ತುಮಕೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಬೀದಿಬದಿ ವ್ಯಾಪಾರಿಗಳಿಗೆ ಆಹಾರ ಯಾವ ರೀತಿ ತಯಾರು ಮಾಡಬೇಕು ಶುಚಿತ್ವದ ಬಗ್ಗೆ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಸಮುದಾಯ ಸಂಘಟನಾ ಅಧಿಕಾರಿ ರಾಮಾಂಜಿನಪ್ಪ ಹಾಗೂ ಕೌಶಲ್ಯ ಅಭಿವೃದ್ಧಿ ಇಲಾಖೆಯ ಅಭಿಯಾನ ವ್ಯವಸ್ಥಾಪಕರಾದ ದೊಡ್ಡವಲ್ಲಪ ಹಾಗೂ ಡೇ-ನಲ್ಮ ಶಾಖೆಯ ಸಹಾಯಕರು ಆಂಜನಪ್ಪ ಎನ್.ಹೆಚ್. ಹಾಗೂ ಡೇ-ನಲ್ಮ ಶಾಖೆಯ ವ್ಯವಸ್ಥಾಪಕರು ರೇವಣ್ಣ ಅವರು ವಾರ್ಡ್ ಗೆ ಸಂಬಂಧ ಪಟ್ಟಂತೆ ಪಟ್ಟಣ ವ್ಯಾಪಾರ ಸಮಿತಿಯ ಸದಸ್ಯರುಗಳಾದ ಶ್ರೀಧರ್, ರವಿ ಕುಮಾರ್, ವಸಿಮ್ ಅಕ್ರಂ, ಟಿ.ಎಸ್.ರಾಜಶೇಖರ್. ಮುತ್ತರಾಜು, ಜಿ.ಜಗದೀಶ್ ಅವರು ಹಾಗೂ ನಾರಾಯಣ, ತರಬೇತಿ ಸಂಸ್ಥೆಯ ತರಬೇತಿ ಆಯೋಜಕರು ಅಂಬರೀಷ್ ನಾರಾಯಣ್ ಹಾಗೂ ವ್ಯವಸ್ಥಾಪಕರು ಚಿದಾನಂದ ಗೌಡ ಮತ್ತು ಆಹಾರ ಪದಾರ್ಥ ಮಾರಾಟ ಮಾಡುವ ಬೀದಿಬದಿ ವ್ಯಾಪಾರಿಗಳು ಹಾಜರಿದ್ದರು.
“ಪಟ್ಟಣ ವ್ಯಾಪಾರ ಸಮಿತಿ ಸದಸ್ಯ ವಸಿಮ್ ಅಕ್ರಂ ಮಾತನಾಡಿ, ಭಾರತ ದೇಶದಲ್ಲಿ ಶೇ.50 ರಷ್ಟು ಜನ ರಸ್ತೆ ಬದಿಗಳಲ್ಲಿ ಆಹಾರ ಸೇವನೆ ಮಾಡುತ್ತಿದ್ದಾರೆ. ದೇಶದ ಜನರ ಆರೋಗ್ಯದ ದೃಷ್ಟಿಯಿಂದ ಒಳ್ಳೆಯ ಗುಣಮಟ್ಟದ ಆಹಾರ ಒದಗಿಸುವುದು ಅತಿ ಮುಖ್ಯ ತರಬೇತಿ ಪಡೆದು ಪ್ರಯೋಜನ ಪಡೆದುಕೊಳ್ಳಬೇಕು. ವ್ಯಾಪಾರದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ವರದಿ : ಮಾರುತಿ ಪ್ರಸಾದ್
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5