ಮಧುಗಿರಿ: ಪಟ್ಟಣದಲ್ಲಿರುವ ಶಕ್ತಿದೇವತೆ ಕಾಳಿಕಾ ಕಮಠೇಶ್ವರ ಸ್ವಾಮಿಗೆ ಹುಣ್ಣಿಮೆಯ ಬೆಳದಿಂಗಳ ಪೂಜಾ ಕಾರ್ಯ ಸುಸಂಪನ್ನವಾಗಿ ನಡೆಯಿತು.
ತಾಲ್ಲೂಕು ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಆರ್. ಲಕ್ಷ್ಮೀಕಾಂತಾಚಾರ್ ರವರ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ ಬ್ರಾಹ್ಮೀ ಮುಹೂರ್ತದಲ್ಲಿ ವಿಶೇಷ ಅಭಿಷೇಕ, ಅಲಂಕಾರ ಹಾಗೂ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.
ಪ್ರತಿ ಹುಣ್ಣಿಮೆಯಂತೆ ಈ ಬಾರಿ ಇಬ್ಬರು ಸಾಧಕರಾದ, ಹೊಸಕೆರೆ ಪ್ರೌಢಶಾಲೆಯ ಮಲ್ಲಿಕಾರ್ಜುನ, ಮತ್ತು ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ನಿರ್ದೇಶಕರು ಹಾಗೂ ನಿವೃತ್ತ ಶಿಕ್ಷಕ,ತಬಲಾ ಕಲಾವಿದ ಓಂ, ರಾಮಕೃಷ್ಣ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪುರಸಭಾ ಸದಸ್ಯರಾದ ಮಂಜುನಾಥ್ ಆಚಾರ್ ಹಾಗೂ ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ತಾ ಅಧ್ಯಕ್ಷ ಎಂ.ಆರ್.ಲಕ್ಷ್ಮೀಕಾಂತಾಚಾರ್ ಮೊದಲಾದವರು ಸಾಧಕರಿಗೆ ಸನ್ಮಾನಿಸಿದರು.
ಚಂದನ್ ಶರ್ಮ, ದೊಡ್ಡೇರಿ ಸುರೇಶಾಚಾರ್, ಶ್ರೀಧರಾಚಾರ್,ಶಶಾಂಕ್,ವೇಣು ಮತ್ತು ತಂಡದವರು ಪೌರೋಹಿತ್ಯ ನಿವ೯ಹಣೆ ಮಾಡಿದರು.
ಸವ೯ಮಂಗಳ ನಾಗಲಿಂಗಾಚಾರ್, ಸವ೯ಮಂಗಳ ಲಕ್ಷ್ಮೀ ಕಾಂತಾಚಾರ್ ಕುಟುಂಬದವರು ಸೇವಾಥ೯ ಭಕ್ತಿ ಸಮರ್ಪಿಸಿದರು. ಸಕಲ ಜೀವರಾಶಿಗೂ ಸನ್ಮಂಗಳವಾಗಲೆಂದು ಕಾಳಿಮಾತೆಯ ಅಡಿದಾವರೆಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ.ಅಮರಾವತಿ ದ್ರೇಹಾಚಾರ್ ಆಧ್ಯಾತ್ಮ ಚಿಂತಕರು ವಿಶ್ವ ಶಂಕರ ಫೌಂಡೇಶನ್ ಮಧುಗಿರಿ ,ಶಿಲ್ಪಿಗಳಾದ ಹರಿಪ್ರಸಾದ್,ಬಡಗಿ ಮೋಹನ್ ,ಕ್ಯಾತಗೊಂಡನಹಳ್ಳಿ ಮಹದೇವಯ್ಯ, ಮೊದಲಾದವರು ಭಾಗವಹಿಸಿದ್ದರು.
ವರದಿ: ಅಬಿದ್ ಮಧುಗಿರಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA