nammatumakuru

    Subscribe to Updates

    Get the latest creative news from FooBar about art, design and business.

    What's Hot

    ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ: ಹೈನುಗಾರಿಕೆ ನಡೆಸುತ್ತಿದ್ದ  ಮಹಿಳೆ ಕಂಗಾಲು

    January 5, 2026

    ತುರುವೇಕೆರೆ: ಅಯ್ಯಪ್ಪ ಮಾಲಾಧಾರಿಗಳ ಯಾತ್ರೆ, ಜ.7ರಿಂದ 10ರವರೆಗೆ ಹಲವು ಕಾರ್ಯಕ್ರಮಗಳು

    January 5, 2026

    ತುಮಕೂರು:  ಜನವರಿ 7, 8ರಂದು ಸಿರಿಧಾನ್ಯ ಹಬ್ಬ

    January 5, 2026
    Facebook Twitter Instagram
    ಟ್ರೆಂಡಿಂಗ್
    • ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ: ಹೈನುಗಾರಿಕೆ ನಡೆಸುತ್ತಿದ್ದ  ಮಹಿಳೆ ಕಂಗಾಲು
    • ತುರುವೇಕೆರೆ: ಅಯ್ಯಪ್ಪ ಮಾಲಾಧಾರಿಗಳ ಯಾತ್ರೆ, ಜ.7ರಿಂದ 10ರವರೆಗೆ ಹಲವು ಕಾರ್ಯಕ್ರಮಗಳು
    • ತುಮಕೂರು:  ಜನವರಿ 7, 8ರಂದು ಸಿರಿಧಾನ್ಯ ಹಬ್ಬ
    • ಸರಗೂರು: ವಿಜೃಂಭಣೆಯಿಂದ ನಡೆದ  ಹನುಮ ಜಯಂತಿ ಉತ್ಸವದ ಶೋಭಯಾತ್ರೆ
    • ಕುಡಿಯುವ ನೀರಿನಲ್ಲಿ ಕಲುಷಿತ ನೀರು ಮಿಶ್ರಣವಾಗದಂತೆ ಎಚ್ಚರ ವಹಿಸಿ: ಶಾಸಕ  ಜಿ.ಬಿ. ಜ್ಯೋತಿಗಣೇಶ್ ಸೂಚನೆ
    • ಕ್ವಿಝ್: ಸಹನಾ ಶಾಲೆ ಪ್ರಥಮ ಸ್ಥಾನ
    • ಮರಕ್ಕೆ ಡಿಕ್ಕಿ ಹೊಡೆದ ಬೈಕ್: ಸ್ಥಳದಲ್ಲೇ ಸವಾರ ಸಾವು
    • ಶಿಕ್ಷಣದ ಜೊತೆಗೆ, ಆರ್ಥಿಕ ಸ್ವಾವಲಂಬನೆ ಬೆಳೆಸಿ: ಮಹಿಳೆಯರಿಗೆ ನ್ಯಾಯಾಧೀಶೆ ನೂರುನ್ನಿಸಾ ಸಲಹೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಎರಡು ಜಾತಿ ನಿಂದನೆ ಮೊಕದ್ದಮೆ ದಾಖಲಾದರೂ ಆರೋಪಿಯ ಬಂಧನವಾಗಿಲ್ಲ: ಹೊನ್ನೇನಹಳ್ಳಿ ಕೃಷ್ಣಪ್ಪ ಆರೋಪ
    ಜಿಲ್ಲಾ ಸುದ್ದಿ March 1, 2024

    ಎರಡು ಜಾತಿ ನಿಂದನೆ ಮೊಕದ್ದಮೆ ದಾಖಲಾದರೂ ಆರೋಪಿಯ ಬಂಧನವಾಗಿಲ್ಲ: ಹೊನ್ನೇನಹಳ್ಳಿ ಕೃಷ್ಣಪ್ಪ ಆರೋಪ

    By adminMarch 1, 2024No Comments2 Mins Read
    thuruvekere 2

    ತುರುವೇಕೆರೆ: ಅಮ್ಮಸಂದ್ರ ಸಿಮೆಂಟ್ ಕಾರ್ಖಾನೆಯ ಹೆಚ್.ಆರ್.ಮ್ಯಾನೇಜರ್ ಮಂಜುನಾಥಸ್ವಾಮಿಯವರ ವಿರುದ್ಧ  ಜಾತಿ ನಿಂದನೆ ಎರಡು ಮೊಕದ್ದಮೆ ದಾಖಲಾಗಿದೆ.  ಆದರೂಕೂಡ ಪೊಲೀಸರು ಅವರನ್ನು ಬಂಧಿಸುವಲ್ಲಿ ಮೀನಾಮೇಷ ಎಣಿಸುತ್ತಿದ್ದಾರೆ ಎಂದು ದಲಿತ ಮುಖಂಡ ಹೊನ್ನೇನಹಳ್ಳಿ ಕೃಷ್ಣಪ್ಪ ಆರೋಪಿಸಿದ್ದಾರೆ.

    ತುರುವೇಕೆರೆ  ಪಟ್ಟಣದ ಪ್ರವಾಸಿಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಲಿತರ ಮೇಲೆ ಪದೇ ಪದೇ  ದೌರ್ಜನ್ಯ ನಡೆಯುತಿದ್ದರೂ ಪೊಲೀಸರು ಮೌನ ವಹಿಸಿದ್ದಾರೆ ಎಂದರು.


    Provided by
    Provided by

    ಮಂಜುನಾಥ ಸ್ವಾಮಿಯವರ ಮೇಲೆ ಎರಡು ಜಾತಿನಿಂದನೆ ಮೊಕದ್ದಮೆ ದಾಖಲಾಗಿದ್ದರೂ ಸಹ ಇದುವರೆಗೂ ಅವರನ್ನು ಬಂಧಿಸಿಲ್ಲ.   ಅವರಿಗೆ ಜಾಮೀನು ತೆಗೆದುಕೊಳ್ಳುವುದಕ್ಕೆದಂಡಿನಶಿವರ  ಪೊಲೀಸರೇ ಸಹಕರಿಸುತ್ತಿದ್ದಾರೆ ಎಂದು ಆರೋಪಿಸಿದರಲ್ಲದೇ, ಇದು ದಲಿತರಿಗೆ ಬಹಳ ನೋವಿನ ಸಂಗತಿ. ರಕ್ಷಣೆ ಕೊಡಬೇಕಾದ ಪೊಲೀಸ್ ಇಲಾಖೆಯೇ ಆರೋಪಿ ಬಲಾಢ್ಯನಾಗಿರುವುದರಿಂದ ಆರೋಪಿಯನ್ನು ದಸ್ತಗಿರಿ ಮಾಡದೆ ಇರುವುದು ದಲಿತರಿಗೆ ಮಾಡಿದ ಅವಮಾನ ಎಂದರು.

    ಇಡೀ ವ್ಯಕ್ತಿ ಕಾರ್ಖಾನೆಯ ನೌಕರನಿಂದ ಬಲವಂತವಾಗಿ ಮಲ ಗುಂಡಿಯನ್ನು ಸ್ವಚ್ಛ ಗೊಳಿಸಿರುವುದು ಪರಮ ಅಪರಾಧವಾಗಿದ್ದು, ಅಲ್ಲದೇ ಕಾರ್ಮಿಕರಿಂದ ಬಲವಂತವಾಗಿ ಕಂಪನಿಯು ದಲಿತರ ಪರವಾಗಿದೆ ಎಂಬ  ಪತ್ರಿಕಾ ಹೇಳಿಕೆಯನ್ನು ಸಹ ನೀಡಿಸಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

    ಇದು ಬಲವಂತವಾಗಿ ಹೇಳಿಸಿರುವ ಹೇಳಿಕೆಯಾಗಿದೆ ಇದಕ್ಕೆ ನಮ್ಮ ಬಳಿ ದಾಖಲೆಯಿದೆ. ಸುಮಾರು 12 ವರ್ಷಗಳಿಂದ ಅಂಬ್ಯುಲೆನ್ಸ್ ಡ್ರೈವರ್ ಆಗಿದ್ದ ಎಸ್.ಟಿ ಜನಾಂಗದ ವ್ಯಕ್ತಿಯನ್ನು ಕೆಲಸದಿಂದ ತೆಗೆದುಹಾಕಿದ್ದಾರೆ. ಅವರ ಕುಟುಂಬದವರು ನ್ಯಾಯ ಕೇಳಲು ಕಂಪೆನಿಯ ಹತ್ತಿರ ಬಂದಾಗ ಅವರನ್ನು ಬಲವಂತವಾಗಿ ಹೊರಹಾಕಿಸಿದ್ದಾರೆ.  ಇನ್ನು ಕೆಲವರನ್ನು ಕೆಲಸದಿಂದ ತೆಗೆದಾಗ ಕಾರ್ಮಿಕ ಸಂಘಟನೆ ಎಲ್ಲಿ ಹೋಗಿತ್ತು ಎಂದು ಪ್ರಶ್ನಿಸಿದರಲ್ಲದೇ, 50 ವರ್ಷದಿಂದ  ಇದುವರೆಗೂ ಕಂಪನಿ ಹಾಗೂ ರೈತರ ಜೊತೆ ತಿಕ್ಕಾಟ ನಡೆದಿರಲಿಲ್ಲ ಅದು ಈಗ ನಡೆಯುತ್ತಿದೆ ಎಂದರು.

    ದಲಿತರಿಗೆ ಆಗುತ್ತಿರುವ ದೌರ್ಜನ್ಯಗಳ ಬಗ್ಗೆ ಕಂಪನಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸುತ್ತೇವೆ ಎಂದರು.

    ಈ ಸಂದರ್ಭದಲ್ಲಿ ದಲಿತ ಮುಖಂಡರಾದ ರಾಮಕೃಷ್ಣ, ಬಿಗನೇನಹಳ್ಳಿ ಪುಟ್ಟರಾಜು, ರಾಯಸಂದ್ರ ವಸಂತ ನರಸಿಂಹಮೂರ್ತಿ, ಆಕಾಶ್, ನರಸಿಂಹಮೂರ್ತಿ, ಕೃಷ್ಣಮೂರ್ತಿ ಕರಡಿ ಸೇರಿದಂತೆ ಹಲವರು ಇದ್ದರು.

    ವರದಿ: ಸುರೇಶ್ ಬಾಬು ಎಂ. ತುರುವೇಕೆರೆ


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

     

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

    admin
    • Website

    Related Posts

    ಸರಗೂರು: ವಿಜೃಂಭಣೆಯಿಂದ ನಡೆದ  ಹನುಮ ಜಯಂತಿ ಉತ್ಸವದ ಶೋಭಯಾತ್ರೆ

    January 5, 2026

    ಡಾ.ಬಿ.ಆರ್.ಅಂಬೇಡ್ಕರ್ ಬಳಗವತಿಯಿಂದ ಕೋರೆಗಾಂವ್ ವಿಜಯೋತ್ಸವ ಆಚರಣೆ

    January 3, 2026

    ಸರಗೂರು:  ಮಹಾರ್ ವೀರಯೋಧರ ‘ಭೀಮ ಕೋರೆಗಾಂವ್’ 208ನೇ ವರ್ಷದ ವಿಜಯೋತ್ಸವ

    January 3, 2026

    Comments are closed.

    Our Picks

    ಆರ್‌ ಸಿಬಿ ತಂಡದ ಆಟಗಾರನಿಗೆ ಪೋಕ್ಸೋ ಸಂಕಷ್ಟ: ನಿರೀಕ್ಷಣಾ ಜಾಮೀನು ಅರ್ಜಿ ವಜಾ, ಬಂಧನ ಭೀತಿ

    December 25, 2025

    ಇಸ್ರೊ ಮೈಲಿಗಲ್ಲು: ಅತ್ಯಂತ ಭಾರವಾದ ಎಲ್‌ ವಿಎಂ3 ರಾಕೆಟ್ ಮೂಲಕ ‘ಬ್ಲೂಬರ್ಡ್’ ಉಪಗ್ರಹ ಉಡಾವಣೆ

    December 24, 2025

    ವಿಶ್ವಕಪ್ ಗೆದ್ದ ಭಾರತದ ಮಹಿಳಾ ತಂಡಕ್ಕೆ ಟಾಟಾ ಮೋಟಾರ್ಸ್‌ನಿಂದ ‘ಸಿಯೆರಾ’ ಕಾರು ಉಡುಗೊರೆ!

    December 17, 2025

    ದೆಹಲಿ ಕಾರು ಸ್ಫೋಟ ಪ್ರಕರಣ: ತುಮಕೂರಿನಲ್ಲೂ ವಿಚಾರಣೆ!

    November 14, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಮಧುಗಿರಿ

    ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ: ಹೈನುಗಾರಿಕೆ ನಡೆಸುತ್ತಿದ್ದ  ಮಹಿಳೆ ಕಂಗಾಲು

    January 5, 2026

    ಮಿಡಿಗೇಶಿ: ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಗ್ರಾಮದ ಕೆಪಿಟಿಸಿಎಲ್ ಕಚೇರಿ ಹಿಂಬದಿಯ ಜಮೀನಿನಲ್ಲಿ ಇದ್ದ ಹುಲ್ಲಿನ ಬಣವೆಗೆ ಶನಿವಾರ ರಾತ್ರಿ ಆಕಸ್ಮಿಕ…

    ತುರುವೇಕೆರೆ: ಅಯ್ಯಪ್ಪ ಮಾಲಾಧಾರಿಗಳ ಯಾತ್ರೆ, ಜ.7ರಿಂದ 10ರವರೆಗೆ ಹಲವು ಕಾರ್ಯಕ್ರಮಗಳು

    January 5, 2026

    ತುಮಕೂರು:  ಜನವರಿ 7, 8ರಂದು ಸಿರಿಧಾನ್ಯ ಹಬ್ಬ

    January 5, 2026

    ಸರಗೂರು: ವಿಜೃಂಭಣೆಯಿಂದ ನಡೆದ  ಹನುಮ ಜಯಂತಿ ಉತ್ಸವದ ಶೋಭಯಾತ್ರೆ

    January 5, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.