nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕಾಂಗ್ರೆಸ್ ಬಿಟ್ಟು ಬಿಎಸ್ ಪಿ ಪಕ್ಷ ಸೇರಿದ ತಿಪಟೂರು ಕಾಂಗ್ರೆಸ್ ಮುಖಂಡ ಅಶ್ವಥ್ ನಾರಾಯಣ್

    January 28, 2023

    ಏರ್ ಶೋ: ಜ. 30ರಿಂದ ಫೆ. 20ರವರೆಗೆ ಮಾಂಸ ಮಾರಾಟಕ್ಕೆ ನಿಷೇಧ

    January 28, 2023

    ಮುಂದಿನ ತಿಂಗಳು 12 ಆಫ್ರಿಕನ್ ಚಿರತೆಗಳು ಭಾರತಕ್ಕೆ

    January 28, 2023
    Facebook Twitter Instagram
    ಟ್ರೆಂಡಿಂಗ್
    • ಕಾಂಗ್ರೆಸ್ ಬಿಟ್ಟು ಬಿಎಸ್ ಪಿ ಪಕ್ಷ ಸೇರಿದ ತಿಪಟೂರು ಕಾಂಗ್ರೆಸ್ ಮುಖಂಡ ಅಶ್ವಥ್ ನಾರಾಯಣ್
    • ಏರ್ ಶೋ: ಜ. 30ರಿಂದ ಫೆ. 20ರವರೆಗೆ ಮಾಂಸ ಮಾರಾಟಕ್ಕೆ ನಿಷೇಧ
    • ಮುಂದಿನ ತಿಂಗಳು 12 ಆಫ್ರಿಕನ್ ಚಿರತೆಗಳು ಭಾರತಕ್ಕೆ
    • ಮಗುವನ್ನು ಅಪಹರಿಸಿ ಹಣದ ಡಿಮ್ಯಾಂಡ್:ಪೊಲೀಸರಿಂದ ಒಂದು ವರ್ಷದ ಮಗುವಿನ ರಕ್ಷಣೆ
    • ಪಾಕಿಸ್ತಾನ ರೂಪಾಯಿ ಕುಸಿತ; ದೇಶದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು
    • 32 ವರ್ಷಗಳ ನಂತರ, ಕಾಶ್ಮೀರದಲ್ಲಿ ಥಿಯೇಟರ್ ಹೌಸ್‌ ಫುಲ್
    • ಜಪಾನ್‌ ನ ಆಕಾಶದಲ್ಲಿ ನೀಲಿ ಬೆಳಕಿನ ಸುರುಳಿ; ಹಾರುವ ತಟ್ಟೆಯಲ್ಲಿ ಏಲಿಯನ್‌ ಗಳು
    • ಮುಂದುವರೆದ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು, ಮೂಗು ಮುಚ್ಚಿಕೊಳ್ಳುವ ಸ್ಥಿತಿಯಲ್ಲಿ ಸಾರ್ವಜನಿಕರು | ಸರಗೂರು ನಗರದ ಅವ್ಯವಸ್ಥೆ!
    ಜಿಲ್ಲಾ ಸುದ್ದಿ December 23, 2021

    ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು, ಮೂಗು ಮುಚ್ಚಿಕೊಳ್ಳುವ ಸ್ಥಿತಿಯಲ್ಲಿ ಸಾರ್ವಜನಿಕರು | ಸರಗೂರು ನಗರದ ಅವ್ಯವಸ್ಥೆ!

    By adminDecember 23, 2021No Comments2 Mins Read
    saraguru

    namma tumakuru

    ಸರಗೂರು: ಚರಂಡಿ ಅವ್ಯವಸ್ಥೆಯಿಂದಾಗಿ ಸಾರ್ವಜನಿಕರು ಪ್ರತಿ ದಿನ ತೊಂದರೆಗೀಡಾಗುತ್ತಿರುವ ಘಟನೆ ಸರಗೂರಿನ ಮುಖ್ಯ ರಸ್ತೆಯಲ್ಲಿರುವ ಶಿವಲೀಲಾ ಗೊಬ್ಬರ  ಅಂಗಡಿಯ ಮುಂಭಾಗದಲ್ಲಿ ನಡೆಯುತ್ತಿದ್ದು, ಅಂಗಡಿ ಮಾಲಿಕರು, ಸಾರ್ವಜನಿಕರು ಹಲವಾರು ವರ್ಷಗಳಿಂದ ಈ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ.

    ಅಂಗಡಿಯ ಮುಂಭಾಗದಲ್ಲಿಯೇ ಚರಂಡಿಯ ನೀರು ಹರಿಯುತ್ತಿದೆ. ಈ ಭಾಗ ಹೆಚ್ಚಾಗಿ ಜನ ಸಂಚಾರದ ಪ್ರದೇಶವಾಗಿದ್ದು, ಮಕ್ಕಳು, ಮಹಿಳೆಯರು, ವೃದ್ಧರು ಎನ್ನದೇ ಎಲ್ಲರೂ ಇದೇ ಕೊಳಚೆ ನೀರನ್ನು ತುಳಿದುಕೊಂಡು ನಡೆದುಕೊಂಡು ಹೋಗುವಂತಾಗಿದೆ.

    ಇನ್ನೊಂದೆಡೆ ಅಂಗಡಿಗೆ ಆಗಮಿಸುವ ಗ್ರಾಮಸ್ಥರ ಪಾಡು ಹೇಳತೀರದು. ಇದೇ ಚರಂಡಿ ನೀರನ್ನು ತುಳಿದುಕೊಂಡು ಬರುವ ದುಸ್ಥಿತಿ ಗ್ರಾಹಕರದ್ದಾಗಿದೆ. ಚರಂಡಿಯ ದುರ್ವಾಸನೆಯಿಂದಾಗಿ ಈ ಭಾಗಕ್ಕೆ ಗ್ರಾಹಕರು ಬರಲು ಹಿಂದೇಟು ಹಾಕುತ್ತಿದ್ದು, ಇದರಿಂದಾಗಿ ಅಂಗಡಿ ಮಾಲಿಕರಿಗೆ ನಷ್ಟ ಉಂಟಾಗುತ್ತಿದೆ.

    ಈ ವಿಚಾರವಾಗಿ ಮಾತನಾಡಿದ ಶಿವಲೀಲಾ ಗೊಬ್ಬರದ ಅಂಗಡಿಯ ಮಾಲೀಕ ಮಂಜು ಪ್ರಸಾದ್,  ಮುಖ್ಯ ರಸ್ತೆಯನ್ನು ನಿರ್ಮಾಣ ಮಾಡುವ ಸಂದರ್ಭದಲ್ಲಿಯೇ ಸರಿಯಾದ ಒಳಚರಂಡಿ ನಿರ್ಮಾಣ ಮಾಡಿ ಎಂದು ಮನವಿ ಮಾಡಿದರು ಸಹ ಇದರ ಬಗ್ಗೆ ಗಮನ ಹರಿಸಲಿಲ್ಲ.  ಹೀಗಾಗಿ ಸತತ 8 ವರ್ಷಗಳಿಂದ ಒಳಚರಂಡಿ ಸಮಸ್ಯೆ ಕಾಣುತ್ತಿದೆ, ಆದರೆ ಯಾವುದೇ ಜನಪ್ರತಿನಿಧಿಗಳು, ಅಧಿಕಾರಿಗಳು ಸಮಸ್ಯೆ ಬಗೆಹರಿಸಲು ಮುಂದೆ ಬರುತ್ತಿಲ್ಲ ಎಂದರು.

    ಇದೇ ಭಾಗದಲ್ಲಿರುವ ರಾಯಲ್ ಬೇಕರಿಯ ಮಾಲಿಕ ಮಾತನಾಡಿ,  ಗ್ರಾಹಕರು ಅಂಗಡಿಗೆ ಬರುವಾಗ ಮೂಗು ಮುಚ್ಚಿಕೊಂಡು ಬಂದು ವಸ್ತುಗಳನ್ನು ಖರೀದಿಸುವಂತಾಗಿದೆ. ಈ ಸಮಸ್ಯೆಯಿಂದಾಗಿ ರಸ್ತೆ ಬದಿ ವ್ಯಾಪಾರಿಗಳ ವ್ಯಾಪರಕ್ಕೂ ಹೊಡೆತ ಬಿದ್ದಿದೆ.  ಮುಖ್ಯ ರಸ್ತೆಯ ಒಳಚರಂಡಿಗಳ ಸ್ಥಿತಿಯೇ ಹೀಗಿದ್ದರೆ, ಚರಂಡಿಗಳ ಪರಿಸ್ಥಿತಿ ಏನು? ಒಳಚರಂಡಿ ನೀರಿನ ಸಮಸ್ಯೆಯಿಂದಾಗಿ ಗ್ರಾಹಕರು ನಮ್ಮ ಬೇಕರಿಗೆ ತಿಂಡಿ ತಿನಿಸುಗಳನ್ನು ಖರೀದಿಸಲು ಯಾರೂ ಸಹ ಮುಂದಾಗುತ್ತಿಲ್ಲ.  ದಯವಿಟ್ಟು ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಮಸ್ಯೆ ಪರಿಶೀಲಿಸಿ ಬಗೆಹರಿಸಲು ಮುಂದಾಗಬೇಕು ಎಂದು ಅವರು ಮನವಿ ಮಾಡಿದರು.

    ಸಾರ್ವಜನಿಕ ಪ್ರದೇಶದಲ್ಲಿಯೇ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಇಲ್ಲಿನ ಅಧಿಕಾರಿಗಳು ವಿಫಲವಾಗಿರುವುದು ಬೆಳಕಿಗೆ ಬಂದಿದೆ. ಮಳೆಗಾಲದಲ್ಲಂತೂ ಅಂಗಡಿಗಳ ಒಳಗೆಯೇ ಚರಂಡಿ ನೀರು ನುಗ್ಗುತ್ತಿದ್ದು, ಯಾರೂ ಹೇಳುವವರು ಕೇಳುವವರೇ ಇಲ್ಲ ಎನ್ನುವಂತಾಗಿದೆ ಎನ್ನುವ ಆಕ್ರೋಶದ ಮಾತುಗಳು ಕೇಳಿ ಬಂದಿವೆ.

    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

    admin
    • Website

    Related Posts

    ಭವಾನಿಯವರು ಹೊಳೇನರಸೀಪುರದಿಂದ ಅಭ್ಯರ್ಥಿಯಾಗಲಿ ಹೊಳೇನರಸಿಪುರದಿಂದ ಬಿಜೆಪಿ ಟಿಕೆಟ್ ಕೊಡ್ತೀವಿ : ಸಿ.ಟಿ ರವಿ

    January 27, 2023

    ಗಣರಾಜ್ಯೋತ್ಸವದ ಪೋಸ್ಟರ್‌ನಲ್ಲಿ ಸಾವರ್ಕರ್ ಅವರ ಚಿತ್ರ ವಿನ್ಯಾಸ ತಪ್ಪು : ಪಿಕೆ ಫೈಸಲ್

    January 27, 2023

    ಕುಟುಂಬದವರನ್ನ ಸ್ಪರ್ಧೆಗೆ ಇಳಿಸುವುದಿಲ್ಲ: ಹೆಚ್.ಡಿ ಕುಮಾರಸ್ವಾಮಿ

    January 27, 2023
    Our Picks

    ಮುಂದಿನ ತಿಂಗಳು 12 ಆಫ್ರಿಕನ್ ಚಿರತೆಗಳು ಭಾರತಕ್ಕೆ

    January 28, 2023

    ಪಾಕಿಸ್ತಾನ ರೂಪಾಯಿ ಕುಸಿತ; ದೇಶದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು

    January 28, 2023

    32 ವರ್ಷಗಳ ನಂತರ, ಕಾಶ್ಮೀರದಲ್ಲಿ ಥಿಯೇಟರ್ ಹೌಸ್‌ ಫುಲ್

    January 28, 2023

    ಜಪಾನ್‌ ನ ಆಕಾಶದಲ್ಲಿ ನೀಲಿ ಬೆಳಕಿನ ಸುರುಳಿ; ಹಾರುವ ತಟ್ಟೆಯಲ್ಲಿ ಏಲಿಯನ್‌ ಗಳು

    January 28, 2023
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಕಾಂಗ್ರೆಸ್ ಬಿಟ್ಟು ಬಿಎಸ್ ಪಿ ಪಕ್ಷ ಸೇರಿದ ತಿಪಟೂರು ಕಾಂಗ್ರೆಸ್ ಮುಖಂಡ ಅಶ್ವಥ್ ನಾರಾಯಣ್

    January 28, 2023

    ತುಮಕೂರು: ಕುರುಬ ಸಮುದಾಯದ ಪ್ರಭಾವಿ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಅಶ್ವಥ್ ನಾರಾಯಣ್ ರವರು ಕಾಂಗ್ರೆಸ್…

    ಏರ್ ಶೋ: ಜ. 30ರಿಂದ ಫೆ. 20ರವರೆಗೆ ಮಾಂಸ ಮಾರಾಟಕ್ಕೆ ನಿಷೇಧ

    January 28, 2023

    ಮುಂದಿನ ತಿಂಗಳು 12 ಆಫ್ರಿಕನ್ ಚಿರತೆಗಳು ಭಾರತಕ್ಕೆ

    January 28, 2023

    ಮಗುವನ್ನು ಅಪಹರಿಸಿ ಹಣದ ಡಿಮ್ಯಾಂಡ್:ಪೊಲೀಸರಿಂದ ಒಂದು ವರ್ಷದ ಮಗುವಿನ ರಕ್ಷಣೆ

    January 28, 2023

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2023 | All Right Reserved nammatumakuru.com.
    Powerd By Blueline Computers

    Type above and press Enter to search. Press Esc to cancel.