ತಿಪಟೂರು: ತಂದೆ-ತಾಯಿ ಸಂಸ್ಕಾರ ಕೊಟ್ಟು ಬೆಳೆಸಿದ ಮಕ್ಕಳು ಲೋಕ ವೀರರಾಗಿದ್ದಾರೆ ಎಂದು ಆದಿಚುಂಚನಗಿರಿ ಸಂಸ್ಥಾನದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದ ಸ್ವಾಮೀಜಿ ಹೇಳಿದರು.
ತಿಪಟೂರು ತಾಲೂಕು ಗಂಗನಘಟ್ಟ ಗೇಟ್ ಬಳಿ ಶ್ರೀರಂಗ ವಿದ್ಯಾಸಂಸ್ಥೆ ಕೀರ್ತಿಶೇಷ ಮಾತೃಶ್ರೀ ಶಾರದಮ್ಮ ಅವರ ಸ್ಮಾರಕ ಶಾಲಾ ಕಟ್ಟಡ ಉದ್ಘಾಟನೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಆಚಾರಕ್ಕೆ ಅರಸನಾಗಿ ನೀತಿಗೆ ಪ್ರಭುವಾಗಿ ಜ್ಯೋತಿಯಾಗು ಜಗ ಕೆಲ ಎಂಬಂಥ ಮಕ್ಕಳು ಈಗಿನ ಸಮಾಜಕ್ಕೆ ಬೇಕು. ಇಂಥ ಮಕ್ಕಳನ್ನು ರೂಪಿಸುವುದು ತಾಯಿಂದ ಸಾಧ್ಯ ಎಂದರು.
ತಂದೆ ತಾಯಿಯಿಂದ ಸಂಸ್ಕಾರ ಕಲಿತು ಬೆಳೆದಿರುವ ಡಾ.ವಿವೇಚನ್ ತಮ್ಮ ತಂದೆ ಪ್ರೊಫೆಸರ್ ಜಿ.ಕೆ.ಬಸವರಾಜ ಸ್ಥಾಪಿಸಿದ ಶ್ರೀರಂಗ ವಿದ್ಯಾಸಂಸ್ಥೆ ವಿಸ್ತರಿಸಿ ತಾಯಿಯ ಸ್ವರ್ಣ ಪ್ರೌಢಶಾಲೆ ಆರಂಭಿಸುತ್ತಿರುವುದು ನಾಡಿನ ಸೌಭಾಗ್ಯ ಎಂದರು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಪ್ರಾಥಮಿಕ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಜ್ಞಾನಕ್ಕೆ ತ್ಯಾಗಕ್ಕೆ ಹೆಸರಾದ ನಮ್ಮ ಭೂಮಿ ತಂದೆ-ತಾಯಿಯ ಆದರ್ಶ ಪುತ್ರನಾಗಿ ಜೀವನವನ್ನು ಸಮಾಜಸೇವೆಗೆ ಮುಡುಪಾಗಿಟ್ಟಿರುವ ಡಾ. ವಿವೇಚನೆ ಅವರ ಆದರ್ಶ ಎಂದರು.
ಕೆರಗೋಡಿ ರಂಗಾಪುರ ಸುಕ್ಷೇತ್ರದ ಶ್ರೀ ಗುರು ಪರದೇಶಿ ಕೇಂದ್ರ ಸ್ವಾಮೀಜಿ ಮಾತನಾಡಿ, ಡಾಕ್ಟರ್ ಪದವಿ ಪಡೆದುಕೊಂಡು ಐಷಾರಾಮಿ ತಿರುಗಾಡದ ಮತ್ತು ತಾಲೂಕಿನಲ್ಲಿ ಆರೋಗ್ಯದ ಜೊತೆಗೆ ಕೊಡುತ್ತಾ ಸಮಾಜಸೇವೆ ಮಾಡುತ್ತಿರುವ ಜೋಡೆತ್ತುಗಳಾದ ಡಾ.ಶ್ರೀಧರ್ ಮತ್ತು ಡಾಕ್ಟರ್ ವಿವೇಚನ್ ತಾಲೂಕಿಗೆ ಮಾದರಿಯಾಗಿದ್ದಾರೆ.
ಸಮಾರಂಭದಲ್ಲಿ ಒಕ್ಕಲಿಗ ಸಂಘದ ಅಧ್ಯಕ್ಷ ಹನುಮಂತರಾಯಪ್ಪ, ನಿವೃತ್ತ ಪ್ರಾಂಶುಪಾಲ ಜಿ.ಬಿ.ಶಿವರಾಜ್, ಡಾ. ಶ್ರೀಧರ್ ಮಾಜಿ ಶಾಸಕ ನಂಜಾಮರಿ ತಾಲೂಕಿನ ಗಣ್ಯರುಗಳು ಭಾಗವಹಿಸಿದ್ದರು.
ವರದಿ: ಆನಂದ ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5