Author: admin

ಬಾಗಲಕೋಟ: ಜಿಲ್ಲೆಯ ಮುಧೋಳ ತಾಲೂಕಿನ ರಂಜಣಗಿ ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ರವರ  131ನೇ ಜಯಂತೋತ್ಸವ ಹಾಗೂ ಡಾ.ಬಾಬು ಜಗಜೀವನ್ ರಾಮ್ ರವರ  115ನೇ ಜಯಂತಿ ಪ್ರಯುಕ್ತ ಜನತಾ ಸುಲ್ತಾನ್ ಬೇಪಾರಿ ಬ್ರದರ್ಸ್ ಮತ್ತು ಭೀಮ್ ಆರ್ಮಿ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಕಣ್ಣಿನ ತಪಾಸಣೆ ಉಚಿತ ಕಣ್ಣಿನ ಆಪರೇಷನ್ ಹಾಗೂ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದೇ ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತರಿಗೆ, ಆಶಾ ಕಾರ್ಯಕರ್ತರಿಗೆ ಬಿಸಿ ಊಟ ಕಾರ್ಯಕರ್ತರಿಗೆ, ವೀರ ಯೋಧರಿಗೆ , ಪಂಚಾಯತಿ ಸಿಬ್ಬಂದಿಗೆ ,ಲ ವಿವಿಧ ಪ್ರಶಸ್ತಿ ವಿಜೇತರಿಗೆ ಸನ್ಮಾನಿಸಿ ಅಭಿನಂದನೆ ಕೋರಲಾಯಿತು. ಸುರೇಶ್ ಕುಂಬಾರ ಮತ್ತು ಬಸು ಹೂಗಾರ ರವರು ಅಧ್ಯಕ್ಷತೆ ವಹಿಸಿಕೊಂಡಿದ್ದರು. ದಿವ್ಯ ಸಾನಿಧ್ಯ ವಹಿಸಿಕೊಂಡಿರುವ ಬಾಳಪ್ಪ ಶಿರೋಳ ಮಾತನಾಡಿ,  ಬಾಬಾಸಾಹೇಬ ಅಂಬೇಡ್ಕರ್ ಅವರು ವ್ಯಕ್ತಿ ಅಲ್ಲ. ಅವರು ಒಂದು ದೊಡ್ಡ ಶಕ್ತಿ. ಆಗಿನ ಕಾಲದಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಲು ಭಗವಂತನೇ ಅಂಬೇಡ್ಕರ್ ರೂಪದಲ್ಲಿ ಹುಟ್ಟಿ ಬಂದರೆಂದು ತಿಳಿಸಿದರು. ಉಪನ್ಯಾಸ ನೀಡಿದ ಶ್ರೀನಿವಾಸ್ ದಾಸರ,   ಅಂಬೇಡ್ಕರ್…

Read More

ತಿಪಟೂರು: ರಾಜ್ಯಕ್ಕೆ ಹೆಸರು ತಂದ ಜಾನಪದ ಮುಕುಟ ಮಣಿ ಅರಳುಗುಪ್ಪೆ ಕಲ್ಲುಮನೆ ಭಾಗವತ ನಂಜಪ್ಪನವರಿಗೆ ಕೇಂದ್ರ ಸಂಗೀತ, ನಾಟಕ ಅಕಾಡೆಮಿ ಪ್ರಶಸ್ತಿ ಬಂದ ಕಾರಣ ಇಂದು ತಿಪಟೂರಿನ ಡಾ. ಶ್ರೀಧರ್ ಅವರ ನೇತ್ರತ್ವದ ಕಲಾಕೃತಿ ತಂಡ ಅರಳುಗುಪ್ಪೆ ಗೆ ಬೇಟಿ ನೀಡಿ, ಅಭಿನಂದಿಸಿತು. ಈ ಸಂದರ್ಭದಲ್ಲಿ ಕಲಾಕೃತಿ ಪ್ರಧಾನ ಕಾರ್ಯದರ್ಶಿ ಜ್ಯೋತಿ ಗಣೇಶ್, ಉಪಾಧ್ಯಕ್ಷೆ ಪ್ರಭಾವಿಶ್ವನಾಥ್, ಎಂ ಆರ್ ನಿರಂಜನ್ ಮೂರ್ತಿ,  ಕಾರ್ಯದರ್ಶಿ ತಿಪಟೂರು ಕೃಷ್ಣ, ತರಕಾರಿ ಗಂಗಾಧರ್,  ನಿರ್ದೇಶಕ ಪ್ರಸಾದ್ ಅರಳುಗುಪ್ಪೆ, ಮಂಜುಳ, ರಾಘು ಯಗಚಿಕಟ್ಟೆ, ರಂಗನಾಥ್ ಪಾರ್ಥಸಾರಥಿ ಮತ್ತಿತರರು ಇದ್ದರು ವರದಿ:  ಆನಂದ್ ತಿಪಟೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ತುರುವೇಕೆರೆ: ಪಟ್ಟಣದಲ್ಲಿರುವ ಮಾಜಿ ವಿಧಾನ ಪರಿಷತ್ತಿನ  ಸದಸ್ಯರಾದ  ಬೆಮೆಲ್ ಕಾಂತರಾಜು ರವರ ಬೆಮೆಲ್ ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಬೆಂಬಲಿಗರು ಹಾಗೂ ದಲಿತ ಮುಖಂಡರು ಹಸಿರು  ಕ್ರಾಂತಿಯ ಹರಿಕಾರ ಮಾಜಿ ,ಉಪ ಪ್ರಧಾನಿ ಬಾಬು ಜಗಜೀವನ್ ರಾಮ್  ಮತ್ತು ವಿಶ್ವ ಜ್ಞಾನಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಆಚರಿಸಿದರು. ಈ. ಸಂದರ್ಭದಲ್ಲಿ ಮಾತನಾಡಿದ ಕಾಂತರಾಜು , ಬಾಬಾ ಸಾಹೇಬ್ ಅಂಬೇಡ್ಕರ್  ಶೋಷಿತರ, ಬಡವರ, ದುರ್ಬಲರ, ಮಹಿಳೆಯರ, ಅಲ್ಪಸಂಖ್ಯಾತರ, ಹಿಂದುಳಿದವರ, ಅವರ ಪರವಾಗಿ ಹೋರಾಟ ನಡೆಸಿ ಸಂವಿಧಾನ ರಚನೆ ಮಾಡಿದರು. ಆದರೆ ಇಂದು ಸಮಾಜದಲ್ಲಿ ಅಂಬೇಡ್ಕರ್ ಅವರನ್ನು ದಲಿತರು ಎಂದು ಬಿಂಬಿಸುತ್ತಿರುವುದು ವಿಷಾದನೀಯ ಸಂಗತಿ ಎಂದು ಅವರು ಹೇಳಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್ ಮಾತನಾಡಿ,   ಅಂಬೇಡ್ಕರರ ಹೋರಾಟ ಬದುಕು ಸರ್ವಜನಾಂಗಕ್ಕೂ ದಾರಿದೀಪವಾಗಿವೆ.,ಎಲ್ಲರೂ ಅವರ ಆದರ್ಶ್ ಪಾಲಿಸಬೇಕು ಎಂದರು. ಎಂ.ಡಿ.ಮೂರ್ತಿ. ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನವನ್ನು ಪಟ್ಟ ಭದ್ರ ಹಿತಾಸಕ್ತಿಗಳು , ಕೆಲವರ ಬಾಯಲ್ಲಿ ಸಂವಿಧಾನ ಬದಲಾವಣೆ ಮಾಡುತ್ತೇವೆ…

Read More

ತಿಪಟೂರು : ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿಯ ಹಟ್ಣ ಗ್ರಾಮದ ಗ್ರಾಮ ದೇವತೆ ಉಡುಸಲಮ್ಮ (ಕೆಂಪಮ್ಮ) ದೇವಿಯ ದೊಡ್ಡ ಜಾತ್ರೆಯೂ ಏ.15 ರಿಂದ ಏ.22 ರವರೆಗೆ ವಿಜೃಂಭಣೆಯಿಂದ ನೆರವೇರಲಿದೆ. ಸುತ್ತಮುತ್ತಲ 33 ಹಳ್ಳಿಗಳ ಜನರು ಜಾತ್ರಾ ಮಹೋತ್ಸವದಲ್ಲಿ ಸೇರಲಿದ್ದು, ಏ.15 ರಂದು ಧ್ವಜಾರೋಹಣ ಹಾಗೂ ಕಟ್ಟಿಗೇನಹಳ್ಳಿ ಗ್ರಾಮಸ್ಥರಿಂದ ಆರತಿ ಉತ್ಸವ ಕಾರ್ಯಕ್ರಮ, ಏ.16 ರಂದು ಚಂದ್ರ ಮಂಡಲೋತ್ಸವ ಕಾರ್ಯಕ್ರಮ, ಏ.17 ರಂದು ಉಡುಸಲಮ್ಮ ( ಕೆಂಪಮ್ಮ) ದೇವಿಯ ರಥೋತ್ಸವ ಹಾಗೂ ಬಸವಣ್ಣ ದೇವರ ರಥೋತ್ಸವ, ಏ.18 ರಂದು ಜಾತ್ರೆಯ ವಿಶೇಷ ಹರಕೆ ತೀರಿಸುವ ಸಲುವಾರಿ ಮಕ್ಕಳ ಸಿಡಿ ಕಾರ್ಯಕ್ರಮ ನೆರವೇರಲಿದೆ. ನಂತರದಲ್ಲಿ ಸಾಂಸ್ಕೃತಿಕ ಕಲಾ ತಂಡಗಳ ಪ್ರದರ್ಶನ ಏರ್ಪಡಿಸಲಾಗಿದೆ.  ಏ.19 ರಂದು ಹಗಲು ಜಾತ್ರೆ ವಿಶೇಷವಾಗಿ 33 ಹಳ್ಳಿಗಳ ಜನರು ಸೇರಲಿದ್ದು ಅದ್ದೂರಿಯಿಂದ ಜಾತ್ರೆ ನಡೆಯಲಿದೆ. ರಾತ್ರಿ ಕುದುರೆ ವಾಹನೋತ್ಸವ ಇರುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿ ದೇವಿಕ ಕೃಪೆಗೆ ಪಾತ್ರರಾಗಬೇಕೆಂದು ಧರ್ಮದರ್ಶಿ ಮಂಡಳಿಯ ಮನವಿ ಮಾಡಿದ್ದಾರೆ. ವರದಿ: ಆನಂದ, ತಿಪಟೂರು ನಮ್ಮತುಮಕೂರು.ಕಾಂನ…

Read More

ಗುಬ್ಬಿ:  ತಾಲ್ಲೂಕಿನ ಇತಿಹಾಸ ಪ್ರಸಿದ್ದ ಶ್ರೀ ಕ್ಷೇತ್ರ ವೀರಣ್ಣ ಗುಡಿಯಲ್ಲಿ ಶ್ರೀಭದ್ರಕಾಳಿ ವೀರಭದ್ರೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ವೈಭವಯುತವಾಗಿ ಜರುಗಿತು. ಗುರುವಾರ ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಶ್ರೀ ವೀರಭದ್ರ ಸ್ವಾಮಿಯ ಮಹಾ ರಥೋತ್ಸವ ಸಾಕಷ್ಟು ಸಂಖ್ಯೆಯ ಆಗಮಿಸಿದ್ದ  ಭಕ್ತರು  ತೆರನ್ನು ಎಳೆಯುವ ಮೂಲಕ ತೆರಿಗೆ ಬಾಳೆಹಣ್ಣು. ದವನ ಎಸೆಯುವ ಮೂಲಕ ಭಕ್ತಿ ಸಮರ್ಪಣೆ ಮಾಡಿದರು. ಕೊರೋನಾ ಸೊಂಕಿನ ಹಿನ್ನಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಳಿಸಲಾಗಿದ್ದ ಜಾತ್ರಾ ಮಹೋತ್ಸವ ಈ ಬಾರಿ ಹೆಚ್ಚು ಅದ್ದೂರಿ ಯಾಗಿ ನೆಡೆಯಿತು. ಜಾತ್ರಾಮಹೋತ್ಸವ ಕ್ಕೆ ಆಗಮಿಸಿದ ಭಕ್ತ ರಿಗೆ ದೇವಾಲಯದ ವತಿಯಿಂದ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿತ್ತು. ಜಾತ್ರಾ ಮಹೋತ್ಸವ ಕ್ಕೆ ಶಿಕ್ಷಣ ಬಿ.ಸಿ.ನಾಗೇಶ್. ತುರುವೇಕೆರೆ ಶಾಸಕ ಮಸಾಲೆ ಜಯರಾಂ. ಆಧ್ಯಾತ್ಮಿಕ ಚಿಂತಕರು ಹಾಗೂ ಜ್ಯೋತಿಷಿಗಳಾದ ಶ್ರೀ ರಾಮಕೃಷ್ಣ ಶರ್ಮಾ . ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಎಂ.ಕೃಷ್ಣ ಪ್ಪ. ರಮೇಶ್ ಕೌಲಗಿ.ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜ್ ಹಾಗೂಇತರ ಗಣ್ಯರು ದೇವಾಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.…

Read More

ತುಮಕೂರು: ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯ ಪ್ರಯುಕ್ತ ಅಳವಡಿಸಿದ್ದ ಫ್ಲೆಕ್ಸ್ ನ್ನು ಕಿಡಿಗೇಡಿಗಳು ಹರಿದು ಹಾಕಿದ್ದು, ಘಟನೆಯನ್ನು ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ  ತಿಪಟೂರು ತಾಲ್ಲೂಕಿನ ಕೆರೆಗೋಡಿಯಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ. ಅಂಬೇಡ್ಕರ್ ಜಯಂತಿಯ ಶುಭಾಶಯ ಕೋರಿ ಹಾಕಲಾಗಿದ್ದ ಫ್ಲೆಕ್ಸ್ ನ್ನು ಕಿಡಿಗೇಡಿಗಳು ಹರಿದು ಹಾಕಿದ್ದಾರೆ. ಈ ಕೃತ್ಯವನ್ನು ವಿರೋಧಿಸಿ ದಲಿತ ಸಂಘರ್ಷ ಸಮಿತಿ ಮುಖಂಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.  ತಿಪಟೂರು ಗ್ರಾಮಾಂತರ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಕೃಷ್ಣಕುಮಾರ್ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮುಖಂಡರೊಂದಿಗೆ ಸಮಾಲೋಚನೆ ನಡೆಸಿ, ಕಿಡಿಗೇಡಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದುಕೊಳ್ಳಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ತುರುವೇಕೆರೆ: ತಾಲೂಕಿನ ಮಾಯಸಂದ್ರ ಗ್ರಾಮದ ಡಾ.ಬಿ.ಆರ್. ಅಂಬೇಡ್ಕರ್ ಸಂಘದ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ 131ನೇ ಜಯಂತಿಯನ್ನು ಅರ್ಥಪೂರ್ಣವಾಗಿ, ದ್ದೂರಿಯಾಗಿ ಆಚರಿಸಲಾಯಿತು. ಈ ವೇಳೆ ಮಾತನಾಡಿದ ಮುಖಂಡರಾದ ಲೋಕೇಶ್ ರವರು, ಇಡೀ ರಾಷ್ಟ್ರವೇ ತಿರುಗಿ ನೋಡುವಂತಹ, ಸಂವಿಧಾನ ಶಿಲ್ಪಿ ವಿಶ್ವ ಜ್ಞಾನಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆ ಅಪಾರ. ಸಂವಿಧಾನ ನೀಡಿದಂತಹ ಮಹಾ ನಾಯಕನಿಗೆ ನಾವೆಲ್ಲರೂ ಸಹ ಗೌರವಿಸಬೇಕು. ಅವರ ತತ್ವ ಸಿದ್ಧಾಂತಗಳನ್ನು ಪಾಲಿಸಬೇಕು. ಶಿಕ್ಷಣ, ಸಂಘಟನೆ, ಹೋರಾಟ, ಎಂಬ ಮೂರು ಸೂತ್ರಗಳನ್ನು ನಾವೆಲ್ಲರೂ ಅನುಸರಿಸಬೇಕೆಂದು ತಿಳಿಸಿದರು ಹಾಗೂ ಸಂಘದ ಎಲ್ಲಾ ಪದಾಧಿಕಾರಿಗಳು ಬಹಳ ವಿಶೇಷವಾಗಿ ಪ್ರತಿಯೊಬ್ಬರು ಗೌರವ ಸೂಚಿತ ಸಮವಸ್ತ್ರಗಳನ್ನು ಧರಿಸಿ, ಜೈ ಭೀಮ್ ಘೋಷಣೆ ಯೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ, ಬೆಳ್ಳಿ ರಥದ ವಾಹನದ ಮೂಲಕ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಜೊತೆಗೆ ದಿವಂಗತ ನಟ ಪುನೀತ್ ರಾಜಕುಮಾರ್ ಅವರ ಪುಣ್ಯಸ್ಮರಣೆಯನ್ನು ಸಹ ಆಚರಿಸಿ ಮೆರವಣಿಗೆ ಮೂಲಕ ವಿಜೃಂಭಣೆಯಿಂದ ಜಯಂತಿಯನ್ನು ಆಚರಿಸಿದರು. ಈ ಸಂದರ್ಭದಲ್ಲಿ,…

Read More

ಕುಣಿಗಲ್: ಕಲ್ಲು ಗಣಿಗಾರಿಕೆ ಸ್ಥಳದಲ್ಲಿ ಕಲ್ಲು ಬಂಡೆಗಳನ್ನು ಸ್ಪೋಟಿಸಿ ನೆಲದ ಕಂಪನದ ಪರಿಕ್ಷೇಗೆ ಬಂದಿದ್ದ ಅಧಿಕಾರಿಗಳಿಗೆ  ತಡೆಯೊಡ್ಡಿದ  ರೈತ ಸಂಘಟನೆಗಳ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಪಿಹೆಚ್ ಹಳ್ಳಿಯ ಸರ್ವೆ ನಂ 82 ರಲ್ಲಿ ನಡೆಯುತ್ತಿರುವ  ಕಲ್ಲು ಗಣಿಗಾರಿಕೆ ಸ್ಥಳದಲ್ಲಿ ಕಲ್ಲು ಬಂಡೆಗಳನ್ನು ಸ್ಪೋಟಿಸಿ ನೆಲದ ಕಂಪನದ ಪರಿಕ್ಷೇಗೆ ಬಂದಿದ್ದ ಅಧಿಕಾರಿಗಳಿಗೆ  ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ್ ಪಟೇಲ್ ಹುಲಿಕಟ್ಟೆ ನೇತೃತ್ವದಲ್ಲಿ ತಡೆಯೊಡ್ಡಲಾಗಿತ್ತು. ಈ ವೇಳೆ ಹುಲಿಕಟ್ಟೆ ಸೇರಿದಂತೆ ಹಲವು ರೈತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ಕಲ್ಲು ಗಣಿಗಾರಿಕೆ ಸ್ಥಳದಲ್ಲಿ ಕಲ್ಲು ಬಂಡೆಗಳನ್ನು ಸ್ಪೋಟಿಸಿ ನೆಲದ ಕಂಪನದ ಪರೀಕ್ಷೆಗೆ ಬಂದಿದ್ದ ಅಧಿಕಾರಿಗಳಿಗೆ  ರೈತರು ತಡೆಯೊಡ್ಡಿದರು. ಈ ವೇಳೆ ಸುಮಾರು 40ರಿಂದ 50 ರೈತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ಹಿರಿಯೂರು: ಅಂಬೇಡ್ಕರ್ ಸಂಘಟನೆಯಿಂದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮವು ಹಿರಿಯೂರು ತಾಲ್ಲೂಕಿನಲ್ಲಿ ವಿಜೃಂಭಣೆಯಿಂದ ನಡೆಯಿತು. ತಾಲ್ಲೂಕಿನ ಟಿ.ಬಿ.ಸರ್ಕಲ್ ಬಳಿಯ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಪುಷ್ಪಮಾಲೆ ಸಲ್ಲಿಸಿ ಟಿ.ಬಿ. ಸರ್ಕಲ್ ವೃತ್ತದಿಂದ ಹಿರಿಯೂರು ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದವರೆಗೆ ಮೆರವಣಿಗೆ ನಡೆಸುವ ಮೂಲಕ ವಿಶೇಷ ಗೌರವ ನೀಡಲಾಯಿತು. ಈ ವೇಳೆ ಯುವ ಸಮೂಹ ಕುಣಿದು, ಜೈಕಾರ ಹಾಕುತ್ತಾ ಸಂಭ್ರಮಿಸಿತು. ಈ ವೇಳೆ ನಮ್ಮ ತುಮಕೂರು ಜೊತೆಗೆ  ಮಾತನಾಡಿದ ಹಿರಿಯೂರು ತಾಲ್ಲೂಕಿನ ರಂಗನಾಥಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ರಂಗನಾಥಪುರ ಗ್ರಾಮದ ಉಪಾಧ್ಯಕ್ಷರಾದ ಮಂಜುನಾಥ್, ಅಂಬೇಡ್ಕರ್ ರವರು ಹೆಸರಿಗೆ ಮಾತ್ರ ಸೀಮಿತವಾದ ವ್ಯಕ್ತಿಯಲ್ಲ, ಅವರ ಹೆಸರಿನಲ್ಲಿಯೇ ಒಂದು ಮಹತ್ವವಾದ ಶಕ್ತಿ ಇದೆ.  ಅಂಬೇಡ್ಕರ್ ರವರು ರಚಿಸಿದಂತಹ ಸಂವಿಧಾನವು ಕೇವಲ ಎಸ್ ಸಿ, ಎಸ್ ಟಿ ಮಾತ್ರ ಸೀಮಿತವಾಗಿಲ್ಲ ಪ್ರತಿಯೊಬ್ಬ ವ್ಯಕ್ತಿಯೂ ಸಹ ಇಂದು ಶಿಕ್ಷಣ ಪಡೆಯಲು ಕಾರಣವೇ ಡಾ.ಬಿ.ಆರ್. ಅಂಬೇಡ್ಕರ್  ರಚಿಸಿದ ಸಂವಿಧಾನ ಎಂದು ತಿಳಿಸಿದರು. ದಲಿತ ಸಂಘಟನೆಯ ರಮೇಶ್ ಕುಮಾರ್ ಮಾತನಾಡಿದರು. ಈ ಸಂಧರ್ಭದಲ್ಲಿ ದಲಿತ…

Read More

ಮಧುಗಿರಿ: ತಾಲ್ಲೂಕಿನ ದೊಡ್ಡೇರಿ ಹೋಬಳಿಯ ಶ್ರೀ ಸಿದ್ದಾರ್ಥ ಗ್ರಾಮಾಂತರ ಪ್ರೌಢಶಾಲೆ ದಂಡಿನದಿಬ್ಬ ಇಲ್ಲಿ 1999-2002 ನೇ ಸಾಲಿನ ಹಳೆವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಮತ್ತು ಗುರುವಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಗುರುಗಳಾದ KNS, HMK, CSR, MGR ,THS, SS ಇವರನ್ನು ಹಳೇ ವಿದ್ಯಾರ್ಥಿಗಳು ಸನ್ಮಾನಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯರಾದ ವೇದಮೂರ್ತಿಯವರು ವಹಿಸಿಕೊಂಡರು. ಪ್ರಾರ್ಥನೆಯನ್ನು ಕುಸುಮ ಮತ್ತು ಚೈತ್ರ ನೆರವೇರಿಸಿದರು. ಕೆ ಸಾವಿತ್ರಿ ಎಲ್ಲರನ್ನೂ ಸ್ವಾಗತಿಸಿದರು, ಕೆಂಚರಾಜು ಎಲ್ಲರನ್ನು ವಂದಿಸಿದರು. ಕಾರ್ಯಕ್ರಮವನ್ನು ಓಬಳೇಶ ಶಿಕ್ಷಕರು ನಿರ್ವಹಿಸಿದರು. ವರದಿ: ಮಹಾಲಿಂಗಯ್ಯ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More