ಇತ್ತೀಚಿಗಷ್ಟೇ ಭಾರಿ ಸಂಚಲನ ಸೃಷ್ಟಿಸಿದ್ದ ತುಮಕೂರಿನಲ್ಲಿ ನಡೆದಿದ್ದ ದಿಗ್ಗಜರು ಸಿನಿಮಾ ಶೈಲಿಯ ಕಾರು ಖರೀದಿ ಪ್ರಕರಣ ಈಗ ಸುಖಾಂತ್ಯ ಕಂಡಿದ್ದು, ಯುವರೈತ ಕೆಂಪೆಗೌಡ ಮಹೇಂದ್ರ ಶೋರೂಮ್ ನಲ್ಲಿಯೇ ಕಾರು ಖರೀದಿ ಮಾಡಿ ಖುಷಿ ಕಂಡಿದ್ದಾರೆ.
ಹೌದು, ಕಳೆದ ಶುಕ್ರವಾರ ತುಮಕೂರಿನ ಮಹೇಂದ್ರ ಶೋರೂಮ್ ನಲ್ಲಿ ಕಾರು ಖರೀದಿಸಲು ಬಂದಿದ್ದ ತುಮಕೂರು ಗ್ರಾಮಾಂತರ ಕ್ಷೇತ್ರದ ರಾಮನ ಪಾಳ್ಯದ ಯುವರೈತ ಕೆಂಪೇಗೌಡ ಮಹೇಂದ್ರ ಶೋರೂಮ್ ನಲ್ಲಿ ಬುಲೆರೋ ವಾಹನ ಖರೀದಿಸಲು ಬಂದಿದ್ದರು.
ಈ ವೇಳೆ ಶೋರೂಂನಲ್ಲಿ ಕೆಲಸ ಮಾಡುವ ಸೇಲ್ಸ್ ಏಜೆಂಟ್ ಒಬ್ಬ ರೈತ ಕೆಂಪೇಗೌಡನ ಬಟ್ಟೆ, ವೇಷ ಭೂಷಣ ನೋಡಿ ಕೆಂಪೇಗೌಡ ಹಾಗೂ ಆತನ ಸ್ನೇಹಿತರಿಗೆ ಹತ್ತು ರೂ ಇಲ್ಲದಿದ್ದರೂ, ಕಾರು ಖರೀದಿಸಲು ಬಂದಿದ್ದಾರೆ ಎಂದು ಅವಮಾನಿಸಲಾಗಿತ್ತು.
ಈ ಘಟನೆ ನಡೆದ ಕೇವಲ ಒಂದೇ ಘಂಟೆಯಲ್ಲಿ ಕೆಂಪೇಗೌಡ 10 ಲಕ್ಷ ರೂ ಹಣ ತಂದು ಕಾರು ಖರೀದಿಸಲು ಮುಂದಾದರು. ಈ ಪ್ರಕರಣ ದಿಗ್ಗಜರು ಸಿನಿಮಾ ಶೈಲಿಯ ಪ್ರಕರಣಕ್ಕೆ ಸಾಕ್ಷಿಯಾಗಿತ್ತು.
ಯುವ ರೈತ ಹಣ ತಂದರೂ ಕಾರು ಕೊಡಲು ಶೂರೂಮ್ ನವರು ಹಿಂದೇಟು ಹಾಕಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಕೊನೆಗೆ ಪೊಲೀಸ್ ಠಾಣೆಯಲ್ಲಿ ಶೂರೂಮ್ ಮಾಲೀಕರು ಯುವ ರೈತ ಕೆಂಪೇಗೌಡನಿಗೆ ಕ್ಷಮೆಯಾಚಿಸಿದ್ದರು.
ರೈತ ಯುವಕನಿಗೆ ಅವಮಾನಿಸಿದ ಘಟನೆಗೆ ಸಂಬಂಧಿಸಿದಂತೆ ವ್ಯಾಪಕ ಪರ-ವಿರೋಧ ಚರ್ಚೆ ವ್ಯಕ್ತವಾಗಿತ್ತು . ನಂತರ ಮಹೀಂದ್ರ ಶೋ ರೂಂ ಮಾಲೀಕ ಆನಂದ್ ಮಹೇಂದ್ರ ಸಮೇತ ಟ್ವೀಟ್ ಮಾಡುವ ಮೂಲಕ ವಿಷಾದ ವ್ಯಕ್ತಪಡಿಸಿದ್ದರು.
ಇದಾದ ಬಳಿಕ ಶೋರೂಮ್ ಸಿಬ್ಬಂದಿಗಳು ಸಹ ಕೆಂಪೇಗೌಡ ರವರ ಮನೆಗೆ ಭೇಟಿ ನೀಡಿ ಕೆಂಪೇಗೌಡರ ಬಳಿ ಕ್ಷಮಾಪಣೆ ಕೇಳುವ ಕೆಂಪೇಗೌಡರ ಮನವೊಲಿಸಿದ್ದರು. ಈ ಎಲ್ಲಾ ಬೆಳವಣಿಗೆ ನಡುವೆ ಯುವಕ ಕೆಂಪೇಗೌಡ ತುಮಕೂರಿನ ರಿಂಗ್ ರಸ್ತೆಯ ಮಹೇಂದ್ರ ಶೋರೂಂನಲ್ಲಿಯೇ ಹೊಸ ಬುಲೇರೋ ಪಿಕಪ್ ವಾಹನ ಖರೀದಿಸುವ ಮೂಲಕ ನಗೆ ಬೀರಿದ್ದಾರೆ.
ವರದಿ: ರಾಜೇಶ್ ರಂಗನಾಥ್
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy