ಮಧುಗಿರಿ: ಮೇ 22 ರಂದು ತುಮಕೂರು ನಗರದಲ್ಲಿ ನಡೆಯಲಿರುವ ಕಾಂಗ್ರೆಸ್ ಅಲ್ಪ ಸಂಖ್ಯಾತರ ಸಮಾವೇಶ ಯಶಸ್ವಿಗೊಳಿಸಲು ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಅತೀಖ್ ಅಹಮದ್ ಕರೆ ನೀಡಿದರು.
ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಅಲ್ಪ ಸಂಖ್ಯಾತರ ರಾಜ್ಯ ಹಾಗೂ ಜಿಲ್ಲಾಧ್ಯಕ್ಷರ ಸಮ್ಮುಖದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ-ಮುಸ್ಲೀಂ ಭಾಂದವರು ಈ ದೇಶದಲ್ಲಿ ಅಣ್ಣ-ತಮ್ಮಂದಿರ ಹಾಗೆ ಜೀವನ ನಡೆಸುತ್ತಿದ್ದಾರೆ. ಆದರೆ ನಮ್ಮ ಮಧ್ಯ ಬಿಜೆಪಿ ಸರ್ಕಾರ ಕೋಮು ಗಲಭೆ ತಂದಿಟ್ಟು ಒಡೆದು ಆಳುವ ನೀತಿ ಅನುಸರಿಸುತ್ತಿದೆ ಹಾಗೂ ಮುಸ್ಲಿಂ ಸಮುದಾಯದ ವಿಧ್ಯಾರ್ಥಿಗಳಿಗೆ ಅನಾನುಕೂಲವಾಗುವಂತಹ ಕಾರ್ಯಕ್ಕೆ ಕೈ ಹಾಕಿದ್ದು, ಇದರ ವಿರುದ್ದ ಮೇ 22 ರಂದು ತುಮಕೂರು ನಗರದಲ್ಲಿ ಬೃಹತ್ ಸಮಾವೇಷ ಹಮ್ಮಿಕೊಳ್ಳಲಾಗಿದೆ ಎಂದರು.
ಸಮಾವೇಶದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಶಾಸಕ ಕೆ.ಎನ್.ರಾಜಣ್ಣ, ವಿಧಾನಪರಿಷತ್ ಸದಸ್ಯ ಆರ್.ರಾಜೇಂದ್ರ ಹಾಗೂ ಇನ್ನಿತರ ಗಣ್ಯರು ಭಾಗವಹಿಸಲಿದ್ದು, ಮುಸ್ಲೀಂ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕು ಎಂದು ಮನವಿ ಮಾಡಿದರು.
ಅಲ್ಪಸಂಖ್ಯಾತರ ರಾಜ್ಯ ಉಪಾಧ್ಯಕ್ಷ ಮುದರ್ ಅಹಮದ್ ಖಾನ್, ಬೆಂಗಳೂರು ಗ್ರಾಮಾಂತರ ಅಧ್ಯಕ್ಷ ಅಹಮದ್, ಮಧುಗಿರಿ ಬ್ಲಾಕ್ ಅಧ್ಯಕ್ಷ ಸೈಯ್ಯದ್ ಅಲ್ಲಾವುದ್ದೀನ್, ಮಸೀದಿಯ ಅಧ್ಯಕ್ಷ ಸನಾವುಲ್ಲಾ ಸಾಬ್, ಉಪಾಧ್ಯಕ್ಷ ಅನೀಸ್ ಅಹಮದ್, ಮೊಹಮ್ಮದ್ ಅನೀಸ್, ಪುರಸಭಾ ಸದಸ್ಯರಾದ ಅಲೀಮ್ಮುಲ್ಲಾ, ಸಾದಿಕ್, ಶಾಜು, ಗ್ರಾ.ಪಂ ಸದಸ್ಯ ಮಹಬೂಬ್, ಮುಖಂಡರುಗಳಾದ ಮಹಬೂಬ್ ಪಾಷ, ಫಯಾಜ್ ಅಹಮದ್, ಫಾಜಿಲ್, ಫಕೃದ್ದೀನ್ ಸಾಬ್, ಅಬ್ದುಲ್ ವಹೀದ್, ಬಾಬ ಫಕೃದ್ದೀನ್, ರಫೀಕ್, ಸಯ್ಯದ್ ಸಿಖಂದರ್, ಮನ್ನು, ಅಲೀಮ್ ಪಾಷ, ಮೊಹಮ್ಮದ್ ಮುಬಾರಕ್, ರೀಜ್ವಾನ್ ಸಾಬ್, ಇಲಾಹಿ, ಮುಸ್ತಫಾ, ಕಲೀಮುಲ್ಲಾ ಹಾಗೂ ಇನ್ನು ಮುಂತಾದವರು ಇದ್ದರು.
ವರದಿ: ಅಬಿದ್ ಮಧುಗಿರಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5