ಬಳ್ಳಾರಿ: ವಿವಾಹಿತ ಪುರುಷನಿಗೆ ವಿವಾಹಿತ ಮಹಿಳೆ ಮೇಲೆ ಲವ್ ಶುರುವಾಗಿ, ಗಂಡನಿಂದ ದೂರ ಉಳಿದು ಪ್ರಿಯಕರನೊಂದಿಗೆ ನೆಲೆಸಿದ್ದಳು. ಪ್ರಿಯಕರನೊಂದಿಗೆ ಇದ್ದುಕೊಂಡು ಭರ್ಜರಿ ಹಣ ಖರ್ಚು ಮಾಡಿ ಕೊನೆಗೆ ಮಹಿಳೆ ಮರಳಿ ಪತಿಯೊಂದಿಗೆ ಹಿಂತಿರುಗಿ ಹೋಗಿದ್ದಾಳೆ.
ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದವರು ಮದುವೆಯಾಗಿದ್ದು, ಇಬ್ಬರು ಮಕ್ಕಳು ಕೂಡ ಇದ್ದರೂ, ರೊಟ್ಟಿ ತರಲೆಂದು ಹೋದಾಗ ರೊಟ್ಟಿ ಮಾಡುವ ಸುಜಾತಾಳ ಮೇಲೆ ಲವ್ ಶುರುವಾಗಿ ಹೋಯ್ತು. ಆಕೆಯೂ ವಿವಾಹಿತಳಾಗಿದ್ದು, ಆಕೆಗೆ ಒಂದು ಮಗುವಿದೆ.
ಒಂದು ರೊಟ್ಟಿಯಿಂದ ಶುರುವಾದ ಪ್ರೀತಿ ಪ್ರೇಮದಿಂದಾಗಿ ಸಜಾತ ತನ್ನ ಗಂಡನನ್ನು ಬಿಟ್ಟು ಸೌದತ್ತಿ ಜೊತೆ ಓಡಿ ಹೋಗಿ ಕಳೆದ ಆರು ತಿಂಗಳಿನಿಂದ ಬಳ್ಳಾರಿಯಲ್ಲಿ ನೆಲೆಸಿದ್ದರು. ಇತ್ತ, ಪತ್ನಿ ಕಾಣೆಯಾಗಿದ್ದಾಳೆ ಎಂದು ಪತಿ ಮಹೇಶ್ ಮಹಾರಾಷ್ಟ್ರ ಸಾಂಗ್ಲಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದರು.
ಅದರಂತೆ ಮಹಿಳೆಯನ್ನು ಪ್ರಿಯಕರನ ಜೊತೆ ಪತ್ತೆ ಹಚ್ಚಿದ ಸಾಂಗ್ಲಿ ಪೊಲೀಸರು ರಾಜಿ ಪಂಚಾಯ್ತಿ ನಡೆಸಿದ್ದಾರೆ. ಹೀಗೆ ಪ್ರಿಯಕರನ ಜೊತೆಗಿದ್ದ ಸುಜಾತ ಅಲ್ಲಿಗೆ ಇಲ್ಲಿಗೆ ಎಂದು ಸುತ್ತಾಡಿ, ಭರ್ಜರಿ ಹಣ ಖರ್ಚು ಮಾಡಿಸಿದ ಬಳಿಕ ಪ್ರಿಯಕರನಿಗೂ ಮೋಸ ಮಾಡಿ, ಕೊನೆಗೆ ತನ್ನ ಗಂಡನಿಗೆ ದೂರವಾಣಿ ಕರೆ ಮಾಡಿ ಮರಳಿ ಗಂಡನ ಜೊತೆ ಹೋಗಿದ್ದಾಳೆ.
ಇತ್ತ, ತನ್ನ ಪ್ರೇಯಸಿ ಬೇಕು ಅಂತಾ ಸಿದ್ದಗೊಂಡ ಪ್ರಿಯಕರ ಬಳ್ಳಾರಿ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪ್ರೇಯಸಿ ಸುಜಾತ ಹುಡುಕಾಟಕ್ಕಾಗಿ ಕಚೇರಿ ಕಚೇರಿ ಅಲೆಯುತ್ತಿದ್ದಾನೆ.


