nammatumakuru

    Subscribe to Updates

    Get the latest creative news from FooBar about art, design and business.

    What's Hot

    ಹೊಟ್ಟೆಯ ಭಾಗದ ಕೊಬ್ಬನ್ನು ಕರಗಿಸಲು ಇಲ್ಲಿದೆ ಸರಳ ಉಪಾಯ..!

    December 1, 2023

    ಕನ್ನಡ ಇಂಡಸ್ಟ್ರಿ ಅನ್ನ ಹಾಕಿದೆ.. ಹಿಟ್ ನಂತರ ಬಿಡುವ ಮಾತಿಲ್ಲ: ರಿಷಬ್ ಶೆಟ್ಟಿ

    December 1, 2023

    ಪರಭಾಷಾ ಚಿತ್ರಗಳ ವಿರುದ್ಧ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗರಂ

    December 1, 2023
    Facebook Twitter Instagram
    ಟ್ರೆಂಡಿಂಗ್
    • ಹೊಟ್ಟೆಯ ಭಾಗದ ಕೊಬ್ಬನ್ನು ಕರಗಿಸಲು ಇಲ್ಲಿದೆ ಸರಳ ಉಪಾಯ..!
    • ಕನ್ನಡ ಇಂಡಸ್ಟ್ರಿ ಅನ್ನ ಹಾಕಿದೆ.. ಹಿಟ್ ನಂತರ ಬಿಡುವ ಮಾತಿಲ್ಲ: ರಿಷಬ್ ಶೆಟ್ಟಿ
    • ಪರಭಾಷಾ ಚಿತ್ರಗಳ ವಿರುದ್ಧ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗರಂ
    • ಆದಿವಾಸಿಗಳಿಗೆ 24,104 ಕೋಟಿ ರೂ. ಯೋಜನೆ: ಕೇಂದ್ರ ಅನುಮೋದನೆ
    • 262 ಆಧುನಿಕ ಜೀವ ರಕ್ಷಕ ಆ್ಯಂಬುಲೆನ್ಸ್‌́ಗಳಿಗೆ ಚಾಲನೆ
    • ಮೋದಿ ಬಂದರೆ ಸೋಲಾಗುತ್ತದೆ: ಸಿದ್ದರಾಮಯ್ಯ ಹೇಳಿಕೆಗೆ ಅಶ್ವತ್ಥ್‌ ನಾರಾಯಣ ಕಿಡಿ
    • ಆರು ವರ್ಷಗಳಲ್ಲಿ 250ಕ್ಕೂ ಹೆಚ್ಚು ಮಕ್ಕಳ ಮಾರಾಟ: ಬೆಚ್ಚಿಬೀಳಿಸುವಂತಿದೆ ಈ ಕೇಸ್
    • ಬಿಬಿಎಂಪಿ ವ್ಯಾಪ್ತಿಯ ಎಲ್ಲ ಸರ್ಕಾರಿ ಶಾಲೆಗಳನ್ನು ದುರಸ್ತಿಗೊಳಿಸಲು ಮನವಿ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಶಾಸಕಿ ಪೂರ್ಣಿಮ ಮಾಡಿರುವ ಭ್ರಷ್ಟಾಚಾರ ಆರೋಪ ನಿರಾಧಾರ: ನಗರಸಭೆ ಆಡಳಿತ ಮಂಡಳಿ
    ಜಿಲ್ಲಾ ಸುದ್ದಿ January 5, 2022

    ಶಾಸಕಿ ಪೂರ್ಣಿಮ ಮಾಡಿರುವ ಭ್ರಷ್ಟಾಚಾರ ಆರೋಪ ನಿರಾಧಾರ: ನಗರಸಭೆ ಆಡಳಿತ ಮಂಡಳಿ

    By adminJanuary 5, 2022No Comments2 Mins Read
    congress

    ಚಿತ್ರದುರ್ಗ:  ಜಿಲ್ಲೆಯಹಿರಿಯೂರು ತಾಲ್ಲೂಕಿನ ಹಿರಿಯೂರು ನಗರದಲ್ಲಿನ  ನಗರಸಭೆ ಜಾಗಗಳನ್ನು ಗುರುತಿಸಿ, ಅಂಗನವಾಡಿ ಕೇಂದ್ರಗಳನ್ನು ನಿರ್ಮಿಸಿರುವಂತಹ  ಅನೇಕ ಉತ್ತಮ ಕೆಲಸ ಕೈಗೊಳ್ಳಲಾಗಿದ್ದು, ಈ ಬಗ್ಗೆ ಮೊನ್ನೆ ಚಿತ್ರದುರ್ಗದಲ್ಲಿ ನಡೆದ ಮೀಟಿಂಗ್ ನಲ್ಲಿ ಜಿಲ್ಲಾಧಿಕಾರಿಗಳು, ಹಿರಿಯೂರು ನಗರಸಭೆ ಉತ್ತಮ ಕೆಲಸ-ಕಾರ್ಯಗಳನ್ನು ಮಾಡುತ್ತಿದೆ, ಎಂಬುದಾಗಿ ಸರ್ಟಿಫಿಕೇಟ್ ಸಹ ನೀಡಿದ್ದಾರೆ ಆದರೆ ಕ್ಷೇತ್ರದ ಶಾಸಕರು ನಗರಸಭೆ ಆಡಳಿತ ಮಂಡಳಿ ಮೇಲೆ ಭ್ರಷ್ಟಾಚಾರದ ಆರೋಪ  ಮಾಡಿರುವುದು ನಿಜಕ್ಕೂ ಸತ್ಯಕ್ಕೆ ದೂರವಾದ ಮಾತು ಎಂಬುದಾಗಿ ನಗರಸಭೆ ಅಧ್ಯಕ್ಷರಾದ ಶ್ರೀಮತಿ ಶಂಷುನ್ನೀಸಾ ಹೇಳಿದರು.

    ಹಿರಿಯೂರು ನಗರದ ಕಾಂಗ್ರೆಸ್ ಕಚೇರಿಯಲ್ಲಿ  ನಗರಸಭೆ ವತಿಯಿಂದ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಂಷುನ್ನೀಸಾ, ಕ್ಷೇತ್ರದ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ರವರು ಮಾಧ್ಯಮಗಳಲ್ಲಿ ಮಾಡಿರುವ ಭ್ರಷ್ಟಾಚಾರದ  ಆರೋಪಗಳ ಕುರಿತಂತೆ ಸ್ಪಷ್ಟೀಕರಣ ನೀಡಿದರು.

    ನಗರಸಭೆ ಉಪಾಧ್ಯಕ್ಷರಾದ ಬಿ.ಎನ್.ಪ್ರಕಾಶ್ ಮಾತನಾಡಿ, ನಗರಸಭೆ ವತಿಯಿಂದ ಸ್ಯಾನಿಟೈಸರ್ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಶಾಸಕರ ಆರೋಪಕ್ಕೆ ಉತ್ತರಿಸಿ, ನಾವು ನಗರಸಭೆಗೆ ಬರುವುದಕ್ಕಿಂತ ಮುಂಚಿತವಾಗಿ ಅಂದಿನ ಜಿಲ್ಲಾಧಿಕಾರಿಗಳೇ ಈ ಟೆಂಡರ್ ಕರೆದಿದ್ದು, ಅವರ ಕಾಲದಲ್ಲಿಯೇ ಅದರ ಬಿಲ್ಲು ಸಹ ಆಗಿ ಹೋಗಿದೆ, ಅದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ, ಇದು ಸತ್ಯಕ್ಕೆ ದೂರವಾದ ಮಾತು ಎಂಬುದಾಗಿ ಹೇಳಿದರು.

    ಆಶ್ರಯ ಸಮಿತಿ ಮನೆಗಳು ಹಾಗೂ ಸ್ಲಂ ಬೋರ್ಡ್ ಮನೆಗಳಲ್ಲಿ ಅವ್ಯವಹಾರ ನಡೆದಿದೆ ಎಂಬ ಶಾಸಕರ ಆರೋಪಕ್ಕೆ  ಉತ್ತರಿಸಿದ ಪ್ರಕಾಶ್, ಆಶ್ರಯ ಸಮಿತಿ ಮನೆಗಳು ಹಾಗೂ ಸ್ಲಂ ಬೋರ್ಡ್ ಮನೆಗಳಾಗಲಿ ನಗರಸಭೆ ಕಚೇರಿ ವ್ಯಾಪ್ತಿಗೆ ಬರುತ್ತದೆ ಅಷ್ಟೇ, ಆದರೆ ಅದು ನೇರವಾಗಿ ಶಾಸಕರ ಆಡಳಿತ ಹಾಗೂ ನಗರಸಭೆ ಅಧ್ಯಕ್ಷರ ಅಧೀನದಲ್ಲಿ ಬರುತ್ತದೆ. ನಗರಸಭೆಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ, ನಾವು ಅದರಲ್ಲಿ ಭಾಗಿಯಾಗಿಲ್ಲ ಎಂದು ಹೇಳಿದರು.

    ಶಾಸಕರು, ತಾನು ತಂದಿರುವ 100 ಕೋಟಿ ಅನುದಾನವನ್ನು ನಗರಸಭೆ ವತಿಯಿಂದ ಸುಳ್ಳು ಆರೋಪಗಳ ಪತ್ರ ಬರೆದು ಅನುದಾನವನ್ನು ವಾಪಸ್ಸು ಕಳುಹಿಸಲಾಗಿದೆ ಎಂಬ ಅರೋಪಕ್ಕೆ ಉತ್ತರಿಸಿದ ಅವರು,  ನಮ್ಮ ಕೌನ್ಸಿಲ್ ಬಾಡಿ ಬರುವುದಕ್ಕೆ ಮುಂಚೆಯೇ ಆ ಕ್ರಿಯಾ ಯೋಜನೆ ರೂಪಿಸಲಾಗಿದ್ದು, ಈ ಕ್ರಿಯಾ ಯೋಜನೆಯಲ್ಲಿ ಮಾಡಿದ ಕಾಮಗಾರಿಗಳಿಗೆ ಮತ್ತೆ ಮತ್ತೆ ಟೆಂಡರ್ ಕರೆಯಲಾಗಿದ್ದು, ಸುಮಾರು 50 ಲಕ್ಷ ರೂಗಳ ಕಾಮಗಾರಿ ಡೂಪ್ಲಿಕೇಟ್ ಆಗಿರುತ್ತದೆ ಆದ್ದರಿಂದ ಈ ಹಣ ವಾಪಸ್ಸು ಹೋಗಿದೆ  ಎಂದರು.

    ಕರ್ನಾಟಕ ಸರ್ಕಾರ ಚಿತ್ರದುರ್ಗ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ನಗರಸಭೆ ಹಾಗೂ ಪುರಸಭೆಗಳಿಗೆ ಕೊರೊನಾ ಕಾಲಾವಧಿಯಲ್ಲಿ ಎಸ್.ಎಫ್.ಸಿ.  ಅನುದಾನದಡಿ ಪೂರ್ಣಗೊಂಡ ಕಾಮಗಾರಿಗಳಿಗೆ ಮಾತ್ರ ಅನುದಾನ ಬಿಡುಗಡೆ ಮಾಡಲಾಗಿದ್ದು, ಈ ಸಂದರ್ಭದಲ್ಲಿ ಯಾವುದೇ ಹೊಸ ಕಾಮಗಾರಿಗಳನ್ನು ಮಾಡಬಾರದು ಎಂಬುದಾಗಿ ಸರ್ಕಾರ ಸುತ್ತೋಲೆ ಸಹ ಹೊರಡಿಸಿದ್ದು, ಇದರಿಂದ ಎಲ್ಲಾ ನಗರಸಭೆಗಳಲ್ಲಿ ಆರ್ಥಿಕ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ ಎಂಬುದಾಗಿ ಸುತ್ತೋಲೆಯನ್ನು ಸುದ್ದಿಗೋಷ್ಟಿಯಲ್ಲಿ ಪ್ರದರ್ಶಿಸಿದರು.

    ನಗರಸಭೆಯಲ್ಲಿ ಹಲವಾರು ವಿಷಯದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಮಾಡಿರುವ ಕ್ಷೇತ್ರದ ಶಾಸಕರಾದ ಪೂರ್ಣಿಮಾ ಶ್ರೀನಿವಾಸ್ ರವರು ಇದಕ್ಕೆ ಪೂರಕವಾದ ಸಾಕ್ಷಿ-ಪುರಾವೆಗಳೆನಾದರೂ ಅವರ ಬಳಿ ಇದ್ದರೆ ಅದನ್ನು ಸಾಬೀತುಪಡಿಸಲಿ, ಈ ರೀತಿ ನಿರಾಧಾರವಾಗಿ ನಗರಸಭೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ನೇತೃತ್ವದ ಕೌನ್ಸಿಲ್ ಬಾಡಿ ಮೇಲೆ ಆರೋಪ ಮಾಡುವುದು ಸರಿಯಲ್ಲ,  ಅವರು ಆರೋಪ ಮಾಡಲೇಬೇಕೆಂಬ ಕಾರಣಕ್ಕೆ ಆರೋಪ ಮಾಡಿದ್ದಾರೆ ಎಂದರಲ್ಲದೆ, ನಮ್ಮ ಕಾಂಗ್ರೆಸ್ ಪಕ್ಷದ ನೇತೃತ್ವದ ಕೌನ್ಸಿಲ್ ಬಾಡಿ ಕಳೆದ ಒಂದು ವರ್ಷದಲ್ಲಿ ನಗರಸಭೆಯಲ್ಲಿ ಆಡಳಿತಾತ್ಮಕ ಸುಧಾರಣೆಗೋಸ್ಕರ ಅತ್ಯುತ್ತಮ ಕೆಲಸ-ಕಾರ್ಯಗಳನ್ನು ಮಾಡುತ್ತಲಿದ್ದು,  ನಗರದಲ್ಲಿರುವ ಆಸ್ತಿಗಳ ತಿರುಚುವಿಕೆಯಾಗಬಾರದೆಂಬ ಉದ್ದೇಶದಿಂದ ಆಸ್ತಿಗಳ ವಿವರಗಳಷ್ಟನ್ನೂ ಸ್ಕ್ಯಾನ್ ಮಾಡಿಸಲಾಗಿದೆ, ಅಕ್ಕಪಕ್ಕದ ಪಂಚಾಯಿತಿಗಳಿಂದ ಬಂದಂತಹ ಖಾತೆಗಳನ್ನು ಸಹ ಅಪ್ ಡೆಟ್ ಮಾಡಿಸಿದ್ದೇವೆ ಅಲ್ಲದೆ ನಗರದ ನಾಗರಿಕರಿಗೆ, ಸ್ಪಂದಿಸುವಂತಹ ಆಡಳಿತ ನೀಡಿದ್ದೇವೆ ಎಂದು ಹೇಳಿದರು.

    ವರದಿ: ಮುರುಳಿಧರನ್ ಆರ್., ಹಿರಿಯೂರು.

    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

    admin
    • Website

    Related Posts

    ಪ್ರತಿಭಟನೆಗಳಿಗೆ ಬಳಸಲಾಗುವ  ರೈತರ ಜಮೀನಿನ ಬಾಡಿಗೆಯನ್ನು ಹೆಚ್ಚಳ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

    December 1, 2023

    ತಿಪಟೂರಿನಲ್ಲಿ ಡಿಸೆಂಬರ್ 13 ರಿಂದ 17ರವರೆಗೆ ರಾಷ್ಟ್ರೀಯ ಖೋ ಖೋ ಪಂದ್ಯಾವಳಿ 

    November 30, 2023

    ಸ್ನೇಹಿತನ ಮದುವೆ ಮುಗಿಸಿ ಬರುವ ವೇಳೆ ಭೀಕರ ಅಪಘಾತ: ಪೊಲೀಸ್ ಪೇದೆ ಸಹಿತ ಇಬ್ಬರು ಸಾವು

    November 30, 2023
    Our Picks

    ಈ ವಿಚಾರದಲ್ಲಿ ತಮಿಳುನಾಡು– ಕೇರಳ ಒಂದೇ ಅಂತೆ: ಉದಯನಿಧಿ ಸ್ಟಾಲಿನ್‌ ಹೇಳಿದಿಷ್ಟು…!

    December 1, 2023

    ಅಶೋಕ ಸ್ತಂಭದ ಬದಲು ‘ಧನ್ವಂತರಿ’: ಇಂಡಿಯಾ ಬದಲಾಗಿ ‘ಭಾರತ’; ರಾಷ್ಟ್ರೀಯ ವೈದ್ಯಕೀಯ ಆಯೋಗದ ಲೋಗೋ ಬದಲು

    December 1, 2023

    ಉದ್ದ ಕೂದಲು ಬೆಳೆಸಿ ವಿಶ್ವ ದಾಖಲೆ ಬರೆದ ಭಾರತೀಯ ಮಹಿಳೆ

    December 1, 2023

    ಮಕ್ಕಳನ್ನು ಯುದ್ಧ ಕೈದಿಗಳನ್ನಾಗಿ ತೆಗೆದುಕೊಳ್ಳುವ ವಿಶ್ವದ ಏಕೈಕ ದೇಶ ಇಸ್ರೇಲ್: ಗಿಗಿ ಹಡಿದ್

    November 30, 2023
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಆರೋಗ್ಯ

    ಹೊಟ್ಟೆಯ ಭಾಗದ ಕೊಬ್ಬನ್ನು ಕರಗಿಸಲು ಇಲ್ಲಿದೆ ಸರಳ ಉಪಾಯ..!

    December 1, 2023

    ತೂಕವನ್ನು ಕಳೆದುಕೊಳ್ಳಲು ಮತ್ತು ಹೊಟ್ಟೆಯ ಕೊಬ್ಬನ್ನು ಕರಗಿಸಲು ವ್ಯಾಯಾಮವು ಪ್ರಮುಖವಾಗಿದೆ ಎಂದು ತಜ್ಞರು ಹೇಳುತ್ತಾರೆ. ಆದರೆ ಕೊಬ್ಬು ಕರಗಿಸುವ ಮುಖ್ಯ…

    ಕನ್ನಡ ಇಂಡಸ್ಟ್ರಿ ಅನ್ನ ಹಾಕಿದೆ.. ಹಿಟ್ ನಂತರ ಬಿಡುವ ಮಾತಿಲ್ಲ: ರಿಷಬ್ ಶೆಟ್ಟಿ

    December 1, 2023

    ಪರಭಾಷಾ ಚಿತ್ರಗಳ ವಿರುದ್ಧ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗರಂ

    December 1, 2023

    ಆದಿವಾಸಿಗಳಿಗೆ 24,104 ಕೋಟಿ ರೂ. ಯೋಜನೆ: ಕೇಂದ್ರ ಅನುಮೋದನೆ

    December 1, 2023

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2023 | All Right Reserved nammatumakuru.com.
    Powerd By Blueline Computers

    Type above and press Enter to search. Press Esc to cancel.