ದೇವರ ಪೂಜೆ ಹಕ್ಕು ಪಡೆಯುವ ವಿಚಾರದಲ್ಲಿ ಇಬ್ಬರು ಅರ್ಚಕರ ನಡುವೆ ಗಲಾಟೆ ಯಿಂದಾಗಿ ಅರ್ಚಕರೊಬ್ಬರು ದೇಗುಲಕ್ಕೆ ಬೀಗ ಹಾಕಿ ಕಣ್ಮರೆಯಾಗಿರುವ ಘಟನೆ ಕೊರಟಗೆರೆ ತಾಲೂಕು ಕುರಂಕೋಟೆ ಗ್ರಾಮದಲ್ಲಿ ನಡೆದಿದೆ.
ದೊಡ್ಡಕಾಯಪ್ಪ ಸ್ವಾಮಿಯ ಗರ್ಭಗುಡಿ ಮತ್ತು ದೇವಾಲಯಕ್ಕೆ ಬೀಗ ಜಡಿದು ಅರ್ಚಕ ಶ್ರೀನಿವಾಸಮೂರ್ತಿ ಪರಾರಿಯಾಗಿದ್ದಾರೆ.
ಒಂದು ವರ್ಷದ ಅವಧಿಗೆ ಅರ್ಚಕ ಶ್ರೀನಿವಾಸ್ ಮೂರ್ತಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಕಳೆದ ಶನಿವಾರ ಶ್ರೀನಿವಾಸ್ ಮೂರ್ತಿಯ ಪೂಜೆ ಅವಧಿ ಮುಗಿದಿದೆ. ಮತ್ತೊರ್ವ ಅರ್ಚಕ ವೆಂಕಟೇಶ್ ಗೆ ಪೂಜೆ ಅಧಿಕಾರ ಹಸ್ತಾಂತರವಾಗಬೇಕಿತ್ತು. ಆದರೆ ಅಧಿಕಾರ ಹಸ್ತಾಂತರ ಮಾಡದೆ ದೇವಾಲಯಕ್ಕೆ ಬೀಗ ಜಡಿದ ಶ್ರೀನಿವಾಸ್ ಮೂರ್ತಿ ಕಣ್ಮರೆಯಾಗಿದ್ದಾರೆ.
ದೊಡ್ಡಕಾಯಪ್ಪ ಸೇವಾ ಸಮಿತಿ ಮತ್ತು ಗ್ರಾಮಸ್ಥರಿಂದ ತಹಶೀಲ್ದಾರ್ ಮತ್ತು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ತಹಶೀಲ್ದಾರ್ ಹಾಗೂ ಮುಜರಾಯಿ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ್ದು, ಗ್ರಾಮಸ್ಥರೊಂದಿಗೆ ಸಭೆ ನಡೆಸಿದ್ದಾರೆ.
ದೇವಾಲಯಕ್ಕೆ ಬೀಗ ಜಡಿದ ಪರಿಣಾಮ ದೊಡ್ಡಕಾಯಪ್ಪ ಸ್ವಾಮಿಯ ದರ್ಶನ ಸಿಗದೆ ಭಕ್ತರು ಪರದಾಡುತ್ತಿದ್ದು, ದೊಡ್ಡಕಾಯಪ್ಪ ಅರ್ಚಕ ಶ್ರೀನಿವಾಸಮೂರ್ತಿ ವಿರುದ್ದ ಸೇವಾ ಸಮಿತಿ ಮತ್ತು ಗ್ರಾಮಸ್ಥರು ಆಕ್ರೋಶ ವ್ಯಕ್ತಡಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy