ಬೀದರ್: ಆಂಗ್ಲ ಮಾಧ್ಯಮ ಶಾಲೆಗಳನ್ನು ಮುಚ್ಚಿಸಿ ಕನ್ನಡ ಶಾಲೆಗಳನ್ನು ಉಳಿಸಿ ಎಂದು ಕನ್ನಡ ಸಂರಕ್ಷಣಾ ಸಮಿತಿ ಬೀದರ್ ಜಿಲ್ಲಾ ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿ ಸಂಘ( ರಿ) ಬೀದರ್ ಮತ್ತು ಕನ್ನಡ ಸಾಹಿತ್ಯ ಪರಿಷತ್ ಬೀದರ್ ಮತ್ತು ಕನ್ನಡ ಪರ ಸಂಘಟನೆಗಳು ಒತ್ತಾಯ ನಡೆಸಿದವು.
ಕನ್ನಡ ಶಾಲೆ ಉಳಿವಿಗಾಗಿ ಮತ್ತು ಕನ್ನಡ ಶಾಲೆಗಳ ಅನುದಾನ ಒಳಪಡಿಸುವ ಸಲುವಾಗಿ ಮತ್ತು ಸರ್ಕಾರದಿಂದ ತೆರೆದ ಆಂಗ್ಲ ಮಾಧ್ಯಮ ಶಾಲೆಗಳನ್ನು ತಕ್ಷಣ ಮುಚ್ಚಬೇಕು ಇಲ್ಲವಾದರೆ ಇಲ್ಲವಾದರೆ ಹೋರಾಟ ನಡೆಸಲಾಗುವುದು ಎಂದು ಕನ್ನಡ ಪರ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಈ ಸಂದರ್ಭದಲ್ಲಿ ಕನ್ನಡ ಪರ ಸಂಘಟನೆಗಳ ರಾಜ್ಯಾಧ್ಯಕ್ಷರನ್ನು ನಾರಾಯಣ ಗೌಡ, ಪ್ರವೀಣ ಶೆಟ್ಟಿ, ವಾಟಾಳ್ ನಾಗರಾಜ್ ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯ ಅಧ್ಯಕ್ಷರು, ಮಹೇಶ್ ಜೋಶಿ, ನಮ್ಮ ಕರ್ನಾಟಕ ಸೇನೆ ರಾಜ್ಯ ಅಧ್ಯಕ್ಷರು ಬಸವರಾಜ ಪಡುಕೋಟೆ ಅವರನ್ನು ಭೇಟಿ ಮಾಡಲಾಯಿತು.
ಬೆಂಗಳೂರಿಗೆ ತೆರಳಿದ್ದ ಬೀದರ್ ಜಿಲ್ಲೆಯ ನಿಯೋಗದಲ್ಲಿ ಜಿಲ್ಲಾ ಗೌರವಾಧ್ಯಕ್ಷರು ರೇವಣ ಸಿದ್ದಪ್ಪ, ಜಲಾದೇ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರು ಸುರೇಶ್ ಚನ್ನಶೆಟ್ಟಿ, ಬೀದರ್ ಜಿಲ್ಲಾಧ್ಯಕ್ಷರು ರಾಜೇಂದ್ರ ಕುಮಾರ್, ಜಿಲ್ಲಾ ಉಪಾಧ್ಯಕ್ಷರು ಮಾಣಿಕ್ಕೊಪ್ಪ ಗುರುನಾಳೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುನಾಥ ರೆಡ್ಡಿ, ಬೀದರ್ ದಕ್ಷಿಣ ಅಧ್ಯಕ್ಷರು ಸೈಯದ್ ಅಹಮದ್ ಮುದ್ದೆ, ಔರಾದ್ ತಾಲೂಕ ಪ್ರಧಾನ ಕಾರ್ಯದರ್ಶಿ ಗುರುನಾಥ್ ದೇಶಮುಖ್, ಸೋಮನಾಥ್ ಮುದ್ದ, ರಮೇಶ್ ದಬಾಲೆ, ಸಂಜೀವ ಕುಮಾರ್ ಮುಧೋಳ್, ಸಂತೋಷ್ ಶಿವಮೊಗ್ಗ, ಶರತ್ ಭರಣಿ, ಬೆಂಗಳೂರು ಕೃಷ್ಣಮೂರ್ತಿ ಭಾಗವಹಿಸಿದ್ದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4