Author: admin

ದೇಶದ ಭದ್ರತೆಗೆ ಅಪಾಯವನ್ನುಂಟು ಮಾಡುವ 54 ಚೀನಿ ಆ್ಯಪ್‍ಗಳನ್ನು ನಿಷೇಧಿಸಲು ಕೇಂದ್ರ ಸರ್ಕಾರ ಯೋಜಿಸಿದೆ ಎಂದು ಮೂಲಗಳು ತಿಳಿಸಿವೆ. ಸ್ವೀಟ್ ಸೆಲಿ ಎಚ್ಡಿ, ಬ್ಯೂಟಿ ಕ್ಯಾಮೆರಾ – ಸೆಲಿ ಕ್ಯಾಮೆರಾ, ವಿವಾ ವಿಡಿಯೋ ಎಡಿಟರ್, ಟೆನ್ಸೆಂಟ್ ಎಕ್ಸ್ರಿರ್ವ, ಒನ್ಮಿಯೋಜಿ ಅರೆನಾ, ಆಪ್ಲಾಕ್ ಮತ್ತು ಡ್ಯುಯಲ್ ಸ್ಪೇಸ್ ಲೈಟ್ ಸೇರಿದಮತೆ ಸುಮಾರು 54 ಆ್ಯಪ್‍ಅಪ್ಲಿಕೇಶನ್‍ ಗಳ ನಿಷೇಧಿಸುವ ಸಾಧ್ಯತೆ ಇದೆ. ಕಳೆದ ವರ್ಷ ಜೂನ್‍ನಲ್ಲಿ, ರಾಷ್ಟ್ರದ ಸಾರ್ವಭೌಮತ್ವ ಮತ್ತು ಭದ್ರತೆಗೆ ಬೆದರಿಕೆಯನ್ನು ಉಲ್ಲೇಖಿಸಿದಕ್ಕಾಗಿ ಭಾರತ ಸರ್ಕಾರ ಟಿಕ್ಟಾಕï, ವೀಚಾಟ್ ಮತ್ತು ಹೆಲೋನಂತಹ ಆ್ಯಪ್ ಸಾಮಾಜಿಕ ಮಾಧ್ಯಮ ಪ್ಲಾಟಾರ್ಮಳು ಸೇರಿದಂತೆ 59 ಚೀನೀ ಮೊಬೈಲ್ ಅಪ್ಲಿಕೇಶನ್ಗಳನ್ನು ನಿಷೇಧಿಸಿತು. ಮೇ 2020 ರಲ್ಲಿ ಚೀನಾದೊಂದಿಗಿನ ಗಡಿ ಉದ್ವಿಗ್ನತೆಯ ನಂತರ ಭಾರತದಲ್ಲಿ ಈವರೆಗೆ ಸುಮಾರು 300 ಅಪ್ಲಿಕೇಶನ್ಗಳನ್ನು ನಿರ್ಬಂಧಿಸಲಾಗಿದೆ. ಸದ್ಯದಲ್ಲೇ ಆದೇಶ ಹೊರಬೀಳಲಿದೆ ಎನ್ನಲಾಗಿದೆ. ವರದಿ: ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್…

Read More

ಚಿತ್ರದುರ್ಗ: ಬುಡಕಟ್ಟು ಜನಾಂಗಕ್ಕೆ ಸೇರಿದ ರಾಜ್ಯ ಕಾಡುಗೊಲ್ಲರ ಸಮಾಜ ಶೈಕ್ಷಣಿಕವಾಗಿ, ಆರ್ಥಿಕವಾಗಿ ತುಂಬಾ ಹಿಂದುಳಿದ ಸಮಾಜವಾಗಿದ್ದು, ಈ ಸಮುದಾಯವನ್ನು ಪರಿಶಿಷ್ಠ ಪಂಗಡಕ್ಕೆ  ಸೇರಿಸಲು ಎಲ್ಲಾ ಅರ್ಹತೆ  ಹೊಂದಿದ್ದು, ಈ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಧ್ವನಿ ಎತ್ತಿದ ಮಾಜಿ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ, ಶಿವಲಿಂಗೇಗೌಡರು, ಮಾಧುಸ್ವಾಮಿ, ರಂಗನಾಥ್ ಕುಣಿಗಲ್, ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್ ಸೇರಿದಂತೆ ಎಲ್ಲಾ ಶಾಸಕರುಗಳನ್ನು ಪಕ್ಷಾತೀತವಾಗಿ ಕಾಡುಗೊಲ್ಲ ಸಮಾಜದಿಂದ ಅಭಿನಂದಿಸುತ್ತೇವೆ ಎಂಬುದಾಗಿ ಕಾಡುಗೊಲ್ಲರ ಮುಖಂಡ ಹಾಗೂ ಜಿ.ಪಂ.ಸದಸ್ಯರಾದ ಸಿ.ಬಿ.ಪಾಪಣ್ಣ ಹೇಳಿದರು. ಹಿರಿಯೂರು ನಗರದ ಎನ್ .ಹೆಚ್. 4ರ ಬಳಿ ಇರುವ ನಗರದ ಸಂಗೀತ ಕಂರ್ಪಟ್ಸ್  ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾಡುಗೊಲ್ಲರ ಸಮಾಜದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕಾಡುಗೊಲ್ಲರ ಮುಖಂಡರಾದ  ಗೋಪಿಯಾದವ್ ಮಾತನಾಡಿ, ನಮ್ಮ ಚಿತ್ರದುರ್ಗ ಜಿಲ್ಲೆಯಲ್ಲಿ ಕಾಡುಗೊಲ್ಲ ಸಮಾಜದ ಹೆಚ್ಚು ಜನರಿದ್ದು, ಈ ಜನರಿಂದ ಮತ ಪಡೆದು ಆಯ್ಕೆಯಾದ ನಮ್ಮ ಜಿಲ್ಲೆಯ ಶಾಸಕರುಗಳಾದ ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ, ಹೊಳಲ್ಕೆರೆ ಶಾಸಕ ಚಂದ್ರಪ್ಪ, ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್, ಚಳ್ಳಕೆರೆ ಶಾಸಕ ರಘುಮೂರ್ತಿ,…

Read More

ಶ್ರೀಹರಿಕೋಟಾ: 2022ರಲ್ಲಿ ತನ್ನ ಪ್ರಥಮ ಉಪಗ್ರಹ ಉಡಾವಣಾ ಕಾರ್ಯ ಕೈಗೊಂಡ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇಂದು ನಸುಕಿನ ಜಾವ ಪಿಎಸ್‍ ಎಲ್‍ ವಿ-ಸಿ52 ರಾಕೆಟ್ ಮೂಲಕ ಭೂ ವೀಕ್ಷಣಾ ಉಪಗ್ರಹ ಇಒಎಸ್-04 ಮತ್ತು ಇತರ ಎರಡು ಚಿಕ್ಕ ಉಪಗ್ರಹಗಳನ್ನು ನಿಗದಿತ ಕಕ್ಷೆಗೆ ಸೇರ್ಪಡಿಸುವಲ್ಲಿ ಯಶಸ್ವಿಯಾಯಿತು. ಇದು ಒಂದು ಅದ್ಭುತ ಸಾಧನೆಯಾಗಿದೆ ಎಂದು ಇಸ್ರೋ ಬಣ್ಣಿಸಿದೆ. 25 ಗಂಟೆ, 30 ನಿಮಿಷಗಳ ಕ್ಷಣಗಣನೆ ಬಳಿಕ ಇಸ್ರೋ ಪಿಎಸ್‍ಎಲ್‍ವಿ ರಾಕೆಟ್ ಮುಂಜಾನೆ 5.59ರಲ್ಲಿ ಈ ಮೂರು ಉಪಗ್ರಹಗಳನ್ನು ಕಪ್ಪು ಆಗಸದೆಡೆಗೆ ಚಿಮ್ಮಿ ಹೊತ್ತೊಯ್ದು ಉದ್ದೇಶಿತ ಕಕ್ಷೆಗೆ ಸೇರ್ಪಡೆಗೊಳಿಸಿತು. ವರ್ಷದ ಪ್ರಥಮ ಉಪಗ್ರಹ ಉಡಾವಣೆ ಉಸ್ತುವಾರಿ ಹೊತ್ತಿದ್ದ ವಿಜ್ಞಾನಿಗಳು ಹರ್ಷೋದ್ಗಾರ ಮಾಡಿದರು. ಸುಮಾರು 17 ನಿಮಿಷ 34 ಸೆಕೆಂಡ್‍ಗಳ ಪಯಣದ ಬಳಿಕ ಎಒಎಸ್-04, ಐಘೆಖPಐ್ಕಉ-ಸ್ಪಾಟ್ ಮತ್ತು ಐಘೆಖS2Sಈ-ಸ್ಪಾಟ್ ಉಪಗ್ರಹಗಳನ್ನು 529ಕಿ.ಮೀ.ಗಳಷ್ಟು ದೂರದ ಸನ್ ಸಿಂಕ್ರೋನಸ್ ಸೌರಕಕ್ಷೆಗೆ ಸಫಲವಾಗಿ ಸೇರ್ಪಡೆಗೊಳಿಸಲಾಯಿತು.ಬೇರ್ಪಡೆಗೊಂಡ ಬಳಿಕ ಇಒಎಸ್-4ರ ಎರಡು ಸೌರ ಸಾಧನಗಳು ಸ್ವಯಂಚಾಲಿತವಾಗಿ ನಿಯೋಜನೆಗೊಂಡವು. ಬೆಂಗಳೂರಿನ ಟೆಲಿಮೆಟ್ರಿ ಟ್ರ್ಯಾಕಿಂಗ್…

Read More

ಪಾವಗಡ:  ತಾಲ್ಲೂಕು ನಿಡಗಲ್ ಹೋಬಳಿ ಸಿ.ಕೆ.ಪುರ ಗ್ರಾಮ ಪಂಚಾಯತಿಯ ಸಿ.ಕೆ.ಪುರ ಗ್ರಾಮದಲ್ಲಿ ಸಮಾಜ ಸೇವಕರಾದ ನೆರಳೇಕುಂಟೆ  ನಾಗೇಂದ್ರಪ್ಪ ರೋಡ್ ಶೋ ನಡೆಸುವ ಮೂಲಕ ಗ್ರಾಮ ವೀಕ್ಷಣೆ  ಮಾಡಿದರು. ಬಳಿಕ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮದ  ಸ್ವಚ್ಛತೆಯನ್ನು ಕಾಪಾಡಿಕೊಂಡಾಗ ಮಾತ್ರ ಪ್ರತಿಯೊಬ್ಬರು ಆರೋಗ್ಯವಂತರಾಗಲು ಕಾರಣವಾಗಿರುತ್ತದೆ ಎಂದು ತಿಳಿಸಿದರು ಇದೇ ಸಂದರ್ಭದಲ್ಲಿ  ಶ್ರೀ ಚೆನ್ನಕೇಶವ ಕ್ರಿಕೆಟ್ ಆಟಗಾರರನ್ನು ಉದ್ದೇಶಿಸಿ ಮಾತನಾಡುತ್ತಾ, ಇಂದಿನ ಯುವಜನತೆ ದೈಹಿಕವಾಗಿ ಸದೃಢರಾಗಲು  ಕ್ರೀಡೆ ಮುಖ್ಯ ಕಾರಣವೆಂದು ತಿಳಿಸಿದರು ಮುಂದಿನ ದಿನಗಳಲ್ಲಿ ಆಟಗಾರರಾದ ನೀವುಗಳು,  ತಾಲ್ಲೂಕು ಮಟ್ಟ,  ಜಿಲ್ಲಾ ಮಟ್ಟ, ರಾಜ್ಯ ಮಟ್ಟದಲಿ ಉತ್ತಮವಾದ  ಕ್ರೀಡೆಗಳನ್ನು ಆಡುವುದರ ಮೂಲಕ ಊರಿನ ಕೀರ್ತಿಯನ್ನು ಹೆಚ್ಚಿಸಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷರಾದ ಲಕ್ಷಮ್ಮ ಈರಣ್ಣ,  ಮಾದಿಗ ಜನಾಂಗದ ಎಸ್. ಹನುಮಂತರಾಯಪ್ಪ, ಕನ್ನಮೇಡಿ,  ಮೀನಕುಂಟನಹಳ್ಳಿ, ನರಸಿಂಹಪ್ಪ, ಮಾಜಿ ಗ್ರಾ.ಪಂ.ಉಪಾಧ್ಯಕ್ಷರು, ಯುವ ಮುಖಂಡ  ಕಂಡಕ್ಟರ್ ಪ್ರಭು, ಮೊಬೈಲ್ ರವಿ, ಮುಖಂಡರಾದ ನರಸಿಂಹರೆಡ್ಡಿ,   ನಲಿಗಾನಹಳ್ಳಿ ಮಂಜುನಾಥ್  ಆಟಗಾರರು ಮತ್ತು ಊರಿನ ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.…

Read More

ತಿಪಟೂರು : ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ಬೆಂಗಳೂರು ಮತ್ತು ಗ್ಲೋಬಲ್ ಎಜುಕೇಷನ್ ಟ್ರಸ್ಟ್  ಮೈಸೂರು ಇವರ ಸಹಯೋಗದೊಂದಿಗೆ ದಕ್ಷ ಪಿ.ಯು.ಕಾಲೇಜಿನಲ್ಲಿ ನಾಡಿನ ಸಹಸ್ರರಾರು ಕವಿಗಳು ರಚಿಸಿರುವ “ನಮಸ್ತೆ ಸೈನಿಕ” ಕೃತಿ ಬಿಡುಗಡೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ವಿವಿಧ ಪ್ರಶಸ್ತಿಗಳ ಪ್ರದಾನ ಸಮಾರಂಭ ನಡೆಯಿತು. ಕರ್ನಾಟಕ ಗಡಿನಾಡು ಪ್ರಾಧಿಕಾರದ ಅದ್ಯಕ್ಷರಾದ ಡಾ.ಸಿ.ಸೋಮಶೇಖರ ಕಾರ್ಯಕ್ರಮವನ್ನು ಉದ್ಘಾಟಿಸಿ, ಸೈನಿಕರು ಸರ್ವರಿಂದಲೂ ಸೈ ಎನಿಸಿಕೊಳ್ಳುವ ಮಹಾ ತ್ಯಾಗಿಗಳು. ನೆಲ ಜಲ ಭಾಷೆಗಾಗಿ ನಮ್ಮ ಕನ್ನಡಿಗರು ಸದಾ ಸಿದ್ದರಿದ್ದಾರೆ ಎಂದರು. ಸಮಾರಂಭದ ರೂವಾರಿಗಳು , ಸಿನಿಮಾ ನಿರ್ದೇಶಕರಾದ ಗುಣವಂತ ಮಂಜು ಪ್ರಾಸ್ತಾವಿಕ ನುಡಿ ನಮನ ಸಲ್ಲಿಸಿದರು.  ಶ್ರೀ ಕೊಳದ ಮಠದ ಡಾ.ಶಾಂತವೀರ ಮಹಾ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ನಮಸ್ತೆ ಸೈನಿಕ ಕೃತಿಯ ಸಾಹಿತಿಗಳಲ್ಲಿ ಒಬ್ಬರಾದ ತಿಪಟೂರು ತಾಲೂಕಿನ ರೈತಕವಿ ಪಿ.ಶಂಕರಪ್ಪಬಳ್ಳೇಕಟ್ಟೆ ರವರಿಗೆ ಸಾಹಿತ್ಯ ಮತ್ತು ಸಾಮಾಜಿಕ ಕ್ಷೇತ್ರದ ಸಾಧನೆಗೆ ರಾಷ್ಟ್ರೀಯ ರತ್ನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಸಮಾರಂಭದಲ್ಲಿ ಡಾ.ಜಯಚಂದ್ರರಾಜು, ದಕ್ಷ ಕಾಲೇಜು…

Read More

ತುಮಕೂರು:  ಜಿಲ್ಲೆಯ ತುರುವೇಕೆರೆ ವಿಧಾನಸಭಾ ಕ್ಷೇತ್ರದ ಗುಬ್ಬಿ ತಾಲ್ಲೂಕಿನ ಗದ್ದೆಹಳ್ಳಿ ಗ್ರಾಮದಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಅಧೀನದ ಇಲಾಖೆ ಕೆ.ಆರ್.ಐ.ಡಿ.ಎಲ್  ವತಿಯಿಂದ  ಕಾಂಕ್ರೀಟ್ ರಸ್ತೆ ಕಾಮಗಾರಿಗೆ ತುರುವೇಕೆರೆ ಶಾಸಕ ಮಸಾಲೆ ಜಯರಾಂ ಗುದ್ದಲಿ ಪೂಜೆ ನೆರವೇರಿಸಿದರು. ಬಳಿಕ  ಮಾತನಾಡಿದ ಅವರು ಜನತೆಗೆ ಚುನಾವಣೆಗೂ ಮೊದಲು ಕೊಟ್ಟ ಮಾತಿನಂತೆಯೇ ಈ ಭಾಗಕ್ಕೆ ಸಾಕಷ್ಟು ಅಭಿವೃದ್ಧಿ ಕಾಮಗಾರಿ ಮಾಡಲಾಗಿದ್ದು, ಸಿ.ಎಸ್.ಪುರ ಹೋಬಳಿಯನ್ನು ಮಾದರಿ ಹೋಬಳಿಯಾಗಿ ಮಾಡುವಲ್ಲಿ ಶ್ರಮಿಸಿದ್ದೇನೆ ಎಂದರು. ಈ ಭಾಗದ ಎಲ್ಲಾ ಕೆರೆಗಳು ಕಟ್ಟೆಗಳಿಗೆ ಹೇಮಾವತಿ ನೀರು ಹರಿಸುವ ಮೂಲಕ ಈ ಭಾಗದ ಜನತೆಯ ಋಣ ತೀರಿಸಲು ಬದ್ದನಾಗಿದ್ದು, ಈಗಾಗಲೇ ಶೇ.80ರಷ್ಟು ಭಾಗ ಎಲ್ಲಾ ಅಭಿವೃದ್ಧಿ ಕಾಮಗಾರಿ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚು ಅನುದಾನ ತರುವ ಮೂಲಕ, ಕ್ಷೇತ್ರವನ್ನು ಮಾದರಿ ಕ್ಷೇತ್ರ ವಾಗಿ ಮಾಡಲಾಗುತ್ತದೆ ಎಂದರು. ಈ ಗದ್ದೆಹಳ್ಳಿಯಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವುದರಿಂದ ಗ್ರಾಮದ ಅಭಿವೃದ್ಧಿ ದೃಷ್ಟಿಯಿಂದ ನವಗ್ರಾಮ ಯೋಜನೆಯಡಿ ಗದ್ದೆಹಳ್ಳಿ ಗ್ರಾಮವನ್ನು ಆಯ್ಕೆ ಮಾಡಿದ್ದು ಹೆಚ್ಚಿನ ಅನುದಾನ ಈ…

Read More

ಪಾವಗಡ:  ತಾಲ್ಲೂಕಿನ ಬ್ಯಾಡನೂರು ಗ್ರಾ.ಪಂ. ವ್ಯಾಪ್ತಿಯ ಬಿ.ದೊಡ್ಡಹಟ್ಟಿ ಗ್ರಾಮದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಶಾಸಕ ವೆಂಕಟರಮಣಪ್ಪ ಅವರು ಗುದ್ದಲಿಪೂಜೆ ಮಾಡಿದರು. ಈ ಸಂದರ್ಭದಲ್ಲಿ ಅವರು ಹೈಮಾಸ್ಕ್ ವಿದ್ಯುತ್ ದೀಪವನ್ನೂ ಉದ್ಘಾಟಿಸಿದರು. ಇದೇ ವೇಳೆ ಇಲ್ಲಿನ ದೇವಸ್ಥಾನದ ಆವರಣದಲ್ಲಿ ಸಿಸಿ ರಸ್ತೆಯನ್ನು ನಿರ್ಮಿಸಲಾಗುವುದು ಎಂದು ಅವರು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮುಖಂಡರುಗಳಾದ ಎಚ್ ಜೋಗಪ್ಪ, ಕೆ ಪಾಲೇಳ್ಳಪ್ಪ, ಡಿ.ಎಂ.ಮಲ್ಲಯ್ಯ, ಡಿ.ಎಂ.ಮಹೇಶ್,  ಡಿ.ಹೆಚ್. ದೇವರಾಜು, ಯಾದವ ಮುಖಂಡರುಗಳಾದ  ಮುಗದಾಳ ಬೆಟ್ಟ ನರಸಿಂಹಪ್ಪ, ರೈತ ಮುಖಂಡ ನರಸಿಂಹರೆಡ್ಡಿ, ಪೂಜಾರಪ್ಪ,ಹಾಗೂ  ಇಲಾಖಾಧಿಕಾರಿಗಳಾದ ಜಿ.ಪಂ. ಎ ಇ ಇ ಸುರೇಶ್, ಬಸವಲಿಂಗಪ್ಪ, ದೇಶಪಾಂಡೆ, ಪಾಪಣ್ಣ ವಿ.ಹೆಚ್.ಪಾಳ್ಯ, ಹನುಮೇಶ್, ಶಿಕ್ಷಕ ಮಲ್ಲಯ್ಯ, ಶಿವರಾಜು, ಕನಕ ಸೇರಿ ಇನ್ನೂ ಹಲವಾರು ಸ್ಥಳೀಯ ನಾಯಕರು ಉಪಸ್ಥಿತರಿದ್ದರು. ವರದಿ: ದೇವರಹಟ್ಟಿ ನಾಗರಾಜು, ಕಸಬಾ ಹೋಬಳಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್…

Read More

ಸರಗೂರು: ತಾಲ್ಲೂಕಿನ ನುಗು ಡ್ಯಾಂನಿಂದ ಮುಳ್ಳೂರುವರೆಗೆ  ಸುಮಾರು 3 ಕಿ.ಮೀ.  ಉದ್ದದವರೆಗೂ ಕಳಪೆ  ಕಾಮಗಾರಿ ಮಾಡಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಗುತ್ತಿಗೆದಾರ ಶಾಂತಮಲ್ಲಪ್ಪ ಕೋತ್ತೇಗಾಲ ,  ಸರಿಯಾದ ರೀತಿಯಲ್ಲಿ ಕೆಲಸ ಮಾಡಿಸಿಲ್ಲ ಎಂದು ಇಲ್ಲಿನ ನಿವಾಸಿಗಳು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು,  ಸುಮಾರು ವೆಚ್ಚ 4.30 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ನಡೆಸಲಾಗಿದೆ. ಆದರೆ, ಗುತ್ತಿಗೆದಾರ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಣವನ್ನು ದುರುಪಯೋಗ ಮಾಡಿಕೊಂಡು ಕಳಪೆ ಕಾಮಗಾರಿ ನಡೆಸಿದ್ದಾರೆ. ರಸ್ತೆಯ ಪ್ಯಾಚಿಂಗ್ ಡಾಂಬರೀಕರಣ ಮಾಡದೇ ರಸ್ತೆಗೆ ಮಣ್ಣು ಹಾಕಿ ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ರಸ್ತೆಯ ಕೋತ್ತೇಗಾಲ ಗ್ರಾ.ಪಂ. ಸದಸ್ಯ ಮಹದೇವ ಮಾತನಾಡಿ, ಈ ರಸ್ತೆಗೆ ಡಾಂಬರಿಕರಣ ಮಾಡಿಲ್ಲ. ರಸ್ತೆಯ ಗುಂಡಿಗಳಿಗೆ ಪ್ಯಾಚಿಂಗ್ ಮಾಡದೇ, ಬರೇ ಮಣ್ಣು ಹಾಕಿ ಬಿಟ್ಟಿದ್ದಾರೆ.  ಅಧಿಕಾರಿಗಳು ಮತ್ತು ಗುತ್ತಿಗೆದಾರ ಸೇರಿ ಕಳಪೆ ಕಾಮಗಾರಿ ಮಾಡಿ  ಅನ್ಯಾಯ ಮಾಡಿದ್ದಾರೆ. ಇಂಜಿನಿಯರ್ ಮತ್ತು ಗುತ್ತಿಗೆದಾರರ ವಿರುದ್ಧ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.…

Read More

ಪಾವಗಡ: ಕೊವಿಡ್ ನಿಂದ ಸಂಕಷ್ಟಕ್ಕೊಳಗಾಗಿರುವ  ಬಡ ಕುಟುಂಬಗಳಿಗೆ  ತಮಟೆ ಸಂಸ್ಥೆ ವತಿಯಿಂದ ಆಹಾರದ ಕಿಟ್ ವಿತರಣೆ ಕಾರ್ಯಕ್ರಮವನ್ನು ಪಾವಗಡ ನಗರದ ಕಚೇರಿಯಲ್ಲಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ  ಡಾ.ಕೆ.ಬಿ. ಓಬಳೇಶ್,  ಪಾವಗಡ ತಾಲ್ಲೂಕು ಗಡಿ ತಾಲ್ಲೂಕಾಗಿದ್ದು, ಈ ತಾಲ್ಲೂಕಿನ ಗ್ರಾಮೀಣ ಭಾಗದ ಬಡಜನರು ಕೋವಿಡ್ ನಿಂದಾಗಿ ಬಹಳಷ್ಟು ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಹೀಗಾಗಿ ನಮ್ಮ ತಮಟೆ ಸಂಸ್ಥೆ ವತಿಯಿಂದ ಸುಮಾರು 200 ಜನರಿಗೆ ರೇಷನ್ ಹಂಚುತ್ತಿದ್ದೇವೆ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾಜಿ ಶಾಸಕರಾದ ಕೆ.ಎಂ.ತಿಮ್ಮರಾಯಪ್ಪ ಮಾತನಾಡಿ, ಪಾವಗಡ ಅಭಿವೃದ್ದಿಗೆ ನಮ್ಮ ಸರ್ಕಾರ‌ ಇದ್ದಾಗ ಸಾಕಷ್ಟು ಅಭಿವೃದ್ದಿ ಕೆಲಸಗಳನ್ನು ಮಾಡಿದ್ದೆವು.  ದೇಶಕ್ಕೆ ಕೋವಿಡ್ ಬಂದು ಎರಡು ವರ್ಷಗಳು ಕಳೆಯುತ್ತಾ ಬಂತು.  ಇಂತಹ ಸಂದರ್ಭದಲ್ಲಿ ಕೊವಿಡ್ ನಿಂದ ಸಂಕಷ್ಟಕ್ಕೊಳಗಾಗಿರುವ ಕುಟುಂಬಗಳಿಗೆ ತಮಟೆ ಸಂಸ್ಥೆ ಆಹಾರ ಕಿಟ್ ವಿತರಣೆ ಮಾಡುವುದು ಉತ್ತಮ ಕಾರ್ಯ ಎಂದು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಕಲಾವಿದರಾದ ಸಿ.ಕೆ. ಪುರ ಹನುಮಂತರಾಯಪ್ಪ ನವರು ಅಂಬೇಡ್ಕರ್ ಕುರಿತು ಹೋರಾಟದ ಹಾಡನ್ನು…

Read More

ತುಮಕೂರು:   ಕರ್ನಾಟಕ ರಾಜ್ಯ ಸೌಹಾರ್ದತೆ ಮತ್ತೊಂದು ಹೆಸರು ಅಂತಹ ಸೌಹಾರ್ದತೆಗೆ ಯಾವುದೇ ಕಾರಣಕ್ಕೂ ಧಕ್ಕೆಯಾಗಬಾರದು ಎಂದು ಕರ್ನಾಟಕ ರಾಜ್ಯ ವರ್ಕ್ ಬೋರ್ಡ್ ರಾಜ್ಯಾಧ್ಯಕ್ಷ ಮೌಲಾನ ಮಹಮ್ಮದ್ ಶಫಿ ಆಜಾದಿ ತಿಳಿಸಿದ್ದಾರೆ. ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಅವರು , ಸಿದ್ದಗಂಗಾ ಶ್ರೀಗಳೊಂದಿಗೆ  ಹಿಜಾಬ್ ಹಾಗೂ ಕೇಸರಿ ಶಾಲಿನ ವಿವಾದಕ್ಕೆ ಸಂಬಂಧಿಸಿದಂತೆ ಸುದೀರ್ಘವಾಗಿ ಚರ್ಚಿಸಿದರು. ಬಳಿಕ ಪತ್ರಕರ್ತ ಜೊತೆಗೆ ಮಾತನಾಡಿದ ಅವರು ಕರ್ನಾಟಕದ  ಸೌಹಾರ್ದತೆಗೆ ತುಮಕೂರಿನ ಸಿದ್ದಗಂಗಾ ಮಠ ಪ್ರಸಿದ್ಧ. ಪ್ರಥಮಬಾರಿಗೆ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದೇನೆ. ಸಹೋದರ ಧರ್ಮೀಯ ಸ್ವಾಮೀಜಿಯವರೊಂದಿಗೆ ಇಂದಿನ ಸ್ಥಿತಿ ಗತಿಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು,  ಮುಂಚೆ ನಮ್ಮ ಕರ್ನಾಟಕ ಯಾವ ರೀತಿಯ ಸೌಹಾರ್ದಯುತವಾಗಿ ಇತ್ತು, ಅದೇ ರೀತಿಯಲ್ಲಿ ಮುಂದುವರಿಯಬೇಕು ಅದಕ್ಕೆ ಧಕ್ಕೆ ಬರಬಾರದು ಸೌಹಾರ್ದ ಹಾಗೂ ಸಾಮರಸ್ಯವನ್ನು ಹಾಳುಮಾಡುವ ವ್ಯಕ್ತಿಗಳನ್ನು ನಾವೆಲ್ಲರೂ ಸೇರಿ ಮಟ್ಟಹಾಕಬೇಕು. ಹಿಂದೂ-ಮುಸ್ಲಿಂ ಸೌಹಾರ್ದತೆಗೆ ಸಮಸ್ಯೆಯಾಗಬಾರದು ಎಂದರು. ಪ್ರಕರಣ ಹೈಕೋರ್ಟ್ ನಲ್ಲಿದ್ದು, ತೀರ್ಪು ಏನು ಬರುತ್ತೆ ನೋಡಬೇಕು.  ಕೋರ್ಟ್ ತೀರ್ಪು ಸೌಹಾರ್ದಯುತವಾಗಿ ಬರುವ…

Read More