ಬಿಗ್ ಬಾಸ್ ಕನ್ನಡ 11ನೇ ಆವೃತ್ತಿ ಈವರೆಗಿನ ಎಲ್ಲ ಸೀಸನ್ ಗಿಂತಲೂ ಹೆಚ್ಚು ವಿವಾದಕ್ಕೀಡಾಗಿದೆ. ಇದಕ್ಕೆ ಪ್ರಮುಖ ಕಾರಣ ಲಾಯರ್ ಜಗದೀಶ್ ಎಂಟ್ರಿ ಅಂತ ಬಿಗ್ ಬಾಸ್ ವೀಕ್ಷಕರು ಹೇಳುತ್ತಿದ್ದಾರೆ. ಈ ನಡುವೆ ಒಂದೇ ಬಾರಿ ಬಿಗ್ ಬಾಸ್ ಮನೆಯಿಂದ ಇಬ್ಬಿಬ್ಬರು ಸ್ಪರ್ಧಿಗಳು ಒಂದೇ ಬಾರಿಗೆ ಔಟ್ ಆಗಿದ್ದಾರೆ.
ವಕೀಲ್ ಸಾಬ್ ಎಂದೇ ಖ್ಯಾತರಾಗಿರುವ ಜಗದೀಶ್ ಮತ್ತು ರಂಜಿತ್ರನ್ನು ಬಿಗ್ ಬಾಸ್ ಮನೆಯಿಂದ ಹೊರ ಕಳಿಸಲಾಗಿದ್ದು, ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ. ಬಿಗ್ ಬಾಸ್ ಮನೆಯಲ್ಲಿ ಲಾಯರ್ ಜಗದೀಶ್ ವಿರುದ್ಧ ಉಳಿದ 15 ಅಭ್ಯರ್ಥಿಗಳು ಒಟ್ಟಾಗಿ ಜಗಳವಾಡಿದ್ದು, ಎಲ್ಲರಿಗೂ ಜಗದೀಶ್ ತಿರುಗೇಟು ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಜಗದೀಶ್ ಮಹಿಳಾ ಅಭ್ಯರ್ಥಿಗಳಿಗೆ ಗೌರವ ಕೊಡದೆ ಮಾತನಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಜಗಳ ವಿಕೋಪಕ್ಕೆ ಹೋಗಿದ್ದು, ರಂಜಿತ್ ಜಗದೀಶ್ರನ್ನು ತಳ್ಳಿದ್ದಾರೆ. ಇದನ್ನೆಲ್ಲಾ ಗಂಭೀರವಾಗಿ ಪರಿಗಣಿಸಿ ಇಬ್ಬರನ್ನು ಕಾರ್ಯಕ್ರಮದಿಂದ ಹೊರಹಾಕಲಾಗಿದೆ. ಇದೀಗ ಲಾಯರ್ ಜಗದೀಶ್ಗೆ ಭಾರೀ ಬೆಂಬಲ ವ್ಯಕ್ತವಾಗಿದ್ದು, ಮಹಿಳೆಯಾದ ಮಾತ್ರಕ್ಕೆ ಏನು ಬೇಕಾದರೂ ಮಾತನಾಡಬಹುದಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಜಗಳದ ವೇಳೆ ಸ್ಪರ್ಧಿ ಚೈತ್ರಾ ಕುಂದಾಪುರ ಲಾಯರ್ ಜಗದೀಶ್ ಅವರಿಗೆ ನೀನು ಒಬ್ಬ ಅಪ್ಪನಿಗೆ ಹುಟ್ಟಿದ್ದರೆ ಎಂಬ ಪದ ಬಳಕೆ ಮಾಡ್ತಾರೆ. ಜಗದೀಶ್ ಅವರ ವಯಸ್ಸಿಗೂ ಮರ್ಯಾದೆ ಕೊಡದೇ ಹೋಗಲೋ ಅಂತ ಬೈದಿದ್ದಾರೆ. ಮಹಿಳಾ ಸ್ಪರ್ಧಿಗಳೂ ಬೈದಿದ್ದಾರೆ, ಜಗದೀಶ್ ಕೂಡ ಬೈದಿದ್ದಾರೆ. ಹಾಗಾಗಿ ಒಬ್ಬೊಬ್ಬರಿಗೆ ಒಂದೊಂದು ರೂಲ್ಸ್ ಸರಿಯಲ್ಲ ಅಂತ ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.
ಲಾಯರ್ ಜಗದೀಶ್ ಮಾತನಾಡಿದ ರೀತಿ ತಪ್ಪಾಗಿರಬಹುದು ಆದರೆ ಉಳಿದ ಅಭ್ಯರ್ಥಿಗಳು ಮಾಡಿದ್ದು ಸರಿನಾ ಎಂದು ಕೇಳಿರುವ ವೀಕ್ಷಕರು, ಜಗದೀಶ್ರನ್ನು ಹೊರ ಹಾಕುವುದಾದರೆ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದ ಮಹಿಳಾ ಅಭ್ಯರ್ಥಿಗಳನ್ನು ಕೂಡ ಹೊರ ಹಾಕಿ ಎಂದು ಒತ್ತಾಯಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296