nammatumakuru

    Subscribe to Updates

    Get the latest creative news from FooBar about art, design and business.

    What's Hot

    ತುಮಕೂರು |  ಬೇಗೂರು ಡೇರಿ ಸೂಪರ್ ಸೀಡ್: ಪ್ರತಿಭಟನೆ

    October 4, 2025

    ದೇಶಕ್ಕೆ ಅನ್ನ ನೀಡುವ ರೈತನ ಯಾರು ಕೂಡ ಮರೆಯಬಾರದು: ವೀರಬಸವ ಮಹಾಸ್ವಾಮಿ

    October 4, 2025

    ನಕ್ಷತ್ರಗಳ ಬೆಳಕ ಹೊರತಾಗಿಯೂ ರಾತ್ರಿ ಆಕಾಶ ಕಪ್ಪೇಕೆ ?

    October 4, 2025
    Facebook Twitter Instagram
    ಟ್ರೆಂಡಿಂಗ್
    • ತುಮಕೂರು |  ಬೇಗೂರು ಡೇರಿ ಸೂಪರ್ ಸೀಡ್: ಪ್ರತಿಭಟನೆ
    • ದೇಶಕ್ಕೆ ಅನ್ನ ನೀಡುವ ರೈತನ ಯಾರು ಕೂಡ ಮರೆಯಬಾರದು: ವೀರಬಸವ ಮಹಾಸ್ವಾಮಿ
    • ನಕ್ಷತ್ರಗಳ ಬೆಳಕ ಹೊರತಾಗಿಯೂ ರಾತ್ರಿ ಆಕಾಶ ಕಪ್ಪೇಕೆ ?
    • ಜನ ಅಲೆಯುವುದನ್ನು ತಪ್ಪಿಸಲು ಪ್ರಜಾಸೌಧ: ಅನಿಲ್ ಚಿಕ್ಕಮಾದು
    • ಬೆಳಕುಣಿ ಚೌದ್ರಿ ಗ್ರಾಮದಲ್ಲಿ ಭವಾನಿ ಮಾತಾ ದೇವಿ ಮೆರವಣಿಗೆ
    • ಪಾವಗಡ | ಕೆ.ಟಿ.ಹಳ್ಳಿ ಗ್ರಾಮದಲ್ಲಿ ಕೆಂಪೇಗೌಡರ ಪುತ್ಥಳಿ ಅನಾವರಣ
    • ತಿಮ್ಮಾಪುರದಲ್ಲಿ ಶ್ರೀ ಬಾಲಾಜಿ ಮಠ ಪ್ರತಿಷ್ಠಾಪನೆ:  ನಾದಾಬ್ರಹ್ಮ ಯೋಗದಿಂದ ಆರೋಗ್ಯ ಕ್ಷೇಮದ ಸಂದೇಶ
    • ವೈ.ಎನ್.ಹೊಸಕೋಟೆ | ಕಸ್ತೂರಿ ತಿಲಕ ವಂಶಜರ ಜಂಬೂಸವಾರಿ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕರ್ನಾಟಕ ರಾಜ್ಯದ ಕುರಿತು ಕನ್ನಡಿಗರಲ್ಲಿ ಸ್ವೀಕೃತ ಕಲ್ಪನೆಯಿದೆ: ಪ್ರೊ.ರಾಜೇಂದ್ರಚೆನ್ನಿ
    ತುಮಕೂರು December 14, 2024

    ಕರ್ನಾಟಕ ರಾಜ್ಯದ ಕುರಿತು ಕನ್ನಡಿಗರಲ್ಲಿ ಸ್ವೀಕೃತ ಕಲ್ಪನೆಯಿದೆ: ಪ್ರೊ.ರಾಜೇಂದ್ರಚೆನ್ನಿ

    By adminDecember 14, 2024No Comments2 Mins Read
    shishunala sharifa

    ತುಮಕೂರು: ಕರ್ನಾಟಕರಾಜ್ಯದಕುರಿತುಕನ್ನಡಿಗರಲ್ಲಿ ಸ್ವೀಕೃತ ಕಲ್ಪನೆಯಿದೆ. ಕವಿರಾಜ ಮಾರ್ಗದಲ್ಲಿ ಕನ್ನಡ ರಾಜ್ಯದ ಕುರಿತು, ಕನ್ನಡಿಗರ ಬಗ್ಗೆ ಉಲ್ಲೇಖವಿದ್ದರೂ ಕರ್ನಾಟಕ ಏಕೀಕರಣದ ನಂತರವೇ ಕನ್ನಡ ಸಮುದಾಯಗಳು ಒಂದೇ ಸೂರಿನಡಿ ನೆಲೆಕಂಡಿದ್ದುಎಂದು ಲೇಖಕ ಪ್ರೊ.ರಾಜೇಂದ್ರಚೆನ್ನಿ ತಿಳಿಸಿದರು.

    ತುಮಕೂರು ವಿಶ್ವವಿದ್ಯಾನಿಲಯಸಂತ ಶಿಶುನಾಳ ಶರೀಫಅಧ್ಯಯನ ಪೀಠವು ಶುಕ್ರವಾರ ಆಯೋಜಿಸಿದ್ದ ‘ಸ್ಟೇಟ್ ಮ್ಯಾಟರ್ಸ್: ಕನ್ನಡ ಸಬ್–ನ್ಯಾಷನಲಿಸಂಅಂಡ್ ಸ್ಟೇಟ್ಫಾರ್ಮೆಷನ್’ ಪುಸ್ತಕದಕುರಿತು ಮಾತನಾಡಿದರು.


    Provided by
    Provided by
    Provided by

    ಕರ್ನಾಟಕ ಏಕೀಕರಣಕ್ಕೂ ಮುನ್ನಕನ್ನಡ ಮಾತನಾಡುವ ಸಮುದಾಯಗಳು 30 ತುಂಡುಗಳಾಗಿದ್ದವು. ಸಮುದಾಯಗಳನ್ನು ತುಂಡರಿಸಿ ಬ್ರಿಟಿಷ್ ಸರ್ಕಾರ ಆಡಳಿತ ನಡೆಸುತ್ತಿತ್ತು. ಈ ನಡೆಯಿಂದ ಕನ್ನಡಿಗರು ಒಗ್ಗೂಡಿ ಬಾಳಲು ಸಾಧ್ಯವಾಗಿರಲಿಲ್ಲ. ಏಕೀಕರಣದ ಏಕರೂಪ ಚಳುವಳಿ ವಿರೋಧಾಭಾಸದ ವೈರುಧ್ಯಗಳಿಂದ ಕೂಡಿ ಕರ್ನಾಟಕ ರಾಜ್ಯವಾಯಿತು ಎಂದು ತಿಳಿಸಿದರು.

    ಒಕ್ಕಲಿಗರ ಪ್ರಾಬಲ್ಯ ಹೊಂದಿದ್ದಅಂದಿನ ಮೈಸೂರು ರಾಜ್ಯ ಏಕೀಕರಣವನ್ನು ವಿರೋಧಿಸಿತು. ಮೇಲ್ಜಾತಿಯವರ, ದಲಿತರ, ಇತರೆ ಸಮುದಾಯಗಳ ಭಾಗವಹಿಸುವಿಕೆ ಅನುಸಂಧಾನ ಮಾರ್ಗವನ್ನುಕಂಡಿತು. ಆಧುನಿಕ ಮುದ್ರಣ ಯಂತ್ರಗಳ ಸಹಾಯದಿಂದ ಬ್ರಿಟಿಷರು ಧಾರ್ಮಿಕ ವಲಯದಿಂದ ಪುಸ್ತಕಗಳನ್ನು ಜಾತ್ಯತೀತ ವಲಯಕ್ಕೆ ತಂದರು. ಕ್ರಿಶ್ಚಿಯನ್ ಮಿಷನರಿಗಳಲ್ಲಿ ಕನ್ನಡದ ಅರಿವನ್ನು ಮೂಡಿಸುವ ಕಾರ್ಯಗಳು ಚುರುಕುಗೊಂಡವು ಎಂದು ತಿಳಿಸಿದರು.

    ಕ್ರಿಶ್ಚಿಯನ್ ಮಿಷನರಿಗಳಲ್ಲಿ ಮತಾಂತರದ ಹೊರತಾಗಿಕನ್ನಡ ಭಾಷೆಯನ್ನು ಬೆಳೆಸುವ ಅರಿವಿನ ಕೆಲಸ ಪ್ರವೃತ್ತಿಯಾಯಿತು. ಆಲೂರು ವೆಂಕಟರಾವ್ ಅವರಿಗೆ ಕನ್ನಡ ಭಾಷೆಯ ಮೇಲಿದ್ದ ಉದಾರ ಮನೋಭಾವ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರಿಗಿದ್ದ ಪ್ರಾಯೋಗಿಕ ಮನಸ್ಥಿತಿ, ಕುವೆಂಪು ಅವರ ಭಾಷಾ ಪ್ರಬುದ್ಧತೆ ಕನ್ನಡವನ್ನು ಶಿಖರಕ್ಕೇರಿಸಿತು ಎಂದರು.

    ಲೇಖಕ ಪ್ರೊ.ಚಂದನ್ ಗೌಡ ಪುಸ್ತಕದ ಕುರಿತು ಮಾತನಾಡಿ, ರಾಜ್ಯ ಮತ್ತು ಭಾಷೆಯ ಅಸ್ಮಿತೆ ಕುರಿತು ಗಂಭೀರವಾಗಿ ವಿಚಾರ ಮಾಡಬೇಕಿದೆ. ಬ್ರಿಟಿಷರು ತೊರೆದ ಪ್ರಾಂತ್ಯಗಳನ್ನು ಒಗ್ಗೂಡಿಸಿ ರಾಷ್ಟ್ರ ಮಾಡುವುದರಲ್ಲಿಎಷ್ಟರ ಮಟ್ಟಿಗೆ ಸಫಲರಾದೆವು ಎಂಬುದು ಪ್ರಶ್ನಾರ್ಥಕ. ರಾಜಕೀಯದಿಂದ ಸಮುದಾಯಗಳಲ್ಲಿ ಸಮಾನತೆ ಮಾಯವಾಗಿದೆ ಎಂದರು.

    ಕುವೆಂಪು ಅವರ ‘ಎಲ್ಲಾದರು ಇರು; ಎಂತಾದರು ಇರು; ಎಂದೆಂದಿಗು ನೀ ಕನ್ನಡವಾಗಿರು’, ‘ವಿಶ್ವಮಾನವ’ ಸಂದೇಶ ಈಗಿನ ಕಾಲಕ್ಕೆ ಎಷ್ಟು ಪ್ರಸ್ತುತವೆಂದು ಆಲೋಚಿಸುವ ಸಂದರ್ಭವಾಗಿದೆ. ಕನ್ನಡದ ರಾಷ್ಟ್ರೀಯತೆಯನ್ನು ಚಾರಿತ್ರಿಕವಾಗಿ ತೊರಿಸುವ ಅಧ್ಯಯನಗಳಿಗೆ ಕೊರತೆಯಿದೆ. ಕರ್ನಾಟಕ ರಾಜ್ಯ ಪೂರ್ವ ಸಿದ್ಧತೆಯಾಗಿರಲಿಲ್ಲವೆಂಬ ಸತ್ಯ ಈಗಲಾದರೂ ಅರಿಯಬೇಕಿದೆ ಎಂದು ತಿಳಿಸಿದರು.

    ಪ್ರಾಸ್ತಾವಿಕ ನುಡಿಗಳನ್ನಾಡಿದ ಸಂತ ಶಿಶುನಾಳ ಶರೀಫ ಅಧ್ಯಯನ ಪೀಠದ ನಿರ್ದೇಶಕ ಪ್ರೊ.ಎನ್.ಎಸ್. ಗುಂಡೂರ, ಅಧ್ಯಯನ ಪೀಠಗಳು ಕಾರ್ಯಪ್ರವೃತ್ತರಾಗಬೇಕು. ಅಧ್ಯಯನಶೀಲ ಚರ್ಚೆಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಬೇಕು. ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯದ ಕುರಿತು ವಿಚಾರ ಸಂಕಿರಣಗಳಾಗಬೇಕು. ಕನ್ನಡದ ಬೌದ್ಧಿಕ ಲೋಕಕ್ಕೆ ಅಧ್ಯಯನದ ಕೊರತೆಯಿದೆ ಎಂದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx

    admin
    • Website

    Related Posts

    ತುಮಕೂರು |  ಬೇಗೂರು ಡೇರಿ ಸೂಪರ್ ಸೀಡ್: ಪ್ರತಿಭಟನೆ

    October 4, 2025

    ತುಮಕೂರು | ಸಮೀಕ್ಷೆಗೆ ತೆರಳಿದ್ದ ಶಿಕ್ಷಕಿಗೆ ಮುಸ್ಲಿಂ ಎಂಬ ಕಾರಣಕ್ಕೆ ಅವಮಾನ!

    October 4, 2025

    ತುರ್ತು ಪರಿಸ್ಥಿತಿಯಲ್ಲಿ ಸ್ವಯಂ ಸೇವಕರ ಬಲಿದಾನ ಮರೆಯಬಾರದು: ಆರ್ ಎಸ್ ಎಸ್ ಮುಖಂಡ ಉಮೇಶ್‌

    October 3, 2025

    Comments are closed.

    Our Picks

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    ಖ್ಯಾತ ತಮಿಳು ಹಾಸ್ಯ ನಟ ರೋಬೋ ಶಂಕರ್‌ ನಿಧನ

    September 19, 2025

    ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇಲಿ ಕಚ್ಚಿ ನವಜಾತ ಶಿಶು ಸಾವು!

    September 4, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ತುಮಕೂರು |  ಬೇಗೂರು ಡೇರಿ ಸೂಪರ್ ಸೀಡ್: ಪ್ರತಿಭಟನೆ

    October 4, 2025

    ತುಮಕೂರು: ಸಕಾರಣವಿಲ್ಲದೆ ಡೇರಿ ಆಡಳಿತ ಮಂಡಳಿ ವಜಾ ಮಾಡಿರುವುದನ್ನು ವಿರೋಧಿಸಿ ಕುಣಿಗಲ್ ತಾಲ್ಲೂಕು ಬೇಗೂರು ಹಾಲು ಉತ್ಪಾದಕರ ಸಹಕಾರ ಸಂಘದ…

    ದೇಶಕ್ಕೆ ಅನ್ನ ನೀಡುವ ರೈತನ ಯಾರು ಕೂಡ ಮರೆಯಬಾರದು: ವೀರಬಸವ ಮಹಾಸ್ವಾಮಿ

    October 4, 2025

    ನಕ್ಷತ್ರಗಳ ಬೆಳಕ ಹೊರತಾಗಿಯೂ ರಾತ್ರಿ ಆಕಾಶ ಕಪ್ಪೇಕೆ ?

    October 4, 2025

    ಜನ ಅಲೆಯುವುದನ್ನು ತಪ್ಪಿಸಲು ಪ್ರಜಾಸೌಧ: ಅನಿಲ್ ಚಿಕ್ಕಮಾದು

    October 4, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.