರಿ ಶೂದ್ರರ ಬೆವರ ದುಡಿಮೆಯ ಕಾಣಿಕೆಗಳಿಂದಲೇ ಮಠಮಾನ್ಯ ಗುಡಿಗುಂಡಾರಗಳ ಸಾಮ್ರಾಜ್ಯವನ್ನು ಕಟ್ಟಿಕೊಂಡಿದ್ದೀರಿ. ಮಾಂಸಾಹಾರ ಸಂಸ್ಕೃತಿಯ ಜನರನ್ನು ಹೀನಾಯಿಸಿ ಮಾತಾಡುವ ನೀವು ಮಾಂಸಾಹಾರಿ ಶಿವನನ್ನೇಕೆ ಪೂಜಿಸುವಿರಿ? ಮಾಂಸಾಹಾರಿ ಗೊಲ್ಲರ ಕೃಷ್ಣನನ್ನೇಕೆ ಆರಾಧಿಸುವಿರಿ? ಮಾಂಸಾಹಾರಿ ಕುರುಬ ಜನಾಂಗದಲ್ಲಿ ಹುಟ್ಟಿದ ಸಂತಕವಿ ಕನಕದಾಸರ ಹೆಸರಿನಲ್ಲಿ ಕಿಂಡಿ ಕೊರೆದು ಕಿಂಡಿಕಾಸು ತಟ್ಟೆಕಾಸು ಯಾಕಾಗಿ ಪಡೆಯುವಿರಿ?

    ಬ್ರಾಹ್ಮಣ್ಯದ ಅಮಲನ್ನು ಶೂದ್ರರಿಗೂ ಏರಿಸಿ ಧರ್ಮದ ವ್ಯಸನಿಗಳನ್ನು ಸೃಷ್ಟಿಸಿ ವೈದಿಕಾರ್ಯರ ಕೋಟೆ ಕಾಯಲು ತ್ರಿಶೂಲ ದೀಕ್ಷೆ ಕೊಡುತ್ತಿರುವ ಹೇಯಕೃತ್ಯವು ಅಂಬೇಡ್ಕರ್ ಅವರ ಕಲ್ಪನೆಯ ಜಾತ್ಯತೀತ ನೆಲದಲ್ಲಿ ನಿಮ್ಮಿಂದಾಗಿ ತಾಂಡವವಾಡುತ್ತಿದೆ. ಅತ್ತ ಮುಸ್ಲಿಮರ ವಿರುದ್ಧ ಇತ್ತ ಕ್ರಿಶ್ಚಿಯನ್ನರ ವಿರುದ್ಧ ಶೂದ್ರರನ್ನು ನಿಲ್ಲಿಸಿ ಕೋಮು ಧ್ವೇಷದ ಬಿಸಿ ರಕ್ತವನ್ನು ಕುಡಿಯುತ್ತಿದ್ದೀರಿ. ಸಹಜವಾದ ಮತಾಂತರವನ್ನು ನೋಡಿ ಕೆರಳುವ ನಿಮಗೆ ಇಲ್ಲಿಯ ಅಸ್ಪೃಶ್ಯತೆ, ಸ್ತ್ರೀ ಶೋಷಣೆ, ಅಲೆಮಾರಿಗಳ ಬದುಕಿನ ಗೋಳಿನ ಪಾಡು ಕಾಣಿಸುವುದಿಲ್ಲ ಯಾಕೆ?

    ಮಾಂಸಾಹಾರ ಸಂಸ್ಕೃತಿಯ ಬುಡಕಟ್ಟು ಮತ್ತು ಕೆಳಜಾತಿಗಳ ದ್ರಾವಿಡ ದೇವರುಗಳಾದ ಶಿವ, ಚಾಮುಂಡಿ, ಕೃಷ್ಣ ಮುಂತಾದವರನ್ನು ಆರಾಧಿಸುವುದನ್ನು ನಿಮಗೆ ವರ್ಜಿಸಲು ಸಾಧ್ಯವಿಲ್ಲವೇ? ಮಾಂಸಾಹಾರಿ ದೇವರುಗಳನ್ನು ಮಾತ್ರ ನಿಮಗೆ ಬೇಕಾದ ಗುಡಿಗುಂಡಾರ ಮಠಮಾನ್ಯ ಕಟ್ಟಿಕೊಳ್ಳಲು ಸ್ವೀಕರಿಸಿರುವ ನೀವು ಹಾಗೂ ಮಾಂಸಾಹಾರಿಗಳು ಕೊಡುವ ಕಾಣಿಕೆಗಳನ್ನು ಸ್ವೀಕರಿಸುವ ನೀವು, ಮಾಂಸಾಹಾರಿಗಳನ್ನು ನಿಮ್ಮೊಳಕ್ಕೆ ಸ್ವೀಕರಿಸದಿರುವುದು ಯಾವ ನ್ಯಾಯ? ಮಾಂಸಾಹಾರಿ ದೇವರು ಮತ್ತು ಮಾಂಸಾಹಾರಿಗಳ ದುಡಿಮೆಯನ್ನು ಹಾಗೆ ವರ್ಜಿಸಲು ನಿಮಗೆ ಸಾಧ್ಯವಿಲ್ಲವೆಂದ ಮೇಲೆ ಮಾಂಸಾಹಾರದ ಸಂಗತಿಯನ್ನು ಕುರಿತು ಇದೇ ದೇವರುಗಳ ಅಸಲಿ ವಾರಸುದಾರರು ಮಾತಾಡುವುದರಲ್ಲಾಗಲೀ ಅಥವಾ ನಿಮಗೆ ಒಗ್ಗುವುದಾದರೆ ಮಾಂಸಾಹಾರ ಸೇವಿಸಿರೆಂದು ಕೇಳುವುದರಲ್ಲಾಗಲೀ ತಪ್ಪೇನಿದೆ?

     

    ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com

    ವಾಟ್ಸಾಪ್ ಗ್ರೂಪ್ ಸೇರಿ:

    https://chat.whatsapp.com/E7Brl0d8zXCJogP6c6GRcZ

    ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

    admin
    • Website

    Related Posts

    ಬದುಕು ಧೈರ್ಯಕ್ಕೆ ಕಾರಣ

    January 29, 2023

    ಅಂತರಾಷ್ಟ್ರೀಯ ಪರ್ವತ ದಿನ – ಪ್ರಕೃತಿಯ ಭದ್ರವಾದ ಪರ್ವತ

    December 10, 2022

    ವಿಶ್ವದ ಮೊಟ್ಟ ಮೊದಲ ಡಾ. ಅಂಬೇಡ್ಕರ್ ಪ್ರತಿಮೆ.

    December 10, 2022
    Our Picks

    ಖ್ಯಾತ ಗಾಯಕಿ ವಾಣಿ ಜೈರಾಮ್  ನಿಧನ

    February 4, 2023

    ಭಾರತೀಯ ಸೇನಾ ನೇಮಕಾತಿಯಲ್ಲಿ ಬದಲಾವಣೆ ಮೊದಲು ಆನ್ ಲೈನ್ ಪರೀಕ್ಷೆ

    February 4, 2023

    ಪರೀಕ್ಷೆ ಹಾಲ್ ನಲ್ಲಿ 500 ಹುಡುಗಿಯರನ್ನು ಕಂಡು ಕುಸಿದು ಬಿದ್ದ ವಿದ್ಯಾರ್ಥಿ!

    February 4, 2023

    ಫೆ.6ರಂದು ಪ್ರಧಾನಿ ಮೋದಿ ತುಮಕೂರಿಗೆ: 80 ಸಾವಿರ ಕಾರ್ಯಕರ್ತರು ಆಗಮಿಸುವ  ಸಾಧ್ಯತೆ

    February 4, 2023
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ರಾಜ್ಯಪಾಲರ ವಿರುದ್ಧ ಅವಹೇಳನಕಾರಿ ಹೇಳಿಕೆಗಳಿಲ್ಲ’; ಬಂಗಾಳ ಬಿಜೆಪಿಗೆ ಕೇಂದ್ರ ನಾಯಕತ್ವದ ಅಲ್ಟಿಮೇಟ್

    February 4, 2023

    ಪಶ್ಚಿಮ ಬಂಗಾಳ ಬಿಜೆಪಿ-ರಾಜ್ಯಪಾಲರ ಘರ್ಷಣೆಗೆ ಕೇಂದ್ರ ನಾಯಕತ್ವದ ಮಧ್ಯಪ್ರವೇಶ. ರಾಜ್ಯಪಾಲರೊಂದಿಗಿನ ಭಿನ್ನಾಭಿಪ್ರಾಯ ಬಗೆಹರಿಸುವಂತೆ ಬಿಜೆಪಿ ಕೇಂದ್ರ ನಾಯಕತ್ವ ರಾಜ್ಯ ಬಿಜೆಪಿ…

    ದೇವರ ಮೂರ್ತಿ ಸೇರಿದಂತೆ 2.50 ಕೋಟಿ ಮೌಲ್ಯದ ವಸ್ತುಗಳು ಕಳ್ಳರ ಪಾಲು!

    February 4, 2023

    ಅಪ್ರಾಪ್ತೆಯನ್ನು ಮದುವೆಯಾದ ಮೂರು ಮಕ್ಕಳ ತಂದೆ

    February 4, 2023

    ಖ್ಯಾತ ಗಾಯಕಿ ವಾಣಿ ಜೈರಾಮ್  ನಿಧನ

    February 4, 2023

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2023 | All Right Reserved nammatumakuru.com.
    Powerd By Blueline Computers

    Type above and press Enter to search. Press Esc to cancel.