ತುಮಕೂರು : ಬಹುಜನ ಸಮಾಜ ಪಾರ್ಟಿ ವತಿಯಿಂದ ‘ಜನಾಂದೋಲನ ತುಮಕೂರು’ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಯಿತು.
ಈ ಸಂದರ್ಭ ಮಾತನಾಡಿದ ಬಿಎಸ್ ಪಿ ಮುಖಂಡರು, ಭಾರತ ದೇಶವು ಸಂಪತ್ಭರಿತವಾದ ದೇಶವಾಗಿದೆ. ಆದರೆ ಈ ದೇಶದಲ್ಲಿ ಬಹುಸಂಖ್ಯಾತರು ಬಡವರಾಗಿದ್ದಾರೆ. ನಮ್ಮ ದೇಶದ ಭೂಮಿಯ ಒಡೆತನ ಬಂಡವಾಳ ಮತ್ತು ಅಧಿಕಾರ ಸ್ಥಾನಗಳನ್ನು ಜಾತಿ ವ್ಯವಸ್ಥೆಗೆ ಅನುಗುಣವಾಗಿ ಹಂಚಿಕೆಯಾಗಿವೆ, ಅಂದರೆ ಕೆಲವೇ ಕೆಲವು ಮೇಲ್ಜಾತಿ ಜನರ ಒಡೆತನದಲ್ಲಿ ಪ್ರಮಾಣದ ಕೃಷಿ ಭೂಮಿ ಕೈಗಾರಿಕೆಗಳು ಉದ್ದಿಮೆಗಳು ಮತ್ತು ನೌಕರಿಗಳು ಇಂದಿಗೂ ಉಳಿದಿದೆ. ಆದ್ದರಿಂದಲೇ ಬಹುಸಂಖ್ಯಾತರಾದ ಎಸ್ಸಿ ಎಸ್ಟಿ ಓಬಿಸಿ ಮತ್ತು ಧಾರ್ಮಿಕ ಅಲ್ಪಸಂಖ್ಯಾತರು ನಿರ್ಗತಿಕ ಬಡ ಕೂಲಿ ಕಾರ್ಮಿಕರಾಗಿ ಅನಕ್ಷರಸ್ಥರಾಗಿ ಹಾಗೂ ನಿರುದ್ಯೋಗಿಗಳಾಗಿದ್ದಾರೆ ಎಂದರು.
ಈ ಅಸಮಾನತೆಯನ್ನು ತೊಲಗಿಸಿ ಸರ್ವರಿಗೂ ಸಮಪಾಲು ನೀಡಬೇಕೆಂದು ಬಾಬಾಸಾಹೇಬರು ಸಂವಿಧಾನವು ಸರ್ಕಾರದ ನಿರ್ದೇಶನ ನೀಡಿದೆ. ಈ ನಿಟ್ಟಿನಲ್ಲಿ ನಡೆದ ಹಲವು ಜನಪರ ಚಳುವಳಿಗಳ ಫಲವಾಗಿ ಸರ್ಕಾರಗಳು ಭೂ ಪರಿಮಿತಿ ಕಾಯ್ದೆ ಭೂಸುಧಾರಣಾ ಕಾಯಿದೆ ಭೂ ಮಂಜೂರಾತಿ ಕಾಯ್ದೆ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಪರಭಾರೆ ನಿಷೇಧ ಕಾಯ್ದೆ ಕೈಗಾರಿಕಾ ಸಾಲ ನೀತಿ ಎಸ್ ಸಿ ಎಸ್ ಪಿ, ಟಿಎಸ್ಪಿ ಉದ್ಯೋಗದಲ್ಲಿ ಮೀಸಲಾತಿ ಶಿಕ್ಷಣದಲ್ಲಿ ಮೀಸಲಾತಿ ಮುಂತಾದ ಕಾಯ್ದೆಗಳನ್ನು ರೂಪಿಸಲಾಗಿದೆ. ಆದರೆ ಇಲ್ಲಿಯತನಕ ಆಳ್ವಿಕೆ ನಡೆಸಿರುವ ಜಾತಿವಾದಿ ಮನಸ್ಸುಳ್ಳ ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಪಕ್ಷಗಳು ಎಲ್ಲಾ ಸುಧಾರಣೆಗಳಿಗೆ ಸುಧಾರಣೆಗಳನ್ನ ಗಾಳಿಗೆ ತೂರಿ ಜಾತೀಯತೆ ಮತ್ತು ಬಡತನವನ್ನು ಪೋಷಿಸುವ ಕಾರ್ಯಕ್ರಮಗಳನ್ನು ಕಾರ್ಯರೂಪಕ್ಕೆ ತಂದಿದೆ ಬಡವರನ್ನು ಸಬಲೀಕರಣ ಮಾಡುವ ಯಾವುದೇ ಯೋಜನೆಯನ್ನು ವಿಪಕ್ಷಗಳು ಮಾಡಲಿಲ್ಲ ಎಂಬುದು ಸತ್ಯ ಎಂದರು.
ಸುಮಾರು ಮೂರು ತಲೆಮಾರುಗಳಿಂದಲೂ ಅತ್ಯಂತ ಕನಿಷ್ಠ ಹಣಕ್ಕೆ ಕೆಲಸ ಮಾಡುತ್ತಿರುವ ಗ್ರಾಮಸಹಾಯಕರ ಸೇವೆಯನ್ನು ಸರ್ಕಾರ ಕಡೆಗಣಿಸುತ್ತಿರುವುದು ಅನ್ಯಾಯ ಆದ್ದರಿಂದ ಇದನ್ನು ಅಗತ್ಯ ಸೇವೆ ಎಂದು ಪರಿಗಣಿಸಿ ಗ್ರಾಮ ಸಹಾಯಕರನ್ನು ಕಾಯಂಗೊಳಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವ್ಯಾಪ್ತಿಯ ಸಮಸ್ಯೆಗಳನ್ನು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕೊಳಗೇರಿಯಲ್ಲಿ ವಾಸಮಾಡುತ್ತಿರುವ ಬಡಕುಟುಂಬಗಳಿಗೆ ಹಕ್ಕು ಪತ್ರವನ್ನು ನೀಡಿ ಆ ಪ್ರದೇಶವನ್ನು ನಾಗರಿಕ ಸೌಲಭ್ಯಗಳನ್ನು ನೀಡಬೇಕು ಎಂದು ಬಹುಜನ ಸಮಾಜ ಪಾರ್ಟಿ ಒತ್ತಾಯಿಸುತ್ತದೆ ಜೊತೆಗೆ ನಿರ್ಮೂಲನ ಮಂಡಳಿ ಅಧಿಕಾರಿಗಳು ಭೂಮಾಫಿಯಾ ಗಳೊಂದಿಗೆ ಶಾಮೀಲಾಗಿ ಸ್ಲಂಗಳನ್ನು ಖಾಲಿ ಮಾಡಿಸುತ್ತಿರುವುದು ಖಂಡನೀಯವಾಗಿದೆ ಎಂದರು
ವರದಿ : ಎ.ಎನ್. ಪೀರ್, ತುಮಕೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB