ಮಧುಗಿರಿ: ತಾಲೂಕು ಆಡಳಿತ ಹಾಗೂ ಅಗ್ನಿ ಬನ್ನಿರಾಯಸ್ವಾಮಿ ಸಂಘದ ವತಿಯಿಂದ ಇಂದು ಅಗ್ನಿಬನ್ನಿರಾಯ ಸ್ವಾಮಿಯ ಜಯಂತೋತ್ಸವ ಸರಳವಾಗಿ ನೆರವೇರಿತು.
ಈ ಸಂದರ್ಭದಲ್ಲಿ ಅಗ್ನಿ ಬನ್ನಿ ರಾಯರ ತಾಲೂಕು ಅಧ್ಯಕ್ಷರಾದ ರಂಗನಾಥ ಮಾತನಾಡಿ, ತಿಗಳ ಜನಾಂಗದವರು ನಾವು, ಸ್ವಲ್ಪ ಜಮೀನುಗಳನ್ನು ಹೊಂದಿದ್ದು, ನಮ್ಮ ಕುಲಕಸುಬು ಸೊಪ್ಪು, ತರಕಾರಿ, ಹಣ್ಣು ಇನ್ನು ಮುಂತಾದ ವಸ್ತುಗಳ ಮಾರಾಟದಿಂದ ಜೀವನ ನಡೆಸುತ್ತಿದ್ದು, ನಾವು ಸ್ವಾಭಿಮಾನಿಗಳ ಬದುಕನ್ನು ಕಟ್ಟಿಕೊಂಡಿದ್ದೇವೆ ಎಂದರು.
ಅಗ್ನಿ ಬನ್ನಿ ರಾಯರ ಜನಾಂಗಕ್ಕೆ ಸರ್ಕಾರ ಬೆಂಬಲ ನೀಡಿ, ಇಂದು ಎಲ್ಲಾ ಜನಾಂಗದವರು ಅವರವರ ಜಯಂತೋತ್ಸವ ಆಚರಿಸುವ ರೀತಿ, ನಮ್ಮ ಜಾತಿಗೂ ಜಯಂತೋತ್ಸವ ಆಚರಿಸಲು ಅನುವು ಮಾಡಿಕೊಟ್ಟು ಸಹಕರಿಸಿರುತ್ತಾರೆ ಮತ್ತು ತಿಗಳ ಅಭಿವೃದ್ಧಿ ನಿಗಮ ಹಾಗೂ ಎಲ್ಲಾ ಇಲಾಖೆಯ ಸೌಲಭ್ಯಗಳು ರಾಜಕೀಯದಲ್ಲಿ ಗುರುತಿಸಿಕೊಳ್ಳಲು ಸರ್ಕಾರ ಸೌಲಭ್ಯ ದೊರಕಿಸಿದೆ. ಸರ್ಕಾರಕ್ಕೆ ನಾವು ಗೌರವ ಸಲ್ಲಿಸುತ್ತೇವೆ ಎಂದು ತಿಳಿಸಿದರು.
ಶಿರಸ್ತೇದಾರ್ ಶ್ರೀನಿವಾಸ ರವರು ಮಾತನಾಡಿ, ಇನ್ನು ಮುಂದೆ ವಿಜೃಂಭಣೆಯಿಂದ ನಮ್ಮ ತಾಲೂಕಿನಲ್ಲಿ ಜಯಂತೋತ್ಸವ ಆಚರಣೆ ಮಾಡಲು ನಾವು ಸಹಕರಿಸುತ್ತೇವೆ. ಮುಂದಿನ ದಿನಗಳಲ್ಲಿ ಒಟ್ಟಾಗಿ ತಾಲೂಕಿನ ಆಚರಣೆ ಮಾಡಿ, ನಾವು ನಮ್ಮ ಇಲಾಖೆಯಿಂದ ನಿಮಗೆ ಎಲ್ಲಾ ರೀತಿಯಲ್ಲಿ ಸಹಕರಿಸುತ್ತೇವೆಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಆಡಳಿತ ಅಧಿಕಾರಿಗಳು ಮತ್ತು ಗೌರವಾಧ್ಯಕ್ಷರಾದ ಸುರೇಶ್, ಅಧ್ಯಕ್ಷರಾದ ರಂಗನಾಥ್, ನಾರಣಪ್ಪ, ರಾಮಕೃಷ್ಣ, ಚಿಕ್ಕನ್ಮಯ್ಯ, ರಮೇಶ್, ಮಲ್ಲಿಕಾರ್ಜುನ, ಶ್ರೀನಿವಾಸ್, ಗಂಗಪ್ಪ, ಹನುಮಂತ್ರಾಯಪ್ಪ, ಸೋಮಶೇಖರ್ ಮುಂತಾದವರಿದ್ದರು.
ವರದಿ: ದೊಡ್ಡೇರಿ ಮಹಲಿಂಗಯ್ಯ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA