ತುಮಕೂರು: ನಗರದ ಎನ್. ಆರ್. ಕಾಲೋನಿಯಲ್ಲಿ ಇಫ್ತಿಯಾರ್ ಕೂಟ ಏರ್ಪಡಿಸಿ, ನಾವೆಲ್ಲರೂ ಒಂದೇ ಎಂದು ಭಾವೈಕ್ಯತೆ ತೋರಿಸಿದ್ದಾರೆ
ಈ ವೇಳೆ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷರಾದ ನರಸಿಂಹ ಮೂರ್ತಿ, ಇಲ್ಲಿ ನಾವೆಲ್ಲರೂ ಅಣ್ಣ ತಮ್ಮಂದಿರಂಗೆ ಇದ್ದೇವೆ. ಕೆಲವು ಕಿಡಿಗೇಡಿಗಳು ಜಾತಿ ಜಾತಿ ಗಳ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ನಾವು ಗಳು ಇದ್ಯಾವುದಕ್ಕೂ ಗಮನ ಕೊಡಬಾರದು ನಾವುಗಳು ಹಿಂದೂ ಮುಸ್ಲಿಂ ಒಂದೇ ಎಂದು ತೋರಿಸಬೇಕು ಎಂದರು .
ಈ ಸಂದರ್ಭದಲ್ಲಿ ತುಮಕೂರು ನಗರ ಮಾಜಿ ಶಾಸಕ ರಫೀಕ್ ಅಹಮದ್, ದೊರೆಸ್ವಾಮಿ, ಡಾ.ಚಿದಾನಂದ್ ಮೂರ್ತಿ, ನರಸಿಂಹ ಮೂರ್ತಿ, ನಾಗಣ್ಣ, ರೂಪಶ್ರೀ, ಸಯ್ಯದ್ ನಯಾಜ್, ತಾಜುದ್ದೀನ್ ಶರೀಫ್ ಉಪಸ್ಥಿತರಿದ್ದರು
ವರದಿ: ಎ.ಎನ್. ಪೀರ್ , ತುಮಕೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5