nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕಾಂಗ್ರೆಸ್ ಬಿಟ್ಟು ಬಿಎಸ್ ಪಿ ಪಕ್ಷ ಸೇರಿದ ತಿಪಟೂರು ಕಾಂಗ್ರೆಸ್ ಮುಖಂಡ ಅಶ್ವಥ್ ನಾರಾಯಣ್

    January 28, 2023

    ಏರ್ ಶೋ: ಜ. 30ರಿಂದ ಫೆ. 20ರವರೆಗೆ ಮಾಂಸ ಮಾರಾಟಕ್ಕೆ ನಿಷೇಧ

    January 28, 2023

    ಮುಂದಿನ ತಿಂಗಳು 12 ಆಫ್ರಿಕನ್ ಚಿರತೆಗಳು ಭಾರತಕ್ಕೆ

    January 28, 2023
    Facebook Twitter Instagram
    ಟ್ರೆಂಡಿಂಗ್
    • ಕಾಂಗ್ರೆಸ್ ಬಿಟ್ಟು ಬಿಎಸ್ ಪಿ ಪಕ್ಷ ಸೇರಿದ ತಿಪಟೂರು ಕಾಂಗ್ರೆಸ್ ಮುಖಂಡ ಅಶ್ವಥ್ ನಾರಾಯಣ್
    • ಏರ್ ಶೋ: ಜ. 30ರಿಂದ ಫೆ. 20ರವರೆಗೆ ಮಾಂಸ ಮಾರಾಟಕ್ಕೆ ನಿಷೇಧ
    • ಮುಂದಿನ ತಿಂಗಳು 12 ಆಫ್ರಿಕನ್ ಚಿರತೆಗಳು ಭಾರತಕ್ಕೆ
    • ಮಗುವನ್ನು ಅಪಹರಿಸಿ ಹಣದ ಡಿಮ್ಯಾಂಡ್:ಪೊಲೀಸರಿಂದ ಒಂದು ವರ್ಷದ ಮಗುವಿನ ರಕ್ಷಣೆ
    • ಪಾಕಿಸ್ತಾನ ರೂಪಾಯಿ ಕುಸಿತ; ದೇಶದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು
    • 32 ವರ್ಷಗಳ ನಂತರ, ಕಾಶ್ಮೀರದಲ್ಲಿ ಥಿಯೇಟರ್ ಹೌಸ್‌ ಫುಲ್
    • ಜಪಾನ್‌ ನ ಆಕಾಶದಲ್ಲಿ ನೀಲಿ ಬೆಳಕಿನ ಸುರುಳಿ; ಹಾರುವ ತಟ್ಟೆಯಲ್ಲಿ ಏಲಿಯನ್‌ ಗಳು
    • ಮುಂದುವರೆದ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಶಶಿ ಕೆ. ಅವರಿಂದ ಏಕ ವ್ಯಕ್ತಿ ಚಿತ್ರ ಕಲಾ ಪ್ರದರ್ಶನ: ಪ್ರತಿಭೆಗೆ ಬೆಲೆಯನ್ನು ನೀಡೋಣ | ಶಾಸಕ ಜ್ಯೋತಿಗಣೇಶ್
    ಸ್ಪೆಷಲ್ ನ್ಯೂಸ್ November 28, 2021

    ಶಶಿ ಕೆ. ಅವರಿಂದ ಏಕ ವ್ಯಕ್ತಿ ಚಿತ್ರ ಕಲಾ ಪ್ರದರ್ಶನ: ಪ್ರತಿಭೆಗೆ ಬೆಲೆಯನ್ನು ನೀಡೋಣ | ಶಾಸಕ ಜ್ಯೋತಿಗಣೇಶ್

    By adminNovember 28, 2021No Comments2 Mins Read
    shashi k

    ತುಮಕೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ವತಿಯಿಂದ ಶಶಿ ಕೆ. ತುಮಕೂರು ಇವರಿಂದ ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ ತುಮಕೂರಿನ ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ನಡೆಯಿತು.

     

    ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ತುಮಕೂರು ನಗರ ಶಾಸಕ ಜ್ಯೋತಿಗಣೇಶ್,  ಶಶಿ ಕೆ. ಇವರ ಚಿತ್ರಕಲೆಯು ತುಂಬಾ ಅತ್ಯುತ್ತಮವಾಗಿದೆ. ಈ ಪ್ರತಿಭೆಯು ತನ್ನ ಕಲೆಯನ್ನು ಇನ್ನೂ ಹೆಚ್ಚಾಗಿ ಮತ್ತು ಉತ್ತಮವಾಗಿ ಬೆಳೆಸಿಕೊಳ್ಳಲಿ. ಹಣಕ್ಕೆ ಬೆಲೆ ಇಲ್ಲ. ಪ್ರತಿಭೆಗೆ ಬೆಲೆಯನ್ನು ನೀಡೋಣ. ಭಾವನೆಗಳನ್ನು ಗೆರೆಗಳಾಗಿ ಬರೆದು, ಬಣ್ಣಗಳನ್ನು ಚೆಲ್ಲಿ ಭಾವನೆಗಳನ್ನು ವ್ಯಕ್ತಪಡಿಸುವುದಾದರೆ, ಗುಡಿಸಿಲಲ್ಲಿ ಅರಳಿದ ಹೂವು ಎಂದು ಹೇಳಿ ಕಲಾವಿದರನ್ನು ಪ್ರೋತ್ಸಾಹಿಸಿದರು.

     

    ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಶ್ರೀನಿವಾಸ್ ಮಾತನಾಡಿ, ಶಶಿ ಕೆ. ಅವರು ಬಿಡಿಸಿರುವ ಚಿತ್ರಗಳಲ್ಲಿ ಅವರ ಬಡತನ ಅವರ ಭಾವನೆಗಳು ವ್ಯಕ್ತವಾಗುತ್ತಿದೆ. ಜಾನಪದ ಶೈಲಿಯನ್ನು ಕೂಡ ನೋಡಬಹುದಾಗಿದೆ.  ಚಿತ್ರಕಲಾವಿದರು ನಿರಾಶರಾಗಬೇಕಾಗಿಲ್ಲ. ಮುಂದಿನ ದಿನಗಳಲ್ಲಿ ನಿಮಗೆ ಒಳ್ಳೆಯದಾಗಲಿ ಎಂದು ಅವರು ಆಶೀರ್ವಾದಿಸಿದರು.

     

    ಚಿತ್ರಕಲಾ ಶಿಕ್ಷಕ ಡಿ.ಭೂತಯ್ಯನವರು ಮಾತನಾಡಿ,  ಗುಡಿಸಲಿನಲ್ಲಿದ್ದರೂ, ಇನ್ನೂ ದೊಡ್ಡದಾಗಿ ಈ ಪ್ರತಿಭೆಯು ಬೆಳೆಯಲಿ. ನನ್ನ ವಿದ್ಯಾರ್ಥಿಗಳಾದ ಶಶಿ ಕೆ., ನಾಗೇಶ್ ವಿ., ಜೈಲಕಾ ಮತ್ತು ಸತ್ಯ ಇಂತಹ ಪ್ರತಿಭೆಗಳಿಗೆ ಇನ್ನೂ ಹೆಚ್ಚು ಅವಕಾಶಗಳನ್ನು ಮಾಡಿಕೊಡಬೇಕು. ಇನ್ನೂ ಹೆಚ್ಚು ಕಲೆಗಳನ್ನು ಬೆಳೆಸೋಣ ಎಂದು ಪ್ರೋತ್ಸಾಹಿಸಿದರು.

     

    ನಿವೃತ್ತ ಶಿಕ್ಷಕ ಎಂ.ಎನ್.ಸುಬ್ರಹ್ಮಣ್ಯ ಅವರು ಮಾತನಾಡಿ, ಕಲಾವಿದರು ಮೊದಲು ತಮ್ಮ  ಅಭಿಪ್ರಾಯಗಳನ್ನು ಗಮನಿಸಬೇಕು ಆಗ ಮಾತ್ರ ಬೇರೆಯವರು ಗೌರವಿಸುತ್ತಾರೆ ಎಂದು ಉತ್ತೇಜಿಸಿದರು.

     

    ಸರ್ಕಾರಿ ಚಿತ್ರಕಲಾ ಕಾಲೇಜಿನ ಪ್ರಾಂಶುಪಾಲರಾದ ಸಿ.ಸಿ.ಭಾರಕೇರ ಮಾತನಾಡಿ,  ಪ್ರತಿಭೆಯು ಯಾರ ಸ್ವತ್ತಲ್ಲ. ಪ್ರತಿಭೆ ಗುಡಿಸಲಿನಲ್ಲಿ ಹುಟ್ಟುತ್ತದೆ. ಅರಮನೆಯಲ್ಲಿ ಸಾಯುತ್ತದೆ ಎಂದು ಉದಾಹರಣೆಗಳೊಂದಿಗೆ ವಿವರಿಸಿದರು. ಹೆಣ್ಣು ಪ್ರಕೃತಿ ಮಾತೆ ನಮಗೆ ಮಾರ್ಗದರ್ಶಕ. ಇವರಿಗೆ ಪ್ರಾಣಿ ಪಕ್ಷಿಗಳ ಬಗ್ಗೆ ಎಷ್ಟೋ ಪ್ರೀತಿಯಿಂದ ಈ ಕಲೆಯಲ್ಲಿ ನೋಡಬಹುದು ಎಂದು ತಿಳಿಸಿದರು.

     

    ರವೀಂದ್ರ ಕಲಾನಿಕೇತನದ ಉಪನ್ಯಾಸಕ ಪ್ರಭು ಅರಸೂರು ಮಾತನಾಡಿ,  ಅವಳು ಬದುಕನ್ನು ನೋಡಬಹುದು, ಸಂಗೀತ ಹಾಡಿನ ಮೂಲಕ ವ್ಯಕ್ತಪಡಿಸುತ್ತಾರೆ. ಕಲಾವಿದರು ಗೆರೆಗಳ ಮುಖಾಂತರ ವ್ಯಕ್ತಪಡಿಸುತ್ತಾರೆ. ನಮ್ಮ ಬದುಕು ನಿಮ್ಮ ಕೈಯಲ್ಲಿದೆ ಪ್ರಯತ್ನವಿಲ್ಲದೆ, ಫಲವಿಲ್ಲವೆಂದು ಇನ್ನೂ ಹೆಚ್ಚಾಗಿ ಕಲಾವಿದೆಯಾಗಿ ಬೆಳೆಯಲು ಪ್ರೋತ್ಸಾಹಿಸಿದರು.

     

    ಶಶಿ ಕೆ. ಅವರು ಮಾತನಾಡಿ, ಪ್ರಕೃತಿ ಮತ್ತು ನಾನು ಎಂಬ ವಿಷಯದಲ್ಲಿ ಇಷ್ಟು ಚಿತ್ರಕಲೆ ಮಾಡಿದ್ದೇನೆ ಮತ್ತು ಪ್ರಕೃತಿಯಲ್ಲಿ ಹೆಣ್ಣಿಗೆ ಯಾವ ಸ್ಥಾನವಿದೆ ಎಂಬುದರ ಬಗ್ಗೆ ಚಿತ್ರಕಲೆ ಮಾಡಿದ್ದೇನೆ. ಹುಳವು ಹೇಗೆ ಹಂತ ಹಂತವಾಗಿ ಬೆಳೆದು ಬಣ್ಣದ ಚಿಟ್ಟೆಯಾಗಿ ಪ್ರಕೃತಿಯಿಂದ ಹೊರ ಬರುತ್ತದೆಯೋ ಹಾಗೆ ನನ್ನ ಭಾವನೆಗಳೂ ಕೂಡ ಬಣ್ಣಗಳ ಮುಖಾಂತರ ಕಲೆಯಾಗಿ ಹೊರ ಬಂದಿದೆ.

    ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com

    ವಾಟ್ಸಾಪ್ ಗ್ರೂಪ್ ಸೇರಿ:

    https://chat.whatsapp.com/E7Brl0d8zXCJogP6c6GRcZ

    ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

     

     

    admin
    • Website

    Related Posts

    ಪ್ರಪಂಚದ ಅಂತ್ಯಕ್ಕೆ ಕೇವಲ 90 ಸೆಕೆಂಡುಗಳು ಉಳಿದಿರುವ ಮಾನವೀಯ ಗಡಿಯಾರ

    January 28, 2023

    ಛೆ…! ಇವರೆಂಥಾ ಜನ?: ತುಂಬಿದ ಮರಳೂರು ಕೆರೆಗೆ ತ್ಯಾಜ್ಯದ ಬಾಗಿನ!: ಎಲ್ಲಿದ್ದಾರೆ ಅಧಿಕಾರಿಗಳು, ಜನಪ್ರತಿನಿಧಿಗಳು?

    January 26, 2023

    ನಟ ಕಿಶೋರ್ — ಪೃಥ್ವಿ ಅಂಬರ್ ನಟನೆಯ ‘ಪೆಂಟಗನ್’ ಚಿತ್ರ ಟೀಸರ್ ವಿರುದ್ಧ ಕನ್ನಡ ಸಂಘಟನೆಗಳು ಗರಂ!

    January 21, 2023
    Our Picks

    ಮುಂದಿನ ತಿಂಗಳು 12 ಆಫ್ರಿಕನ್ ಚಿರತೆಗಳು ಭಾರತಕ್ಕೆ

    January 28, 2023

    ಪಾಕಿಸ್ತಾನ ರೂಪಾಯಿ ಕುಸಿತ; ದೇಶದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು

    January 28, 2023

    32 ವರ್ಷಗಳ ನಂತರ, ಕಾಶ್ಮೀರದಲ್ಲಿ ಥಿಯೇಟರ್ ಹೌಸ್‌ ಫುಲ್

    January 28, 2023

    ಜಪಾನ್‌ ನ ಆಕಾಶದಲ್ಲಿ ನೀಲಿ ಬೆಳಕಿನ ಸುರುಳಿ; ಹಾರುವ ತಟ್ಟೆಯಲ್ಲಿ ಏಲಿಯನ್‌ ಗಳು

    January 28, 2023
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಕಾಂಗ್ರೆಸ್ ಬಿಟ್ಟು ಬಿಎಸ್ ಪಿ ಪಕ್ಷ ಸೇರಿದ ತಿಪಟೂರು ಕಾಂಗ್ರೆಸ್ ಮುಖಂಡ ಅಶ್ವಥ್ ನಾರಾಯಣ್

    January 28, 2023

    ತುಮಕೂರು: ಕುರುಬ ಸಮುದಾಯದ ಪ್ರಭಾವಿ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಅಶ್ವಥ್ ನಾರಾಯಣ್ ರವರು ಕಾಂಗ್ರೆಸ್…

    ಏರ್ ಶೋ: ಜ. 30ರಿಂದ ಫೆ. 20ರವರೆಗೆ ಮಾಂಸ ಮಾರಾಟಕ್ಕೆ ನಿಷೇಧ

    January 28, 2023

    ಮುಂದಿನ ತಿಂಗಳು 12 ಆಫ್ರಿಕನ್ ಚಿರತೆಗಳು ಭಾರತಕ್ಕೆ

    January 28, 2023

    ಮಗುವನ್ನು ಅಪಹರಿಸಿ ಹಣದ ಡಿಮ್ಯಾಂಡ್:ಪೊಲೀಸರಿಂದ ಒಂದು ವರ್ಷದ ಮಗುವಿನ ರಕ್ಷಣೆ

    January 28, 2023

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2023 | All Right Reserved nammatumakuru.com.
    Powerd By Blueline Computers

    Type above and press Enter to search. Press Esc to cancel.