nammatumakuru

    Subscribe to Updates

    Get the latest creative news from FooBar about art, design and business.

    What's Hot

    ವಿಶ್ವಕಪ್ ಗೆದ್ದ ಭಾರತದ ಮಹಿಳಾ ತಂಡಕ್ಕೆ ಟಾಟಾ ಮೋಟಾರ್ಸ್‌ನಿಂದ ‘ಸಿಯೆರಾ’ ಕಾರು ಉಡುಗೊರೆ!

    December 17, 2025

    ಕುಣಿಗಲ್ ಸಹಕಾರಿ ರಂಗಕ್ಕೆ ತಾರತಮ್ಯವಾಗಿದ್ದಲ್ಲಿ ಸರಿಪಡಿಸಲಾಗುವುದು: ಸಿಎಂ ಸಿದ್ದರಾಮಯ್ಯ

    December 17, 2025

    ರಾಜ್ಯದಲ್ಲಿ ಹಗರಣಗಳ ಸರಮಾಲೆ, ಆಡಳಿತ ಸತ್ತುಹೋಗಿದೆ: ಸರ್ಕಾರದ ವಿರುದ್ಧ ಬಿ.ಸಿ. ಪಾಟೀಲ್ ಕಿಡಿ

    December 17, 2025
    Facebook Twitter Instagram
    ಟ್ರೆಂಡಿಂಗ್
    • ವಿಶ್ವಕಪ್ ಗೆದ್ದ ಭಾರತದ ಮಹಿಳಾ ತಂಡಕ್ಕೆ ಟಾಟಾ ಮೋಟಾರ್ಸ್‌ನಿಂದ ‘ಸಿಯೆರಾ’ ಕಾರು ಉಡುಗೊರೆ!
    • ಕುಣಿಗಲ್ ಸಹಕಾರಿ ರಂಗಕ್ಕೆ ತಾರತಮ್ಯವಾಗಿದ್ದಲ್ಲಿ ಸರಿಪಡಿಸಲಾಗುವುದು: ಸಿಎಂ ಸಿದ್ದರಾಮಯ್ಯ
    • ರಾಜ್ಯದಲ್ಲಿ ಹಗರಣಗಳ ಸರಮಾಲೆ, ಆಡಳಿತ ಸತ್ತುಹೋಗಿದೆ: ಸರ್ಕಾರದ ವಿರುದ್ಧ ಬಿ.ಸಿ. ಪಾಟೀಲ್ ಕಿಡಿ
    • ಅಯ್ಯಪ್ಪ ಮಾಲೆ ಧರಿಸಿದ ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರಹಾಕಿದ ಆರೋಪ: ಶಿಕ್ಷಕಿ ನೀಡಿದ ಸ್ಪಷ್ಟನೆ ಏನು?
    • ’45’ ಚಿತ್ರದ ಟ್ರೇಲರ್ ಬಿಡುಗಡೆ: ಡಿಸೆಂಬರ್ 25ಕ್ಕೆ ‘ಕರುನಾಡ ಚಕ್ರವರ್ತಿ’ ಶಿವರಾಜ್​ಕುಮಾರ್, ‘ರಿಯಲ್ ಸ್ಟಾರ್’ ಉಪೇಂದ್ರ ಹಾಗೂ ರಾಜ್ ಬಿ.ಶೆಟ್ಟಿ ಅಬ್ಬರ!
    • ಮಂಡ್ಯದಲ್ಲಿ ಹೆಚ್.ಡಿ. ಕುಮಾರಸ್ವಾಮಿ ಹುಟ್ಟುಹಬ್ಬ  ಅದ್ದೂರಿ ಆಚರಣೆ,  ಸಿಕ್ಕಿದ ಗಿಫ್ಟ್ ಏನು ಗೊತ್ತಾ?
    • ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪತ್ರ ಬರಹಗಾರರಿಂದ ಪ್ರತಿಭಟನೆ
    • ಎತ್ತಿನಹೊಳೆ ಯೋಜನೆ: ಜನ ಎಚ್ಚೆತ್ತುಕೊಂಡು ಹೋರಾಟ ರೂಪಿಸಬೇಕಿದೆ: ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ ಹಾಲಪ್ಪ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಬಸವನಗೌಡ ಪಾಟೀಲ್ ಯತ್ನಾಳರ ಅಜ್ಞಾನ ಪ್ರದರ್ಶನ: ಡಾ.ಡಿ.ಎನ್.ಯೋಗೀಶ್ವರಪ್ಪ
    ತುಮಕೂರು December 2, 2024

    ಬಸವನಗೌಡ ಪಾಟೀಲ್ ಯತ್ನಾಳರ ಅಜ್ಞಾನ ಪ್ರದರ್ಶನ: ಡಾ.ಡಿ.ಎನ್.ಯೋಗೀಶ್ವರಪ್ಪ

    By adminDecember 2, 2024No Comments2 Mins Read
    basavanna

    ಹನ್ನೆರಡನೇ ಶತಮಾನದ ದಾರ್ಶನಿಕ ಬಸವಣ್ಣನವರ ಅಂತ್ಯದ ಬಗ್ಗೆ ಇನ್ನೂ ಖಚಿತವಾದ ಸಂಶೋಧನೆಗಳು ನಡೆಯದೇ ಇರುವ ಸಂದರ್ಭದಲ್ಲಿ ಶಾಸಕರಾದ ಯತ್ನಾಳರು ಬಸವಣ್ಣ ಹೊಳೆಗೆ ಹಾರಿ ಬಿದ್ದು ಸತ್ತುಹೋದ ಎಂದು ಹೇಳಿರುವುದು ಅವರ ಅಜ್ಞಾನದ ಪರಮಾವಧಿ. ಈ ಮೂಲಕ ಅವರು ಬಸವಾನುಯಾಯಿಗಳ ಭಾವನೆಗಳಿಗೆ ಧಕ್ಕೆ ತಂದಿರುವುದೇ ಅಲ್ಲದೆ ಲಿಂಗಾಯಿತರನ್ನು ಅವಮಾನಿಸುವ ಮೂಲಕ ವೈದಿಕರನ್ನು ಮೆಚ್ಚಿಸಲು ಹೊರಟಿದ್ದಾರೆ ಎಂದು ಸಂಶೋಧಕ ಡಾ. ಡಿ.ಎನ್.ಯೋಗೀಶ್ವರಪ್ಪ ಹೇಳಿದರು.

    ಅವರು ಬಸವಕೇಂದ್ರ, ಜಯದೇವ ವಿದ್ಯಾರ್ಥಿ ನಿಲಯಟ್ರಸ್ಟ್ ಮತ್ತು ಜಾಗತಿಕ ಲಿಂಗಾಯತ ಮಹಾಸಭಾದವರು ಮುರುಘರಾಜೇಂದ್ರ ಸಭಾಂಗಣದಲ್ಲಿ ಏರ್ಪಡಿಸಿದ್ದ ಶರಣಸಂಗಮ ಮತ್ತು ವಿಜಯಕುಮಾರ ಕಮ್ಮಾರ್ ಅವರ ಶರಣ ಸಿದ್ಧಾಂತಗಳು ಎಂಬ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.


    Provided by
    Provided by

    ಸಾಮಾಜಿಕ ಕಳಕಳಿ ಇದ್ದ ಬಸವಣ್ಣ ದುರ್ಬಲ ಮನಸ್ಸಿನವರಾಗಿದ್ದರೆ ಅವರು ಅಂದು ಅಧಿಕಾರದ ಉನ್ನತ ಅಧಿಕಾರದಲ್ಲಿದ್ದರು ಇಡೀ ರಾಜಪ್ರಭುತ್ವವನ್ನು ಎದುರು ಹಾಕಿಕೊಂಡು ಸಾಮಾನ್ಯ ಜನರ ಪರವಾಗಿ ಹೋರಾಟ ಮಾಡುತ್ತಿರಲಿಲ್ಲ. ಅವರ ಉದ್ದೇಶ ಸಮಸಮಾಜ ನಿರ್ಮಾಣ ಮಾಡುವುದು, ಸಮಪಾಲು, ಸಮಬಾಳು ಎಂಬುದೇ ಬಸವಣ್ಣನ ಘೋಷಮಂತ್ರವಾಗಿತ್ತು ಎಂದರು.

    ಉಪನ್ಯಾಸ ನೀಡಿದ ಸಾಹಿತಿಗಳಾದ ಡಾ. ಬಿ.ಸಿ.ಶೈಲಾನಾಗರಾಜ್ ಅವರು ಕುಲಮೂಲ ಕಾಯಕ ಜೀವಿಗಳನ್ನು ಒಂದೆಡೆ ಸಂಘಟಿಸಿದ ಬಸವಣ್ಣ ಅವರ ಕಾಯಕಕ್ಕೆ ದೈವದ ಸ್ಪರ್ಶವನ್ನು ನೀಡಿ ದಲಿತ ಮತ್ತು ಹಿಂದುಳಿದ ವರ್ಗಗಳ ಸಾಮಾಜಿಕ ಸಮುದಾಯಗಳಿಗೆ ಆತ್ಮವಿಶ್ವಾಸವನ್ನು ತುಂಬಲು ಪ್ರಯತ್ನಿಸಿದ ಐತಿಹಾಸಿಕ ಮಹಾಪುರುಷ ಎಂದು ಬಣ್ಣಿಸಿದರು.

    ವಚನಗಳು ಆತ್ಮಸಾಕ್ಷಿಯ ನುಡಿಗಳು ಆಗಿದ್ದು ಕೆಲವೇ ಸಮುದಾಯಕ್ಕೆ ಮೀಸಲಾಗಿದ್ದ ಅಕ್ಷರ ಜ್ಞಾನವನ್ನು ಎಲ್ಲ ಸಮುದಾಯಗಳಿಗೆ ವಿಸ್ತರಿಸಿ ಅವರನ್ನೂ ಅಕ್ಷರವಂತರನ್ನಾಗಿ ಮಾಡಿದ ಬಸವಣ್ಣ ಸಾಕ್ಷರತಾ ಆಂದೋಲನದ ಜನಕನಾಗಿದ್ದಾನೆ. ಕುಲಕಸುಬನ್ನು ಮಾಡುತ್ತಿದ್ದ ಜನಾಂಗದ ಅನೇಕ ಶರಣರು ವಚನಗಳನ್ನು ರಚಿಸಿದ್ದು ಸುಮಾರು ಇಪ್ಪತ್ತೈದು ಸಾವಿರ ವಚನಗಳು ಲಭ್ಯವಿದೆ. 770 ವಚನಕಾರರಲ್ಲಿ 33 ವಚನಕಾರ್ತಿಯರೂ ಇರುವುದು ಬಸವಣ್ಣನವರ ಚಳುವಳಿಯ ಫಲಶ್ರುತಿಯಾಗಿದೆ ಎಂದರು.

    ಕೃತಿಯ ಲೇಖಕರಾದ ವಿಜಯಕುಮಾರ ಕಮ್ಮಾರ್ ಅವರು ಮಾತನಾಡಿ ದೇಹವನ್ನೇ ದೇವಾಲಯವಾಗಿ ರೂಪಿಸಿದ ಬಸವಣ್ಣ ಪ್ರತಿಯೊಬ್ಬರಿಗೂ ಇಷ್ಟಲಿಂಗಧಾರಣೆ ಮಾಡುವ ಮೂಲಕ ಶಿವಸಂಸ್ಕೃತಿಯ ನೇತಾರನೆನಿಸಿಕೊಂಡಿದ್ದಾನೆ. ಇಷ್ಟಲಿಂಗವೆಂಬುದು ಸಮಾನತೆಯ ಸಂಕೇತವಾಗಿದ್ದು ಅದರ ಮೂಲಕ ದೇವರನ್ನು ಸಂಪರ್ಕಿಸಬಹುದು ಎಂದು ಅಭಿಪ್ರಾಯಪಟ್ಟರು.

    ವೇದಿಕೆಯಲ್ಲಿ ಕೈಗಾರಿಕೋದ್ಯಮಿ ಡಿ.ವಿ.ಶಿವಾನಂದ್ ಹಾಜರಿದ್ದರು. ಸಿದ್ದಗಂಗಮ್ಮ ಬಿ. ಸಿದ್ಧರಾಮಣ್ಣ ಅಧ್ಯಕ್ಷತೆ ವಹಿಸಿದ್ದರು. ರಾಜೇಶ್ವರಿ ಶಿವಾನಂದ್ ಪ್ರಾರ್ಥಿಸಿದರು. ಜಾಗತಿಕ ಲಿಂಗಾಯತ ಮಹಾಸಭಾದ ನಾಗಭೂಷಣ್ ಸ್ವಾಗತಿಸಿದರು. ತಾಲ್ಲೂಕು ಕ.ಸಾ.ಪ. ಅಧ್ಯಕ್ಷ ಚಿಕ್ಕಬೆಳ್ಳಾವಿ ಶಿವಕುಮಾರ್ ವಂದಿಸಿದರು. ಬಸವಕೇಂದ್ರದ ಕಾರ್ಯದರ್ಶಿ ಚಂದ್ರಶೇಖರ್ ನಿರೂಪಿಸಿದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx

    admin
    • Website

    Related Posts

    ಅಯ್ಯಪ್ಪ ಮಾಲೆ ಧರಿಸಿದ ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರಹಾಕಿದ ಆರೋಪ: ಶಿಕ್ಷಕಿ ನೀಡಿದ ಸ್ಪಷ್ಟನೆ ಏನು?

    December 17, 2025

    ಎತ್ತಿನಹೊಳೆ ಯೋಜನೆ: ಜನ ಎಚ್ಚೆತ್ತುಕೊಂಡು ಹೋರಾಟ ರೂಪಿಸಬೇಕಿದೆ: ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ ಹಾಲಪ್ಪ

    December 16, 2025

    ತುಮಕೂರು ಡಿಸಿ ಕಚೇರಿಗೆ ಬಾಂಬ್ ಬೆದರಿಕೆ: ಸಂಪೂರ್ಣ ಶೋಧ, ಸಭೆಗಳು ರದ್ದು! 

    December 16, 2025

    Comments are closed.

    Our Picks

    ವಿಶ್ವಕಪ್ ಗೆದ್ದ ಭಾರತದ ಮಹಿಳಾ ತಂಡಕ್ಕೆ ಟಾಟಾ ಮೋಟಾರ್ಸ್‌ನಿಂದ ‘ಸಿಯೆರಾ’ ಕಾರು ಉಡುಗೊರೆ!

    December 17, 2025

    ದೆಹಲಿ ಕಾರು ಸ್ಫೋಟ ಪ್ರಕರಣ: ತುಮಕೂರಿನಲ್ಲೂ ವಿಚಾರಣೆ!

    November 14, 2025

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಷ್ಟ್ರೀಯ ಸುದ್ದಿ

    ವಿಶ್ವಕಪ್ ಗೆದ್ದ ಭಾರತದ ಮಹಿಳಾ ತಂಡಕ್ಕೆ ಟಾಟಾ ಮೋಟಾರ್ಸ್‌ನಿಂದ ‘ಸಿಯೆರಾ’ ಕಾರು ಉಡುಗೊರೆ!

    December 17, 2025

    ಬೆಂಗಳೂರು: ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಐತಿಹಾಸಿಕ ಜಯ ಸಾಧಿಸಿ ದೇಶಕ್ಕೆ ಕೀರ್ತಿ ತಂದ ಭಾರತೀಯ ಮಹಿಳಾ ಕ್ರಿಕೆಟ್ ತಂಡದ…

    ಕುಣಿಗಲ್ ಸಹಕಾರಿ ರಂಗಕ್ಕೆ ತಾರತಮ್ಯವಾಗಿದ್ದಲ್ಲಿ ಸರಿಪಡಿಸಲಾಗುವುದು: ಸಿಎಂ ಸಿದ್ದರಾಮಯ್ಯ

    December 17, 2025

    ರಾಜ್ಯದಲ್ಲಿ ಹಗರಣಗಳ ಸರಮಾಲೆ, ಆಡಳಿತ ಸತ್ತುಹೋಗಿದೆ: ಸರ್ಕಾರದ ವಿರುದ್ಧ ಬಿ.ಸಿ. ಪಾಟೀಲ್ ಕಿಡಿ

    December 17, 2025

    ಅಯ್ಯಪ್ಪ ಮಾಲೆ ಧರಿಸಿದ ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರಹಾಕಿದ ಆರೋಪ: ಶಿಕ್ಷಕಿ ನೀಡಿದ ಸ್ಪಷ್ಟನೆ ಏನು?

    December 17, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.