ಪಾವಗಡ: ಇತಿಹಾಸ ಪ್ರಸಿದ್ದ ಅನ್ನಲಪುರಿ ಆಂಜನೇಯಸ್ವಾಮಿಯ ಶ್ರಾವಣ ಜಾತ್ರೆಗೆ ಶನಿವಾರ ನೆರವೇರಿತು. ಆಂಧ್ರಪ್ರದೇಶ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದ ಭಕ್ತಾಧಿಗಳು ದೇವರ ದರ್ಶನ ಪಡೆದರು.
ತಾಲ್ಲೂಕಿನ ವೈ.ಎನ್.ಹೊಸಕೋಟೆಯಿಂದ ಸುಮಾರು 5 ಕಿ.ಮೀ ದೂರದಲ್ಲಿ ಅಲಕೂರು ಆಂಜನೇಯಸ್ವಾಮಿ ದೇವಾಲಯವಿದ್ದು, ಪ್ರತಿವರ್ಷ ಶ್ರಾವಣದ ಕೊನೆಯ ಶನಿವಾರ ದಿನದಂದು ಈ ಕ್ಷೇತ್ರದಲ್ಲಿ ಜಾತ್ರೆ ನಡೆಯುತ್ತದೆ. ಈ ವರ್ಷವೂ ಭಕ್ತಾಧಿಗಳು ಎಂದಿನಂತೆ ಸಡಗರ ಸಂಭ್ರಮದಿಂದ ಜಾತ್ರೆಯಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು. ಹರಕೆ ಹೊತ್ತ ಭಕ್ತಾಧಿಗಳು ಪಾಳಿಯಂತೆ ದೇವರಿಗೆ ವಿಳೇದೆಲೆ ಅಲಂಕಾರ ಮಾಡಿದರು. ಬೆಳ್ಳಿಕವಚ ಮತ್ತು ಹೂವಿನ ಅಲಂಕಾರದಲ್ಲಿ ದೇವರು ಕಂಗೊಳಿಸುತ್ತಿದ್ದರು. ಜಾತ್ರೆಯ ಅಂಗವಾಗಿ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ ಮತ್ತು ವಿಶೇಷ ಮಂಗಳಾರತಿಗಳನ್ನು ಪ್ರಧಾನ ಅರ್ಚಕರಾದ ಸತ್ಯನಾರಾಯಣಪ್ಪ ನೆರವೇರಿಸಿದರು.
ಬೆಳಿಗಿನಿಂದಲೇ ಭಕ್ತರು ಸುಮಾರು ಅರ್ಧ ಕಿ.ಮೀ ದೂರ ಸಾಲುಕಟ್ಟಿ ನಿಂತು ದರ್ಶನ ಮಾಡಿದರು. ಹರಕೆ ಹೊತ್ತ ಹಲವು ಭಕ್ತರು ಕೇಂಶಕಂಡನ ಮಾಡಿಸಿಕೊಂಡು ಪೂಜೆ ಸಲ್ಲಿಸಿದರು. ಜಾತ್ರೆಯ ದಿನದಂದೇ ಹಲವು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಜಾತ್ರೆಯಲ್ಲಿ ಭಕ್ತಾದಿಗಳಿಗೆ ಪತ್ರಕರ್ತರು ಮತ್ತು ಯುವಕರು ಅನ್ನದಾನ ಮಾಡಿದರು.
ಜಾತ್ರೆಯುದ್ದಕ್ಕೂ ತೆರೆದಿದ್ದ ಅಂಗಡಿ ಮುಂಗಟ್ಟುಗಳಲ್ಲಿ ಜನತೆ ಮಂಡಕ್ಕಿಪುರಿ ಸವಿದು ಆನಂದಿಸಿದರು. ಯಲ್ಲಪ್ಪನಾಯಕನಹಳ್ಳಿ ಗ್ರಾಮದ ಕಲಾವಿದರು ಹಾಗೂ ಪುಟಾಣಿ ಮಕ್ಕಳಿಂದ ಚಕ್ಕೆ ಭಜನೆ ಮಾಡಿ ಜನರನ್ನು ರಂಜಿಸಲಾಯಿತು.
ಭಕ್ತರ ನೂಕುನುಗ್ಗಲನ್ನು ತಪ್ಪಿಸಲು ಕಂದಾಯ ಇಲಾಖೆಯವರು ಆರಕ್ಷಕ ಇಲಾಖೆಯ ಸಹಕಾರದಿಂದ ಸೂಕ್ತ ವ್ಯವಸ್ಥೆ ಮಾಡಲಾಗಿತ್ತು.
ಕಂದಾಯ ಇಲಾಖಾಧಿಕಾರಿ ಕಿರಣ್ ಕುಮಾರ್, ಅಂಜಾದ್ ಖಾನ್, ರಘುವೀರ್, ಪುನೀತ್, ಮಂಜುನಾಥ, ಸಚಿನ್ ಮಾಸರೆಡ್ಡಿ, ಶ್ರೀಧರ, ದಿಲಾವರ್ ಲಾಲ್ ಶೇಖ್, ನಂಜುಂಡಪ್ಪ ಗ್ರಾಮ ಸಹಾಯಕರು ಮತ್ತು ಪಿಎಸ್ಐ ಮಾಳಪ್ಪ ನಾಯ್ಕೊಡ್, ತಾರಾಸಿಂಗ್, ಪೋಲೀಸ್ ಸಿಬ್ಬಂದಿ ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q