nammatumakuru

    Subscribe to Updates

    Get the latest creative news from FooBar about art, design and business.

    What's Hot

    ದನಗಳ ಅವಶೇಷ ಅರಣ್ಯ ಭೂಮಿಯಲ್ಲಿ ಎಸೆದ ಆರೋಪ: ಇಬ್ಬರ ಬಂಧನ

    September 18, 2025

    ಡಿಸೆಂಬರ್ 31 ರ ಮುನ್ನ ಹೊಸ ಚಿಕ್ಕೋಡಿ ಜಿಲ್ಲೆ ರಚನೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

    September 18, 2025

    ತುಮಕೂರು: ಸಮೀಕ್ಷೆಯಿಂದ ಕೈ ಬಿಡಲು ಆಶಾ ಕಾರ್ಯಕರ್ತೆಯರಿಂದ ಆಗ್ರಹ

    September 18, 2025
    Facebook Twitter Instagram
    ಟ್ರೆಂಡಿಂಗ್
    • ದನಗಳ ಅವಶೇಷ ಅರಣ್ಯ ಭೂಮಿಯಲ್ಲಿ ಎಸೆದ ಆರೋಪ: ಇಬ್ಬರ ಬಂಧನ
    • ಡಿಸೆಂಬರ್ 31 ರ ಮುನ್ನ ಹೊಸ ಚಿಕ್ಕೋಡಿ ಜಿಲ್ಲೆ ರಚನೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
    • ತುಮಕೂರು: ಸಮೀಕ್ಷೆಯಿಂದ ಕೈ ಬಿಡಲು ಆಶಾ ಕಾರ್ಯಕರ್ತೆಯರಿಂದ ಆಗ್ರಹ
    • ರಾಜ್ಯದಲ್ಲಿರೋದು ಚುನಾಯಿತ  ಸರ್ಕಾರ ಅಲ್ಲ, ಮಾಫಿಯಾ ಸರ್ಕಾರ: ಆರ್‌.ಅಶೋಕ್‌ ಆರೋಪ
    • ಧರ್ಮಸ್ಥಳ ಕೇಸ್: ಬಂಗ್ಲಗುಡ್ಡದಲ್ಲಿ ಮತ್ತೆ ಎಸ್ ಐಟಿಯಿಂದ ಶೋಧ ಕಾರ್ಯ ಆರಂಭ
    • ಬೆಳೆ ಸಾಲ ಮನ್ನಾ: ಬೇಡಿಕೆ ಪರಿಶೀಲಿಸುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿಕೆ
    • 3ನೇ ಮಹಡಿಯಿಂದ ಬಾಲಕಿಯನ್ನು ತಳ್ಳಿ ಹತ್ಯೆ ಕೇಸ್: ಸ್ಫೋಟಕ ಮಾಹಿತಿ ಹಂಚಿಕೊಂಡ ಎಸ್ ಪಿ
    • ಕಬ್ಬಿನ ಲಾರಿಗೆ ಗೂಡ್ಸ್ ಆಟೋ ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕುತಂತ್ರದಿಂದ ನನ್ನ ಸೋಲಾಯಿತು: ಚುನಾವಣಾ ಸೋಲಿನ ಬಗ್ಗೆ ಮಸಾಲಾ ಜಯರಾಮ್ ಅಭಿಪ್ರಾಯ
    ತುರುವೇಕೆರೆ May 17, 2023

    ಕುತಂತ್ರದಿಂದ ನನ್ನ ಸೋಲಾಯಿತು: ಚುನಾವಣಾ ಸೋಲಿನ ಬಗ್ಗೆ ಮಸಾಲಾ ಜಯರಾಮ್ ಅಭಿಪ್ರಾಯ

    By adminMay 17, 2023No Comments2 Mins Read
    masala jayaram

    ತುರುವೇಕೆರೆ: ನಾನು ಗ್ರಾಮ ಪಂಚಾಯಿತಿ ಸದಸ್ಯನಾಗಿ, ಶಾಸಕನಾಗುವ ಮಟ್ಟಕ್ಕೆ ಬೆಳೆದು ಬಂದವನು. ಎಲ್ಲಾ ರೀತಿಯ ಅಡೆತಡೆಗಳನ್ನು ದಾಟಿ ಬೆಳೆದು ಬಂದಿದ್ದೇನೆ, ಚುನಾವಣಾ ಕಣದಲ್ಲಿ ಹಲವು ಗೆಲುವು ಸೋಲುಗಳನ್ನು ಕಂಡಿದ್ದೇನೆ. ಆದರೆ ನನಗೆ ಈ  ಚುನಾವಣೆಯಲ್ಲಿ ಅವರು ಮಾಡಿದ  ಕುತಂತ್ರದಿಂದ ನನ್ನ ಸೋಲಾಯಿತು ಎಂದು ನಿಕಟಪೂರ್ವ ಶಾಸಕ ಮಸಾಲಾ ಜಯರಾಮ್ ಅಭಿಪ್ರಾಯಪಟ್ಟರು.

    ತೋಟದಮನೆಯಲ್ಲಿ ಭಾರೀ ಸಂಖ್ಯೆಯಲ್ಲಿ ಸೇರಿದ್ದ  ಕಾರ್ಯಕರ್ತರ ಆತ್ಮಾವಲೋಕನ  ಸಭೆಯಲ್ಲಿ ಮಾತನಾಡಿದ ಅವರು, ಅವರ ಮೋಸದ ಆಟಕ್ಕೆ ಕುತಂತ್ರಕ್ಕೆ ಇವತ್ತು ಈ ತಾಲೂಕಿನ ಜನ ಬಲಿಯಾಗಿದ್ದಾರೆ. ಅವರು ಮಾಡಿದ ಮೋಸ ಒಂದಾ ಎರಡಾ? ನಾನು ಈ ದಿನ ಚುನಾವಣೆಯಲ್ಲಿ  ಸೋತಿರಬಹುದು ಆದರೆ ನಾನು ಗೆದ್ದಿದ್ದೇನೆ. ನಿಮ್ಮ ಶ್ರಮ ನಿಮ್ಮ ಶಕ್ತಿ ನೀವು ಮಾಡಿದಂತಹ ಕೆಲಸ ಕಾರ್ಯ ಬೇರೆ ಪಕ್ಷದ ಬಂಧ ಕಾರ್ಯಕರ್ತರು ಸಹ ಒಟ್ಟಾಗಿ  ಶ್ರಮಪಟ್ಟು ಕೆಲಸ ಮಾಡಿದ್ದೀರಾ  ನಾನು ಸೋತಿಲ್ಲ ಇಲ್ಲಿ ಗೆದ್ದಿದ್ದೇನೆ ಎಂದರು.


    Provided by
    Provided by
    Provided by

    ನಾನು ಸೋತಿದ್ದರೆ ಕೇವಲ ಬರಿ 25,000 ಮತಗಳಿಗೆ ಸೀಮಿತವಾಗಬೇಕಾಗಿತ್ತು, ಆದರೆ 58000 ,ಮತಗಳನ್ನು ಪಡೆದಿದ್ದೇನೆ. ಆದರೆ ನಿಮ್ಮಗಳ ಮುಂದೆ ನಾನು ಗೆದ್ದಿದ್ದೇನೆ. ನಾನು ಸೋಲಬೇಕೆಂದು  ವಾಮಾಚಾರ ಮಾಡಿ ನಮ್ಮ ಮನೆ ಮುಂದೆ ಹಾಕಿ ಹೋಗಿದ್ದಾರೆ. ಅದರಿಂದ ಅವರು ಯಾವ ಮಟ್ಟಕ್ಕೆ ಇಳಿದಿದ್ದಾರೆಂದು ನೀವೇ ತಿಳಿದುಕೊಳ್ಳಿ , ಅವರು ಚುನಾವಣೆಯಲ್ಲಿ ಗೆದ್ದಿರಬಹುದು ಅವರಿಗೆ ನಾನು ಶುಭಾಶಯಗಳನ್ನು ತಿಳಿಸುತ್ತೇನೆ,

    ಆದರೆ ಈ  ಯಾವುದೇ ರೀತಿ  ಗೆಲುವಲ್ಲ ನಿಮ್ಮಗಳ ಶಕ್ತಿಯೇ ನನ್ನ ಶಕ್ತಿ ಯಾವುದೇ ತರದ ವಾಮಾಚಾರವನ್ನು ಮಾಡಿಸಿದರೂ  ಜಯರಾಮಣ್ಣನಿಗೆ ನಿಮ್ಮಂತಹ ಕಾರ್ಯಕರ್ತರಗಳು ಇರುವ ತನಕ ಏನು ಮಾಡಲು ಆಗುವುದಿಲ್ಲ ಇವರು ಯಾವ ಕೀಳು ಮಟ್ಟಕ್ಕೆ ಇಳಿದಿದ್ದಾರೆ ಎಂದು ತೋರಿಸುತ್ತದೆ ಎಂದರು.

    ಬಾಣಸಂದ್ರ ರಮೇಶ್ ಅವರು ನನಗೆ ಯಾರು ಎನ್ನುವುದೇ ಗೊತ್ತಿಲ್ಲ. ಎಮ್.ಟಿ.ಕೃಷ್ಣಪ್ಪನವರು ನನ್ನನ್ನು ವಿಡಿಯೋ ಮಾಡಿ ಕೊಲೆಗಾರ ಎಂಬಂತೆ  ಹೇಳಿಕೆ ಕೊಟ್ಟು ಖಳನಾಯಕನಂತೆ ಬಿಂಬಿಸಿದ್ದಾರೆ. ರಮೇಶ್ ಗೂ ನನಗೂ  ಯಾವುದೇ ಸಂಬಂಧವಿಲ್ಲ. ಒಂದು ದಿವಸವು ಕೂಡ ಅವನನ್ನು ನಾನು ಮಾತನಾಡಿಸಿಲ್ಲ ,ಅವರು ಹೇಳುತ್ತಾರೆ  ನಾನು ಅವನನ್ನು ಕಿಡ್ನಾಪ್ ಮಾಡಿಸಿ ಕೊಲೆ ಮಾಡಿಸಿ ಬಿಟ್ಟಿದ್ದೇನೆ ಎಂದು, ಸಾಮಾಜಿಕ ಜಾಲತಾಣದ ಮೂಲಕ ಹೇಳಿಕೆ ಕೊಟ್ಟು  ಕೀಳು ಮಟ್ಟಕ್ಕೆ ಇಳಿದಿರುವುದು ಈ ತಾಲೂಕಿನ ದುರಂತ ತಮ್ಮ ವೈಯಕ್ತಿಕ ಲಾಭಕ್ಕಾಗಿ ಯಾರನ್ನು ಬೇಕಾದರೂ ಬಲಿಕೊಡುವುದು ಇವರ ಜಾಯಮಾನವಾಗಿದೆ. ಆದರೆ ಕೊಲೆಯಾಗಿರುವವನು ಬೆಳಗ್ಗೆ ಹೇಗೆ ಬಂದ. ಇದೆಲ್ಲ ಒಂದು ಷಡ್ಯಂತ್ರ ನನ್ನನ್ನು ಸಾರ್ವಜನಿಕರಲ್ಲಿ ಕೊಲೆಗಾರನನ್ನಾಗಿ ಮಾಡಲು ನಡೆಸಿದ ಷಡ್ಯಂತರವಾಗಿದ್ದು ಜನಗಳು ಇದನ್ನು ಅರ್ಥ ಮಾಡಿಕೊಳ್ಳದೆ ಅವರನ್ನು ಗೆಲ್ಲಿಸಿದ್ದಾರೆ ಎಂದರು.

    ಈ ತರದ ಕೃತ್ಯ  ನಡೆದಿದ್ದರೆ ಪೊಲೀಸರಲ್ಲಿ ಕಂಪ್ಲೇಂಟ್ ಏಕೆ ಕೊಡಲಿಲ್ಲ ಅಥವಾ ಅವರ ಹೆಂಡತಿಯಲ್ಲಿ ಕೈಯಲ್ಲಿ ಯಾಕೆ ಕೊಡಿಸಲಿಲ್ಲ  ಇದೆಲ್ಲ ನೋಡುತ್ತಿದ್ದರೆ ಅನುಮಾನಗಳು ಬರದೇ ಇರುವುದಿಲ್ಲ ಎಂದರು . ಇದೆಲ್ಲ ಇವರ ನಾಟಕದ ಕಂಪನಿಯ ನಾಟಕಗಳು ಎಂದು ಆರೋಪ ಮಾಡಿದರು.

    ನಾನು ನಿಮ್ಮ ಜೊತೆಗಿದ್ದೇನೆ ಯಾವುದೇ ಕಾರಣಕ್ಕೂ ದ್ರುತಿಗೆಡಬೇಡಿ ನಮ್ಮ ಮುಖಂಡರುಗಳಾಗಲಿ ಕಾರ್ಯಕರ್ತರುಗಳಾಗಲಿ ಸ್ವಲ್ಪವಾದರೂ ಹೆಚ್ಚು ಕಡಿಮೆ ಆದರೆ,  ನಾನಂತೂ ಸುಮ್ಮನಿರುವವನಲ್ಲ ಅದರ ಬೆಲೆಯನ್ನು ಅವರು ತರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ಎಲ್ಲಾ ಕಾರ್ಯಕರ್ತರಲ್ಲಿ ವಿನಂತಿ ಮಾಡುತ್ತೇನೆ ನೀವುಗಳು ಯಾವುದೇ ಕಾರಣಕ್ಕೂ ಸುಖಾ ಸುಮ್ಮನೆ ಗಲಾಟೆಗಳನ್ನು ಅವರ ಹತ್ತಿರ ಮಾಡಿಕೊಳ್ಳಬೇಡಿ,  ಅವರೇ ಕಾಲು ಕೆರೆದು ಬಂದರೆ ಸುಮ್ಮನೆ ಬಿಡುವವನಲ್ಲ, ಇದನ್ನು ನಮ್ಮ ವಿರೋಧಿಗಳು ಅರ್ಥ ಮಾಡಿಕೊಳ್ಳಿ ಎಂದರು.

    ಈ ಸಂದರ್ಭದಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ  ಮೃತ್ಹುಂಜಯ. ಪಟ್ಟಣ ಪಂಚಾಯ್ತಿ ಅಧ್ಯಕ್ಷ ಪ್ರಬಾಕರ್ .ಮಾಜಿ ಅಧ್ಯಕ್ಷರಾದ ಚಿದಾನಂದ್. ಅಂಜನ್ಕುಮಾರ್. ಡೊಂಬರನಹಳ್ಳಿ ಬಸವರಾಜು. ಕೊಂಡಜ್ಜಿ ವಿಶ್ವನಾಥ್. ಕಡೆಹಳ್ಳಿ ಸಿದ್ದೇಗೌಡ . ಸಿ.ಎಸ್. ಪುರ ಕುಮಾರ್ ಸೇರಿದಂತೆ ಹಲವರಿದ್ದರು.

    ವರದಿ: ಸುರೇಶ್ ಬಾಬು ಎಂ. ತುರುವೇಕೆರೆ


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

    admin
    • Website

    Related Posts

    ಟೀಕೆ ಟಿಪ್ಪಣಿಗಳಿದ್ದರೂ ಗ್ಯಾರೆಂಟಿ ಯೋಜನೆಗಳಿಂದ ಲಕ್ಷಾಂತರ ಜನರಿಗೆ ಅನುಕೂಲವಾಗಿದೆ: ಗೃಹ ಸಚಿವ ಡಾ.ಜಿ.ಪರಮೇಶ್ವರ್

    September 11, 2025

    ಶಾಸಕ ಎಂ.ಟಿ.ಕೃಷ್ಣಪ್ಪ ಅವರ 75ನೇ ಜನ್ಮದಿನದ ಅಮೃತ ಮಹೋತ್ಸವ ಆಚರಣೆ

    June 5, 2025

    ಮೇ 29ರಂದು ಬಸವ ಜಯಂತಿ: ಸಾಮೂಹಿಕ ಇಷ್ಟಲಿಂಗ ಪೂಜಾ ಕಾರ್ಯಕ್ರಮ: ಎಸ್.ಎಂ.ಕುಮಾರಸ್ವಾಮಿ

    May 24, 2025
    Our Picks

    ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇಲಿ ಕಚ್ಚಿ ನವಜಾತ ಶಿಶು ಸಾವು!

    September 4, 2025

    ರಾಜಕೀಯ, ಆರ್ಥಿಕ ಸ್ಥಿರತೆ ಭಾರತ 3ನೇ ಅತೀ ದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಲಿದೆ: ಪ್ರಧಾನಿ ಮೋದಿ

    August 29, 2025

    ದರ್ಗಾದ ಮೇಲ್ಛಾವಣಿ ಕುಸಿದು 5 ಮಂದಿ ಸಾವು

    August 16, 2025

    ಹಿಂದೂ ಎಂದು ನಂಬಿಸಿ ಅನೇಕ ಯುವತಿಯರನ್ನು ವಿವಾಹವಾಗಿದ್ದ ವ್ಯಕ್ತಿಯ ಬಂಧನ

    August 16, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ದನಗಳ ಅವಶೇಷ ಅರಣ್ಯ ಭೂಮಿಯಲ್ಲಿ ಎಸೆದ ಆರೋಪ: ಇಬ್ಬರ ಬಂಧನ

    September 18, 2025

    ಕಾರವಾರ: ಭಟ್ಕಳದ ಮುಗ್ಗುಮ್ ಕಾಲೋನಿಯಲ್ಲಿ ದನಗಳನ್ನು ಕೊಂದು, ಅವಶೇಷಗಳನ್ನು ಸಮೀಪದ ಅರಣ್ಯ ಭೂಮಿಯಲ್ಲಿ ಎಸೆದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ…

    ಡಿಸೆಂಬರ್ 31 ರ ಮುನ್ನ ಹೊಸ ಚಿಕ್ಕೋಡಿ ಜಿಲ್ಲೆ ರಚನೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

    September 18, 2025

    ತುಮಕೂರು: ಸಮೀಕ್ಷೆಯಿಂದ ಕೈ ಬಿಡಲು ಆಶಾ ಕಾರ್ಯಕರ್ತೆಯರಿಂದ ಆಗ್ರಹ

    September 18, 2025

    ರಾಜ್ಯದಲ್ಲಿರೋದು ಚುನಾಯಿತ  ಸರ್ಕಾರ ಅಲ್ಲ, ಮಾಫಿಯಾ ಸರ್ಕಾರ: ಆರ್‌.ಅಶೋಕ್‌ ಆರೋಪ

    September 17, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.