ಪಾವಗಡ: ತಾಲೂಕು ಸಿ.ಕೆ.ಪುರ ಗ್ರಾಮ ಪಂಚಾಯತಿಯ ಎರಡನೇ ಹಂತದ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಚುನಾವಣೆಯ ಉದ್ದೇಶಕ್ಕಾಗಿ ಸಿ.ಕೆ.ಪುರ ಗ್ರಾಮ ಪಂಚಾಯತಿಯಲ್ಲಿ ಒಟ್ಟು ಸದಸ್ಯರ ಸಂಖ್ಯೆ 15 ಜನ ಇದ್ದು ಇವರ ಪೈಕಿ ಜೆಡಿಎಸ್ ಪಕ್ಷದ ಬೆಂಬಲಿತ ಸದಸ್ಯರು ಆರು ಜನ ಇದ್ದು ಬಿಜೆಪಿ ಪಕ್ಷದಿಂದ ಒಬ್ಬ ಸದಸ್ಯ ಇದ್ದು ಒಟ್ಟು ಏಳು ಜನ ಸದಸ್ಯರು ಸಾಮೂಹಿಕವಾಗಿ ತಮ್ಮ ಪಕ್ಷಗಳನ್ನು ತೊರೆದು ಶಾಸಕ ಹೆಚ್ ವಿ ವೆಂಕಟೇಶ್ ಸಮ್ಮುಖದಲ್ಲಿ ಕಾಂಗ್ರೆಸ್ ಗೆ ಸೇರ್ಪಡೆಗೊಂಡರು.
ಟಿ.ಎನ್.ಕೋಟೆ ಪ್ರಭಾಕರ್ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರು, ಹಾಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕೊತ್ತೂರು ಗ್ರಾಮದ ರತ್ನಮ್ಮ ಕೊಂಡಪ್ಪ ಇವರ ಸಮ್ಮುಖದಲ್ಲಿ ಮತ್ತು ಬಿಂದು ಮಾಧವರಾವ್ ಲಕ್ಷ್ಮಮ್ಮ ಈರಣ್ಣನವರು ಮಾಜಿ ಅಧ್ಯಕ್ಷರು ಇವರ ಸಮ್ಮುಖದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಅರುಂಧತಿ ನಾಗಲಿಂಗಪ್ಪ, ದೊಡ್ಡಣ್ಣ ಹರಿಹರಪುರ, ಕಮಲಮ್ಮ ಮಹಾಲಿಂಗಪ್ಪ, ಗಿರೀಶ್, ಸಣ್ಣ ಬೊಮ್ಮಕ್ಕ ಚಿತ್ತಪ್ಪ, ಚಂದ್ರಕಲಾ ಜೆ.ಪಿ. ಹನುಮಂತರಾಯಪ್ಪ, ಹೇಮಲತಾ ಕೃಷ್ಣಮೂರ್ತಿ, ಮಮತಾ ನಾಗರಾಜ್, ಇವರುಗಳು ಸಾಮೂಹಿಕವಾಗಿ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ.
ಈ ಸಂದರ್ಭದಲ್ಲಿ ದೊಡ್ಡ ರಂಗಪ್ಪ, ನಾಗರಾಜಪ್ಪ, ರಂಗಧಾಮಪ್ಪ, ವೆಂಕಟೇಶ್ ಗ್ರಾಮ ಪಂಚಾಯತಿ ಸದಸ್ಯ, ಕೆ.ಆರ್. ರಾಜ, ಪ್ರಸಾದ್, ಎನ್. ಕೋಟೆ, ಕೋಟೆ ರಾಜ, ಉ.ಮೂರ್ತಿ. ಇನ್ನೂ ಅನೇಕ ಜನ ಕಾಂಗ್ರೆಸ್ ಮುಖಂಡರು ಹಾಜರಿದ್ದರು.
ವರದಿ: ರಾಮಪ್ಪ, ಸಿ.ಕೆ.ಪುರ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA