ಪಾವಗಡ: ತಾಲ್ಲೂಕಿನಲ್ಲಿ ಸಂವಿಧಾನ ಬಳಗದ ವತಿಯಿಂದ ಭೀಮಾ ಕೋರೆಗಾಂವ್ ವಿಜಯೋತ್ಸವದ ಅಂಗವಾಗಿ ಬೈಕ್ ರಾಲಿಗೆ ಚಾಲನೆ ನೀಡಲಾಯಿತು.
ಭೀಮಾ ಕೋರೆಗಾಂವ್ ವಿಜಯೋತ್ಸವದ ಹಿನ್ನಲೆಯಲ್ಲಿ ಪಾವಗಡ ನಗರದ ನಿರೀಕ್ಷಣಾ ಮಂದಿರದಿಂದ ಹೊರಟು, ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸಂವಿಧಾನ ಶಿಲ್ಪಿಯ ಡಾ.ಆರ್.ಬಿ.ಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಪುಷ್ಪ ನಮನ ಸಲ್ಲಿಸಿ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.
ಸಿ.ಕೆ.ಪುರ ಹನುಮಂತರಾಯಪ್ಪನವರ ತಂಡದವರಿಂದ ಭೀಮ ಕೋರೆಗಾಂವ್ ಹಾಡಿನ ಮೂಲಕ ಕಾರ್ಯಕ್ರಮವನ್ನು ಪ್ರಾರಂಭವಾಯಿತು.
ಕಾರ್ಯಕ್ರಮದ ಸಂಘಟಕರಾದ ಸುಬ್ಬರಾಜು ಬೌದ್ಧ ಸಮಾಜ ಮಾತನಾಡಿ, ಭಾರತ ದೇಶವು ಜಾತಿ ವ್ಯವಸ್ಥೆಯಿಂದ ಕೂಡಿರುವ ದೇಶವಾಗಿದೆ. ಜಾತಿಯ ಕಾರಣಕ್ಕಾಗಿ ವ್ಯಕ್ತಿಯನ್ನು ಕೆಟ್ಟದಾಗಿ ಕಾಣುವ ಪರಿಸ್ಥಿತಿ ಇಂದಿಗೂ ಇದೆ ಎಂದು ಬೇಸರ ವ್ಯಕ್ತಪಡಿಸಿದರು.
ಡಿ ಜೆ ಎಸ್ ನಾರಾಯಣಪ್ಪ ಮಾತನಾಡಿ, ಈ ನಾಡಿನ ಶೋಷಿತರಿಗೆ ಒಂದು ಬದುಕನ್ನು ಕಟ್ಟಿಕೊಟ್ಟವರು ಅಂಬೇಡ್ಕರ್ ಅವರು, ಅಂಬೇಡ್ಕರ್ ಅವರನ್ನು ನಾವು ಸ್ಮರಣೆ ಮಾಡಿಕೊಳ್ಳಬೇಕು. ಜ.1, 1818 ರಲ್ಲಿ ಮೊಟ್ಟ ಮೊದಲ ಬಾರಿಗೆ ಸಮುದಾಯದ ಸ್ವಾಭಿಮಾನಕ್ಕಾಗಿ ಭೀಮಾ ಕೋರೆಗಾಂವ್ ಯುದ್ಧವು ನಡೆದಿದೆ. ಐದುನೂರು ಜನ ಮಹರ್ ಸೈನಿಕರು, 28 ಸಾವಿರ ಪೇಶ್ವೆಗಳ ವಿರುದ್ಧ ಯುದ್ಧ ಮಾಡಿ ಜಯಗಳಿಸಿದರು. ಇದನ್ನು ನಾವು ವಿಜಯೋತ್ಸವವಾಗಿ ದೇಶಾದ್ಯಂತ ಸಡಗರ ಸಂಭ್ರಮದಿಂದ ಆಚರಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು
ಇದೇ ಸಂದರ್ಭದಲ್ಲಿ ತಪಗಾನದೊಡ್ಡಿ ಮುತ್ಯಾಲಪ್ಪ ನವರ ಹುಟ್ಟು ಹಬ್ಬವನ್ನೂ ಆಚರಿಸಿ ಮುಖಂಡರು ಶುಭಾಶಯ ತಿಳಿಸಿದರು.
ಈ ಸಂದರ್ಭದಲ್ಲಿ ಈ ಕಾರ್ಯಕ್ರಮದಲ್ಲಿ ದಲಿತ ಮುಖಂಡರುಗಳಾದ ಮದ್ಲೆಟಪ್ಪ ದವಡಬೆಟ್ಟ , ಅಂಜಪ್ಪ ವೈ ಎನ್ ಹೊಸಕೋಟೆ, ವಿಜಿ ಪಾವಗಡ, ರಾಮಾಂಜಿನಪ್ಪ ಕಟ್ಟಡ ಕಾರ್ಮಿಕರ ತಾಲೂಕ್ ಅಧ್ಯಕ್ಷ, ನಾರಾಯಣಪ್ಪ ಡಿಎಸ್ ಎಸ್ ಜಿಲ್ಲಾ ಸಂಘಟನಾ ಸಂಚಾಲಕ ಕತಿಕ್ಯಾತನಹಳ್ಳಿ, ಟಿ ಎನ್ ಪೇಟೆ ರಮೇಶ್, ಪಿ ಎ ನರಸಿಂಹಪ್ಪ ಪಳವಳ್ಳಿ, ನರಸಿಂಹಪ್ಪ ಡಿಎಸ್ ಎಸ್ ತಾಲೂಕು ಸಂಚಾಲಕ, ರವಿಕುಮಾರ್ ಇಂದ್ರಬೆಟ್ಟ, ಬಂಗಾರಪ್ಪ, ಮುರಳಿ ಚಿನ್ನಮ್ಮನಹಳ್ಳಿ, ಭೋಜಪ್ಪ ಮಂಗಳವಾಡ, ನಾಗರಾಜು ರಾಪ್ಟೆ, ಹನುಮಂತರಾಯ ದೇವಲಕೆರೆ, ಹನುಮಂತರಾಯ ಟಿಎನ್ ಕೋಟೆ, ಮೈಲಾರಪ್ಪ ನಲಿಗಾನಹಳ್ಳಿ, ತಿಪ್ಪೇಸ್ವಾಮಿ ತುಮಕುಂಟೆ,ನಾಗರಾಜ್ ಪಾವಗಡ ಇನ್ನೂ ಅನೇಕ ದಲಿತ ಮುಖಂಡರು ಭಾಗವಹಿಸಿದ್ದರು.
ವರದಿ: ರಾಮಪ್ಪ ಸಿ.ಕೆ.ಪುರ