ತುರುವೇಕೆರೆ: ತಾಲೂಕಿನ ದಬ್ಬೆಘಟ್ಟ ಹೋಬಳಿಗೆ ಸೇರಿದ ನಡುವನಹಳ್ಳಿ ಗ್ರಾಮದ ಗ್ರಾಮದೇವತೆ ತುಳಸಮ್ಮ ಲಕ್ಷ್ಮೀದೇವಿ ದೇವಾಲಯದ ಮುಂಭಾಗದಲ್ಲಿ ಬಾಲ್ಯ ವಿವಾಹ ನಡೆಯುತ್ತಿದ್ದು, ಈ ಬಗ್ಗೆ ಮಾಹಿತಿಯ ಮೇರೆಗೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ ವೇಳೆ ಬಾಲಕ-ಬಾಲಕಿ ಹಾಗೂ ಅವರ ಪೋಷಕರು ಸ್ಥಳದಿಂದ ಪರಾರಿಯಾದ ಘಟನೆ ನಡೆದಿದೆ.
ಗ್ರಾಮದಲ್ಲಿ ಬಾಲ್ಯ ವಿವಾಹ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಮಾಧ್ಯಮಗಳು ಈ ಬಗ್ಗೆ ತುರುವೇಕೆರೆ ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಅರುಣ್ ಕುಮಾರ್ ಅವರಿಗೆ ಮಾಹಿತಿ ನೀಡಿದ್ದು, ಅವರು ಪೊಲೀಸರೊಂದಿಗೆ ನಡುವನಹಳ್ಳಿ ಗ್ರಾಮದ ದೇವಾಲಯದ ಭೇಟಿ ನೀಡುತ್ತಿದ್ದಂತೆಯೇ ಬಾಲಕ ಬಾಲಕಿ ಸಹಿತ ಪೋಷಕರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಇದೇ ವೇಳೆ ವಿವಾಹ ಕಾರ್ಯ ಮಾಡಲು ಬಂದಿದ್ದ ಅರ್ಚಕ, ಅಡುಗೆ ಭಟ್ಟನನ್ನು ಗಮನಿಸಿದ ಅಧಿಕಾರಿಗಳು ಬಾಲ್ಯ ವಿವಾಹದ ಕಾನೂನಿನ ಬಗ್ಗೆ ತಿಳಿಸಿದ್ದು, ಈ ರೀತಿಯ ಘಟನೆಗಳು ಕಂಡು ಬಂದರೆ ನಮಗೆ ತಿಳಿಸಬೇಕು ಎಂದು ಮನವಿ ಮಾಡಿದರು.
ಬಾಲಕ, ಬಾಲಕಿ ಹಾಗೂ ಪೋಷಕರು ಕುಣಿಗಲ್ ಮಾರ್ಗವಾಗಿ ಪರಾರಿಯಾಗಿದ್ದಾರೆನ್ನಲಾಗಿದೆ. ಸ್ಥಳದಲ್ಲಿ ಹೊಯ್ಸಳ ಸಿಬ್ಬಂದಿ 112 ಪೊಲೀಸ್ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.
ವರದಿ: ಸುರೇಶ್ ಬಾಬು .ತುರುವೇಕೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz