ಸರಗೂರು: ಬಿ ಮಟಕರೆ ಗ್ರಾಮ ಪಂಚಾಯಿತಿ ಮೂರನೇ ಅವಧಿಯ ಉಪಾಧ್ಯಕ್ಷ ಸ್ಥಾನಕ್ಕೆ ಗೌರಿಬಾಯಿ ಹೇಮಾಜಿ ನಾಯ್ಕ ಅವಿರೋಧವಾಗಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಆಯ್ಕೆಗೊಂಡಿದ್ದಾರೆ.
ತಾಲೂಕಿನ ಬಿ ಮಟಕೇರೆ ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರದಂದು ಗ್ರಾಪಂ ಆವರಣದಲ್ಲಿ ಚುನಾವಣೆ ನಿಗದಿಯಾಗಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಬೆಂಬಲಿತ ಗೌರಿಬಾಯಿ ಹೇಮಾಜಿನಾಯ್ಕ ರವರು ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಕಾರ್ಯನಿರ್ವಹಿಸುತ್ತಿದ್ದ ಉಪವಿಭಾಗ ಕಬಿನಿ ನೀರಾವರಿ ಇಲಾಖೆ ಸಹಾಯಕ ಎಇಇ ಉಷಾ ಗೌರಿಬಾಯಿ ಹೇಮಾಜಿನಾಯಕ ರವರನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.
ನೂತನ ಉಪಾಧ್ಯಕ್ಷೆ ಗೌರಿ ಬಾಯಿ ಮಾತನಾಡಿ, ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರು ಜೊತೆಗೂಡಿ ಗ್ರಾಮದ ಅಭಿವೃದ್ಧಿಗಾಗಿ ಶ್ರಮಿಸುವುದಾಗಿ ಎಂದು ಹೇಳಿದರು.
ನಂತರ ಗ್ರಾಪಂ ಸದಸ್ಯ ಹಾಗೂ ತಾಲ್ಲೂಕು ಎಸ್ಸಿ ಎಸ್ಟಿ ಸಮಿತಿ ಸದಸ್ಯ ಕುರ್ಣೇಗಾಲ ಬೆಟ್ಟ ಸ್ವಾಮಿ ಮಾತನಾಡಿ ಶಾಸಕ ಅನಿಲ್ ಚಿಕ್ಕಮಾದು ರವರ ಮಾರ್ಗದರ್ಶನದಲ್ಲಿ ಎಲ್ಲ ಸದಸ್ಯರ ಸಹಕಾರದಿಂದ ಪಂಚಾಯಿತಿಯ ಎಲ್ಲ ಗ್ರಾಮಗಳ ಅಭಿವೃದ್ಧಿಗಾಗಿ ಶ್ರಮಿಸಲಾಗುವುದು. ರಸ್ತೆ, ಕುಡಿಯುವ ನೀರು, ಸ್ವಚ್ಛತೆಗೆ, ಬೀದಿ ದೀಪ ಯೋಜನೆಗಳಿಗೆ ಆದ್ಯತೆ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ನಾಗೇಂದ್ರ, ಸದಸ್ಯರು ಅಜೀತ್ ಕುಮಾರ್, ದೇವದಾಸ್, ನಾಗೇಶ್, ಹರಿದಾಸ್, ಕಾಳಸ್ವಾಮಿ, ಭಾರತಿ, ವಿನೋದ, ಸುನಿತಾ ಬಾಯಿ, ನಾಗಯ್ಯ, ರಾಣಿ ಬಾಯಿ, ಕೃಷ್ಣ ಬಿ ಎಚ್, ರತ್ನಮ್ಮ,ರೂಪಾಬಾಯಿ, ಚಿನ್ನಮ್ಮ, ಸುಮತಿ, ನಾಗರತ್ನ, ಬೋಮ್ಮ, ಮೀನಾಕುಮಾರಿ, ಅಶ್ವಿನಿ ಎನ್.ಆರ್., ರತ್ನಯ್ಯ ಎಂ.ಡಿ., ವೀನಾಕುಮಾರ್, ಮುಖಂಡರು ಕಾಡುಬೆಗೂರು ಸುಂದರ, ಕಲ್ಲಹಳ್ಳ ಅಭಿಕುಮಾರ್, ಶಿವಾಜಿ ನಾಯಕ, ಚಿನ್ನಪ್ಪ, ನಾಗ ನಾಯಕ, ಶ್ರೀನಿವಾಸ, ನಾಗರಾಜನಾಯಕ, ಇನ್ನೂ ಮುಖಂಡರು ಸೇರಿದಂತೆ ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW