ಪಾವಗಡ: ತಾಲ್ಲೂಕಿನ ನ್ಯಾಯದಗುಂಟೆ ಗ್ರಾಮ ಪಂಚಾಯಿತಿಗೆ ಒಳಪಡುವ, ನ್ಯಾಯದಗುಂಟೆ ಗ್ರಾಮ ಮತ್ತು ಚಿಕ್ಕತಿಮ್ಮನಹಟ್ಟಿ ಗ್ರಾಮದಲ್ಲಿ ಮಾಜಿ ಶಾಸಕರಾದ ಕೆ.ಎಂ.ತಿಮ್ಮರಾಯಪ್ಪನವರ ನೇತೃತ್ವದಲ್ಲಿ ಹಲವಾರು ಮುಖಂಡರುಗಳು ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಗೆ ಸೇರ್ಪಡೆಯಾದರು.
ಈ ಕಾರ್ಯಕ್ರಮದಲ್ಲಿ ನ್ಯಾಯದಗುಂಟೆ ಗ್ರಾಮ ಪ್ರವೀಣ್, ರೇವಣ್ಣ (ಪಿಲ್ಲಿಕುಂಟೆ), ರಂಗನಾಥ, ಕದಿರೇಹಳ್ಳಿ ಗ್ರಾಮದ ಶಿವಮೂರ್ತಿ, ರಾಜಪ್ಪ, ರಾಘವೇಂದ್ರ, ಆನಂದ ಚಿಕ್ಕತಿಮ್ಮನಹಟ್ಟಿ ಗ್ರಾಮದ ತಿಮ್ಮಯ್ಯ.ಸಿ., ತಿಮ್ಮಣ್ಣ, ಉತ್ತರಾಜಿ, ಈರಣ್ಣ(ಆಟೋ), ಹನುಮಂತರಾಯಪ್ಪ (ಸ್ವಾಮೀಜಿ), ಈರಣ್ಣ, ಓಬಯ್ಯ, ಶಿವಕುಮಾರ, ಚಂದ್ರಶೇಖರ್ ಬಸಣ್ಣ, ಹನುಮಂತರಾಯ (ಗ್ರಾಮ ಪಂಚಾಯ್ತಿ ಸದಸ್ಯರು) ಮತ್ತು ಚಿತ್ತಪ್ಪನವರು ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
ಈ ಕಾರ್ಯಕ್ರಮದಲ್ಲಿ ರಾಜ್ಯ ಜೆಡಿಎಸ್ ಉಪಾಧ್ಯಕ್ಷರಾದ ತಿಮ್ಮಾರೆಡ್ಡಿ, ತಾಲ್ಲೂಕು ಕಾರ್ಯಧ್ಯಕ್ಷರಾದ ಎನ್.ಎ.ಈರಣ್ಣರವರು, ಮುಖಂಡರುಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ: ನಂದೀಶ್ ನಾಯ್ಕ ಪಿ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz