ಬೆಂಗಳೂರು : ಬೆಂಗಳೂರು -ಪುಣೆ ರಸ್ತೆಯು 841 ಕಿ.ಮೀ. ಅಂತರ ಹೊಂದಿದೆ. ಈ ಅಂತರ ಕ್ರಮಿಸಲು 14 ರಿಂದ 15 ಗಂಟೆ ಪ್ರಯಾಣ ಮಾಡುವುದು ಅನಿವಾರ್ಯವಾಗಿದೆ. ಹೀಗಾಗಿ ಎವರ್ ಗ್ರೀನ್ ಕಾರಿಡಾರ್ ಹೊಸ ಯೋಜನೆಯು ಎರಡು ನಗರಗಳ ನಡುವೆ 95 ಕಿ.ಮೀ. ಅಂತರ ಕಡಿಮೆ ಮಾಡಲಿರುವುದರ ಜತೆಗೆ 3ರಿಂದ 4 ಗಂಟೆ ಪ್ರಯಾಣದ ಅವಧಿ ಕಡಿತ ಆಗಲಿದೆ.
ಸದ್ಯ ಸಿದ್ಧಗೊಂಡಿರುವ ಡಿಪಿಆರ್ ಪ್ರಕಾರ ರಾಜ್ಯದಲ್ಲಿ 458 ಕಿ.ಮೀ. ಉದ್ದ ಹೆದ್ದಾರಿ ಇರಲಿದೆ. ಹಾಲಿ ಬೆಂಗಳೂರು-ಪುಣೆ ರಸ್ತೆಯು 841 ಕಿ.ಮೀ. ಅಂತರ ಕಾರಿಡಾರ್ ನಿರ್ಮಾಣದ ನಂತರ 95 ಕಿ.ಮೀ. ಅಂತರ ಕಡಿಮೆ ಆಗಲಿದೆ.
ಕರ್ನಾಟಕದ 9 ಜಿಲ್ಲೆಗಳಲ್ಲಿ ಹಾದು ಹೋಗಲಿರುವ ಹೆದ್ದಾರಿ 2023ರ ಆರಂಭದಲ್ಲಿ ಕಾಮಗಾರಿಗೆ ಚಾಲನೆ ಸಿಗುವ ಸಾಧ್ಯತೆ ಇದೆ.
ಗ್ರೀನ್ ಕಾರಿಡಾರ್ ಯೋಜನೆಯಡಿ ನಿರ್ಮಿಸಲು ಉದ್ದೇಶಿಸಿರುವ ಪುಣೆ-ಬೆಂಗಳೂರು ಎಕ್ಸ್ಪ್ರೆಸ್ ಷಟ್ಪಥ ಹೆದ್ದಾರಿ ಯೋಜನೆ, ಕೊಪ್ಪಳ ಜಿಲ್ಲೆಯ ಮೂಲಕ ಹಾದು ಹೋಗಲಿದ್ದು, ಈ ಭಾಗದ ಆರ್ಥಿಕ ಅಭಿವೃದ್ಧಿಗೆ ಹೊಸ ಭರವಸೆ ಮೂಡಿಸಿದೆ.
ಸಾರಿಗೆ, ಸಂಪರ್ಕ ಸುಧಾರಣೆ ದೃಷ್ಟಿಯಿಂದ ನೂತನ ಹೆದ್ದಾರಿ ನಿರ್ಮಾಣ ಯೋಜನೆಯನ್ನು ಕೆಲವು ತಿಂಗಳ ಹಿಂದೆ ಕೇಂದ್ರ ಸರಕಾರ ಘೋಷಿಸಿದೆ.
ಸದ್ಯ ಸಿದ್ಧಗೊಂಡಿರುವ ಡಿಪಿಆರ್ ಪ್ರಕಾರ ರಾಜ್ಯದಲ್ಲಿ 458 ಕಿ.ಮೀ. ಉದ್ದ ಹೆದ್ದಾರಿ ಇರಲಿದೆ. ಮಹಾರಾಷ್ಟ್ರದ ಪುಣೆ ಮತ್ತು ಬೆಂಗಳೂರನ್ನು ಸಂಪರ್ಕಿಸುವ ಈ ರಸ್ತೆಯು ಮಹಾರಾಷ್ಟ್ರದ 3 ಮತ್ತು ಕರ್ನಾಟಕದ ಒಟ್ಟು 9 ಜಿಲ್ಲೆಗಳಲ್ಲಿ ಹಾದು ಹೋಗಲಿದೆ. ಯೋಜನೆಗೆ 50,000 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.
ಈ ವರ್ಷದ ಅಂತ್ಯಕ್ಕೆ ನೀಲನಕ್ಷೆ ಸಿದ್ಧವಾಗಿ 2023ರ ಆರಂಭದಲ್ಲಿ ಕಾಮಗಾರಿಗೆ ಚಾಲನೆ ಸಿಗುವ ಸಾಧ್ಯತೆ ದಟ್ಟವಾಗಿದೆ.
ಈ ಹೆದ್ದಾರಿಯು ಪುಣೆ, ಸತರಾ, ಸಾಂಗ್ಲಿ ಮತ್ತು ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ಗದಗ, ಕೊಪ್ಪಳ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಬೆಂಗಳೂರು ಗ್ರಾಮೀಣ ಜಿಲ್ಲೆಗಳಲ್ಲಿ ಪುಣೆ-ಬೆಂಗಳೂರು ಎಕ್ಸ್ಪ್ರೆಸ್ ಹೈವೇ ಹಾದು ಹೋಗಲಿದೆ. ಪುಣೆ, ಸತರಾ, ಸಾಂಗ್ಲಿ ಮತ್ತು ಬೆಳಗಾವಿ, ಬಾಗಲಕೋಟೆ, ಗದಗ, ಕೊಪ್ಪಳ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಬೆಂಗಳೂರು ಗ್ರಾಮೀಣ ಜಿಲ್ಲೆಗಳ ಮೂಲಕ ಹಾದು ಹೋಗಲಿದೆ. ಈಗಿರುವ ಯಾವೊಂದು ಹೈವೇಗೂ ಸಂಪರ್ಕಿಸದಂತೆ ಗ್ರೀನ್ ಕಾರಿಡಾರ್ ಯೋಜನೆಯಡಿ 6 ಪಥಗಳ ರಸ್ತೆ ನಿರ್ಮಿಸಲು ನಿರ್ಧರಿಸಲಾಗಿದೆ. 700ಕಿ.ಮೀ. ಉದ್ದದ ರಸ್ತೆ ನಿರ್ಮಾಣವಾಗಲಿದೆ. ಅರಣ್ಯ, ನದಿ ಮೂಲಗಳಿಗೆ ಧಕ್ಕೆಯಾಗದಂತೆ ಯೋಜನೆ ರೂಪಿಸಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


