ಗುಬ್ಬಿ: ತಾಲೂಕಿನ ಸೋಮಲಾಪುರದಿಂದ ಹರಿದು ಹೋಗುವ ಹೇಮಾವತಿ ನಾಲೆ 15ರ ಮಳೆಯ ನೀರಿನಿಂದಾಗಿ ಚಾನಲ್ ಮೇಲಿನ ರಸ್ತೆಗಳು ಮೇಲೆ ನೀರು ಹರಿಯುತ್ತಿದ್ದು ಇದರಿಂದಾಗಿ ಜನರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ.
ನೀರು ಹರಿಯುವ ವೇಗಕ್ಕೆ ಕೆಲವು ಕಡೆ ಬಿರುಕು ಬಿಟ್ಟು ಚಾನೆಲ್ ಹೊಡೆದಿದ್ದು, ರಾತ್ರಿಯಿಂದ ಅಕ್ಕಪಕ್ಕದಲ್ಲಿರುವ ತೋಟಗಳಿಗೆ ನೀರಿನಿಂದ ಜಲವೃತ ವಾಗಿದೆ. ಪರಿಣಾಮವಾಗಿ ತೋಟಗಳಲ್ಲಿ ರೈತರು ಬೆಳೆದ ಬೆಳೆಗಳು ಹಾಳಾಗಿದ್ದು ಸಾಕಷ್ಟು ನಷ್ಟ ಸಂಭವಿಸಿದೆ.
ಪಕ್ಕದಲ್ಲಿ ಕುರುಬರ ಪಾಳ್ಯ ಸಣ್ಣ ಗ್ರಾಮವಿದ್ದು, ಇಲ್ಲಿ ತೋಟದ ಮನೆಗಳಲ್ಲಿ ರೈತರು ವಾಸವಾಗಿದ್ದು, ರಾತ್ರಿಯಿಂದ ಹೇಮಾವತಿ ನಾಲೆಯಲ್ಲಿ ಹರಿಯುತ್ತಿರುವ ನೀರು ಮನೆಗಳಿಗೆ ನುಗ್ಗಿ ಜನರು ಪರದಾಡುವಂತಹ ಸ್ಥಿತಿಗೆ ತಲುಪಿದ್ದಾರೆ.
ಇಷ್ಟೆಲ್ಲ ಸಂಕಷ್ಟಕ್ಕೆ ಜನರು ಸಿಲುಕಿದ್ದರೂ ಸ್ಥಳಕ್ಕೆ ಹೇಮಾವತಿ ನಾಲಾ ವಲಯದ ಯಾವುದೇ ಅಧಿಕಾರಿಗಳು ಬಾರದೇ ನಿರ್ಲಕ್ಷ್ಯ ವಹಿಸಿದ್ದು, ಇದರ ವಿರುದ್ಧ ಗ್ರಾಮಸ್ಥರು ಹಾಗೂ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿ: ಡಿ.ಮಂಜುನಾಥ್ ಗುಬ್ಬಿ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz