ತುಮಕೂರು: ಸಾಹಸಸಿಂಹ ಡಾ.ವಿಷ್ಣುವರ್ಧನ್ ರವರ ಹುಟ್ಟು ಹಬ್ಬವನ್ನು ಮಿಡಿಗೇಶಿ ಹೋಬಳಿ ನೇರಳೇಕೆರೆ ಗ್ರಾಮದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.
ಈ ಕಾರ್ಯಕ್ರಮದ ಉದ್ಘಾಟನೆಗೆ ಆಗಮಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಎಂ.ಎನ್.ಶಿವಕುಮಾರ್ ಹಾಗೂ ಧನಂಜಯ ರವರು ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಪಿಡಿಒ ಎಂ ಎನ್ ಶಿವಕುಮಾರ್ ಹಾಗೂ ಧನಂಜಯ್ ರವರು ಸಾಹಸಸಿಂಹ ವಿಷ್ಣುವರ್ಧನ್ ಅವರ ಸಾಧನೆಯ ಗುಣಗಾನ ಮಾಡಿದರು.
ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ದ್ರಾಕ್ಷಾಯಣಮ್ಮ, ಸದಸ್ಯರುಗಳಾದ ರಮೇಶ್, ಬಿಲ್ ಕಲೆಕ್ಟರ್ ಗೋವಿಂದರಾಜ್, ನಿವೃತ್ತ ಇಂಜಿನಿಯರ್ ಬಸವರಾಜ್, ಪತ್ರಿಕೆ ಬರಹಗಾರರಾದ ಎನ್ಎಸ್ ಈಶ್ವರ್ ಪ್ರಸಾದ್ ಹಾಗೂ ಅಂಬೇಡ್ಕರ್ , ಬ್ಯಾಂಕ್ ರಮೇಶ್ ಬಾಬು, ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಪದಾಧಿಕಾರಿಗಳಾದ ಎನ್. ನಟರಾಜ್, ಮೌರ್ಯ ಎನ್ ಜಿ , ನಾಗರಾಜು ಆಟೋ ಕರಿಯಣ್ಣ, ಅಶ್ವತ್ ಕುಮಾರ್, ವಾಟರ್ ಮ್ಯಾನ್ ಗೋವಿಂದರಾಜು, ನಾಗರಾಜು ಇನ್ನು ಮುಂತಾದ ಅಭಿಮಾನಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.