nammatumakuru

    Subscribe to Updates

    Get the latest creative news from FooBar about art, design and business.

    What's Hot

    ಆರ್‌ ಎಸ್‌ ಎಸ್  ಶತಮಾನೋತ್ಸವ: ತುಮಕೂರಿನಲ್ಲಿ ಪಥ ಸಂಚಲನ

    October 19, 2025

    ಸಹಕಾರ ಕ್ಷೇತ್ರ: ದೇಶಕ್ಕೆ ಮಾದರಿ ಆಗುವಂತಹ ಕಾಯ್ದೆ ಜಾರಿಗೆ ತರಲಾಗಿದೆ: ಕೆ.ಎನ್.ರಾಜಣ್ಣ

    October 19, 2025

    ಶ್ರೀ ಶಂಭುಲಿಂಗೇಶ್ವರ ಸ್ವಾಮಿ ದೇವಸ್ಥಾನ: ಲಿಂಗಕ್ಕೆ ಕೊಳಗ ಪ್ರತಿಷ್ಠಾಪನೆ

    October 19, 2025
    Facebook Twitter Instagram
    ಟ್ರೆಂಡಿಂಗ್
    • ಆರ್‌ ಎಸ್‌ ಎಸ್  ಶತಮಾನೋತ್ಸವ: ತುಮಕೂರಿನಲ್ಲಿ ಪಥ ಸಂಚಲನ
    • ಸಹಕಾರ ಕ್ಷೇತ್ರ: ದೇಶಕ್ಕೆ ಮಾದರಿ ಆಗುವಂತಹ ಕಾಯ್ದೆ ಜಾರಿಗೆ ತರಲಾಗಿದೆ: ಕೆ.ಎನ್.ರಾಜಣ್ಣ
    • ಶ್ರೀ ಶಂಭುಲಿಂಗೇಶ್ವರ ಸ್ವಾಮಿ ದೇವಸ್ಥಾನ: ಲಿಂಗಕ್ಕೆ ಕೊಳಗ ಪ್ರತಿಷ್ಠಾಪನೆ
    • ಬೆಳಕಿನ ಹಬ್ಬ ದೀಪಾವಳಿ ಮತ್ತೆ ಬಂದಿದೆ: ಕತ್ತಲಿನಿಂದ ಬೆಳಕಿನ ಕಡೆಗೆ
    • ಸಿದ್ದರಾಮಯ್ಯ ಅವರು ಐದು ವರ್ಷ ಪೂರೈಸುತ್ತಾರೆ: ಶಾಸಕ ಅನಿಲ್ ಚಿಕ್ಕಮಾದು
    • ಬೆಂಗಳೂರು | ಸಂಚಾರ ಗಸ್ತು ವಾಹನಗಳಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಚಾಲನೆ
    • ಮಕ್ಕಳ ಪ್ರತಿಭೆಗೆ ವೇದಿಕೆ: ತುಮಕೂರಿನಲ್ಲಿ ನ.22ರಂದು ಚಿನ್ನರ ಚಪ್ಪರ: ನೋಂದಣಿ ಆರಂಭ
    • ಸರಗೂರು:  ರೈತನ ಮೇಲೆ ದಾಳಿ ನಡೆಸಿದ್ದ ಹುಲಿ ಕೊನೆಗೂ ಸೆರೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ನೀರಿಗಾಗಿ ಹೋರಾಟ ನಡೆಸಿದ ಹೋರಾಟಗಾರರಿಗೆ ಏ.21ರಂದು ಬೃಹತ್ ಸನ್ಮಾನ ಕಾರ್ಯಕ್ರಮ
    ಪಾವಗಡ April 20, 2025

    ನೀರಿಗಾಗಿ ಹೋರಾಟ ನಡೆಸಿದ ಹೋರಾಟಗಾರರಿಗೆ ಏ.21ರಂದು ಬೃಹತ್ ಸನ್ಮಾನ ಕಾರ್ಯಕ್ರಮ

    By adminApril 20, 2025No Comments2 Mins Read
    s shiva prasad

    ಪಾವಗಡ: ತಾಲೂಕಿಗೆ ಶಾಶ್ವತ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಬೇಕೆಂದು ಕಳೆದ ಹತ್ತು ವರ್ಷಗಳ ಹಿಂದೆ ಪಾವಗಡದಿಂದ ಬೆಂಗಳೂರಿನವರಿಗೂ ಪಾದಯಾತ್ರೆ ನಡೆಸಿದಂತಹ ಪಾವಗಡ ತಾಲೂಕು ಸಮಗ್ರ ನೀರು ಹೋರಾಟ ವೇದಿಕೆ, ರೈತ ಸಂಘ, ಪ್ರಗತಿಪರ ಸಂಘಟನೆಗಳು ಸೇರಿದಂತೆ ಮತ್ತಿತರ  ಹೋರಾಟಗಾರರ ಹೋರಾಟದ ಫಲವಾಗಿ ಪಾವಗಡ ತಾಲೂಕಿಗೆ ತುಂಗಭದ್ರಾ ಡ್ಯಾಮ್ ನಿಂದ ಶುದ್ಧ ಕುಡಿಯುವ ನೀರು ಸರಬರಾಜಾಗಲು ಕ್ಷಣಗಣನೆ ಶುರುವಾಗಿದೆ.

    ಈ ಹಿನ್ನಲೆಯಲ್ಲಿ  ಪಟ್ಟಣದ ಎಸ್ ಎಸ್ ಕೆ ಸಮುದಾಯ ಭವನದಲ್ಲಿ ಏ.21ನೇ ತಾರೀಕಿನ ಸೋಮವಾರದಂದು ಬೃಹತ್ ಸನ್ಮಾನ ಕಾರ್ಯಕ್ರಮವನ್ನು ಪಾವಗಡ ತಾಲೂಕು ಸಮಗ್ರ ನೀರು ಹೋರಾಟ ವೇದಿಕೆಯಿಂದ ಹಮ್ಮಿಕೊಳ್ಳಲಾಗಿದೆ ಎಂದು   ವೇದಿಕೆಯ ಅಧ್ಯಕ್ಷರಾದ ಎಸ್.ಶಿವಪ್ರಸಾದ್ ತಿಳಿಸಿದರು


    Provided by
    Provided by
    Provided by

    ಪಟ್ಟಣದ ನಿರಕ್ಷಣಾ ಮಂದಿರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಾವಗಡ ತಾಲೂಕು ಅನೇಕ ವರ್ಷಗಳಿಂದ ಶಾಶ್ವತ ಕುಡಿಯಲು ಮತ್ತು ಕೃಷಿಗೆ ನೀರಿಲ್ಲದೆ ನಲುಗಾಡಿದ್ದು 10 ವರ್ಷಗಳ ಹಿಂದೆ ನಡೆದ ಅನೇಕ ಪ್ರತಿಭಟನೆ,ಹೋರಾಟಗಳ ಫಲವಾಗಿ ತುಂಗಭದ್ರಾ ಕುಡಿಯುವ ನೀರು ಬರುತ್ತಿದ್ದು, ಈ ಶುಭಗಳಿಗೆಯಲ್ಲಿ ಹೋರಾಟಗಾರರ ಸನ್ಮಾನಿಸಲು ತೀರ್ಮಾನಿಸಲಾಗಿದ್ದು ಅದೇ ಸಂದರ್ಭದಲ್ಲಿ ಇನ್ನಿತರ ನೀರಾವರಿ ಯೋಜನೆಗಳನ್ನ ಶೀಘ್ರವಾಗಿ ಜಾರಿಗೊಳಿಸಲು ಹಕ್ಕೋತಾಯ ಮಂಡಿಸಲಾಗುವುದೆಂದು ತಿಳಿಸಿದರು

    ವೇದಿಕೆಯ ಕಾರ್ಯದರ್ಶಿ ಸೊಗಡು ವೆಂಕಟೇಶ್ ಮಾತನಾಡಿ, ಸೋಮವಾರ ಬೆಳಗ್ಗೆ 10 ಗಂಟೆಗೆ ಪಟ್ಟಣದ ಗುರುಭವನ ಮೈದಾನದಿಂದ ಬಳ್ಳಾರಿ ರಸ್ತೆಯ ಮೂಲಕ ವಿವಿಧ ಸಂಸ್ಕೃತಿಕ ಕಲಾತಂಡಗಳು ರೈತರು ಹೋರಾಟಗಾರರ ಬೃಹತ್ ಮೆರವಣಿಗೆಯ ನಂತರ ಎಸ್ ಎಸ್ ಕೆ ಸಮುದಾಯ ಭವನದಲ್ಲಿ ವೇದಿಕೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದಲ್ಲಿ 200 ಕ್ಕೂ ಅಧಿಕ ಜನ ಹೋರಾಟಗಾರರನ್ನು ಸನ್ಮಾನಿಸಲಾಗುವುದು ಈ ಒಂದು ಸನ್ಮಾನ್ಯ ಮುಂದಿನ ಪೀಳಿಗೆಗೆ ದಿಟ್ಟ ಹೆಜ್ಜೆಯಂತಿರಲು ಸ್ಪೂರ್ತಿಯೋಗಲು ತಾವೆಲ್ಲ ಪಾಲ್ಗೊಂಡು ಸಹಕರಿಸಬೇಕೆಂದು ತಾಲೂಕಿನ ಜನತೆಗೆ ವಿನಂತಿಸಿದರು

    ಮೆರವಣಿಗೆಯನ್ನು ಉದ್ಘಾಟನೆಯನ್ನು ರಾಮಕೃಷ್ಣ ಸೇವಾಶ್ರಮದ ಜಪಾನಂದ ಸ್ವಾಮೀಜಿ, ಗುರುಗುಂಡ ಮಹಾ ಸಂಸ್ಥಾನ ಮಠದ ನಂಜಾವಧೂತ ಸ್ವಾಮೀಜಿ, ಬಾಳೆಹೊನ್ನೂರು ಶಾಖ ಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಏಲಾರಂಪುರ ಮಠದ ಶ್ರೀ ಹನುಮಂತನಾಥ ಮಹಾಸ್ವಾಮೀಜಿ, ಸಂಸ್ಥಾನದ ವಾಲ್ಮೀಕಿ ಸಂಜಯ್ ಕುಮಾರ್ ಸ್ವಾಮೀಜಿ ಸರ್ವಧರ್ಮ ಶಾಂತಿ ಪೀಠದ ಸಿದ್ದಾಪುರ ರಮೂರ್ತಿ ಸ್ವಾಮೀಜಿಯವರು ನೆರವೇರಿಸಲಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಪೂಜಾರಪ್ಪ, ರೈತ ಸಂಘದ ಅಧ್ಯಕ್ಷರಾದ ಜಿ.ನರಸಿಂಹ ರೆಡ್ಡಿ, ಚಿಂತಕರಾದ ಪುರುಷೋತ್ತಮ ರೆಡ್ಡಿ, ಜೆಡಿಎಸ್ ಪಕ್ಷದ ಗೌರವಾಧ್ಯಕ್ಷರಾದ ರಾಜಶೇಖರಪ್ಪ, ಮಾತನಾಡಿದರು

    ಮುಖಂಡರಾದ ಜಿ ಟಿ ಗಿರೀಶ್, ಶಿವಕುಮಾರ್ ಸಾಕೇಲ್, ಕಾವಲಗೇರಿ ರಾಮಾಂಜಿ, ಬ್ಯಾಡನೂರು ಶಿವು, ಸೇರಿದಂತೆ ಹಲವರು ಹಾಜರಿದ್ದರು.

    ವರದಿ: ನಂದೀಶ್ ನಾಯ್ಕ ಪಿ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW

    admin
    • Website

    Related Posts

    ‘ನಮ್ಮ ಊರು ನಮ್ಮ ಕೆರೆ’ ಕಾರ್ಯಕ್ರಮದಡಿ ನ್ಯಾಯದಗುಂಟೆ ಗ್ರಾಮದಲ್ಲಿ ಕೆರೆಗೆ ಗುದ್ದಲಿ ಪೂಜೆ

    October 17, 2025

    ಶಿಕ್ಷಕ ರಾಜಗೋಪಾಲ ಅವರಿಗೆ ‘ಕರ್ನಾಟಕ ವಾಲ್ಮೀಕಿರತ್ನ ಪ್ರಶಸ್ತಿ – 2025’

    October 17, 2025

    ನಾಗಶಂಕರ್ ಅವರಿಗೆ ಕರುನಾಡ ರತ್ನ ಶ್ರೀ ಪ್ರಶಸ್ತಿ ಪ್ರದಾನ

    October 13, 2025

    Comments are closed.

    Our Picks

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    ಖ್ಯಾತ ತಮಿಳು ಹಾಸ್ಯ ನಟ ರೋಬೋ ಶಂಕರ್‌ ನಿಧನ

    September 19, 2025

    ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇಲಿ ಕಚ್ಚಿ ನವಜಾತ ಶಿಶು ಸಾವು!

    September 4, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಆರ್‌ ಎಸ್‌ ಎಸ್  ಶತಮಾನೋತ್ಸವ: ತುಮಕೂರಿನಲ್ಲಿ ಪಥ ಸಂಚಲನ

    October 19, 2025

    ತುಮಕೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ ಎಸ್‌ ಎಸ್) ಶತಮಾನೋತ್ಸವದ ಪ್ರಯುಕ್ತ ನಗರದಲ್ಲಿ ಶನಿವಾರ ಸಂಘ ಶತಾಬ್ದ ಪಥ…

    ಸಹಕಾರ ಕ್ಷೇತ್ರ: ದೇಶಕ್ಕೆ ಮಾದರಿ ಆಗುವಂತಹ ಕಾಯ್ದೆ ಜಾರಿಗೆ ತರಲಾಗಿದೆ: ಕೆ.ಎನ್.ರಾಜಣ್ಣ

    October 19, 2025

    ಶ್ರೀ ಶಂಭುಲಿಂಗೇಶ್ವರ ಸ್ವಾಮಿ ದೇವಸ್ಥಾನ: ಲಿಂಗಕ್ಕೆ ಕೊಳಗ ಪ್ರತಿಷ್ಠಾಪನೆ

    October 19, 2025

    ಬೆಳಕಿನ ಹಬ್ಬ ದೀಪಾವಳಿ ಮತ್ತೆ ಬಂದಿದೆ: ಕತ್ತಲಿನಿಂದ ಬೆಳಕಿನ ಕಡೆಗೆ

    October 19, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.