ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ತುಮಕೂರು : ಜನರು ತಮ್ಮ ಕಷ್ಟಗಳನ್ನು ಪರಿಹರಿಸಲು ದೇವರ ಮೇಲೆ ನಂಬಿಕೆ ಇಟ್ಟು ದೇವಸ್ಥಾನಗಳಿಗೆ ಹೋಗುವುದು ಸಹಜ ಆದರೆ ಇಲ್ಲೊಬ್ಬ ಉಡಾಳ ಪೂಜಾರಿ ದೇವಸ್ಥಾನಕ್ಕೆ ಬರುವ ಮುಗ್ಧ ಜನರನ್ನ ಯಾಮರಿಸಿ ಅವರಿಂದ ಹಣ ಪಿಕುವ ಕೆಲಸದಲ್ಲಿ ತೊಡಗಿದ್ದಾನೆ. ಕುಟುಂಬಗಳನ್ನ ಹೊಡೆಯುವ ಕೆಲಸ ಮಾಡಿ ದೇವರ ಹೆಸರಿನಲ್ಲಿ ಜನರ ಮೂಢನಂಬಿಕೆಯನ್ನು ಬಂಡವಾಳ ಮಾಡಿಕೊಂಡು ಜನರನ್ನು ಯಾಮಾರಿಸುವ ಆರೋಪ ಕೇಳಿ ಬಂದಿದೆ..
ತುಮಕೂರು ತಾಲ್ಲೂಕು ಕೋರ ಹೋಬಳಿಯ ಚಿಕ್ಕತೊಟ್ಲುಕೆರೆಯಲ್ಲಿ ಇರುವ ಆದಿಶಕ್ತಿ ಚಾಮುಂಡೇಶ್ವರಿ ಅಮ್ಮನವರ ದೇವಸ್ಥಾನದ ಹೆಸರಿನಲ್ಲಿ ದೇವಸ್ಥಾನ ನಿರ್ಮಾಣ ಮಾಡಿರುವ ಶಿವಣ್ಣ ಎಂಬ ಹೆಸರಿನ ಪೂಜಾರಿ ಮನೆಯಲ್ಲೇ ದೇವಸ್ಥಾನ ನಿರ್ಮಾಣ ಮಾಡಿಕೊಂಡು ಬೆಂಗಳೂರು ಮೂಲದ ಯುವಕ ರಂಜಿತ್ ರ ಮನ ಪರಿವರ್ತನೆ ಮಾಡಿ ಕುಟುಂಬದಿಂದ ಬೇರ್ಪಡಿಸಿ ಆತನನ್ನ ಅಕ್ರಮವಾಗಿ ದೇವಸ್ಥಾನದಲ್ಲಿ ಇಟ್ಟು ಕೊಂಡಿರುವ ಆರೋಪ ಕೇಳಿ ಬಂದಿತ್ತು..
ಅದರ ಮಾಹಿತಿಯ ಮೇರೆಗೆ ನೆಲಮಂಗಲ ಮೂಲದ ಕುಮಾರ್ ಕುಟುಂಬ ಹಾಗೂ ಕರ್ನಾಟಕ ರಣಧೀರರ ವೇದಿಕೆ ಸಂಘಟನೆಯ ರಾಜ್ಯಾಧ್ಯಕ್ಷ ಶಂಕರ್ ಗೌಡ್ರು ಹಾಗೂ ಸಂಘಟನೆಯ ಕಾರ್ಯಕರ್ತರ ತಂಡ ದಿಡೀರ್ ದೇವಸ್ಥಾನಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಪೂಜಾರಿ ಬಳಿ ಇದ್ದ ಯುವಕನಿಂದ ಬೃಹತ್ ಹೈ ಡ್ರಾಮವೇ ನಡೆಯಿತು…
ಪೋಷಕರಿಂದ ದೂರವಿದ್ದ ಯುವಕ ತಾನು ಪೋಷಕರೊಂದಿಗೆ ಹೋಗುವುದಿಲ್ಲ ನಾನು ಇಲ್ಲೇ ಇರುತ್ತೇನೆ ಎಂದು ಮಂಡು ಹಿಡಿದು ಕೂತಿದ್ದ ಇದೇ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಮತ್ತೊಂದು ಬಾಲಕಿಯನ್ನು ಅಕ್ರಮವಾಗಿ ಇಟ್ಟುಕೊಂಡಿದ್ದು ಸಹ ಕಂಡುಬಂದಿತ್ತು.
ಇದರ ಜಾಡು ಹಿಡಿದು ಹೊರಟ ಸಂಘಟನೆಯ ಕಾರ್ಯಕರ್ತರು ಬಾಲಕಿ ಹಾಗೂ ಸ್ವಾಮೀಜಿಯ ಬಳಿ ಬಾಲಕಿಯ ಬಗ್ಗೆ ವಿಚಾರಿಸಿದಾಗ ತಾಯಿ ಇಲ್ಲದ ಬಾಲಕಿಯನ್ನು ದೇವಸ್ಥಾನದಲ್ಲಿ ಇಟ್ಟು ಕೊಂಡಿರುವ ಪ್ರಕರಣ ಬೆಳಕಿಗೆ ಬಂದ ಕೂಡಲೇ ಸಂಘಟನೆಯ ಕಾರ್ಯಕರ್ತರು ಮಕ್ಕಳ ರಕ್ಷಣಾ ಘಟಕಕ್ಕೆ ಮತ್ತು ಪೊಲೀಸ್ ನವರಿಗೆ ಮಾಹಿತಿ ನೀಡಿದರು, ಮಾಹಿತಿ ಪಡೆದ ಅಧಿಕಾರಿಗಳು ಸ್ಥಳಕ್ಕೆ ದಿಢೀರ್ ಭೇಟಿ ನೀಡಿದರೂ, ಪೊಲೀಸರು ಹಾಗೂ ಮಕ್ಕಳ ರಕ್ಷಣಾ ಘಟಕದ ತಂಡದಿಂದ ದೇವಸ್ಥಾನದಲ್ಲಿ ಇದ್ದ ಬಾಲಕಿಯನ್ನು ರಕ್ಷಿಸಿದ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.
ಇನ್ನು ಘಟನೆಯ ಬಗ್ಗೆ ಮಾಹಿತಿ ನೀಡಿರುವ ಕರ್ನಾಟಕ ರಣಧೀರರ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಶಂಕರ್ ಗೌಡ್ರು. ಕೆ. ಆರ್. ಮಾತನಾಡಿ ಮೌರ್ಯತೆಯ ಹೆಸರಿನಲ್ಲಿ ಮುಗ್ಧ ಅಮಾಯಕ ಜನರನ್ನ ಈತ ವಂಚಿಸುತ್ತಿದ್ದು ಇದಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇದೆ ಸಂದರ್ಭದಲ್ಲಿ ಮಾತನಾಡಿದ ಗ್ರಾಮಸ್ಥರು ಸಹ ದೇವಸ್ಥಾನದ ಕಾರ್ಯ ಚಟುವಟಿಕೆಗಳ ಬಗ್ಗೆ ತೀವ್ರ ಆಕ್ರೋಶ ಹೊರಹಾಕಿದ್ದು ಸ್ಥಳೀಯರು ದೇವಸ್ಥಾನಕ್ಕೆ ಬರುವುದಿಲ್ಲ ಆದರೆ ಬೇರೆ ಊರಿನ ಜನರು ದೇವಸ್ಥಾನಗಳಿಗೆ ಭೇಟಿ ನೀಡುತ್ತಿರುವುದು ಕಂಡು ಬಂದಿದ್ದು ಈತ ಸ್ಥಳೀಯ ಹಲವು ಸ್ಥಳಗಳಲ್ಲಿ ವಾಮಾಚಾರದ ಮೊರೆ ಹೋಗಿದ್ದು ಇದರಿಂದ ಸಾರ್ವಜನಿಕರು ಸಹ ಹೈರಾಳಾಗಿದ್ದು ಕೂಡಲೇ ಈ ದೇವಸ್ಥಾನವನ್ನು ತೆರವುಗೊಳಿಸಬೇಕು ಎಂದು ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
ಇನ್ನು ಕೊನೆಗೆ ದೇವಸ್ಥಾನದಲ್ಲಿ ಇದ್ದ ಬಾಲಕಿಯನ್ನು ಒಂದೆಡೆ ರಕ್ಷಿಸಿದರೆ ಮತ್ತೊಂದೆಡೆ ಪೊಲೀಸರು ಯುವಕನಾಗಿ ಬುದ್ಧಿವಾದ ಹೇಳಿ ಪೋಷಕರೊಂದಿಗೆ ಮನೆಗೆ ತೆರಳುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಯುವಕ ಮನೆ ಸೇರಲು ಮುಂದಾಗಿದ್ದಾನೆ.
ಅದೇನೇ ಇರಲಿ ದೇವಸ್ಥಾನದ ಹೆಸರಿನಲ್ಲಿ ಮುಗ್ಧ ಅಮಾಯಕ ಜನರನ್ನು ದೇವರ ಹೆಸರಿನಲ್ಲಿ ಯಾಮರಿಸುವ ಇಂತಹ ನಕಲಿ ಪೂಜಾರಿಗಳಿಗೆ ತಕ್ಕ ಪಾಠ ಕಲಿಸುವುದು ಎಲ್ಲರ ಕೆಲಸ ಎಂದರೆ ತಪ್ಪಾಗಲಾರದು…
ಇನ್ನು ಈ ಕಾರ್ಯಾಚರಣೆಯಲ್ಲಿ ಕರ್ನಾಟಕ ರಣಧೀರರ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ ಎನ್ ದೇವರಾಜು, ಶಿವಕುಮಾರ್,ಮಂಜುಸ್ವಾಮಿ ಎಂ ಎನ್,ಸುರೇಶ್,ರವಿಕುಮಾರ್,ದೇವರಾಜು,ಕೋರ ಪೋಲೀಸ್ ಠಾಣೆಯ ಸಿಪಿಐ ಲಕ್ಷ್ಮಿಕಾಂತಯ್ಯ,ಪಿಎಸ್ ಐ ಸಂಗಮೇಶ್,ಮಕ್ಕಳ ರಕ್ಷಣಾ ತಂಡದ ಅಧಿಕಾರಿಗಳು ವಕೀಲರಾದ ಶಿವಕುಮಾರ್ ಹಾಜರಿದ್ದರು.
ಕೌನ್ಸೆಲಿಂಗ್ ಬಳಿಕ ಕಾನೂನು ಕ್ರಮ:
ದೇವಸ್ಥಾನದಲ್ಲಿ ಇದ್ದ ಬಾಲಕಿಯನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಸದ್ಯದ ವಿದ್ಯಮಾನಗಳಿಂದ ಬಾಲಕಿ ಬೆದರಿರುವ ಕಾರಣ ಸದ್ಯ ಬಾಲಕಿ ಯಾವುದೇ ಮಾಹಿತಿಯನ್ನು ನೀಡಿಲ್ಲ ಎನ್ನಲಾಗಿದೆ. ಮಗುವಿಗೆ ಸೂಕ್ತ ಕೌನ್ಸೆಲಿಂಗ್ ನೀಡಿದ ನಂತರಹೇಳಿಕೆ ಪಡೆದು ಮುಂದಿನ ಕಾನೂನು ಕ್ರಮಕ್ಕೆ ಪೊಲೀಸರು ಮುಂದಾಗಲಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.