ಪಾವಗಡ: ತಾಲೂಕು ನಿಡಗಲ್ ಹೋಬಳಿಯ ವ್ಯಾಪ್ತಿಯಲ್ಲಿ ಬರುವ ಮಂಗಳವಾಡ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘದ ವತಿಯಿಂದ ಅಂಬೇಡ್ಕರ್ ಜಯಂತಿ ಹಾಗೂ ಮಾಜಿ ಉಪ ಪ್ರಧಾನಿ ಬಾಬು ಜಗಜೀವನ್ ರಾಂ ಜನ್ಮದಿನಾಚರಣೆಯನ್ನು ನಾಡಕಛೇರಿ ಮುಂಭಾಗದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು
ಅಂಬೇಡ್ಕರ್ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಸಲಾಯಿತು. ಈ ವೇಳೆ ಕಳಸ ಹೊತ್ತ ಮಹಿಳೆಯರು, ಕುಣಿತ , ತಮಟೆ, ವಾದ್ಯಗಳು ವಿಶೇಷವಾಗಿ ಗಮನ ಸೆಳೆದವು. ಶಾಸಕ ವೆಂಕಟರವಣಪ್ಪ ಹಾಗೂ ಗಣ್ಯರು ಅಂಬೇಡ್ಕರ್ ಹಾಗೂ ಬುದ್ಧರ ಚಿತ್ರಕ್ಕೆ ಬಣ್ಣ ನೀಡಿ ಮೂಡಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಶಾಸಕ ವೆಂಕಟರಮಣಪ್ಪ , ಮಂಗಳವಾಡ ಗ್ರಾಮದ ಅಂಬೇಡ್ಕರ್ ಯುವಕ ಸಂಘದ ಯುವಕರು ಬಹಳ ಅದ್ದೂರಿಯಾಗಿ ಅಂಬೇಡ್ಕರ್ ಜಯಂತಿಯನ್ನು ಅದ್ದೂರಿಯಾಗಿ ನಡೆಸಿದರು. ನನಗೆ ಬಹಳ ಸಂತೋಷವಾಗಿದೆ. ಅಂಬೇಡ್ಕರ್ ಸಂವಿಧಾನ ಕೊಡದಿದ್ದರೆ ನಾವು ಜಾಗದಲ್ಲಿ ಬಂದು ಭಾಷಣ ಮಾಡುತ್ತಿರಲಿಲ್ಲ. ಅಂಬೇಡ್ಕರ್ ಸಂವಿಧಾನ ಕೊಟ್ಟಿರುವುದು ನಮಗೆ ಧೈರ್ಯವಾಗಿ ನಿಂತುಕೊಂಡು ಮಾತನಾಡಬಹುದು ಎಂದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲ ಬಸವಲಿಂಗಪ್ಪ ಮಾತನಾಡಿ, ಅಂಬೇಡ್ಕರ್ ಬಗ್ಗೆ ಹಿತನುಡಿಗಳು ಕಷ್ಟ-ಸುಖಗಳ ಬಹಳ ವಿಸ್ತಾರವಾಗಿ ಜನರಿಗೆ ಮನಮುಟ್ಟುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ದಿವ್ಯ ಸನ್ನಿಧಿ ಶ್ರೀಶ್ರೀಶ್ರೀ ಗುರುಪ್ರಕಾಶ್ ಸ್ವಾಮೀಜಿಗಳು, ಡಾ.ಮಂಜುನಾಥ್ ಬುಡಸನಹಳ್ಳಿ ಪ್ರಾಧ್ಯಾಪಕರು, ತುಮಕೂರು, ಸಮಾಜಸೇವಕರಾದ ಸಾಯಿ ಸುಮನ್, ಈರಣ್ಣ ಹೊಸಳ್ಳಿ ಮುಖ್ಯಶಿಕ್ಷಕರು, ಹಣ ತಿಮ್ಮಪ್ಪ ಉಪಾಧ್ಯಕ್ಷರು ಗ್ರಾಮ ಪಂಚಾಯಿತಿ, ಮಂಗಳವಾಡ ರಾಮಾಂಜಿನಮ್ಮ ಹನುಮಂತರಾಯ ಗ್ರಾಮ ಪಂಚಾಯತ್ ಸದಸ್ಯರು, ಆನಂದ ಸದಸ್ಯರು, ಮಂಜುನಾಥ ಗುತ್ತಿಗೆದಾರ ಹನುಮಂತರಾಯ, ಕಡಪಲಕೆರೆ ಸಣ್ಣ ತಿಮ್ಮಪ್ಪ, ಅಂಚೆ ಇಲಾಖೆ ಜಯರಾಮ್ ಕೊತ್ತೂರು, ಕರಿಬಸಪ್ಪ , ಲಿಂಗಣ್ಣ, ದೇವಲಕೆರೆ ದುರ್ಗಣ್ಣ. ನ್ಯಾಯದಗುಂಟೆ ತಿಪ್ಪೇಸ್ವಾಮಿ, ಕ್ಯಾತಗಾನಹಳ್ಳಿ ತಿಪ್ಪೇಸ್ವಾಮಿ ವದನಕಲ್ಲು ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಊರಿನ ಗ್ರಾಮಸ್ಥರು ಯುವಕರು ಅಣ್ಣತಮ್ಮಂದಿರು ಭಾಗವಹಿಸಿದ್ದರು.
ವರದಿ: ದೇವರಹಟ್ಟಿ ನಾಗರಾಜ, ಪಾವಗಡ ತಾಲ್ಲೂಕು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5