ಪಾವಗಡ: ಸಾರ್ವಜನಿಕ ಆಸ್ಪತ್ರೆಯಲ್ಲಿ ಸರ್ಕಾರಿ ಆಂಬುಲೆನ್ಸ್ ಗಳು ಇದ್ದರೂ ಸಹ, ಪ್ರೈವೇಟ್ ಆಂಬುಲೆನ್ಸ್ ಗಳಲ್ಲಿ ರೋಗಿಗಳನ್ನು ಸಾಗಿಸಲು ಆಸ್ಪತ್ರೆಯ ಸಿಬ್ಬಂದಿ ಮುಂದಾಗಿದ್ದಾರೆ ಎಂದು ಪಾವಗಡ ಕರ್ನಾಟಕ ರಕ್ಷಣಾ ವೇದಿಕೆ ಆರೋಪಿಸಿದೆ.
ಸರ್ಕಾರಿ ಆಂಬುಲೆನ್ಸ್ ಇದ್ದರೂ, ಖಾಸಗಿ ಆಂಬುಲೆನ್ಸ್ ಯಾಕೆ ಬಳಸಲಾಗುತ್ತಿದೆ ಎಂದು ಆಡಳಿತ ವೈದ್ಯಾಧಿಕಾರಿ ಡಾ.ಕಿರಣ್ ಅವರನ್ನು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಳಗದ ಪಾವಗಡ ತಾಲೂಕು ಅಧ್ಯಕ್ಷ ಲಕ್ಷ್ಮೀನಾರಾಯಣ ಅವರು ಪ್ರಶ್ನಿಸಿದ್ದು, ಈ ವೇಳೆ ಅವರು, ಸರ್ಕಾರಿ ಆಂಬುಲೆನ್ಸ್ ನ ಇಂಜಿನ್ ಸರಿ ಇಲ್ಲ, ಗಾಡಿಗೆ ಡ್ರೈವರ್ ಇಲ್ಲ ಎಂಬ ಹಾರಿಕೆಯ ಉತ್ತರ ನೀಡಿದ್ದಾರೆ. 4 ಗಾಡಿಗಳು ಕೂಡ ರಿಪೇರಿಯಲ್ಲಿವೆಯೇ ಎಂದು ಮರು ಪ್ರಶ್ನೆ ಹಾಕಿದಾಗ ಅವರು ಯಾವುದೇ ಉತ್ತರ ನೀಡದೇ ತೆರಳಿದ್ದಾರೆನ್ನಲಾಗಿದೆ.
ಈ ವೇಳೆ ಕರವೇ ಪಾವಗಡ ತಾಲೂಕು ಉಪಾಧ್ಯಕ್ಷರು ನರಸಿ ಪಾಟೀಲ್, ಯೂತ್ ಪ್ರೆಸಿಡೆಂಟ್ ಲಚ್ಚಿ, ರಂಗನಾಯಕ ನಾಗೇಂದ್ರ ಅಗೋರ, ರಾಜು ಶ್ರೀನಿವಾಸ್, ನರೇಶ್, ಕರವೇ ನಾಗಲಮಡಿಕೆ, ಹೋಬಳಿ ಉಪಾಧ್ಯಕ್ಷರು ಮಲ್ಲಿಕಾರ್ಜುನ್ ನಾಗಲಮಡಿಕೆ ಹಾಗೂ ಎಲ್ಲಾ ಕರವೇ ಘಟಕದ ಸದಸ್ಯರು ಭಾಗವಹಿಸಿದರು.
ವರದಿ: ಮಲ್ಲಿಕಾರ್ಜುನ್ N.M. ನಾಗಲಮಡಿಕೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy