ಗುಬ್ಬಿ: ತಾಲೂಕಿನ ಕಲ್ಲೂರು ಅನಾದಿ ಕಾಲದಿಂದಲೂ ಕಲೆಗಳ ತವರೂರು ಎಂದೇ ಪ್ರಸಿದ್ಧಿ ಪಡೆದಿದೆ. ಇಲ್ಲಿ 20 ಕ್ಕೂ ಹೆಚ್ಚು ದೇವಾಲಯ ಗಳಿದ್ದು, ಕೆಲವು – ಐತಿಹಾಸಿಕಗಳಾಗಿವೆ.
ಕಡಬ ಹೋಬಳಿ… ಕಲ್ಲೂರು ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಾ ಲಯಕ್ಕೆ ಸಾವಿರ ವರ್ಷಕ್ಕಿಂತ ಹಳೆಯ ಇತಿಹಾಸವಿದ್ದು, ಇದು ಕೃಷ್ಣದೇವ ರಾಯನ ಕಾಲದಲ್ಲಿ ವೇದವ್ಯಾಸರಾಯರಿಂದ ಪ್ರತಿಷ್ಠಾಪನೆ ಯಾಗಿದ್ದು, ಕಪ್ಪು ಶಿಲೆಯಿಂದ ವಿಗ್ರಹದ ಕೆತ್ತನೆ ಮಾಡಲಾಗಿದೆ. ಇದು ಸರಕಾರದ ಮುಜಾರಾಯಿ, ಇಲಾಖೆಗೆ ಸೇರ್ಪಡೆಯಾಗಿದೆ.
ಒಂಬತ್ತು ದಿನಗಳು ನಡೆಯುವ ಉತ್ಸವದಲ್ಲಿ ಇಂದು ಬ್ರಹ್ಮ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು
ಸುಮಾರು ವರ್ಷಗಳ ಹಿಂದೆ ಬಹಳ ವೈಭವದಿಂದ ಜಾತ್ರೆ ಸೇರುತ್ತಿತ್ತು ಭಾರಿ ದನಗಳ ಜಾತ್ರೆಯು ಸೇರುತಿತ್ತು ಹತ್ತಾರು ಫಿಲಂ ಟೆಂಟ್ ಗಳು ಅಂದಿನ ಕಾಲದಲ್ಲಿ ಜಾತ್ರೆಯ ಅಂಗವಾಗಿ ಹಾಕುತ್ತಿದ್ದರು ಎಂದು ಹಿರಿಯರು ಹಳೆಯ ಜಾತ್ರೆಯ ಸೊಗಡನ್ನು ಮೆಲುಕು ಹಾಕಿದರು
ವಿಶೇಷ ಪೂಜೆ, ಹೋಮ, ಹವನ ನಡೆಯಿತು. ಉರಿಯುವ ಬಿಸಿಲಿನಲ್ಲಿಯು ಭಕ್ತರು ಉತ್ಸಾಹದಿಂದ ಪಾಲ್ಗೊಂಡಿದ್ದರು. ರಥೋತ್ಸವ ದ ಅಂಗವಾಗಿ ಭಕ್ತರಿಗೆ ಪಾನಕ ಫಲಹಾರ ಮಜ್ಜಿಗೆ ವಿತರಣೆ ಮಾಡಲಾಯಿತು.
ವರದಿ: ಸುಶ್ಮಿತಾ ಶೇಖರ್
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA