ಬಳ್ಳಾರಿಯ ಸಿರುಗುಪ್ಪ ತಾಲೂಕಿನ ನಡವಿ ಗ್ರಾಮದ ತುಂಗಭದ್ರಾ ನದಿಯಲ್ಲಿ ಮೊಸಳೆ ದಾಳಿ ನಡೆಸಿದ್ದು, ನದಿ ದಡದಲ್ಲಿ ಮೇಯುತ್ತಿದ್ದ ಆಕಳನ್ನ ಮೊಸಳೆಗಳು ಎಳೆದೊಯ್ದಿವೆ. ಮೊಸಳೆ ದಾಳಿಗೆ ಬಲಿಯಾದ ಆಕಳು, ಕಂಪ್ಲಿ ಗಾದಿಲಿಂಗಪ್ಪ ಎನ್ನುವವರಿಗೆ ಸೇರಿದ್ದಾಗಿವೆ.
ನೋಡ ನೋಡುತ್ತಿದ್ದಂತೆ ನಾಲ್ಕು ಮೊಸಳೆಗಳು ಆಕಳನ್ನ ಹಿಡಿದು ನದಿ ಒಡಲಿಗೆ ಎಳೆದೊಯ್ದಿದ್ದು, ನದಿ ಮಧ್ಯೆ ಹೋಗಿ ಮೊಸಳೆಗಳು ಆಕಳನ್ನ ತಿಂದಿವೆ ಎನ್ನಲಾಗಿದೆ.
ಪದೇ ಪದೇ ಮೊಸಳೆ ದಾಳಿಗೆ ಜಾನುವಾರುಗಳು ಬಲಿಯಾಗುತ್ತಿರೋದಕ್ಕೆ ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದ್ದು, ನಿರ್ಲಕ್ಷ್ಯ ಮಾಡುತ್ತಿರುವ ಜಿಲ್ಲಾಡಳಿತ ಹಾಗೂ ಜನಪ್ರತಿನಿದಿಗಳ ವಿರುದ್ದ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296