nammatumakuru

    Subscribe to Updates

    Get the latest creative news from FooBar about art, design and business.

    What's Hot

    ಪೋಕ್ಸೋ ಪ್ರಕರಣ: ಗಾಯಕ ‘ಮ್ಯೂಸಿಕ್ ಮೈಲಾರಿ’ ಮಹಾರಾಷ್ಟ್ರದಲ್ಲಿ ಬಂಧನ

    December 17, 2025

    ವಿಧಾನಸಭೆಯಲ್ಲಿ ಗೃಹಲಕ್ಷ್ಮಿ ಬಾಕಿ ಹಣದ ಕಿಚ್ಚು: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕ್ಷಮೆ, ವಿಪಕ್ಷಗಳ ಸಭಾತ್ಯಾಗ

    December 17, 2025

    80 ವರ್ಷ ಮೇಲ್ಪಟ್ಟ ಹಿರಿಯ ಚೇತನರಿಗೆ ಗೌರವ ಸಮರ್ಪಣೆ

    December 17, 2025
    Facebook Twitter Instagram
    ಟ್ರೆಂಡಿಂಗ್
    • ಪೋಕ್ಸೋ ಪ್ರಕರಣ: ಗಾಯಕ ‘ಮ್ಯೂಸಿಕ್ ಮೈಲಾರಿ’ ಮಹಾರಾಷ್ಟ್ರದಲ್ಲಿ ಬಂಧನ
    • ವಿಧಾನಸಭೆಯಲ್ಲಿ ಗೃಹಲಕ್ಷ್ಮಿ ಬಾಕಿ ಹಣದ ಕಿಚ್ಚು: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕ್ಷಮೆ, ವಿಪಕ್ಷಗಳ ಸಭಾತ್ಯಾಗ
    • 80 ವರ್ಷ ಮೇಲ್ಪಟ್ಟ ಹಿರಿಯ ಚೇತನರಿಗೆ ಗೌರವ ಸಮರ್ಪಣೆ
    • ಗುಡ್ಡ ಗಾಡು ಓಟದ ಸ್ಪರ್ಧೆ: ಡಿ.18ರಂದು ಆಯ್ಕೆ ಪ್ರಕ್ರಿಯೆ
    • ಲೋಹಿಯಾ ಪ್ರಶಸ್ತಿಗೆ ಶಿವಾನಂದ ತಗಡೂರು ಆಯ್ಕೆ
    • ರಾಜ್ಯದ ಜೈಲುಗಳ ಮೇಲೆ ಸರಣಿ ದಾಳಿ: ಮೊಬೈಲ್, ಮಾರಕಾಸ್ತ್ರ ಹಾಗೂ ಗಾಂಜಾ ಪತ್ತೆ
    • ವಿಶ್ವಕಪ್ ಗೆದ್ದ ಭಾರತದ ಮಹಿಳಾ ತಂಡಕ್ಕೆ ಟಾಟಾ ಮೋಟಾರ್ಸ್‌ನಿಂದ ‘ಸಿಯೆರಾ’ ಕಾರು ಉಡುಗೊರೆ!
    • ಕುಣಿಗಲ್ ಸಹಕಾರಿ ರಂಗಕ್ಕೆ ತಾರತಮ್ಯವಾಗಿದ್ದಲ್ಲಿ ಸರಿಪಡಿಸಲಾಗುವುದು: ಸಿಎಂ ಸಿದ್ದರಾಮಯ್ಯ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ದಕ್ಷಿಣ ಕರ್ನಾಟಕದ ಏಕೈಕ ಚಿತ್ರಕಲಾ ಕಾಲೇಜನ್ನು ಉಳಿಸಿ ಬೆಳೆಸಿದವರು ಸಿ.ಸಿ.ಬಾರಕೇರ:  ಡಾ.ಕರಿಯಣ್ಣ ಬಿ.
    ತುಮಕೂರು July 1, 2025

    ದಕ್ಷಿಣ ಕರ್ನಾಟಕದ ಏಕೈಕ ಚಿತ್ರಕಲಾ ಕಾಲೇಜನ್ನು ಉಳಿಸಿ ಬೆಳೆಸಿದವರು ಸಿ.ಸಿ.ಬಾರಕೇರ:  ಡಾ.ಕರಿಯಣ್ಣ ಬಿ.

    By adminJuly 1, 2025No Comments2 Mins Read
    c c barakera

    ತುಮಕೂರು :  ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತುಮಕೂರು ಮತ್ತು ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯ, ತುಮಕೂರು ಇವರ ಸಂಯುಕ್ತ ಆಶ್ರಯದಲ್ಲಿ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದ ಪ್ರಭಾರ ಪ್ರಾಂಶುಪಾಲರಾದ  ಸಿ.ಸಿ. ಬಾರಕೇರ ಅವರ ವಯೋನಿವೃತ್ತಿಯ ಪ್ರಯುಕ್ತ ಬೀಳ್ಕೊಡುಗೆ ಸಮಾರಂಭ ಹಾಗೂ ಬಿ.ವಿ.ಎ.–ಚಿತ್ರಕಲೆ ಪದವಿ ವಿದ್ಯಾರ್ಥಿಗಳ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

    ಡಾ.ಕರಿಯಣ್ಣ ಬಿ. ಹಿರಿಯ ಅಧ್ಯಾಪಕರು ವಿಶ್ವವಿದ್ಯಾನಿಲಯ ಕಲಾ ಕಾಲೇಜು ತುಮಕೂರು ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಾ,  ಸಿ.ಸಿ.ಬಾರಕೇರ ಅವರು ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯ ಕಟ್ಟಿ–ಬೆಳೆಸಿದ ಗಟ್ಟಿಗರು, ಸಾಕಷ್ಟು ಏಳು–ಬೀಳುಗಳನ್ನು ಕಂಡಂತಹರು ಇಡೀ ತಮ್ಮ 37 ವರ್ಷಗಳ ಸುದೀರ್ಘ ಸೇವೆಯಲ್ಲಿ ಚಿತ್ರಕಲಾ ಕಾಲೇಜಿನ ಅಭಿವೃದ್ಧಿ, ವಿದ್ಯಾರ್ಥಿಗಳು ಮತ್ತು ಸಹೋದ್ಯೋಗಿಗಳ ಅಚ್ಚು ಮೆಚ್ಚಿನ ಪ್ರಾಂಶುಪಾಲರಾಗಿ ಕರ್ತವ್ಯ  ನಿರ್ವಹಿಸಿದ್ದಾರೆ. ಚಿತ್ರಕಲಾ ಕಾಲೇಜು ಇಂದು ಉತ್ತಮ ಸ್ಥಿತಿಯಲ್ಲಿ ಮುನ್ನೆಡೆಯುತ್ತಿರುವುದಕ್ಕೆ  ಸಿ.ಸಿ.ಬಾರಕೇರ ಅವರ ಬೆವರು ಹನಿ, ಶ್ರಮ ಇರುವುದು ಎಲ್ಲರಿಗೂ ತಿಳಿದಿರುವ ವಿಷಯ.  ಎಲ್ಲ ಇಲ್ಲಗಳ ನಡುವೆ ಎಲ್ಲವನ್ನು ಸಾಧಿಸಿದ ಸಾಧಕರು ಇವರಾಗಿದ್ದಾರೆ. ಇವರ ಪ್ರಾಮಾಣಿಕತೆಯು ಈ ಕಾಲೇಜು ಬೆಳೆಯಲು ಸಹಕಾರಿಯಾಗಿದೆ.  ಸಮಯ ಪ್ರಜ್ಞೆ, ಕರ್ತವ್ಯ ನಿಷ್ಠೆ, ವಿದ್ಯಾರ್ಥಿಗಳೊಂದಿಗಿನ ಉತ್ತಮ ಸಂಬಂಧ ಅವರ ವೃತ್ತಿ ಜೀವನಕ್ಕೆ ಮೆರಗು ತಂದಿದೆ. ದಕ್ಷಿಣ ಕರ್ನಾಟಕದ ಏಕೈಕ ಚಿತ್ರಕಲಾ ಕಾಲೇಜನ್ನು ಉಳಿಸಿ ಬೆಳೆಸಿದ ಕೀರ್ತಿ ಇವರದಾಗಿದೆ ಎಂದು ಆಭಿಪ್ರಾಯಪಟ್ಟರು.


    Provided by
    Provided by

    ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರಾದ ತರನ್ನುಂ ನೀಖತ್ ಎಸ್. ರವರು ಮಾತನಾಡುತ್ತಾ, ಚಿತ್ರಕಲಾ ಕಾಲೇಜು ತಮ್ಮ ಅವಧಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಥಳಾಂತರಿಸಿದ ನೆನಪನ್ನು ಮಾಡಿಕೊಳ್ಳುತ್ತಾ, ತಮ್ಮ ಮತ್ತು ಚಿತ್ರಕಲಾ ಕಾಲೇಜಿನ ಉತ್ತಮ ಬಾಂದವ್ಯವಿತ್ತು. ಅದು ಹಾಗೆ ಮುಂದುವರೆದುಕೊಂಡು ಹೋಗಬೇಕು ಎಂದರು. ಚಿತ್ರಕಲೆಯ ಮೂಲಕ ನಮ್ಮ ಕಾಲೇಜಿಗೆ ತಾವು ಕಳೆಯನ್ನು ತಂದು ಕೊಟ್ಟಿದ್ದೀರಿ ಎಂದು ತಿಳಿಸಿದರು. ತಮ್ಮ ಅವಧಿಯಲ್ಲಿ ಸಾಕಷ್ಟು ಕೊರತೆಗಳಿದ್ದರೂ,  ಸಹ ಚಿತ್ರಕಲಾ ವಿಭಾಗಕ್ಕೆ ಕೊಠಡಿಗಳನ್ನು ನೀಡುವುದರ ಮೂಲಕ ಅವರನ್ನು ನಮ್ಮ ಕಾಲೇಜಿನ ಸದಸ್ಯರಂತೆ ಪರಿಗಣಿಸುವ ಸೌಭಾಗ್ಯ ನಮ್ಮದಾಯಿತು ಮತ್ತು ಅದೇ ರೀತಿ ಸಿ.ಸಿ.ಬಾರಕೇರ ಅವರು ನಮ್ಮ ಕಾಲೇಜಿನ ಎಲ್ಲ ಕೆಲಸ ಕಾರ್ಯಗಳಲ್ಲಿ ತುಂಬಾ ಸಂತೋಷದಿಂದ ಭಾಗಿಯಾಗಿ ನಮ್ಮೊಳಗೊಬ್ಬರಾಗಿದ್ದಾರೆ ಎಂದು ಅಭಿಪ್ರಾಯ ಪಟ್ಟರು.

    ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪಿ.ಎಸ್.ಗ್ರಾಮ್‌ ಪುರೋಹಿತರವರು,  ಸಿ.ಸಿ.ಬಾರಕೇರವರು ಚಿತ್ರಕಲಾ ಕಾಲೇಜಿನ್ನು ಒಂದು ಮಾದರಿ ಕಾಲೇಜನ್ನಾಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ. ಬಾರಕೇರ ರವರ ಪ್ರಯತ್ನ ಹೋರಾಟದಿಂದ ಈ ಕಾಲೇಜು ಬೆಳೆಯಲು ಸಾಧ್ಯವಾಗಿದೆ ಎಂದು ಅಭಿಪ್ರಾಯ ಪಟ್ಟರು. ಬಾರಕೇರ ಅವರ ಸೇವೆಯು ಸಮಾಜಮುಖಿಯಾದುದು ಎಂದು ಅಭಿಪ್ರಾಯಪಟ್ಟರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಪ್ರೊ.ವಸಂತ ಟಿ.ಡಿ ಅವರು ಮಾತನಾಡಿ ಸಿ.ಸಿ. ಬಾರಕೇರ ರವರ ಶ್ರಮವು ಇಂದು ಚಿತ್ರಕಲಾ ಮಹಾವಿದ್ಯಾಲಯ ಬೆಳೆಯಲು ಸಹಕಾರಿಯಾಗಿದೆ. ಇವರು ಒಬ್ಬ ಉತ್ತಮ ಶಿಕ್ಷಕರಾಗಿ, ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯ ಒದಗಿಸಿಕೊಟ್ಟಿದ್ದಾರೆ. ಎಂದು ಅಭಿಪ್ರಾಯ ಪಟ್ಟರು.

    ಕಾರ್ಯಕ್ರಮದಲ್ಲಿ ಗೌರವ ಸಮರ್ಪಣೆಯನ್ನು ಸ್ವೀಕರಿಸಿ ಮಾತನಾಡಿದ ಸಿ ಸಿ. ಬಾರಕೇರ ರವರು,  ನಾನು ಚಿತ್ರಕಲಾ ಮಹಾವಿದ್ಯಾಲಯ ಉಳಿಸಿ–ಬೆಳೆಸಲು ಸಹಕಾರಿಯಾದ ಹಳೆ ವಿದ್ಯಾರ್ಥಿ ಸಂಘ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರುಗಳು, ಸಹೋದ್ಯೋಗಿ ಮಿತ್ರರು, ವಿದ್ಯಾರ್ಥಿಗಳು ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿದರು. ಬಿ.ವಿ.ಎ. ಪದವಿ ವಿದ್ಯಾರ್ಥಿಗಳು ಚಿತ್ರಕಲಾ ಪ್ರದರ್ಶನದ ಮೂಲಕ ನನಗೆ ಗೌರವ ಸಲ್ಲಿಸಿರುವುದು ಅತೀವ ಸಂತೋಷ ತಂದಿದೆ ಎಂದು ಅಭಿಪ್ರಾಯಪಟ್ಟರು.

    ಕಾರ್ಯಕ್ರಮದಲ್ಲಿ ಕರ್ಣಂವಾಣಿಯವರು  ಪ್ರಾರ್ಥನೆ ಸಲ್ಲಿಸಿದರು. ಪ್ರೊ.ಮಧುಶಾಲಿನಿ ರವರು ಸ್ವಾಗತಿಸಿದರು, ಪ್ರೊ. ಆಯಿಷಾ ಸಿದ್ದಿಖಾರವರು ವಂದಿಸಿದರು,  ಡಾ. ಅಶ್ವಾಖ್ ಅಹಮದ್  ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಈ ಸಂದರ್ಭದಲ್ಲಿ ಚಿತ್ರಕಲಾ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW

    admin
    • Website

    Related Posts

    80 ವರ್ಷ ಮೇಲ್ಪಟ್ಟ ಹಿರಿಯ ಚೇತನರಿಗೆ ಗೌರವ ಸಮರ್ಪಣೆ

    December 17, 2025

    ಗುಡ್ಡ ಗಾಡು ಓಟದ ಸ್ಪರ್ಧೆ: ಡಿ.18ರಂದು ಆಯ್ಕೆ ಪ್ರಕ್ರಿಯೆ

    December 17, 2025

    ಅಯ್ಯಪ್ಪ ಮಾಲೆ ಧರಿಸಿದ ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರಹಾಕಿದ ಆರೋಪ: ಶಿಕ್ಷಕಿ ನೀಡಿದ ಸ್ಪಷ್ಟನೆ ಏನು?

    December 17, 2025

    Comments are closed.

    Our Picks

    ವಿಶ್ವಕಪ್ ಗೆದ್ದ ಭಾರತದ ಮಹಿಳಾ ತಂಡಕ್ಕೆ ಟಾಟಾ ಮೋಟಾರ್ಸ್‌ನಿಂದ ‘ಸಿಯೆರಾ’ ಕಾರು ಉಡುಗೊರೆ!

    December 17, 2025

    ದೆಹಲಿ ಕಾರು ಸ್ಫೋಟ ಪ್ರಕರಣ: ತುಮಕೂರಿನಲ್ಲೂ ವಿಚಾರಣೆ!

    November 14, 2025

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಪೋಕ್ಸೋ ಪ್ರಕರಣ: ಗಾಯಕ ‘ಮ್ಯೂಸಿಕ್ ಮೈಲಾರಿ’ ಮಹಾರಾಷ್ಟ್ರದಲ್ಲಿ ಬಂಧನ

    December 17, 2025

    ಬಾಗಲಕೋಟೆ: ಉತ್ತರ ಕರ್ನಾಟಕದ ಪ್ರಸಿದ್ಧ ಜನಪದ ಗಾಯಕ ‘ಮ್ಯೂಸಿಕ್ ಮೈಲಾರಿ’ ಅಲಿಯಾಸ್ ಮೈಲಾರಿಯನ್ನು ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ…

    ವಿಧಾನಸಭೆಯಲ್ಲಿ ಗೃಹಲಕ್ಷ್ಮಿ ಬಾಕಿ ಹಣದ ಕಿಚ್ಚು: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕ್ಷಮೆ, ವಿಪಕ್ಷಗಳ ಸಭಾತ್ಯಾಗ

    December 17, 2025

    80 ವರ್ಷ ಮೇಲ್ಪಟ್ಟ ಹಿರಿಯ ಚೇತನರಿಗೆ ಗೌರವ ಸಮರ್ಪಣೆ

    December 17, 2025

    ಗುಡ್ಡ ಗಾಡು ಓಟದ ಸ್ಪರ್ಧೆ: ಡಿ.18ರಂದು ಆಯ್ಕೆ ಪ್ರಕ್ರಿಯೆ

    December 17, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.