ಅಯೋಧ್ಯೆಯಲ್ಲಿ ರಾಮನ ದೇವಾಲಯವನ್ನು ನಿರ್ಮಿಸಿದ ನಂತರವೂ, ಇಲ್ಲಿ ಬಿಜೆಪಿ ಸೋತಿದೆ ಅನ್ನೋದೆ ದೊಡ್ಡ ಚರ್ಚೆಯ ವಿಷಯವಾಗಿದೆ. ಇದೆಲ್ಲದರ ನಡುವೆ, ನಿಮಗೊಂದು ಪೌರಾಣಿಕ ಕಥೆ ಗೊತ್ತೆ ?
ಸೀತಾ ಮಾತೆ ಅಯೋಧ್ಯೆ ಮತ್ತು ಅಲ್ಲಿನ ಜನರಿಗೆ ನೀಡಿದ ಶಾಪದ ಬಗ್ಗೆ ನಿಮಗೆ ಗೊತ್ತೆ ?ಸೀತಾ ಮಾತೆ ಅಯೋಧ್ಯೆಗೆ ಶಾಪ ನೀಡಿದ್ದಳು. ಸೀತಾ ಮಾತೆಯ ಈ ಶಾಪದಿಂದ, ಅಯೋಧ್ಯೆ ನಗರ ಎಂದಿಗೂ ಪ್ರಗತಿ ಹೊಂದೋದಕ್ಕೆ ಸಾಧ್ಯವಾಗಲಿಲ್ಲ ಎನ್ನುವ ನಂಬಿಕೆ ಇದೆ. ನಗರವು ಯಾವಾಗಲೂ ಒಂದಲ್ಲ ಒಂದು ಕೊರತೆಯನ್ನು ಅನುಭವಿಸುತ್ತೆ?
ವೇದಗಳು ಮತ್ತು ಪುರಾಣಗಳಲ್ಲಿ ತಿಳಿಸಿದಂತೆ, ರಾವಣನ ಸಂಹಾರಾದ ಬಳಿಕ, ವನವಾಸವನ್ನು ಕೊನೆಗೊಳಿಸಿ ಶ್ರೀರಾಮನು ಸೀತಾಳೊಂದಿಗೆ ಅಯೋಧ್ಯೆಗೆ ಮರಳಿದ ಸಮಯವದು. ಒಂದೆಡೆ, ಭಗವಾನ್ ರಾಮನ ಆಗಮನದ ಸಂದರ್ಭದಲ್ಲಿ ತುಪ್ಪದ ದೀಪಗಳನ್ನು ಬೆಳಗಿಸುವ ಮೂಲಕ ಜನ ಸಂತೋಷವನ್ನು ಆಚರಿಸುತ್ತಿದ್ದರೆ, ಮತ್ತೊಂದೆಡೆ, ಅಯೋಧ್ಯೆಯ ಜನರು ಸೀತಾ ಮಾತೆಯ ಬಗ್ಗೆ ಸಂಶಯದ ನೋಟ ಬೀರುತ್ತಾ, ಬಾಯಿಂದ ಬಾಯಿಗೆ ವದಂತಿ ಹರಡುತ್ತಿದ್ರು.
ಸೀತೆ ಇಷ್ಟು ದಿನ ಅದ್ಯಾವುದೋ ಬೇರೆ ರಾಜ್ಯದ ಜೀವಿಯಾದ ರಾವಣನೊಂದಿಗೆ ವಾಸಿಸುತ್ತಿದ್ದಳು, ಆಕೆ ಈಗ ಪರಿಶುದ್ಧೆಯೋ? ಅಲ್ಲವೇ? ಎನ್ನುವ ಬಗ್ಗೆ ತಮ್ಮೊಳಗೆ ಮಾತನಾಡಿಕೊಳ್ಳುತ್ತಿದ್ದರು. ಅಯೋಧ್ಯೆಯ ಜನರು ಸೀತಾಮಾತೆಯ ಪರಿಶುದ್ಧತೆಯನ್ನು ಅನುಮಾನಿಸುತ್ತಿದ್ದರು.
ಅಯೋಧ್ಯೆಯ ಜನರ ಈ ಕೃತ್ಯದ ಬಗ್ಗೆ ಸೀತಾಮಾತೆಗೆ ತಿಳಿದಾಗ, ಅವಳು ಕೋಪದಿಂದ ತತ್ತರಿಸಿದಳು. ತನ್ನ ಗಂಡನಿಂದ ದೂರವಾಗಿ ಮತ್ತೆ ವನವಾಸದಲ್ಲಿ ಸಂತೋಷವಾಗಿರಲು ಸಾಧ್ಯವಾಗೋದೇ ಇಲ್ಲ, ನಾನು ಹೇಗೆ ದುಃಖದಿಂದಿರುವೆನೋ ಹಾಗೆಯೇ ಅಯೋಧ್ಯೆಯ ಜನರು ಸಹ ಯಾವಾಗಲೂ ದುಃಖಿತರಾಗಿರಲಿ ಎಂದು ಸೀತೆ ಶಾಪ ಕೊಟ್ಟಳಂತೆ. ಜೊತೆಗೆ ಅಯೋಧ್ಯೆ ನಿರ್ಜನವಾಗಿರಲಿ, ಅಲ್ಲಿನ ಜನರು ಬಡವರಾಗಿರಲಿ ಎಂದರಂತೆ.
ಸೀತಾಮಾತೆಯ ಶಾಪದ ಪರಿಣಾಮವಾಗಿ ಮಹಾಭಾರತ ಯುದ್ಧದಲ್ಲಿ, ರಘುವಂಶದ ಕೊನೆಯ ರಾಜ ಅಂದರೆ ಭಗವಾನ್ ರಾಮನ ಕೊನೆಯ ವಂಶಸ್ಥ ರಾಜ ಬೃಹದ್ಬಾಲ್ ನಿಧನರಾದರು. ತ್ರೇತಾಯುಗದ ಅಂತ್ಯದ ನಂತರ ಅಯೋಧ್ಯೆಯು ನಿರ್ನಾಮವಾಗಲು ಪ್ರಾರಂಭಿಸಿತು. ಅಯೋಧ್ಯೆಯಲ್ಲಿ ಒಂದು ವಿಚಿತ್ರವಾದ ನಿರ್ಜನತೆ, ಮೌನ ಆವರಿಸಿತ್ತು. ಎಲ್ಲೆಲ್ಲಿಂದಲೋ ದಾಳಿಗಳು ನಡೆದವು, ಅಯೋಧ್ಯೆಯಲ್ಲಿದ್ದ ದೇಗುಲಗಳು ಧ್ವಂಸವಾದವು. ಭಗವಾನ್ ರಾಮನ ಜನ್ಮಸ್ಥಳವಾಗಿದ್ದರೂ, ಈ ಸ್ಥಳವು ಅದಕ್ಕೆ ಅರ್ಹವಾದ ಮಾನ್ಯತೆಯೇ ಪಡೆಯದಂತಾಯಿತು. ಅಯೋಧ್ಯೆಯ ಈ ದುಃಸ್ಥಿತಿಗೆ ಸೀತಾ ಮಾತೆಯ ಶಾಪವೇ ಕಾರಣ ಎಂದು ಜನರು ಹೇಳೋದು ಉಂಟು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA