ತುಮಕೂರು: ಕರ್ನಾಟಕ ರಾಜ್ಯ ಸೌಹಾರ್ದತೆ ಮತ್ತೊಂದು ಹೆಸರು ಅಂತಹ ಸೌಹಾರ್ದತೆಗೆ ಯಾವುದೇ ಕಾರಣಕ್ಕೂ ಧಕ್ಕೆಯಾಗಬಾರದು ಎಂದು ಕರ್ನಾಟಕ ರಾಜ್ಯ ವರ್ಕ್ ಬೋರ್ಡ್ ರಾಜ್ಯಾಧ್ಯಕ್ಷ ಮೌಲಾನ ಮಹಮ್ಮದ್ ಶಫಿ ಆಜಾದಿ ತಿಳಿಸಿದ್ದಾರೆ.
ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಅವರು , ಸಿದ್ದಗಂಗಾ ಶ್ರೀಗಳೊಂದಿಗೆ ಹಿಜಾಬ್ ಹಾಗೂ ಕೇಸರಿ ಶಾಲಿನ ವಿವಾದಕ್ಕೆ ಸಂಬಂಧಿಸಿದಂತೆ ಸುದೀರ್ಘವಾಗಿ ಚರ್ಚಿಸಿದರು.
ಬಳಿಕ ಪತ್ರಕರ್ತ ಜೊತೆಗೆ ಮಾತನಾಡಿದ ಅವರು ಕರ್ನಾಟಕದ ಸೌಹಾರ್ದತೆಗೆ ತುಮಕೂರಿನ ಸಿದ್ದಗಂಗಾ ಮಠ ಪ್ರಸಿದ್ಧ. ಪ್ರಥಮಬಾರಿಗೆ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದೇನೆ. ಸಹೋದರ ಧರ್ಮೀಯ ಸ್ವಾಮೀಜಿಯವರೊಂದಿಗೆ ಇಂದಿನ ಸ್ಥಿತಿ ಗತಿಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಮುಂಚೆ ನಮ್ಮ ಕರ್ನಾಟಕ ಯಾವ ರೀತಿಯ ಸೌಹಾರ್ದಯುತವಾಗಿ ಇತ್ತು, ಅದೇ ರೀತಿಯಲ್ಲಿ ಮುಂದುವರಿಯಬೇಕು ಅದಕ್ಕೆ ಧಕ್ಕೆ ಬರಬಾರದು ಸೌಹಾರ್ದ ಹಾಗೂ ಸಾಮರಸ್ಯವನ್ನು ಹಾಳುಮಾಡುವ ವ್ಯಕ್ತಿಗಳನ್ನು ನಾವೆಲ್ಲರೂ ಸೇರಿ ಮಟ್ಟಹಾಕಬೇಕು. ಹಿಂದೂ-ಮುಸ್ಲಿಂ ಸೌಹಾರ್ದತೆಗೆ ಸಮಸ್ಯೆಯಾಗಬಾರದು ಎಂದರು.
ಪ್ರಕರಣ ಹೈಕೋರ್ಟ್ ನಲ್ಲಿದ್ದು, ತೀರ್ಪು ಏನು ಬರುತ್ತೆ ನೋಡಬೇಕು. ಕೋರ್ಟ್ ತೀರ್ಪು ಸೌಹಾರ್ದಯುತವಾಗಿ ಬರುವ ನಿರೀಕ್ಷೆ ಇದೆ ಯಾರೇ ಸೌಹಾರ್ದತೆಗೆ ದಕ್ಕೆ ಮಾಡಿದರೆ ನಾವು ಒಪ್ಪಲ್ಲ . ಕೇಸರಿ ಶಾಲು ಹಿಂದೂ ಧರ್ಮದಲ್ಲಿ ಇದ್ದರೆ, ಯಾರೂ ವಿರೋಧ ಮಾಡೋಕೆ ಆಗಲ್ಲ. ಹಿಜಾಬ್ ಹಾಕುವುದು ಶರಿಯತ್ ನಲ್ಲಿ ಇದೆ ಹೀಗಾಗಿ ಅವಕಾಶ ಬೇಕು ಎಂದರು.
ವರದಿ: ಮಾರುತಿ ಪ್ರಸಾದ್, ತುಮಕೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB