ಮಧುಗಿರಿ: ತಾಲೂಕಿನ ದೊಡ್ಡೇರಿ ಹೋಬಳಿ ಬಡವನಹಳ್ಳಿ ಗ್ರಾಮದ ಎಸ್.ಆರ್.ಬಾರ್ ಅಂಡ್ ರೆಸ್ಟೋರೆಂಟ್ ಬಡವರ ಕುಡಿತವನ್ನು ಬಂಡವಾಳ ಮಾಡಿಕೊಂಡು ಬಡ ಮದ್ಯ ಪ್ರಿಯರ ಬಳಿ ಹೆಚ್ಚು ಹಣವನ್ನು ಪೀಕುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಇದು ಬಾರ್ ಮಾಲೀಕರ ತಪ್ಪೋ ಅಥವಾ ಅಲ್ಲಿ ಕೆಲಸ ಮಾಡುವ ಕ್ಯಾಶಿಯರ್ ರವರ ಅವ್ಯವಹಾರಗಳೋ ಒಂದು ತಿಳಿಯದು..? ಈ ಬಾರ್ ನಲ್ಲಿ ಬಾರ್ ನವರೇ ಸ್ವಯಂ ಬೆಲೆಯನ್ನು ನಿಗದಿ ಮಾಡಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ, ಇಲ್ಲಿ ಸರ್ಕಾರದ ಆದೇಶವನ್ನು ಪಾಲಿಸುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.
ಸರ್ಕಾರ ನಿಗದಿ ಮಾಡಿರುವ ಬೆಲೆಗಿಂತ ದುಪ್ಪಟ್ಟು ಹಣವನ್ನು ಬಾರ್ ನವರು ವಸೂಲಿ ಮಾಡುತ್ತಿದ್ದಾರೆ. ಬಾರ್ ನಲ್ಲಿ ನೀಡಲಾಗುತ್ತಿರುವ ಬಿಲ್ಲುಗಳೇ ಇದಕ್ಕೆ ಸಾಕ್ಷಿಯಾಗಿದೆ.
ಇದು ಮಧುಗಿರಿ ತಾಲೂಕಿನ ಒಂದು ಬಾರ್ ನ ಕಥೆಯಲ್ಲ, ಸುಮಾರು ಕಡೆ ಗಡಿ ಭಾಗದಲ್ಲಿ ಹಾಗೂ ನಗರ ಪ್ರದೇಶಗಳಲ್ಲಿ ಕೆಲವು ಬಾರ್ ಮಾಲಿಕರು ಗ್ರಾಹಕರಿಂದ ದುಪ್ಪಟ್ಟು ಹಣ ವಸೂಲಿಗೆ ಇಳಿದಿದ್ದಾರೆ, ಇವರನ್ನು ಕಡಿವಾಣ ಹಾಕುವುದು ಯಾರು ಎನ್ನುವ ಯಕ್ಷಪ್ರಶ್ನೆಯಾಗಿದೆ.
ಬಡವನಹಳ್ಳಿ ಗ್ರಾಮದಲ್ಲಿ ಪೊಲೀಸ್ ಇಲಾಖೆ ಇದೆ ಹಾಗೂ ಮಧುಗಿರಿ ನಗರದಲ್ಲಿ ಅಬಕಾರಿಯ ಕಚೇರಿ ಇದೆ. ಆದರೂ ಬಾರ್ ಮಾಲೀಕರ ಗ್ರಾಹಕರಿಂದ ದುಪ್ಪಟ್ಟು ಹಣ ವಸೂಲಿ ಮಾಡಲು ಅಧಿಕಾರ ಕೊಟ್ಟವರ ಯಾರು.? ಎನ್ನುವುದು ಸಾರ್ವಜನಿಕರ ವಲಯದಲ್ಲಿ ಚರ್ಚೆಯಾಗಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಯಾವ ರೀತಿ ಕ್ರಮವನ್ನು ತೆಗೆದುಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕು, ಸರಿಯಾದ ಕ್ರಮವಾಗದಿದ್ದಲ್ಲಿ ಭೀಮ್ ಆರ್ಮಿ ಮಧುಗಿರಿ ಸಂಘಟನೆ ಇದರ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA