ತುರುವೇಕೆರೆ: ತಾಲ್ಲೂಕು ಆಡಳಿತ ಮತ್ತು ಸಮಾಜಕಲ್ಯಾಣ ಇಲಾಖೆಯ ವತಿಯಿಂದ ಪಟ್ಟಣದ ಬಯಲು ರಂಗಮಂದಿರದಲ್ಲಿ ಬಾಬು ಜಗಜೀವನ್ ರಾಮ್.ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಗುರುವಾರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತುರುವೇಕೆರೆ ವಿಧಾನ ಸಭಾ ಸದಸ್ಯ ಮಸಾಲ ಜಯರಾಮ್, ಕಳೆದ ನಾಲ್ಕು ವರ್ಷಗಳಿಂದ ಚುನಾವಣಾ ನೀತಿ ಸಂಹಿತೆ, ಕೊರೊನಾದಂತಹ ಕಾರಣಗಳಿಂದ ಇಬ್ಬರು ನಾಯಕರುಗಳ ಜಯಂತಿ ಕಾರ್ಯಕ್ರಮಗಳನ್ನು ಮಾಡಲು ಆಗಿರಲಿಲ್ಲ, ಆದರೆ ಈ ಬಾರಿ ಆಚರಿಸಲು ಯಾವುದೇ ಅಡೆ ತಡೆಯಾಗಲಿಲ್ಲ ಎಂದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡದಿದ್ದರೆ, ನಿಮ್ಮ ಮಸಾಲ ಜಯರಾಮ್ ಶಾಸಕ ಆಗುತ್ತಿರಲಿಲ್ಲ ಎಂದ ಹೇಳಿದ ಅವರು, ಅಂಬೇಡ್ಕರ್ ಜಯಂತಿಯಲ್ಲಿ ಭಾಗಿಯಾದ ಅಪಾರ ಸಂಖ್ಯೆಯ ಸಾರ್ವಜನಿಕರಿಗೆ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮಕ್ಕೂ ಮೊದಲು ಇಬ್ಬರು ಮಹಾನ್ ನಾಯಕರುಗಳ ಭಾವಚಿತ್ರಗಳಿಗೆ ,ಸಿಂಗಾರ ಮಾಡಿ, ನಾಸಿಕ್ ಡೋಲು, ತಮಟೆ , ಕಹಳೆ ವಾದ್ಯಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸುವ ಮೂಲಕ ಗೌರವಿಸಲಾಯಿತು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ, ಉಪನ್ಯಾಸಕ ಗಂಗಾಧರ್, ಕನ್ನಡ ಸಾಹಿತ್ಯ ಪರಿಷತ್ತಿನ. ಮಾಜಿ ಅಧ್ಯಕ್ಷ, ನಂ ರಾಜು, ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ, ದಂಡಿನ ಶಿವರ ಕುಮಾರ್ ಮತ್ತುಚಂದ್ರಯ್ಯ ತಂಡದಿಂದ ಕ್ರಾಂತಿಗೀತೆ ನಡೆಸಿಕೊಟ್ಟರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಟಿ.ಕೆ.ಚಿದಾನಂದ್, ದಲಿತ ಮುಖಂಡ ವಿ.ಟಿ.ವೆಂಕಟರಾಮ್, ಹಾಗೂ ಎಲ್ಲಾ ತಾಲ್ಲೂಕು. ಮಟ್ಟದ ಅಧಿಕಾರಿಗಳು ದಲಿತ ಮುಖಂಡರುಗಳು ಉಪಸ್ಥಿತರಿದ್ದರು.
ವರದಿ: ಸುರೇಶ್ ಬಾಬು. ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5