nammatumakuru

    Subscribe to Updates

    Get the latest creative news from FooBar about art, design and business.

    What's Hot

    ಭಾರತೀಯ ಮೂಲದ ರೇಡಿಯೋ ನಿರೂಪಕನ ಕೊಲೆ ಯತ್ನ: ಮೂವರಿಗೆ ಶಿಕ್ಷೆ ವಿಧಿಸಿದ ನ್ಯೂಜಿಲೆಂಡ್ ನ್ಯಾಯಾಲಯ

    December 3, 2023

    ನನ್ನ ಜೀವನದಲ್ಲಿ ಸಿಬಿಐ ಕಚೇರಿಗೆ ಹೋಗುತ್ತೇನೆ ಎಂದು ನಾನು ಭಾವಿಸಿರಲಿಲ್ಲ: ನಟ ವಿಶಾಲ್

    December 3, 2023

    ಸಂಭಾವನೆ ಹೆಚ್ಚಿಸಿಕೊಂಡ ರಿಷಬ್ ಶೆಟ್ಟಿ.. ಎಷ್ಟು ಕೋಟಿ ಗೊತ್ತಾ?

    December 3, 2023
    Facebook Twitter Instagram
    ಟ್ರೆಂಡಿಂಗ್
    • ಭಾರತೀಯ ಮೂಲದ ರೇಡಿಯೋ ನಿರೂಪಕನ ಕೊಲೆ ಯತ್ನ: ಮೂವರಿಗೆ ಶಿಕ್ಷೆ ವಿಧಿಸಿದ ನ್ಯೂಜಿಲೆಂಡ್ ನ್ಯಾಯಾಲಯ
    • ನನ್ನ ಜೀವನದಲ್ಲಿ ಸಿಬಿಐ ಕಚೇರಿಗೆ ಹೋಗುತ್ತೇನೆ ಎಂದು ನಾನು ಭಾವಿಸಿರಲಿಲ್ಲ: ನಟ ವಿಶಾಲ್
    • ಸಂಭಾವನೆ ಹೆಚ್ಚಿಸಿಕೊಂಡ ರಿಷಬ್ ಶೆಟ್ಟಿ.. ಎಷ್ಟು ಕೋಟಿ ಗೊತ್ತಾ?
    • ಪಾಕಿಸ್ತಾನದ ಬೌದ್ಧ ಮಂದಿರದಲ್ಲಿ ಸಿಕ್ತು 2000 ವರ್ಷಗಳಷ್ಟು ಹಳೆಯ ನಿಧಿ  
    • ಪ್ರೀತಿ ಪ್ರೇಮದ ನೆಪದಲ್ಲಿ ಯುವತಿಯರಿಗೆ ವಂಚನೆ: ಠಾಣೆಯಲ್ಲಿ ದೂರು ದಾಖಲು
    • ಅರಿಶಿಣ ತೋಟದಲ್ಲಿ ಗಾಂಜಾ ಕೃಷಿ ಮಾಡುತ್ತಿದ್ದ ತಂದೆ-ಮಗನನ್ನು ಬಂಧಿಸಿದ ಪೊಲೀಸರು
    • ಉಗ್ರಂ ರಿಮೇಕ್ ಅನ್ನೋದು ಎಲ್ಲರಿಗೂ ಗೊತ್ತು: ರವಿ ಬಸೂರು  
    • ನ್ಯುಮೋನಿಯಾ ವೈರಸ್: ದೇಶಾದ್ಯಂತ ಹೈ ಅಲರ್ಟ್
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕೊತ್ತೇಗಾಲ: “ಗ್ರಾಮ ಲೆಕ್ಕಿಗರು ಹಣಕ್ಕಾಗಿ ಬೇಡಿಕೆ ಇಟ್ಟಿಲ್ಲ” | ಗ್ರಾಮಸ್ಥರ ನಡುವೆ ಆರೋಪ, ಪ್ರತ್ಯಾರೋಪ
    ಸ್ಪೆಷಲ್ ನ್ಯೂಸ್ December 16, 2021

    ಕೊತ್ತೇಗಾಲ: “ಗ್ರಾಮ ಲೆಕ್ಕಿಗರು ಹಣಕ್ಕಾಗಿ ಬೇಡಿಕೆ ಇಟ್ಟಿಲ್ಲ” | ಗ್ರಾಮಸ್ಥರ ನಡುವೆ ಆರೋಪ, ಪ್ರತ್ಯಾರೋಪ

    By adminDecember 16, 2021No Comments2 Mins Read
    saraguru grama panchayath

    ಸರಗೂರು: ಮಳೆ ಹಾನಿಯ ಫಲಾನುಭವಿಗಳಿಗೆ ಪರಿಹಾರ ವಿತರಣೆಗೆ ಸಂಬಂಧಿಸಿದಂತೆ ಕೊತ್ತೇಗಾಲದಲ್ಲಿ ಗ್ರಾಮಸ್ಥರ ನಡುವೆಯೇ ಗೊಂದಲ ಸೃಷ್ಟಿಯಾಗಿದ್ದು, ಒಂದೆಡೆ ಕೊತ್ತೆಗಾಲದ ಕೆಲವು ಗ್ರಾಮಸ್ಥರು ಪರಿಹಾರ ನೀಡಲು ಅಧಿಕಾರಿಗಳು  ಲಂಚದ ಬೇಡಿಕೆ ಇಡುತ್ತಿದ್ದಾರೆ ಎಂದು ಆರೋಪಿಸಿದರೆ, ಇನ್ನೊಂದು ಗ್ರಾಮಸ್ಥರ ತಂಡ, ಇದು ಸುಳ್ಳು, ಅಧಿಕಾರಿಗಳು ಯಾವುದೇ ಹಣದ ಬೇಡಿಕೆ ಇಟ್ಟಿಲ್ಲ ಎಂದು ಆರೋಪ ನಿರಾಕರಿಸಿದ್ದಾರೆ.

    ಗ್ರಾಮಸ್ಥರ ಒಂದು ತಂಡ, “ಮಳೆಯಿಂದ ಹಾನಿಯಾದ ಮನೆಗಳ ಪರಿಹಾರದ ಫಲಾನುಭವಿಗಳ ಪಟ್ಟಿಗೆ ಸೇರಿಸಲು ಪರಿಶೀಲನೆಗೆ ಬರುವ ಗ್ರಾಮ ಲೆಕ್ಕಿಗರು 60-80 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದು, ಹಣ ನೀಡಿದವರ ಹೆಸರನ್ನು ಮಾತ್ರ ಫಲಾನುಭವಿಗಳ ಪಟ್ಟಿಗೆ ಸೇರಿಸಿ ಉಳಿದ ಹಣ ನೀಡದ 20 ಬಡಕುಟುಂಬದ ಮನೆಗಳನ್ನು ಫಲಾನುಭವಿಗಳ ಪಟ್ಟಿಯಿಂದ ಕೈ ಬಿಟ್ಟಿದ್ದಾರೆ” ಎಂದು ಆರೋಪಿಸಿ ತಾಲ್ಲೂಕು ಕಛೇರಿಯ ಮುಂದೆ ಪ್ರತಿಭಟಿಸಿ ತನಿಖೆ ನಡೆಸುವಂತೆ ಆಗ್ರಹಿಸಿ ತಹಸೀಲ್ದಾರ್ ರವರಿಗೆ ಮನವಿಪತ್ರ ಸಲ್ಲಿಸಿದರು.

    ಆದರೆ, ಇದೀಗ ಅದೇ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಮತ್ತೊಂದು ಗ್ರಾಮಸ್ಥರ ಗುಂಪು, ತಾಲ್ಲೂಕು ಕಛೇರಿಗೆ ಭೇಟಿ ನೀಡಿ ಗ್ರಾಮಲೆಕ್ಕಿಗರು ಯಾವುದೇ ರೀತಿಯ ಹಣದ ಆಮಿಷಕ್ಕೆ ಒಳಗಾಗದೆ ಫಲಾನುಭವಿಗಳ ಪಟ್ಟಿಯನ್ನು ಸಿದ್ಧ ಪಡಿಸಿದ್ದಾರೆ. ರಾಜಕೀಯದ ಉದ್ದೇಶದಿಂದ ಕೆಲವರು ಅಪಪ್ರಚಾರ ಮಾಡಿ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸಿದ್ದಾರೆ. ತಾಲ್ಲೂಕು ಆಡಳಿತ ಯಾವುದೇ ರೀತಿಯ ಅಪಪ್ರಚಾರಕ್ಕೆ ಕಿವಿ ಕೊಡದೆ ಈಗಾಗಲೇ ಗ್ರಾಮಲೆಕ್ಕಿಗರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸಿದ್ಧಪಡಿಸಿರುವ ಫಲಾನುಭವಿಗಳಿಗೆ ಪರಿಹಾರವನ್ನು ಮಂಜೂರು ಮಾಡುವಂತೆ ಮನವಿ ಮಾಡಿದ್ದಾರೆ.

    ಮನವಿ ಸ್ವೀಕರಿಸಿದ ಬಳಿಕ ಮಾತನಾಡಿದ ಶಿರಸ್ತಾರ ಗುರುರಾಜ್, ಈ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗುವುದು ಹಾಗೂ ಅವರ ಮಾರ್ಗದರ್ಶನದ ಮೇಲೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಚಲುವಪ್ಪ, ಮಹದೇವು, ಮಹೇಶ್, ಲಕ್ಷ್ಮೀದೇವಿ, ಶೋಭಾ, ಗೌರಮ್ಮ, ಕುಮಾರ್, ಸಿದ್ದರಾಜು ಕಳೇಗೌಡನಹುಂಡಿ. ಮಾಜಿ ಸದಸ್ಯ ಪುರದಕಟ್ಟೆ ಬೆಟ್ಟನಾಯಕ, ಗ್ರಾಮಸ್ಥರಾದ ಪುಟ್ಟೇಗೌಡ, ಎನ್.ನಿಂಗರಾಜು, ಚಿಕ್ಕಣ್ಣ, ಗಣೇಶ್, ಚಾಮನಾಯ್ಕ, ಭೀಮನಾಯ್ಕ, ಸಿದ್ಧಲಿಂಗಯ್ಯ, ಮಹದೇವ, ಶಿವಣ್ಣ, ಮಹೇಶ್, ನಾಗೇಶ್, ಮಹದೇವಶೆಟ್ಟಿ, ಶಿವರಾಜು, ಸಿ.ರವಿ, ಮಾದಯ್ಯ. ನಾಗೇಂದ್ರ ದೇವಲಾಪುರ ಗ್ರಾಪಂ ಉಪಾಧ್ಯಕ್ಷ ಹೆಗ್ಗನೂರು. ಚಲುವರಾಜು ಮಾ ಗ್ರಾ.ಪಂ. ಸದಸ್ಯ ಹುಣಸಹಳ್ಳಿ, ಚಿನ್ನಯ್ಯ.ಮಾ ಅಧ್ಯಕ್ಷ ಗ್ರಾಪಂ ಹಳೆಯೂರು ಮುಂತಾದವರು ಹಾಜರಿದ್ದರು.

    ವರದಿ: ಚಂದ್ರಹಾದನೂರು

     

    ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com

    ವಾಟ್ಸಾಪ್ ಗ್ರೂಪ್ ಸೇರಿ:

    https://chat.whatsapp.com/E7Brl0d8zXCJogP6c6GRcZ

    ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

    saraguru grama panchayath
    admin
    • Website

    Related Posts

    ಗೃಹ ಸಚಿವರ ತವರಿನಲ್ಲಿ ದಲಿತರ ದುಸ್ಥಿತಿ!: ದಲಿತ ದೌರ್ಜನ್ಯ ಬಗ್ಗೆ ದೂರು ನೀಡಿ 12 ದಿನಗಳಾದರೂ ಎಫ್ ಐಆರ್ ದಾಖಲಾಗಿಲ್ಲ!

    November 29, 2023

    ರೈಲ್ವೆ ಟ್ರ್ಯಾಕ್ ಪಕ್ಕದಲ್ಲಿ ಅಲ್ಯೂಮಿನಿಯಂ ಬಾಕ್ಸ್ ಏಕೆ ಇರುತ್ತವೆ ಗೊತ್ತಾ?

    November 19, 2023

    ಇಂದು ವಿಶ್ವ ಆತ್ಮಹತ್ಯೆ ತಡೆ ದಿನ: ಪ್ರತೀ ವರ್ಷ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಕೇಳಿದ್ರೆ ಶಾಕ್ ಆಗ್ತೀರಿ!

    September 10, 2023
    Our Picks

    ಭಾರತೀಯ ಮೂಲದ ರೇಡಿಯೋ ನಿರೂಪಕನ ಕೊಲೆ ಯತ್ನ: ಮೂವರಿಗೆ ಶಿಕ್ಷೆ ವಿಧಿಸಿದ ನ್ಯೂಜಿಲೆಂಡ್ ನ್ಯಾಯಾಲಯ

    December 3, 2023

    ಪಾಕಿಸ್ತಾನದ ಬೌದ್ಧ ಮಂದಿರದಲ್ಲಿ ಸಿಕ್ತು 2000 ವರ್ಷಗಳಷ್ಟು ಹಳೆಯ ನಿಧಿ  

    December 3, 2023

    ನ್ಯುಮೋನಿಯಾ ವೈರಸ್: ದೇಶಾದ್ಯಂತ ಹೈ ಅಲರ್ಟ್

    December 3, 2023

    ಟೀಂ ಇಂಡಿಯಾಗೆ ಭರ್ಜರಿ ಗೆಲುವು: ಟಿ20 ಸರಣಿ ಗೆದ್ದು ಸೇಡು ತೀರಿಸಿಕೊಂಡ ಭಾರತ

    December 2, 2023
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಷ್ಟ್ರೀಯ ಸುದ್ದಿ

    ಭಾರತೀಯ ಮೂಲದ ರೇಡಿಯೋ ನಿರೂಪಕನ ಕೊಲೆ ಯತ್ನ: ಮೂವರಿಗೆ ಶಿಕ್ಷೆ ವಿಧಿಸಿದ ನ್ಯೂಜಿಲೆಂಡ್ ನ್ಯಾಯಾಲಯ

    December 3, 2023

    ನ್ಯೂಜಿಲೆಂಡ್ ‌ನಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಮೂಲದ ರೇಡಿಯೋ ನಿರೂಪಕ ಹರ್ನೆಕ್ ಸಿಂಗ್ ಅವರನ್ನು ಹತ್ಯೆ ಮಾಡಲು ಮೂವರು ಖಲಿಸ್ತಾನ್…

    ನನ್ನ ಜೀವನದಲ್ಲಿ ಸಿಬಿಐ ಕಚೇರಿಗೆ ಹೋಗುತ್ತೇನೆ ಎಂದು ನಾನು ಭಾವಿಸಿರಲಿಲ್ಲ: ನಟ ವಿಶಾಲ್

    December 3, 2023

    ಸಂಭಾವನೆ ಹೆಚ್ಚಿಸಿಕೊಂಡ ರಿಷಬ್ ಶೆಟ್ಟಿ.. ಎಷ್ಟು ಕೋಟಿ ಗೊತ್ತಾ?

    December 3, 2023

    ಪಾಕಿಸ್ತಾನದ ಬೌದ್ಧ ಮಂದಿರದಲ್ಲಿ ಸಿಕ್ತು 2000 ವರ್ಷಗಳಷ್ಟು ಹಳೆಯ ನಿಧಿ  

    December 3, 2023

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2023 | All Right Reserved nammatumakuru.com.
    Powerd By Blueline Computers

    Type above and press Enter to search. Press Esc to cancel.