nammatumakuru

    Subscribe to Updates

    Get the latest creative news from FooBar about art, design and business.

    What's Hot

    ಹೆತ್ತ ಮಗಳನ್ನೇ ವೇಶ್ಯಾವಾಟಿಕೆಗೆ ತಳ್ಳಿದ ಪಾಪಿ ತಂದೆ!

    January 8, 2026

    ಎಐ ಕ್ಷೇತ್ರದಲ್ಲಿ ತುಮಕೂರಿನ ಟಿ.ಎಸ್.ಪ್ರತೀಕ್ ಸಾಧನೆ: ಗಿನ್ನೆಸ್ ವರ್ಲ್ಡ್ ರೆಕಾರ್ಡ್

    January 8, 2026

    ಧರ್ಮಸ್ಥಳಕ್ಕೆ ಪಾದಯಾತ್ರೆ: ಮತ್ತಿಹಳ್ಳಿ ಗ್ರಾಮಸ್ಥರ ಭಕ್ತಿಗೆ ಯೋಜನಾಧಿಕಾರಿ ಉದಯ್ ಕೆ. ಮೆಚ್ಚುಗೆ

    January 8, 2026
    Facebook Twitter Instagram
    ಟ್ರೆಂಡಿಂಗ್
    • ಹೆತ್ತ ಮಗಳನ್ನೇ ವೇಶ್ಯಾವಾಟಿಕೆಗೆ ತಳ್ಳಿದ ಪಾಪಿ ತಂದೆ!
    • ಎಐ ಕ್ಷೇತ್ರದಲ್ಲಿ ತುಮಕೂರಿನ ಟಿ.ಎಸ್.ಪ್ರತೀಕ್ ಸಾಧನೆ: ಗಿನ್ನೆಸ್ ವರ್ಲ್ಡ್ ರೆಕಾರ್ಡ್
    • ಧರ್ಮಸ್ಥಳಕ್ಕೆ ಪಾದಯಾತ್ರೆ: ಮತ್ತಿಹಳ್ಳಿ ಗ್ರಾಮಸ್ಥರ ಭಕ್ತಿಗೆ ಯೋಜನಾಧಿಕಾರಿ ಉದಯ್ ಕೆ. ಮೆಚ್ಚುಗೆ
    • ದೇಹದಂತೆ ಪ್ರತಿನಿತ್ಯ ಬಾಯಿಯನ್ನು ಸ್ವಚ್ಛವಾಗಿಡಬೇಕು: ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ
    • ಮುದ್ರಣ ಮಾಧ್ಯಮಗಳು ಇಂದಿಗೂ ಜನರ ವಿಶ್ವಾಸರ್ಹತೆ ಉಳಿಸಿಕೊಂಡಿವೆ: ಅಂಶಿ ಪ್ರಸನ್ನ ಕುಮಾರ್ ಅಭಿಮತ
    • ನೂತನ ಪತ್ರಕರ್ತರ ಸಂಘದ ಪದಾಧಿಕಾರಿಗಳಿಗೆ ಅಭಿನಂದನೆ ತಿಳಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್
    • ಅಲ್ಪಸಂಖ್ಯಾತರ ತುಷ್ಟೀಕರಣವೇ ಸಿದ್ದರಾಮಯ್ಯನವರ ದೊಡ್ಡ ಸಾಧನೆ: ಬಿಜೆಪಿ ಶಾಸಕ ಬಿ. ಸುರೇಶ್ ಗೌಡ ಟೀಕೆ
    • ರಾಜ್ಯ ಮಟ್ಟದ ವಿಜ್ಞಾನ ವಸ್ತುಪ್ರದರ್ಶನ: ದಕ್ಷಿಣ ಭಾರತ ಮಟ್ಟಕ್ಕೆ ಆಯ್ಕೆಯಾದ ಪಾವಗಡದ ಹೃತಿಕ್ ಎಚ್.
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ನಕ್ಷತ್ರಗಳ ಬೆಳಕ ಹೊರತಾಗಿಯೂ ರಾತ್ರಿ ಆಕಾಶ ಕಪ್ಪೇಕೆ ?
    ಲೇಖನ October 4, 2025

    ನಕ್ಷತ್ರಗಳ ಬೆಳಕ ಹೊರತಾಗಿಯೂ ರಾತ್ರಿ ಆಕಾಶ ಕಪ್ಪೇಕೆ ?

    By adminOctober 4, 2025No Comments4 Mins Read
    stars

    ಮೈಸೂರಿನ ವಿಜ್ಞಾನ ಶಿಕ್ಷಕರಾದ ಶ್ರೀ ಮಲ್ಲೇಶ್ ರವರಿಗೆ ಮೊದಲು ನನ್ನ ಧನ್ಯವಾದಗಳನ್ನು ತಿಳಿಸುತ್ತಿದ್ದೇನೆ.

    ಕೊನೆಯಲ್ಲಿ ಶಿಕ್ಷಕರು ಓಲ್ಟರ್ ಕೇಳಿದ್ದ ಒಂದು ಪ್ರಶ್ನೆಯನ್ನು ಉಲ್ಲೇಖಿಸಿರುತ್ತೀರಿ. ಬಹಳ ಸಂತೋಷವಾಯಿತು. ವಿಜ್ಞಾನ ಆಸಕ್ತರಿಗೆ ಇಂತಹ ವಿಷಯಗಳು ಮತ್ತಷ್ಟು ತಿಳಿಯುವ ಅಥವಾ ತಿಳಿದಿದ್ದನ್ನು ತಿಳಿಸುವ ಉತ್ಸುಕತೆ ಉಂಟಾಗುತ್ತದೆ. ಈಗ ವಿಚಾರಕ್ಕೆ ಬರುವುದಾದರೆ, ರಾತ್ರಿಯ ಆಕಾಶದಲ್ಲಿ ಹಲವಾರು ಕೋಟಿ ನಕ್ಷತ್ರಗಳು ಎಲ್ಲ ದಿಕ್ಕಿನಲ್ಲಿ ಇದ್ದರೂ, ಅವುಗಳಿಂದ ನಿರಂತರ ಬೆಳಕು ಬರುತ್ತಿದ್ದರೂ ಕೂಡ ಆಗಸದ ಬಣ್ಣ ಮಾತ್ರ ಕಪ್ಪು ಏಕೆ? ಈ ಪ್ರಶ್ನೆಗೆ ನನಗೆ ತಿಳಿದಿರುವ ಅತ್ಯಂತ ಸಮಾಧಾನಕರ ಉತ್ತರ ತಿಳಿಸಲು ಬಯಸುತ್ತೇನೆ.


    Provided by
    Provided by

    ಇದನ್ನು ತಿಳಿಯುವ ಮೊದಲು, ಈ ಸಂದರ್ಭದಲ್ಲಿ ನಾನು ಬಹಳ ಹಿಂದೆ ನಕ್ಷತ್ರಗಳ ‘ಟ್ರಯಾಂಗಲ್ ಥಿಯರಿ’ (ನಕ್ಷತ್ರಗಳ ತ್ರಿಕೋನ ಸಿದ್ಧಾಂತ) ಬಗ್ಗೆ ಒಂದು ಸಣ್ಣ ಚಿತ್ರಸಹಿತ ಲೇಖನ ಬರೆದಿದ್ದೆ. ಅದು ಬಾಲವಿಜ್ಞಾನ ಎಂಬ ಮಾಸ ಪತ್ರಿಕೆಯಲ್ಲಿ ಬಹಳ ಹಿಂದೆ ಪ್ರಕಟವಾಗಿತ್ತು. ಆ ಸಿದ್ಧಾಂತವನ್ನು ಇಲ್ಲಿ ನೆನಪಿಸಿಕೊಳ್ಳಲು ಬಯಸುತ್ತೇನೆ. ಕ್ಷಮೆ ಇರಲಿ ಈ ಸಿದ್ಧಾಂತದ ಬಗ್ಗೆ ಬಹುಶಃ ಶಿಕ್ಷಕರಿಗೆ ಈ ಮೊದಲೇ ತಿಳಿದಿರಬಹುದು ಎಂದು ಭಾವಿಸುತ್ತೇನೆ. ಈ ಸಿದ್ಧಾಂತದ ಪ್ರಕಾರ ನಮ್ಮ ಭೂಮಿಯಿಂದ ನೂರಾರು / ಸಾವಿರಾರು ಕೋಟಿ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ಹಲವಾರು ನಕ್ಷತ್ರಗಳ ಸ್ಥಾನ ನಾವು ನೋಡುತ್ತಿರುವ ದಿಕ್ಕಿನಲ್ಲಿ ಇರುವುದಿಲ್ಲ, ಅವು ಹಾಗೆ ಕಾಣಿಸುತ್ತಿರುತ್ತವೆ ಅಷ್ಟೇ, ಆದರೆ ಅವು ನಮ್ಮ ಬರಿಯ ಕಣ್ಣಿಗಾಗಲೀ, ಶಕ್ತಿಯುತ ಟೆಲಿಸ್ಕೋಪ್ ಆಗಲೀ ಅಥವಾ ನಮ್ಮ ವೈಜ್ಞಾನಿಕ ಸ್ಯಾಟಲೈಟ್ ಗಾಗಲೀ ಅವು ಕಾಣಿಸುತ್ತಿರುವ ದಿಕ್ಕಿನಲ್ಲಿ ಇರುವುದಿಲ್ಲ. ಹಲವಾರು ನಕ್ಷತ್ರಗಳು ನಮಗೆ ನೇರವಾಗಿಯೇ ಕಾಣಿಸುತ್ತಿರುತ್ತವೆ ಇದೂ ಕೂಡ ಸತ್ಯ. ಆದರೆ ಹಲವು ನಕ್ಷತ್ರಗಳು ಅವುಗಳ ಮಿನುಗುವ ಚಂಚಲತೆ ಹೇಳುವ ವಿಚಾರವೇ ಬೇರೆ ಇದರ ಬಗ್ಗೆ ನಂತರ ಹೇಳುತ್ತೇನೆ, ಹಾಗೆಯೇ ಸಮೀಪದ ನಕ್ಷತ್ರದ ಗುರುತ್ವದ ಪ್ರಭಾವದಿಂದ ಮತ್ತೊಂದು ಪಕ್ಕದ ನಕ್ಷತ್ರದ ಚಲನೆಯಲ್ಲಿನ ಏರಿಳಿತ ಮತ್ತು ಆ ನಕ್ಷತ್ರದ ಬೆಳಕಿನ ವಕ್ರೀಭವನ ಇವುಗಳನ್ನು ಪ್ರಮುಖವಾಗಿ ಪರಿಗಣಿಸಬೇಕಾಗುತ್ತದೆ.

    ಈಗ ಪ್ರಮುಖ ವಿಚಾರಕ್ಕೆ ಬರುವುದಾದರೆ, ಒಂದು ಉದಾಹರಣೆ ಮೂಲಕ ತಿಳಿಯಬಹುದು. ನಮ್ಮ ಭೂಮಿಗೆ ನೂರಾರು / ಸಾವಿರಾರು ಬೆಳಕಿನ ವರ್ಷಗಳಷ್ಟು ದೂರದಲ್ಲಿರುವ ಒಂದು ಅತ್ಯಂತ ಪ್ರಖರ ದೊಡ್ಡ ನಕ್ಷತ್ರ ಹಿಂದೆ ಮತ್ತೊಂದು ನಕ್ಷತ್ರ ಇದೆ ಎಂದು ಭಾವಿಸೋಣ ಅಂದರೆ ಕೋನದ ಪ್ರಕಾರ ಹೇಳುವುದಾದರೆ ನಮ್ಮ ಭೂಮಿಯಿಂದ 180 ಡಿಗ್ರಿ ಆಯಿತು, ಇದರ ಪ್ರಕಾರ ದೊಡ್ಡ ನಕ್ಷತ್ರವು ನಮಗೆ ನೇರವಾಗಿ ಕಾಣಿಸುತ್ತಿರುತ್ತದೆ, ಆದರೆ ಅದರ ಹಿಂದೆ ಇರುವ ನಕ್ಷತ್ರವು ನಮಗೆ ಕಾಣಿಸುವುದಿಲ್ಲ ಅಲ್ಲವೇ, ಈ ಹಿಂದೆ ಇರುವ ನಕ್ಷತ್ರವು ಹೊರ ಹೊಮ್ಮುವ ಬೆಳಕು ದೊಡ್ಡ ನಕ್ಷತ್ರದ ಸಮೀಪ ಹಾದು ಹೋಗುವಾಗ ಆ ದೊಡ್ಡ ನಕ್ಷತ್ರವು ತನ್ನ ಗುರುತ್ವದ ಪ್ರಭಾವದಿಂದ ವಕ್ರೀಭವಿಸಿ ಆ ಬೆಳಕು ನಮ್ಮ ಭೂಮಿಯನ್ನು ತಲುಪುವಂತಿದ್ದರೆ, ಆ ದೊಡ್ಡ ನಕ್ಷತ್ರ ಹಿಂದಿರುವ ನಕ್ಷತ್ರವೂ ಕೂಡ ನಮಗೆ ಈ ವಕ್ರೀಭವನದ ವಿದ್ಯಮಾನದಿಂದ ಮುಖಾಂತರ ಗೋಚರಿಸುತ್ತಿರುತ್ತದೆ. ಅಂದರೆ ನಾನು ಆಗಲೇ ಹೇಳಿದಂತೆ ಹಲವು ನಕ್ಷತ್ರಗಳ ಸ್ಥಾನ ನಾವು ನೋಡುತ್ತಿರುವ ದಿಕ್ಕಿನಲ್ಲಿ ಇರುವುದಿಲ್ಲ, ಇಂತಹ ವಿದ್ಯಮಾನಗಳು ನಕ್ಷತ್ರದ ಬೆಳಕಿನ ಚಂಚಲತೆ ಮತ್ತು ಗುರುತ್ವದಲ್ಲಿನ ಆ ಎರಡು ಕಾಯಗಳ ಚಲನೆಯಲ್ಲಿನ ಸೂಕ್ಷ್ಮ ವ್ಯತ್ಯಾಸದಿಂದ ಕಂಡುಹಿಡಿಯುತ್ತಾರೆ. ಹೀಗೆ ಸಾವಿರಾರು ಗ್ಯಾಲಾಕ್ಸಿಗಳ ಕೋಟ್ಯಂತರ ನಕ್ಷತ್ರಗಳಿಂದ ಹೊರ ಹೊಮ್ಮುವ ಬೆಳಕು ತಮ್ಮ ತಮ್ಮ ಸಮೀಪವಿರುವ ದೊಡ್ಡ ದೊಡ್ಡ ನಕ್ಷತ್ರಗಳ ಸಮೀಪ ಹಾದುಹೋಗುವಾಗ ಹಲವಾರು ಬಾರಿ ವಕ್ರೀಭವಿಸಿ ನಮ್ಮ ಭೂಮಿಯನ್ನು ತಲುಪುವ ಹೊತ್ತಿಗೆ ಬೆಳಕಿನ ಕಿರಣ ಅತ್ಯಂತ ಕ್ಷೀಣವಾಗಿರುತ್ತದೆ. ಹಾಗೆಯೇ ಶಿಕ್ಷಕರು ಹೇಳಿರುವ ಹಾಗೆ ಗೆಲಾಕ್ಸಿಯಲ್ಲಿನ ನಿಹಾರಿಕೆಗಳು, ಧೂಳಿನಕಣಗಳು, ಹೊಸ ಕಾಯದ ಉಗಮದ ಪೂರ್ವ ಮೋಡದಂತಹ ರಚನೆ ಇವೆಲ್ಲವೂ ಹತ್ತು ಹಲವು ಕೋಟಿ ಸಂಖ್ಯೆಯಲ್ಲಿ ಇರುತ್ತವೆ ಇವುಗಳು ತಮ್ಮ ಮೇಲೆ ಬಿದ್ದ ಬಹುತೇಕ ಬೆಳಕನ್ನು ಹೀರಿಕೊಂಡು ಸ್ವಲ್ಪವಷ್ಟೇ ಪ್ರತಿಫಲವಾಗಿರುವ ಸಾಧ್ಯತೆ ಇರುತ್ತದೆ. ಇಂತಹ ಬೆಳಕು ಸಾಗುವ ಹಾದಿಯಲ್ಲಿ ಮತ್ತೆ ಬೇರೆ ಬೇರೆ ಕಡೆ ಹಲವು ಬಾರಿ ಹೀರಿಕೆ, ಪ್ರತಿಫಲನದಂತಹ ಪ್ರಕ್ರಯೆಗೆ ಒಳಗಾಗುತ್ತವೆ, ಇಂತಹ ಪ್ರತಿಫಲಿತ ಕಿರಣಗಳಲು ಅತ್ಯಂತ ಕ್ಷೀಣವಾಗಿರುತ್ತವೆ, ಅದೆಷ್ಟೋ ಕಿರಣಗಳು ನಮ್ಮ ಭೂಮಿಯನ್ನು ತಲುಪುವುದೇ ಇಲ್ಲ.

    ಹಾಗೆಯೇ ಇಂದು ನಾವು ನೋಡುತ್ತಿರವ ನಕ್ಷತ್ರ ಇಂದಿನ ದಿನದ್ದಲ್ಲ ಹಲವು ಜ್ಯೋತಿರ್ವಷಗಳಷ್ಟು ಹಿಂದಿನದ್ದು, ಅಂದು ಆ ನಕ್ಷತ್ರದಿಂದ ಹೊರಟ ಬೆಳಕು ಇಂದು ನಮ್ಮ ಭೂಮಿಯನ್ನು ತಲುಪುತ್ತಿರುವುದರಿಂದ ಇಂದು ನಮಗೆ ಕಾಣಿಸುತ್ತಿರುತ್ತದೆ, ಒಂದು ವೇಳೆ ಆ ನಕ್ಷತ್ರ ನಶಿಸಿದರೂ ಇನ್ನು ಹಲವು ಕೋಟಿ ವರ್ಷಗಳವರೆವಿಗೆ ನಮಗೆ ಗೋಚರಿಸುತ್ತಲೇ ಇರುತ್ತದೆ. ನಮ್ಮ ಸೂರ್ಯನಿಂದ ಹೊರಟ ಬೆಳಕು ನಮ್ಮ ಭೂಮಿಗೆ ತಲುಪಲು 8.3 ನಿಮಿಷಗಳ ಕಾಲಾವಕಾಶ ಬೇಕು, ಹಾಗೆಯೇ ಸೌರವ್ಯೂಹದ ಕಡೆಯ ಗ್ರಹ ನೆಪ್ಚೂನ್ ತಲುಪಲು 4 ಗಂಟೆ 10 ನಿಮಿಷದ ಕಾಲಾವಕಾಶ ಬೇಕು (ನಮ್ಮ ಭೂಮಿಯ ಸಮಯದಂತೆ), ಹಾಗಿದ್ದರೂ ನೆಪ್ಚೂನ್ ಗ್ರಹದಲ್ಲಿ ಹಗಲಿನ ತಾಪಮಾನ –330 ಡಿಗ್ರಿ ಫ್ಯಾರನ್ ಹೀಟ್ ಅಥವಾ -– 200 ಡಿಗ್ರಿ ಸೆಲ್ಷಿಯಸ್ (ನೆಪ್ಚೂನ್ ಒಂದು ಅನಿಲ ಗೋಳ ಕಾಯ) ನೆಪ್ಚೂನ್ ಗ್ರಹದಲ್ಲಿ ನಮ್ಮ ಸೂರ್ಯ ಹೇಗೆ ಕಾಣಿಸುತ್ತಾನೆ ಎಂದರೆ; ನಮಗೆ ನಮ್ಮ ಭೂಮಿಯ ಮೇಲೆ ರಾತ್ರಿಯ ಹೊತ್ತು ಗುರು ಗ್ರಹ ಹೇಗೆ ಕಾಣಿಸುವುದೋ ಹಾಗೆ ಹಗಲು ಹೊತ್ತಿನಲ್ಲಿ ಸೂರ್ಯ ಕಾಣಿಸುತ್ತಿರುತ್ತಾನೆ. ನಮ್ಮ ಸೌರವ್ಯೂಹದಲ್ಲೇ ಹೀಗಿರುವಾಗ ಇನ್ನು ಅದೆಷ್ಟೋ ಕೋಟಿ, ಶತಕೋಟಿ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ನಕ್ಷತ್ರಗಳಿಂದ ಮೇಲೆ ತಿಳಿಸಿದ ಹಲವು ವಿದ್ಯಮಾನಗಳಿಗೆ ಒಳಗಾಗಿ ಬರುವ ಅತ್ಯಂತ ಕ್ಷೀಣ ಬೆಳಕು ನಮ್ಮ ರಾತ್ರಿಯ ಆಕಾಶ ಹೇಗೆ ತಾನೆ ಪ್ರಖರವಾಗಿ ಬೆಳಗಲು ಸಾಧ್ಯ?

    venugopal
    ವೇಣುಗೋಪಾಲ್

    ಸಂಪಾದಕರ ನುಡಿ

    ಪ್ರಿಯ ಓದುಗರೇ,

    ಈ ಸಂಚಿಕೆಯಲ್ಲಿ “ನಕ್ಷತ್ರಗಳ ಬೆಳಕಿದ್ದರೂ ರಾತ್ರಿ ಆಕಾಶ ಕಪ್ಪಾಗಿ ಕಾಣುವುದೇಕೆ?” ಎಂಬ ಕುತೂಹಲಕರ ಹಾಗೂ ಚಿಂತನೆಗೆ ದಾರಿ ತೆರೆದಿಡುವ ಪ್ರಶ್ನೆಯ ಆಳವಾದ ವಿವರಣೆ ನಿಮಗಾಗಿ ಪ್ರಕಟವಾಗಿದೆ. ವಿಜ್ಞಾನವನ್ನು ಕೇವಲ ಪಾಠಪುಸ್ತಕದ ಮಿತಿಗಳೊಳಗೆ ಸೀಮಿತಗೊಳಿಸದೆ, ಅದನ್ನು ನಮ್ಮ ದೈನಂದಿನ ಅನುಭವಗಳೊಂದಿಗೆ ಸಂಧಾನ ಮಾಡುವುದೇ ಇದರ ವಿಶೇಷತೆ.

    ವೇಣುಗೋಪಾಲ್ ಅವರು ತಮ್ಮ ವೈಜ್ಞಾನಿಕ ಮನೋಭಾವವನ್ನು ಹಂಚಿಕೊಂಡಿದ್ದು, ಓದುಗರಲ್ಲಿ ಇನ್ನಷ್ಟು ಪ್ರಶ್ನೆಗಳ ಹುಟ್ಟುಮಾಡಲು, ಹೊಸ ಜ್ಞಾನಕ್ಕಾಗಿ ಹುಡುಕಾಟ ಪ್ರೇರೇಪಿಸಲು ಸಹಕಾರಿಯಾಗಿದೆ. “ಟ್ರಯಾಂಗಲ್ ಥಿಯರಿ” ಯ ನೆನಪು, ನಕ್ಷತ್ರಗಳ ವಕ್ರೀಭವನದ ಕಲ್ಪನೆ ಹಾಗೂ ಆಕಾಶದ ಕತ್ತಲೆಯ ವೈಜ್ಞಾನಿಕ ಕಾರಣಗಳನ್ನು ಅವರು ವಿವರಿಸಿರುವುದು ಓದುಗರಲ್ಲಿ ಬಾಹ್ಯಾಕಾಶದ ಅರಿವನ್ನು ಮತ್ತಷ್ಟು ಗಾಢಗೊಳಿಸುತ್ತದೆ.

    ವಿಜ್ಞಾನವು ನಿಶ್ಚಿತ ಉತ್ತರವಲ್ಲ, ಅದು ನಿರಂತರ ಪ್ರಶ್ನೆಗಳ ಸರಮಾಲೆ. ಈ ಸಂಚಿಕೆಯಲ್ಲಿ ಪ್ರಕಟವಾಗಿರುವ ಲೇಖನ ಅದಕ್ಕೆ ಉತ್ತಮ ಉದಾಹರಣೆ. ಇಂತಹ ಲೇಖನಗಳು ಕಿರಿಯರಲ್ಲಿಯೂ ಹಿರಿಯರಲ್ಲಿಯೂ ಒಂದೇ ಸಮಾನ ಕುತೂಹಲವನ್ನು ಉಂಟುಮಾಡಿ ವಿಜ್ಞಾನಪ್ರೇಮವನ್ನು ಬೆಳೆಸಲಿ ಎಂಬುದು ನಮ್ಮ ಆಶಯ.

    —  ಸಂಪಾದಕರು


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಉದ್ಧಟತನ ಕಲಿಸಿದ ಪಾಠ

    January 7, 2026

    ವಾಸ್ತವ ಒಡೆದು ನೋಡಿದಾಗ?

    January 2, 2026

    ಮಧುಗಿರಿಯ ಹರಿಹರೇಶ್ವರ ತತ್ತ್ವವೇ ಇಂದಿನ ಸಮಾಜಕ್ಕೆ ಅಗತ್ಯ:  ಜ.18ರಂದು ಹೊಸ ವರ್ಷದ ಮೊದಲ ಅಮಾವಾಸ್ಯೆ ವಿಶೇಷ ದರ್ಶನ

    December 31, 2025

    Leave A Reply Cancel Reply

    Our Picks

    ಆರ್‌ ಸಿಬಿ ತಂಡದ ಆಟಗಾರನಿಗೆ ಪೋಕ್ಸೋ ಸಂಕಷ್ಟ: ನಿರೀಕ್ಷಣಾ ಜಾಮೀನು ಅರ್ಜಿ ವಜಾ, ಬಂಧನ ಭೀತಿ

    December 25, 2025

    ಇಸ್ರೊ ಮೈಲಿಗಲ್ಲು: ಅತ್ಯಂತ ಭಾರವಾದ ಎಲ್‌ ವಿಎಂ3 ರಾಕೆಟ್ ಮೂಲಕ ‘ಬ್ಲೂಬರ್ಡ್’ ಉಪಗ್ರಹ ಉಡಾವಣೆ

    December 24, 2025

    ವಿಶ್ವಕಪ್ ಗೆದ್ದ ಭಾರತದ ಮಹಿಳಾ ತಂಡಕ್ಕೆ ಟಾಟಾ ಮೋಟಾರ್ಸ್‌ನಿಂದ ‘ಸಿಯೆರಾ’ ಕಾರು ಉಡುಗೊರೆ!

    December 17, 2025

    ದೆಹಲಿ ಕಾರು ಸ್ಫೋಟ ಪ್ರಕರಣ: ತುಮಕೂರಿನಲ್ಲೂ ವಿಚಾರಣೆ!

    November 14, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಹೆತ್ತ ಮಗಳನ್ನೇ ವೇಶ್ಯಾವಾಟಿಕೆಗೆ ತಳ್ಳಿದ ಪಾಪಿ ತಂದೆ!

    January 8, 2026

    ಚಿಕ್ಕಮಗಳೂರು: ಹಣದ ಆಸೆಗಾಗಿ ಸ್ವಂತ ಅಪ್ರಾಪ್ತ ಮಗಳನ್ನೇ ವೇಶ್ಯಾವಾಟಿಕೆ ದಂಧೆಗೆ ತಳ್ಳಿದ ಅಮಾನವೀಯ ಘಟನೆ ಜಿಲ್ಲೆಯ ಅಜ್ಜಂಪುರ ತಾಲೂಕಿನಲ್ಲಿ ನಡೆದಿದೆ.…

    ಎಐ ಕ್ಷೇತ್ರದಲ್ಲಿ ತುಮಕೂರಿನ ಟಿ.ಎಸ್.ಪ್ರತೀಕ್ ಸಾಧನೆ: ಗಿನ್ನೆಸ್ ವರ್ಲ್ಡ್ ರೆಕಾರ್ಡ್

    January 8, 2026

    ಧರ್ಮಸ್ಥಳಕ್ಕೆ ಪಾದಯಾತ್ರೆ: ಮತ್ತಿಹಳ್ಳಿ ಗ್ರಾಮಸ್ಥರ ಭಕ್ತಿಗೆ ಯೋಜನಾಧಿಕಾರಿ ಉದಯ್ ಕೆ. ಮೆಚ್ಚುಗೆ

    January 8, 2026

    ದೇಹದಂತೆ ಪ್ರತಿನಿತ್ಯ ಬಾಯಿಯನ್ನು ಸ್ವಚ್ಛವಾಗಿಡಬೇಕು: ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ

    January 8, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.