ಪಾವಗಡ: ಪದ್ಮಭೂಷಣ ಚಿರಂಜೀವಿ ಅವರ ಹುಟ್ಟುಹಬ್ಬದ ಅಂಗವಾಗಿ ಉಚಿತ ಆರೋಗ್ಯಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನಂ ಶಶಿಕಿರಣ್ ತಿಳಿಸಿದರು.
ಗುರುವಾರ ಪಟ್ಟಣದ ರೋಟರಿ ಆವರಣದಲ್ಲಿ ತೆಲುಗು ಸಿನಿಮಾ ನಟ ಪದ್ಮಭೂಷಣ ಚಿರಂಜೀವಿಯವರ 69 ನೇ ಹುಟ್ಟು ಹಬ್ಬದ ಅಂಗವಾಗಿ. ಬೆಂಗಳೂರಿನ ಸಪ್ತಗಿರಿ ಅಸ್ಪತ್ರೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಅರೋಗ್ಯ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರತಿವರ್ಷದಂತೆ ಈ ವರ್ಷವೂ ಸಹ ಚಿರಂಜೀವಿಯವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದು, ಚಿರಂಜೀವಿ ಇತ್ತೀಚೆಗೆ ಕೇರಳದ ವಯನಾಡುವಿನಲ್ಲಿ ನಡೆದ ಬೀಕರ ಜಲಪ್ರಳಯದಲ್ಲಿ ನೊಂದವರಿಗಾಗಿ 1 ಕೋಟಿಯಷ್ಟು ಹಣವನ್ನು ದೇಣಿಗೆ ನೀಡಿ, ಮಾನವೀಯತೆಯನ್ನು ಮೆರೆದಿದ್ದಾರೆ ಇಂತಹ ಮಹಾನ್ ನಟನ ಹುಟ್ಟುಹಬ್ಬವನ್ನು ಅಭಿಮಾನಿಗಳ ಸಹಯೋಗದಲ್ಲಿ ಅಚರಿಸಲಾಗುತ್ತಿದೆ ಎಂದು ಕೊಂಡಾಡಿದರು.
ಶಮಿವೃಕ್ಷ ಅಭಿವೃದ್ದಿ ಸಮಿತಿಯ ಕಾರ್ಯದರ್ಶಿ, ಸತ್ಯಲೋಕೇಶ್ ಮಾತನಾಡಿ, ಅನೇಕ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ದೇಶದಾದ್ಯಂತ ಹೆಸರಾಗಿರುವ ಚಿತ್ರನಟ ಚಿರಂಜೀವಿಯವರ ಹುಟ್ಟಹಬ್ಬವನ್ನು ಹೆಲ್ಪ್ ಸೊಸೈಟಿಯ ನೇತೃತ್ವದಲ್ಲಿ ಅವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಿ ಅಚರಿಸುತ್ತಿರುವುದು ಅತ್ಯಂತ ಸಂತೋಷವಾಗಿದೆ ಎಂದು ತಿಳಿಸಿದರು.
ಸ್ನೇಹಜೀವಿ ಅಮೀರ್ ಮಾತನಾಡಿ, ಪಾವಗಡದಲ್ಲಿ ಕೆಲವು ಸಂಘಸಂಸ್ಥೆಗಳು ಕೇವಲ ಪ್ರಚಾರಕ್ಕಾಗಿ ಕೆಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ, ಗಣ್ಯವ್ಯಕ್ತಿಗಳ ಬಾವಚಿತ್ರಗಳನ್ನು ಹಾಕಿಕೊಂಡು ಸ್ವಾರ್ಥಕ್ಕಾಗಿ ಹಣ ಲೂಟಿ ಮಾಡುತ್ತಿದ್ದಾರೆ, ಆದರೆ ಹೆಲ್ಪ್ ಸೊಸೈಟಿ ಸಂಸ್ಥೆಯ ಮಾನಂ ಶಶಿಕಿರಣ್, ನಿಜವಾದ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಾನುರಾಗಿಯಾಗುತ್ತಿದ್ದಾರೆ ಎಂದು ಬಣ್ಣಿಸಿದರು.
ಅಲ್ಪ ಸಂಖ್ಯಾತ ಮುಖಂಡ ಷಾ.ಬಾಬು ಮಾತನಾಡಿ, ಹೆಲ್ಪ್ ಸೊಸೈಟಿಯು ಬಡವರಿಗೆ ಬೇಕಾಗುವ ಆರೋಗ್ಯ ಭಾಗ್ಯವನ್ನು ನೀಡುತ್ತಿದ್ದಾರೆ, ಬೆಂಗಳೂರಿನಿಂದ ಪ್ರತಿಷ್ಟಿತ ಅಸ್ಪತ್ರೆಗಳನ್ನು ಪಾವಗಡ ತಾಲ್ಲೂಕಿನ ಮೂಲೆ– ಮೂಲೆ ಗ್ರಾಮಗಳಿಗೆ ಕರೆಯಿಸಿ ಉಚಿತ ಆರೋಗ್ಯ ಶಿಬಿರಗಳನ್ನು ಏರ್ಪಡಿಸುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಸಪ್ತಗಿರಿ ಅಸ್ಪತ್ರೆಯ ಡಾ.ಪಾರೀಜಾ ಮಾತನಾಡಿ, ನಮ್ಮ ಸಪ್ತಗಿರಿ ಅಸ್ಪತ್ರೆ ಸೂಪರ್ ಸ್ಪೆಷಾಲಿಟಿಯಾಗಿದ್ದು, ಉಚಿತ ಶಿಬಿರಗಳಲ್ಲಿ ಚಿಕಿತ್ಸೆ ಪಡೆದುಕೊಂಡವರಿಗೆ ಉಚಿತ ಶಸ್ತ್ರ ಚಿಕಿತ್ಸೆಯನ್ನು ನೇರವೇರಿಸಲಾಗುವುದು ಎಂದು ತಿಳಿಸಿದರು.
ಸರ್ವಧರ್ಮಶಾಂತಿ ಪೀಠಾದ್ಯಕ್ಷರಾದ ಸಿದ್ದಾಪುರ ರಾಮೂರ್ತಿ ಸ್ವಾಮಿಜೀಗಳು ದಿವ್ಯ ಸಾನಿದ್ಯ ವಹಿಸಿ ಆರ್ಶೀವಚನ ನೀಡಿದರು.
ದಲಿತಮುಖಂಡಕನ್ನಮೇಡಿ ಕೃಷ್ಣಮೂರ್ತಿ, ವಾಲ್ಮೀಕಿ ಜಾಗೃತಿವೇದಿಕೆಯ ಬೇಕರಿನಾಗರಾಜು, ಸಂದ್ಯಾ ಶಶಿಕಿರಣ್, ವಾಣಿ ಅಮೀರ್, ಬ್ಲಡ್ ಶಶಿಕಳಾ, ಅರವಿಂದ್ ಕುಮಾರ್, ಸಂಜಯ್, ಪ್ರಶಾಂತ್, ವಿಶಾಲ್ ಪ್ರಜ್ವಲ್, ಮೆಹರ್ಸಾಗರ್, ರಿಜ್ವಾನ್ ಹುಲ್ಲಾ, ವಕೀಲರಾಮಾಂಜಿನಪ್ಪ, ಸಂತೋಷ್, ನರೇಶ್, ಮುಖಂಡ ಅನಿಲ್ ಕುಮಾರ್, ಇದೇ ವೇಳೆ ಚಿತ್ರ ನಟರಾದ ಬಜಾಜ್ ಶ್ರೀನಾಥ್, ಅಲಂಕಾರ್ ಮಂಜುನಾಥ್,ರನ್ನು ಸನ್ಮಾನಿಸಲಾಯಿತು.
ಹೃದಯ, ಮೂಳೆ ನರರೋಗ, ಸ್ತ್ರಿರೋಗ, ಮತ್ತು ಸಕ್ಕರೆ ಮತ್ತು ಬಿ.ಪಿ. ಕಾಯಿಲೆಗಳಿಗೆ ಚಿಕಿತ್ಸೆ ನೀಡಿ ಉಚಿತವಾಗಿ ಔಷದಿಗಳನ್ನು ವಿತರಿಸಲಾಯಿತು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q