ತುರುವೇಕೆರೆ: ಪಟ್ಟಣದಲ್ಲಿರುವ ಮಾಜಿ ವಿಧಾನ ಪರಿಷತ್ತಿನ ಸದಸ್ಯರಾದ ಬೆಮೆಲ್ ಕಾಂತರಾಜು ರವರ ಬೆಮೆಲ್ ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಬೆಂಬಲಿಗರು ಹಾಗೂ ದಲಿತ ಮುಖಂಡರು ಹಸಿರು ಕ್ರಾಂತಿಯ ಹರಿಕಾರ ಮಾಜಿ ,ಉಪ ಪ್ರಧಾನಿ ಬಾಬು ಜಗಜೀವನ್ ರಾಮ್ ಮತ್ತು ವಿಶ್ವ ಜ್ಞಾನಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಆಚರಿಸಿದರು.
ಈ. ಸಂದರ್ಭದಲ್ಲಿ ಮಾತನಾಡಿದ ಕಾಂತರಾಜು , ಬಾಬಾ ಸಾಹೇಬ್ ಅಂಬೇಡ್ಕರ್ ಶೋಷಿತರ, ಬಡವರ, ದುರ್ಬಲರ, ಮಹಿಳೆಯರ, ಅಲ್ಪಸಂಖ್ಯಾತರ, ಹಿಂದುಳಿದವರ, ಅವರ ಪರವಾಗಿ ಹೋರಾಟ ನಡೆಸಿ ಸಂವಿಧಾನ ರಚನೆ ಮಾಡಿದರು. ಆದರೆ ಇಂದು ಸಮಾಜದಲ್ಲಿ ಅಂಬೇಡ್ಕರ್ ಅವರನ್ನು ದಲಿತರು ಎಂದು ಬಿಂಬಿಸುತ್ತಿರುವುದು ವಿಷಾದನೀಯ ಸಂಗತಿ ಎಂದು ಅವರು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್ ಮಾತನಾಡಿ, ಅಂಬೇಡ್ಕರರ ಹೋರಾಟ ಬದುಕು ಸರ್ವಜನಾಂಗಕ್ಕೂ ದಾರಿದೀಪವಾಗಿವೆ.,ಎಲ್ಲರೂ ಅವರ ಆದರ್ಶ್ ಪಾಲಿಸಬೇಕು ಎಂದರು.
ಎಂ.ಡಿ.ಮೂರ್ತಿ. ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನವನ್ನು ಪಟ್ಟ ಭದ್ರ ಹಿತಾಸಕ್ತಿಗಳು , ಕೆಲವರ ಬಾಯಲ್ಲಿ ಸಂವಿಧಾನ ಬದಲಾವಣೆ ಮಾಡುತ್ತೇವೆ . ನಾವು ಬಂದಿರುವುದೇ ಸಂವಿಧಾನ ಬದಲಾಯಿಸಿ ಎಂದು ಮಾತನಾಡುತ್ತಿದ್ದಾರೆ ಅದು ನಡೆಯದು ಅದರ ಬಗ್ಗೆ ಮಾತನಾಡಿದರೆ ಉಗ್ರ ಹೋರಾಟ ನಡೆಸಲು ಬದ್ಧವಾಗಿದ್ದೇವೆ ಎಂದರು.
ಇನ್ನು ಈ ಕಾರ್ಯಕ್ರಮದಲ್ಲಿ ದಾನಿಗೌಡರು, ನಾಗೇಶ್, ಜೋಗಿಪಾಳ್ಯ ಶಿವರಾಜ್ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ , ಕೆ.ಬಿ.ಹನುಮಂತಯ್ಯ, ಮಾಯಸಂದ್ರ ಸುಬ್ರಹ್ಮಣ್ಯ, ಬುಗಡನಹಳ್ಳಿ ಕೃಷ್ಣಮೂರ್ತಿ , ಗೋಣಿತುಮಕೂರ., ಲಕ್ಷ್ಮಿ ಕಾಂತ್ , ಒಬ್ಬೇನಾಗಸಂದ್ರ ಕಾಂತರಾಜು , ಛಲವಾದಿ ಮಹಾ ಸಭಾದ ಡೊಂಕಿಹಳ್ಳಿ ರಾಮಣ್ಣ , ಕುಣಿಕೆನಹಳ್ಳಿ ಜಗದೀಶ್ ಭಾಗಿಯಾಗಿದ್ದರು.
ವರದಿ: ಸುರೇಶ್ ಬಾಬು, ಎಂ.ತುರುವೇಕೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy