nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕನಕದಾಸರು ಸಮಾಜದ ಓರೆಕೋರೆಗಳನ್ನು ತಿದ್ದಲು ಶ್ರಮಿಸಿದವರು: ಸಿ.ವಿ.ಕುಮಾರ್

    November 10, 2025

    ಅವೈಜ್ಞಾನಿಕ ಸುತ್ತೋಲೆ ವಾಪಸ್ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರಾಂಶುಪಾಲರ, ಉಪನ್ಯಾಸಕರ ಸಂಘ ಆಗ್ರಹ

    November 10, 2025

    ತುಮಕೂರು | ಕಾಂಗ್ರೆಸ್‌ ಭವನ ಕಟ್ಟಡ ನಿರ್ಮಾಣಕ್ಕೆ ತಡೆಯಾಜ್ಞೆ

    November 10, 2025
    Facebook Twitter Instagram
    ಟ್ರೆಂಡಿಂಗ್
    • ಕನಕದಾಸರು ಸಮಾಜದ ಓರೆಕೋರೆಗಳನ್ನು ತಿದ್ದಲು ಶ್ರಮಿಸಿದವರು: ಸಿ.ವಿ.ಕುಮಾರ್
    • ಅವೈಜ್ಞಾನಿಕ ಸುತ್ತೋಲೆ ವಾಪಸ್ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರಾಂಶುಪಾಲರ, ಉಪನ್ಯಾಸಕರ ಸಂಘ ಆಗ್ರಹ
    • ತುಮಕೂರು | ಕಾಂಗ್ರೆಸ್‌ ಭವನ ಕಟ್ಟಡ ನಿರ್ಮಾಣಕ್ಕೆ ತಡೆಯಾಜ್ಞೆ
    • ಕುಲವಿಲ್ಲದ ನೆಲೆಗಾಗಿ ನಡೆದಾಡಿದ ಸಂತ ಕವಿ ಕನಕದಾಸರು: ಬಿಡಗಲು ಶಿವಣ್ಣ ಅಭಿಮತ
    • ಸಾಮಾಜಿಕ ನ್ಯಾಯ ಎತ್ತಿ ಹಿಡಿದವರು ಕನಕದಾಸರು: ಎಂ.ಬಿ.ಆನಂದ
    • ರಾಜ್ಯ ಮಟ್ಟದ ಕನ್ನಡ ಸೇವಾರತ್ನ ಪ್ರಶಸ್ತಿಗೆ ಡಾ.ಸತ್ಯಕ್ಕ ಗಡ್ಡೆ ಆಯ್ಕೆ
    • ನರಹಂತಕ ವ್ಯಾಘ್ರನ ಸೆರೆ: ಜನರ ನಿದ್ದೆಗೆಡಿಸಿದ 9 ವರ್ಷದ ಹುಲಿಯನ್ನು ಹಿಡಿದ ಅರಣ್ಯ ಇಲಾಖೆ
    • ನರಹಂತಕ ಹುಲಿಯ ಸೆರೆಗಾಗಿ ಮುಂದುವರಿದ ಕಾರ್ಯಾಚರಣೆ: ಡ್ರೋನ್‌ ಕ್ಯಾಮೆರಾದಲ್ಲಿ ಹುಲಿ ಪತ್ತೆ!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಹಾವಿನ ದ್ವೇಷಕ್ಕೆ ಕಂಗಾಲಾದ ಕುಟುಂಬಸ್ಥರು: ಒಂದೇ ಜಾಗದಲ್ಲಿ ಬಲಿಯಾದವರೆಷ್ಟು ಗೊತ್ತಾ?
    ಕೊರಟಗೆರೆ August 24, 2022

    ಹಾವಿನ ದ್ವೇಷಕ್ಕೆ ಕಂಗಾಲಾದ ಕುಟುಂಬಸ್ಥರು: ಒಂದೇ ಜಾಗದಲ್ಲಿ ಬಲಿಯಾದವರೆಷ್ಟು ಗೊತ್ತಾ?

    By adminAugust 24, 2022No Comments2 Mins Read

    ಅದು ಒಂದೇ ಕುಟುಂಬ, ಒಂದೇ ಬುಡಕಟ್ಟು,ಒಂದೇ ಮನೆ ದೇವರಿಗೆ ಪೂಜೆ ಮಾಡೋ ಕುಟುಂಬವದು,ಒಟ್ಟು 20 ಕುಟುಂಬ ಇರುವವರಿಗೆ ಅದೊಂದು ಶಾಪ ಕಾಡುತ್ತಿದೆ,ಪ್ರತಿ ನಾಲ್ಕೈದು ವರ್ಷಕ್ಕೊಮ್ಮೆ ಅವರ ಮನೆತನದಲ್ಲಿ ಸಾವುವಾಗುತ್ತಿದೆ. ಅದು ಕೂಡ ಕೇವಲ ಅರ್ಧ ಕಿಲೋಮೀಟರ್ ದೂರದ ಅಂತರದಲ್ಲಿ, ಇಷ್ಟಕ್ಕೂ ಏನದು ಯಾಕೆ ಅಂತೀರಾ ,ಈ ವರದಿ ನೋಡಿ..

    ಹೌದು..ನಾವು ಇವತ್ತು ಹೇಳಲು ಹೋರಟಿರೋ ಸ್ಟೋರಿ ನಿಜಕ್ಕೂ ನಂಬಲಾರದ, ಊಹೆಗೂ ನಿಲುಕದ ಸಂಗತಿ, ಈ ಸಂಗತಿಗಳನ್ನು ಕೇಳಿದ್ರೇ ನೀವು ಬೆಚ್ಚಿಬೀಳೋದು ಗ್ಯಾರಂಟಿ.


    Provided by
    Provided by

    ಇದು ಕಲ್ಪತರು ನಾಡು ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕು ತೊಗರಿಘಟ್ಟ ಗ್ರಾಮ. ಗ್ರಾಮದಲ್ಲಿ ದೊಡ್ಡ ದೊಡ್ಡ ಕುಟುಂಬಗಳು ವಿದ್ಯಾವಂತರು ಇರೋದು ಸಹಜ, ಹೀಗಿರುವಾಗ ಆ ಒಂದು ಮನೆತನದಲ್ಲಿ  ಪ್ರತಿ ನಾಲ್ಕು ಅಥವಾ ಐದು ವರ್ಷಕ್ಕೆ ಒಂದು ಅನಾಹುತ ನಡೆದುಹೋಗುತ್ತಿದೆ. ಅಂದುಕೊಳ್ಳದಿದ್ದ ರೂಪದಲ್ಲಿ ಸಾವು ಎದುರಾಗುತ್ತಿದೆ.

    ಈ  ಗ್ರಾಮದ ಧರ್ಮಣ್ಣ ಎನ್ನೋವವರ ಕುಟುಂಬ, ದೊಡ್ಡ ಕುಟುಂಬ. ಒಟ್ಟು20 ಕುಟುಂಬ ಅಣ್ಣ ತಮ್ಮಂದಿರು ಇದ್ದಾರೆ. ಈ ಮೊದಲು ಎಲ್ಲಾರೂ ಒಂದಾಗೇಯೇ ಇದ್ದರು. ಆದ್ರೆ ಕಾಲ ಕಳೆದಂತೆ ಅಣ್ಣ ತಮ್ಮಂದಿರು ದೂರವಾಗುತ್ತಾ, ತಮ್ಮ ಕುಟುಂಬಗಳನ್ನು ಮಾಡಿಕೊಂಡು ಜೀವನ ಮಾಡುತ್ತಾ ಬಂದಿದ್ದಾರೆ. ಈ ಕುಟುಂಬದಲ್ಲಿ ಪ್ರತಿ ನಾಲ್ಕೈದು ವರ್ಷಕ್ಕೆ ಒಂದು ಸಾವಾಗುತ್ತಿದೆ. ಇದ್ರಿಂದ ಇಡೀ ಕುಟುಂಬ ಜೊತೆಗೆ ಗ್ರಾಮವೇ ಶಾಕ್ ಆಗಿದೆ.

    ಇಷ್ಟಕ್ಕೂ ಯಾಕೆ ಈ ಕುಟುಂಬದವರು ಸಾಯುತ್ತಿದ್ದಾರೆ ಎಂದು ಪ್ರಶ್ನಿಸಿದ್ರೆ,  ಈ ಕುಟುಂಬಕ್ಕೆ ಒಂದು ಶಾಪ ಇದೆಯಂತೆ ಅದು ಮುನಿಯಪ್ಪ ಶಾಪನೋ ಅಥವಾ ನಾಗರ ಶಾಪವೋ ಗೊತ್ತಿಲ್ಲ, ಈ ಬಗ್ಗೆ ತಿಳಿದುಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದರೂ ಉತ್ತರ ಸಿಗಲಿಲ್ಲ. ಆದರೆ, ಒಂದೇ ಮನೆತನದ ಐವರು ಹಾವು ಕಚ್ಚಿ ಸಾವನ್ನಪ್ಪಿದ ಘಟನೆ ನಡೆದಿದೆ‌‌. ಪ್ರತಿ ನಾಲ್ಕೈದು ವರ್ಷಕ್ಕೊಮ್ಮೆ ಹಾವು ಕಚ್ಚಿ ಸಾಯುತ್ತಿದ್ದು,  ಇದ್ರಿಂದ ಧರ್ಮಣ್ಣ ಕುಟುಂಬ ಬೆಚ್ಚಿಬಿದ್ದಿದ್ದಾರೆ.

    ಕಳೆದ ಬುಧವಾರ ರಾತ್ರಿ ಗ್ರಾಮದ ಗೋವಿಂದರಾಜು ಹೊಲಕ್ಕೆ ನೀರು ಕಟ್ಟಲು ಹೋಗಿದ್ದಾರೆ.ಈ ವೇಳೆ ಕಾದು ನಿಂತಿದ್ದ ಹಾವು ಕಾಲಿಗೆ ಕಚ್ಚಿದೆ, ಕೂಡಲೇ ಆಸ್ಪತ್ರೆ ಗೆ ಸಾಗಿಸಿದರೂ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

    ಇನ್ನೂ ಕಳೆದ 20-25 ವರ್ಷಗಳಲ್ಲಿ ಧರ್ಮಣ್ಣ ಕುಟುಂಬದ ಹನುಮಂತಪ್ಪ, ಧರ್ಮಣ್ಣ, ವೆಂಕಟೇಶ್,  ಶ್ರೀನಿವಾಸ್ ಹಾಗೂ ಮೊನ್ನೆ ಗೋವಿಂದರಾಜು ಒಂದೇ ಜಾಗದಲ್ಲಿ ಹಾವಿಗೆ ಬಲಿಯಾಗಿದ್ದಾರೆ. ಅದು ಕೂಡ ಕೇವಲ ಅರ್ಧ ಕಿಲೋ ಮೀಟರ್ ಅಂತರದಲ್ಲಿ ಎಲ್ಲರೂ ಹಾವಿನ ಕಡಿತಕ್ಕೊಳಗಾಗಿದ್ದಾರೆ.

    ಹೊಲದ ಬಳಿ ಮುನಿಯಪ್ಪ ಗುಡಿಯಿದ್ದು,  ಈ ಮೊದಲು 20 ಕುಟುಂಬ ಸೇರಿ ಪೂಜಿಸಿ ಅಡುಗೆ ಮಾಡಿ ಮುನಿಯಪ್ಪ  ಪೂಜೆ ಮಾಡುತ್ತಿದರಂತೆ.  ಆದರೆ ಕಾಲಕಳೆದಂತೆ ಮನೆಗೆ ಸೊಸೆಯಂದಿರು ಬಂದಂತೆ  ಕುಟುಂಬಗಳು ದೂರವಾಗಿದ್ದರೆನ್ನಲಾಗಿದೆ . ಇದೀಗ ನಾಲ್ಕೈದು ಕುಟುಂಬಗಳು ಸೇರಿ ಪೂಜೆ ಮಾಡುತ್ತಿದ್ದಾರಂತೆ. ಇದು ಕೂಡ ಹಾವಿನ ದ್ವೇಷಕ್ಕೆ ಕಾರಣ ಇರಬಹುದು  ಎನ್ನುತ್ತಿದ್ದಾರೆ. ಈ ಹಿಂದೆ ತಮ್ಮ ಹೊಲದ ಬಳಿ ರಸ್ತೆ ಬದಿಯಲ್ಲಿ ಇದ್ದ ಅರಳಿಮರವನ್ನ ಧರ್ಮಣ್ಣ ಕಡಿದು ಹಾಕಿಸಿದ್ದರಂತೆ, ಅದರ ಶಾಪದಿಂದ ಹೀಗೆ ಆಗುತ್ತಿರಬಹುದು ಅಂತ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

    ಇನ್ನೂ ಶಾಸ್ತ್ರ ಕೇಳಿದ್ರೆ ಎಲ್ಲಾರೂ ಒಂದಾಗಿ ಸೇರಿ ಮುನಿಯಪ್ಪ ಪೂಜೆ ಮಾಡಿದ್ರೆ ಸಮಸ್ಯೆ ಬಗೆಹರಿಯಬಹುದು ಅಂತಾ ಹೇಳಿದ್ದಾರಂತೆ. ಸದ್ಯ ಮನೆತನದಲ್ಲಿ ಬರೀ ಗಂಡಸರೇ ಬಲಿಯಾಗಿದ್ದು, ಆತಂಕಕ್ಕೀಡು ಮಾಡಿದೆ. ಇನ್ನೂ ಒಟ್ಟು ಇದೇ ಕುಟುಂಬದ 11 ಜನರಿಗೆ ಹಾವು ಕಚ್ಚಿದ್ದು, ಆರು ಜನರು ಉಳಿದಿದ್ದಾರೆ. ಐದು ಮಂದಿ ಸಾವನ್ನಪ್ಪಿದ್ದಾರೆ.

    ಇದು ನಿಜಕ್ಕೂ ನಂಬಲಾರದ ಸಂಗತಿ. ಹಾವಿನ ದ್ವೇಷವೋ ದೇವರ ಶಾಪವೋ  ಅಥವಾ ಆಕಸ್ಮಿಕ ಸಾವೋ ಒಟ್ಟು ಬಾಳಿ ಬದುಕಬೇಕಿದ್ದ ಪುರುಷರು ಮಾತ್ರ ಬಲಿಯಾಗುತ್ತಿರುವುದು ದುರಂತವಾಗಿದೆ.

    ವರದಿ: ಮಂಜು ಸ್ವಾಮಿ.ಎಂ.ಎನ್., ಕೊರಟಗೆರೆ.


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

    admin
    • Website

    Related Posts

    ಕೊರಟಗೆರೆ ಪಟ್ಟಣ ಪಂಚಾಯಿತಿ ‘ಪುರಸಭೆ’ಯಾಗಿ ಮೇಲ್ದರ್ಜೆಗೆ!

    November 8, 2025

    ಬೀದಿಬದಿ ವ್ಯಾಪಾರಸ್ಥರ ಸುರಕ್ಷತೆಗೆ ಕ್ರಮವಹಿಸುವಂತೆ ಸದಸ್ಯರ ಆಗ್ರಹ

    November 4, 2025

    ಕೊರಟಗೆರೆ ಬಸ್ ಗಾಗಿ ಪರದಾಟ:   ಕೆ ಎಸ್ ಆರ್ ಟಿ ಸಿ ಅಧಿಕಾರಿಗಳ ವಿರುದ್ಧ ಹೆಚ್ಚಾದ ಜನಾಕ್ರೋಶ

    November 4, 2025

    Comments are closed.

    Our Picks

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    ಖ್ಯಾತ ತಮಿಳು ಹಾಸ್ಯ ನಟ ರೋಬೋ ಶಂಕರ್‌ ನಿಧನ

    September 19, 2025

    ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇಲಿ ಕಚ್ಚಿ ನವಜಾತ ಶಿಶು ಸಾವು!

    September 4, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಮಧುಗಿರಿ

    ಕನಕದಾಸರು ಸಮಾಜದ ಓರೆಕೋರೆಗಳನ್ನು ತಿದ್ದಲು ಶ್ರಮಿಸಿದವರು: ಸಿ.ವಿ.ಕುಮಾರ್

    November 10, 2025

    ಕೊಡಿಗೇನಹಳ್ಳಿ: ಕನಕದಾಸರು ಕಾಯಕ ಮತ್ತು ಅಧ್ಯಾತ್ಮಿಕ ಮಾರ್ಗದಲ್ಲಿ ನಡೆದು ಸಮಾಜದ ಓರೆಕೋರೆಗಳನ್ನು ತಿದ್ದಲು ಶ್ರಮಿಸಿದವರು ಎಂದು ಚೈತನ್ಯ ಸಿಂಚನ ಸಾಮಾಜಿಕ…

    ಅವೈಜ್ಞಾನಿಕ ಸುತ್ತೋಲೆ ವಾಪಸ್ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರಾಂಶುಪಾಲರ, ಉಪನ್ಯಾಸಕರ ಸಂಘ ಆಗ್ರಹ

    November 10, 2025

    ತುಮಕೂರು | ಕಾಂಗ್ರೆಸ್‌ ಭವನ ಕಟ್ಟಡ ನಿರ್ಮಾಣಕ್ಕೆ ತಡೆಯಾಜ್ಞೆ

    November 10, 2025

    ಕುಲವಿಲ್ಲದ ನೆಲೆಗಾಗಿ ನಡೆದಾಡಿದ ಸಂತ ಕವಿ ಕನಕದಾಸರು: ಬಿಡಗಲು ಶಿವಣ್ಣ ಅಭಿಮತ

    November 9, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.