ಪಾವಗಡ: ತಾಲ್ಲೂಕಿನ ನಿಡಗಲ್ ಹೋಬಳಿಯ ಸಿ.ಕೆ.ಪುರ ಗ್ರಾಮ ಪಂಚಾಯಿತಿಯಲ್ಲಿ ಸಿ.ಕೆ.ಪುರ ಗ್ರಾಮದ ಲಕ್ಷ್ಮಮ್ಮ ಈರಣರವರ ರಾಜೀನಾಮೆಯಿಂದ ತೆರವಾಗಿದ್ದ ಸಿ.ಕೆ.ಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ಕೊತ್ತೂರು ಗ್ರಾಮದ ರತ್ನಮ್ಮ ಕೊಂಡಪ್ಪರವರು ನೂತನ ಅಧ್ಯಕ್ಷರಾಗಿ ಆಯ್ಕೆಯಾದರು.
ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ರತ್ನಮ್ಮ ಕೊಂಡಪ್ಪರವರು ನಾಮಪತ್ರ ಸಲ್ಲಿಸಿದ್ದರು ಅಂತಿಮವಾಗಿ ರತ್ನಮ್ಮ ಕೊಂಡಪ್ಪ ರವರು 14 ಮತಗಳನ್ನು ಪಡೆದು. ಅವಿರೋಧವಾಗಿ ಆಯ್ಕೆಯಾದರು. ತಾಲ್ಲೂಕು ದಂಡಾಧಿಕಾರಿ ವರದರಾಜು ಚುನಾವಣಾ ಪ್ರಕ್ರಿಯೆ ನಡೆಸಿದರು.
ಈ ಸಂದರ್ಭದಲ್ಲಿ ಆನಂದ್ ರಾವ್ ಹಾಗೂ ಪ್ರಭಾಕರ್ ಟಿ.ಎನ್. ಕೋಟೆ ರವರು ಮಾತನಾಡುತ್ತಾ, ಪಂಚಾಯತಿಯಲ್ಲಿ ಒಳ್ಳೆಯ ಅಭಿವೃದ್ಧಿ ಕೆಲಸ ಕಾರ್ಯಗಳು ನಡೆಯಲಿ ಎಂದು ಹಾರೈಸಿದರು.
ಈ ವೇಳೆ ಮುಖಂಡರುಗಳಾದ ಊರಿನ ಮುಖಂಡರಾದ ಸಿ.ಎನ್. ಆನಂದ್ ರಾವ್ ಎಸ್ ಎಸ್ ಕೆ ಸಂಘದ ಉಪಾಧ್ಯಕ್ಷ ಅಜಯ್ ನಾಗೇಶ್ , ಯರ್ರಪ್ಪ ಕೆಇಬಿ , ಆರ್ ಐ. ಶ್ರೀನಿವಾಸ್, ವಿ.ಎ ರಾಮಲಿಂಗಪ್ಪ , ಪಿಡಿಒ ಸುದರ್ಶನ್, ಎ ಎಸ್ ಐ ರಾಜೇಶ್, ಕರಾ ವಸೂಲಿಗಾರ ನಾಗರಾಜ್, ಬೆರಳಚ್ಚುಗಾರ ರಂಗನಾಥ್, ಮಾಜಿ ಅಧ್ಯಕ್ಷರು ಲಕ್ಷ್ಮಮ್ಮ, ಉಪಾಧ್ಯಕ್ಷ ಮಮತಾ ನಾಗರಾಜು, ವೆಂಕಟೇಶ್ ಮೊದಲಾದವರು ಭಾಗವಹಿಸಿದ್ದರು.
ವರದಿ: ರಾಮಪ್ಪ ಸಿ.ಕೆ.ಪುರ. ಪಾವಗಡ ತಾಲ್ಲೂಕು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz