ತುಮಕೂರು: ತಾಲ್ಲೂಕಿನ ಹೆಬ್ಬೂರು ಹೋಬಳಿ ನೀಡವಳಲು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ತೊಂಡಗೆರೆ ಗ್ರಾಮದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಗುಡಿಸಲಲ್ಲಿ ವಾಸ ಮಾಡುತ್ತಿದ್ದ ನಿರ್ಗತಿಕ ಕುಟುಂಬಕ್ಕೆ ಯಾವುದೇ ನಿವೇಶನ ಮತ್ತು ಸೂರು ಇಲ್ಲದೆ ಸರ್ಕಾರದಿಂದ ಯಾವುದೇ ಸೌಲಭ್ಯ ವಿಲ್ಲದೆ ಹೀನಾಯ ಸ್ಥಿತಿಯಲ್ಲಿ ಬದುಕುತ್ತಿತ್ತು.
ಈ ಕುಟುಂಬದ ಪರವಾಗಿ ಕಳೆದ 2014 ರಿಂದ ಸತತ ಎಂಟು ವರ್ಷಗಳಿಂದ ‘ಗುಡಿಸಲು ಮುಕ್ತ’ ಅಭಿಯಾನದಡಿ ಸಾಹಿತಿ ಮತ್ತು ಹೋರಾಟಗಾರರಾದ “ರವಿ ತೊಂಡಗೆರೆ” ಅವರು ಹೋರಾಟ ಮಾಡುತ್ತಿದ್ದಾರೆ. ಈ ವಿಚಾರ ರಾಜ್ಯಮಟ್ಟದ ಸುದ್ದಿವಾಹಿನಿಗಳಲ್ಲಿಯೂ ಪ್ರಸಾರವಾಗಿ ರಾಜ್ಯ ಸರ್ಕಾರ ಗಮನ ಸೆಳೆದಿತ್ತು.
ಇದಾದ ಬಳಿಕ ಸ್ಥಳಕ್ಕೆ ಜಿಲ್ಲಾಡಳಿತ ತಾಲ್ಲೂಕು ಆಡಳಿತ ಪಂಚಾಯ್ತಿ ಆಡಳಿತ ಅಧಿಕಾರಿಗಳೊಂದಿಗೆ ಆಗಮಿಸಿದ ತುಮಕೂರು ಗ್ರಾಮಾಂತರದ ಶಾಸಕ ಡಿ.ಸಿ.ಗೌರಿಶಂಕರ್ ಅವರು ಸ್ಥಳಕ್ಕೆ ಆಗಮಿಸಿ ನಿರ್ಗತಿಕರಿಗೆ ೨೪ ಗಂಟೆ ಒಳಗಾಗಿ ವಸತಿ ಮತ್ತು ನಿವೇಶನ ಮಂಜೂರು ಮೂಡುವಂತೆ ಆದೇಶ ಮಾಡಿದ್ದರು. ಹಾಗೂ ವಸತಿ ಸಚಿವರಾಗಿದ್ದ ಸೊಮ್ಮಣ್ಣನವರ ಆದೇಶವೂ ಕೂಡ ಆಗಿತ್ತು. ಇಷ್ಟಾಗಿಯೂ ಇಲ್ಲಿವರೆಗೂ ನಿರ್ಗತಿಕರಿಗೆ ನಿವೇಶನದ ಹಕ್ಕು ಪತ್ರ ವಿತರಣೆಯನ್ನು ನಾನಾ ಕಾರಣಗಳಿಂದ ತಡೆ ಹಿಡಿಯಲಾಗಿತ್ತು.
ಸತತ ಒಂದು ವರ್ಷದಿಂದ ಅಲೆದಾಡಿ ಬೇಸತ್ತ ಸಾಹಿತಿ ರವಿ ತೊಂಡಗೆರೆ, ಫಲಾನುಭವಿಗಳನ್ನು ಜಿಲ್ಲಾ ಪಂಚಾಯ್ತಿಗೆ ಕರೆಸಿಕೊಂಡು ಅಂಬೇಡ್ಕರ್ ಸೇನೆ ಜಿಲ್ಲಾಧ್ಯಕ್ಷರಾದ ಕೆಂಪರಾಜು ಅವರನ್ನು ಒಳಗೊಂಡಂತೆ ನಿಯೋಗ ಕರೆದೊಯ್ದು ತಡೆ ಹಿಡಿಯಲಾಗಿದ್ದ ಹಕ್ಕು ಪತ್ರದ ಬಗ್ಗೆ ಇಂದು ವಿಚಾರಣೆ ನಡೆಸಿ ಅತೀ ಶೀಘ್ರದಲ್ಲಿ ಹಕ್ಕು ಪತ್ರ ವಿತರಿಸುವುದಾಗಿ ಜಿಲ್ಲಾ ಪಂಚಾಯ್ತಿ ceo ವಿದ್ಯಾಕುಮಾರಿ ಮತ್ತು ಪ್ರೊಜೆಕ್ಟ್ ಡೈರೆಕ್ಟರ್ ನರಸಿಂಹ ಮೂರ್ತಿ ಅವರನ್ನು ಒತ್ತಾಯಿಸಿದ್ದು, ಇಷ್ಟು ತಿಂಗಳುಗಳ ಕಾಲ ಕಾರಣಾಂತರದಿಂದ ತಡೆಹಿಡಿಯಲಾಗಿದ್ದ ಹಕ್ಕು ಪತ್ರವನ್ನು ಅತೀ ಶೀಘ್ರದಲ್ಲಿ ವಿತರಿಸುವುದಾಗಿ ಜಿಲ್ಲಾಡಳಿತ ಒಪ್ಪಿಕೊಂಡಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy